ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Friday, April 13, 2007

ಆರ್ಕುಟ್ ಎಂಬ ಮಹಾನ್ ಮಿತ್ರ



ಪ್ರತಿದಿನವೂ ನಿನ್ನ ಮೊಗವ ನಾ ಕಂಡು ನಲಿಯಲು
ಬೆಳೆಯುತಿದೆ ನನ್ನ ಸ್ನೇಹಿತರ ಸಾಲು ಸಾಲು

ನೀನಿದ್ದರೇ ಚೆಂದ ಮನಕೆ ಆನಂದ
ಎಲ್ಲಿಂದಲೋ ಬಂದ ಸ್ನೆಹಿತರ ತಂದ

ನಿನ್ನೊಳಗೆ ನಾ ಹೊಕ್ಕು ಕಂಡಿಹೆನು ಸ್ನೇಹವಾ
ನೀನಿಲ್ಲದ ಜೀವನ ಕಲ್ಪಿಸಲು ಸಾಧ್ಯವಾ

ಸ್ನೇಹವೆಂದರೆ ದೊಡ್ಡದು ಪ್ರೀತಿ ಮಾತಲ್ಲ
ಮನದಿ ಪ್ರೀತಿ ಮೂಡಿರಲು ಅಶ್ಚರ್ಯವೇನಿಲ್ಲ

ಪ್ರೀತಿಯೆಂದರೆ ಬರೀ ಪ್ರೇಮ, ಕಾಮವಲ್ಲ
ಮದುರಭಾವನೆಯಿರಲು ವಿವರಣೆ ಬೇಕಿಲ್ಲ

ಮಿಡಿದ ಹೃದಯಗಳಿಗೆ ಬೆಸುಗೆಯಾಗಿ
ಕಳೆದ ಗೆಳೆತನವ ಮರಳಿ ಪಡೆದಿರಲು ಬೀಗಿ

ಬಂದರೆಷ್ಟುಜನ ನಿನ್ನ ಪ್ರತಿಸ್ಪರ್ಧಿಯಾಗಿ
ಹಾಗೆಯೇ ಮರೆಯಾದರು ಹೆಸರಿಲ್ಲದಾಗಿ

ನಿನ್ನಿಂದ ನಾಕಂಡೆ ನನ್ನ ಗೆಳೆಯರನ್ನ
ಮರೆಯುವುದು ಹೇಗೆ ನೀ ನನ್ನ ಚಿನ್ನ

ಈ ನನ್ನ ಕವಿತೆಗೆ ನೀ ಸ್ಪೂರ್ತಿಯಾದೆ
ನನ್ನ ಬಾಳ ಬೆಳಕಿಗೆ ನೀ ಹಣತೆಯಾದೆ

ಹಚ್ಚಿರೆಲ್ಲರು ಬಂದು ಸ್ನೇಹದಾ ದೀಪವ
ಬಾಳಲ್ಲಿ ಹೊಂದೋಣ ಶಾಂತಿಯಾ ರೂಪವ

ಹಚ್ಚೋಣ ಎಲ್ಲೆಡೆ ಕನ್ನಡದಾ ದೀಪ
ತೋರೋಣ ಜಗಕೆ ಕರುನಾಡ ರೊಪ

4 comments:

Prathi....... said...

Innu swalpa chennaagi baribahudittu antha nanna abhipraaya...

Byt nevertheless, U rock as a poet!!!!!!!!

Prashanth Urala. G said...

nodi ivaga update agide,

nimma helikeyannu pariganisidene.

dhanyavada nimma amolya salahegagi.

Unknown said...

chennagi ide,hege bere bere kavan barita hogu.

AshaKiran said...

Nice ones.. I didnt know u were so talented... I suggest you to take this up seriously & contribute to our rich Kannada literature field..