ಮದುವೆ ಯಾವಾಗ ಮಾಡ್ಕೋತೀಯ, ನಮ್ಗೆಲ್ಲಾ ಮದ್ವೆ ಊಟ ಯಾವಾಗ ಹಾಕಿಸ್ತೀಯ....??? ಇದು ಮದುವೆಯಾಗದ ಹುಡುಗ ಮತ್ತು ಹುಡುಗಿಯರನ್ನು ಮಿಕ್ಕವರು ಕೇಳುವ ಸಾಮಾನ್ಯ ಪ್ರಶ್ನೆ.
"ಅಲ್ಲಾ ಸ್ವಾಮೀ.... ನಿಮಗೆ ಭರ್ಜರಿ ಊಟ ಬೇಕಾದ್ರೆ ನನ್ನೇ ಕೇಳಿ, ಮಾಡಿ ಹಾಕ್ತೀನಿ. ಅದಿಕ್ಕೆ ನನ್ ಮದುವೇನೇ ಆಗಬೇಕಾ ? ಬೇರೆ ಏನೂ ಕಾರಣನೇ ಸಿಕ್ಲಿಲ್ವಾ ??? ನಾನು ಒಂಟಿಯಾಗಿ ಇರೋದು ಕಂಡು ನಿಮ್ಗೆ (ಮದುವೆ ಆದವರಿಗೆ) ಹೊಟ್ಟೆ ಉರಿ ಬರತ್ತಾ??? ಅಥವಾ ನೀವು ಖೆಡ್ಡಾಗೆ ಬಿದ್ದಾಯ್ತು ಅಂತ ನನ್ನ ಮೇಲೆ ಹೊಟ್ಟೆಕಿಚ್ಚಾ???" ಹೀಗೆಲ್ಲಾ ಕೇಳೋಣಾ ಅನ್ಸತ್ತೆ. ಆದ್ರೆ ಸಮಾಜದಲ್ಲಿ ಸಭ್ಯ.. ಅಂತ ಅನ್ನಿಸ್ಕೊಂಡಿರೋದ್ರಿಂದ.... "ಅಯ್ಯೋ ಅದಕ್ಕೇನಂತೆ.... ಮೊದಲು ಒಳ್ಳೇ ಹುಡುಗಿ ಸಿಕ್ಲಿ.... ಆಮೇಲೆ ಮದುವೆ ಆಗ್ತೀನಿ" ಅಂತ ಹೇಳಿ ಅಲ್ಲಿಂದ ಜಾಗ ಖಾಲಿ ಮಾಡ್ತಾ ಇದ್ದೆ.
ಇನ್ನು ಅದಕ್ಕೆಲ್ಲಾ ಅವಕಾಶ ಇಲ್ಲ ಬಿಡಿ. ಅಂತೂ ಇಂತೂ ನಮ್ಮ ಮನೆಯವರೆಲ್ಲಾ ಸೇರಿ ನನಗೂ ಒಂದು ಖೆಡ್ಡಾನ ತೋಡಿ ಆಗಿದೆ. ಅದರ ಹತ್ತಿರ ಕರ್ಕೊಂಡು ಬಂದದ್ದೂ ಆಗಿದೆ... ಇನ್ನೇನು ಅದಕ್ಕೆ ತಳ್ಳೋದೊಂದೇ ಬಾಕಿ ನೋಡಿ. ಇಷ್ಟು ದಿನ ನನ್ನ ಸ್ನೇಹಿತರಿಗೆ ಸಿಕ್ಕಾಪಟ್ಟೆ ಗೋಳುಕೊಡ್ತಾ ಇದ್ದೆ. ಇನ್ನು ಆ ಸರದಿಯಲ್ಲಿ ನಾನೇ ನಿಲ್ಲಬೇಕು. ನನ್ನ ಸಹೋದ್ಯೋಗಿ ಅವನ ಶ್ರೀಮತಿಯೊಂದಿಗೆ ಪ್ರತೀ ದಿನ ೧ ಘಂಟೆ ಫೋನಿನಲ್ಲಿ ಮಾತನಾಡೋವಾಗ ರೇಗಿಸ್ತಾ ಇದ್ದ ನಾನು ಇವತ್ತು ಗಪ್ ಚುಪ್... ಆಗೆಲ್ಲಾ ಕೇಳ್ತಾ ಇದ್ದೆ.... "ಅಷ್ಟು ಹೊತ್ತು ಮಾತಾಡೋಕೆ ಅದೇನಿರತ್ತೆ ನಿನ್ಗೆ ವಿಷ್ಯಗಳೂ??? ಪ್ರಪಂಚದ ಸುದ್ದೀ ಎಲ್ಲಾ ನಿನ್ ಹತ್ರಾನೇ ಇರತ್ತಾ???" ಇತ್ಯಾದಿ ಇತ್ಯಾದಿ.... ಆದ್ರೆ ಸತ್ಯವಾಗ್ಲೂ ಇವತ್ತು ನನ್ನ ಹತ್ರ ಆ ರೀತಿಯ ಪ್ರಶ್ನೆಗಳಿಗೆ ಉತ್ತರ ಇಲ್ಲ :)
ಮದುವೆಗೆ ಹುಡುಗಿಯ ಹುಡುಕಾಟ ಶುರುವಾದ್ರೆ ಗೆಳೆಯರು ಕೇಳೋ ಪ್ರಶ್ನೆ: "ಏನಮ್ಮಾ.... ಏಷ್ಟು ಉಪ್ಪಿಟ್ಟು+ಕೇಸರೀ ಭಾತು ಆಯ್ತು ಇಲ್ಲೀವರ್ಗೇ ???" ಅಂತ. ನಿಜ ಹೇಳಬೇಕು ಅಂದ್ರೆ ನನ್ನ ಜೀವನದಲ್ಲಿ ನಾನು ಉಪ್ಪಿಟ್ಟು+ಕೇಸರೀ ಭಾತು ತಿಂದೇ ಇಲ್ಲ :) ಇವಳನ್ನ ನೋಡಲು ಹೋದಾಗಲೂ ಕೊಟ್ಟದ್ದು ಆಲೂಗಡ್ಡೆ ಚಿಪ್ಸ್ ಮತ್ತೆ ಸೋನ್ ಪಾಪಡಿ.... ಅದೇ ನನ್ನ ಮೊದಲ ಮತ್ತು ಕೊನೆಯ ಇಂಟರ್ವ್ಯು ಆಗೋಯ್ತು. ಅದೇನೋಪ್ಪ.... ಪ್ರಪಂಚದಲ್ಲಿ ಹುಡುಗಿಯರು ಕಡಿಮೆ ಅಂತಾರೆ, ಆದ್ರೆ ನನ್ಗೆ ಯಾವುದೇ ಸಮಸ್ಯೆ ಆಗ್ಲಿಲ್ಲ ನೋಡಿ. ಮೊದಲ್ನೇ ಸಲ ನೋಡಿದ ಹುಡುಗೀನೇ ಕ್ಲಿಕ್ ಆಗೋದ್ಳು. ಇವತ್ತಿಗೂ ಅವಳಿಗೆ ರೇಗಿಸ್ತಾ ಇರ್ತೀನಿ ನಂಗೆ ಜೀವನದಲ್ಲಿ ಒಂದೇ ಒಂದ್ ಸಾರೀನೂ ಉಪ್ಪಿಟ್ಟು+ಕೇಸರೀ ಭಾತು ತಿನ್ನೋ ಅವಕಾಶ ಸಿಕ್ಕ್ಲೇ ಇಲ್ಲ ಅಂತ ;)
ಅವಳನ್ನ ನೋಡಿಕೊಂಡು ಬಂದ ಕೆಲವೇ ದಿನಗಳಲ್ಲಿ ಅವಳ ಹುಟ್ಟಿದ ಹಬ್ಬ ಇತ್ತು. ಹೇಗಾದ್ರೂ ಮಾಡಿ ಶುಭಾಷಯ ತಿಳಿಸ್ಬೇಕು, ಆ ನೆಪದಲ್ಲಿ ಅವಳಜೊತೆ ಮಾತಾಡ್ಬೇಕು ಅಂತ ಒದ್ದಾಡ್ತಾ ಇದ್ದೆ. ಅವಳ ಮೊಬೈಲ್ ನಂಬರ್ ಕೂಡಾ ನನ್ನ ಹತ್ತಿರ ಇರಲಿಲ್ಲ. ಇದ್ದದ್ದು ೨ ಬೇರೆ ಬೇರೆ ನಂಬರ್ ಗಳು. ಒಂದು ಅವರ ಮನೆಯ ಸ್ಥಿರದೂರವಾಣಿದು, ಮತ್ತೊಂದು ಅವಳ ದೊಡ್ಡಪ್ಪನ ಮೊಬೈಲ್ ನಂಬರ್. ಅಂತೂ ಇಂತೂ ನಾನು ಅವಳಿಗೆ ಹುಟ್ಟಿದ ಹಬ್ಬಕ್ಕೆ ಶುಭಾಷಯ ಕೋರಲೇ ಬೇಕು ಅಂತ ಅವಳ ಹುಟ್ಟಿದ ದಿನದಂದೇ ಆ ಸ್ಥಿರದೂರವಾಣಿ ಗೆ ಕರೆಮಾಡಿದೆ.
ನನ್ನ ಗ್ರಹಚಾರ ಕಣ್ರಿ.... ಆ ದಿನಾನೇ ಆ ಸ್ಥಿರದೂರವಾಣಿ ಕೈ ಕೊಟ್ಟಿತ್ತು. ನಾನೂ ಇತ್ತಕಡೆಯಿಂದ ಪ್ರಯತ್ನ ಪಟ್ಟಿದ್ದೂ ಪಟ್ಟಿದ್ದೇ... ಆದ್ರೆ ಪ್ರಯೋಜನ ಮಾತ್ರ ಆಗ್ಲಿಲ್ಲ. ಕೊನೇಗೆ ಧೈರ್ಯ ಮಾಡ್ಕೊಂಡು ಅವಳ ದೊಡ್ಡಪ್ಪನ ಮೊಬೈಲಿಗೇ ಕರೆ ಮಾಡಿದ್ದೆ :) ಕರೆ ಮಾಡಿ ನಂತರ ಆಕೆಯ ಮೊಬೈಲ್ ನಂಬರ್ ಪಡ್ಕೊಂಡಿದ್ದೆ.
ಮನೆಯಲ್ಲಿ ನಿಶ್ಛಿತ್ತಾರ್ಥದ ದಿನವೆಲ್ಲಾ ನಿಗದಿಯಾದಮೇಲೆ ಶುರುವಾಯ್ತು ನಮ್ಮ ಮೊಬೈಲ್ ಸಂಭಾಷಣೆ ಅದರ ಜೊತೆಯಲ್ಲೇ ನನ್ನ ಮೊಬೈಲ್ ಬಿಲ್ಲಿನ ಸ್ಪರ್ಧೆ ಕೂಡಾ!!! ನನ್ನ ಮೊಬೈಲ್ ಬಿಲ್ಲು ತಿಂಗಳಿಂದ ತಿಂಗಳಿಗೆ ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಗುತ್ತಿತ್ತು. ಮೊದ ಮೊದಲು ವೋಡೋಫೋನಿನವರಿಗೆ ಧಾರಾಳವಾಗಿ ಹಣ ಕಟ್ಟಿದ್ದಾಯ್ತು.... ಆಮೇಲೆ ಹೊಸಾ"ಐಡಿಯಾ" ಹೊಳೆದದ್ದರಿಂದ ಈಗ ತಿಂಗಳಿಗೆ ಕೇವಲ ೨೦೦/- ರೂಪಾಯಿಯಲ್ಲಿ ನಮ್ಮ ಮಾತೆಲ್ಲಾ ಸಾಗುತ್ತಲಿದೆ. ಹೆಚ್ಚಿನ ಖರ್ಚಿಲ್ಲದೇ ನಾವಿಬ್ಬರೂ ಆರಾಮವಾಗಿ ಮಾತನಾಡುವ ಸದವಕಾಶವನ್ನ "ಐಡಿಯ" ದವರು ನಮಗೆ ಒದಗಿಸಿಕೊಟ್ಟಿದ್ದಾರೆ. ನಿಮ್ಮಲ್ಲಿ ಯಾರಾದರೂ ನನ್ನ ಪರಿಸ್ಥಿತಿಯಲ್ಲೇ ಇದ್ದರೆ ನಿಮಗೂ "ಐಡಿಯ" ಚೆನ್ನಾಗಿ ಉಪಯೋಗಕ್ಕೆ ಬರಬಹುದು ಅಂತ ನನ್ನ ಅನಿಸಿಕೆ ;)
ನಿಶ್ಛಿತ್ತಾರ್ಥಕ್ಕೆ ಮೈಸೂರಿನಿಂದ ಒಂದು ಖಾಸಗೀ ವಾಹನದಲ್ಲಿ ಹೊರಟನಾವೆಲ್ಲಾ (ನಾನು ಮತ್ತು ನಮ್ಮ ಕುಟುಂಬದವರು) ಬೆಂಗಳೂರಿಗೆ ಬಂದ್ವಿ. ಬರುವಾಗ ಎಲ್ಲಾ ಸೇರ್ಕೊಂಡು ನನಗೆ ರೇಗ್ಸಿದ್ದೋ ರೇಗ್ಸಿದ್ದು. ಮದುವೆ ನಿಶ್ಛಿತ್ತಾರ್ಥದ ದಿನ ಎಲ್ಲರ ಹದ್ದಿನ ಕಣ್ಣೂ ನನ್ನನ್ನೇ ಹುಡುಕುತ್ತಿದ್ದವು. ಏನೋ ಒಂದುರೀತಿಯ ಮುಜುಗರ ನನ್ನಲ್ಲಿ. ಒಳ್ಳೆ ಮೃಗಾಲಯದಲ್ಲಿ ಪ್ರಾಣಿಯನ್ನ ನೋಡಿ ಖುಷಿ ಪಡೋರೀತಿ ನನ್ನ ನೋಡ್ತಾ ಅವರವರಲ್ಲೇ ಏನೇನೋ ಮಾತಾಡ್ಕೊತಾ ಇದ್ರು. ಅವಳ ಮನೆಯ ಮಂದಿಗೆ ನಾನು ಹೊಸಬ. ಹಾಗಾಗಿ ಎಲ್ಲರ ಕಣ್ಣೂ ನನ್ನ ಮೇಲೇ. ಹಲವು ಅಪರಿಚಿತ ಮುಖಗಳು ನನ್ನನ್ನೇ ನೋಡ್ತಾ ಇದ್ರೆ ಏನ್ ಮಾಡ್ಬೇಕು ಅಂತನೇ ಗೊತ್ತಾಗ್ತಾ ಇರ್ಲಿಲ್ಲ. ನನ್ಗೂ Full tension ಆಗ್ತಾ ಇತ್ತು. ಬರೀ ಎಲ್ಲಾರಿಗೂ ಒಂದು ಸ್ಮೈಲ್ ಮಾತ್ರ ಕೊಡ್ತಾ ಇದ್ದೆ. ಬೇರೆ ಮಾಡೋದಾದ್ರೂ ಏನು ಹೇಳಿ... :(
ನಾನು ಅವಳನ್ನ ನೋಡೋಕೆ ನಿಶ್ಛಿತ್ತಾರ್ಥಕ್ಕಿಂತಾ ಸುಮಾರು ೩ ತಿಂಗಳ ಹಿಂದೆ ಹೋಗಿದ್ದು. ನಂತರದ ನಮ್ಮ ಭೇಟಿ ನಿಶ್ಛಿತ್ತಾರ್ಥ ದ ದಿನದಂದೇ ಆದದ್ದು. ಚೆಂದದ ಸೀರೆ ಉಟ್ಕೊಂಡು ನನ್ನವಳು ಚೆನ್ನಾಗಿ ಕಾಣ್ತಾ ಇದ್ಳು. ಎಲ್ಲಾ ಕೇಳೋದು ಒಂದೇ ಪ್ರಶ್ನೆ, "ಯಾಕೆ ಇಷ್ಟು ಸಣ್ಣ ಆಗಿದ್ದೀರ ? ಪಾಪ ಅವ್ಳ್ದೇ ಯೋಚ್ನೇನಾ?? ಇನ್ನು ಸ್ವಲ್ಪ ತಿಂಗ್ಳು ವೈಟ್ ಮಾಡಿ... ಮನೆಗೇ ಬರ್ತಾಳೆ... ಅಲ್ಲಿವರ್ಗೇ ಸ್ವಲ್ಪ ಚೆನ್ನಾಗಿ ತಿಂದು ದಪ್ಪ ಆಗಿ, ಆಮೇಲೆ ಅವ್ಳು ಬಂದು ನಿಮ್ಮನ್ನ ಚೆನ್ನಾಗಿ ನೋಡ್ಕೋತಾಳೆ" ಅಂತ. ಎಲ್ಲರಿಗೂ ಉತ್ತರ ಕೊಟ್ಟೂ ಕೊಟ್ಟೂ ಸಾಕಾಯ್ತು. ಬಂದವರಿಗೆಲ್ಲಾ ನಮ್ಮ ಜೋಡಿ ಮೆಚ್ಚುಗೆ ಆಯ್ತು.
ಅಲ್ಲಾ.... ನಾನು ಅವ್ಳು ಬಂದಿಲ್ಲಾ ಅಂತ ಯೋಚ್ನೆ ಮಾಡ್ತಾ ಸಣ್ಣ ಆದ್ನಂತೆ. ಅವ್ರಿಗೇನ್ ಗೊತ್ತು, ದಿನಾಬೆಳಿಗ್ಗೆ ೪ ಘಂಟೆಗೇ ಎದ್ದು ತಿಂಡಿ ಮಾಡ್ಕೊಂಡು ಕೆಲ್ಸಕ್ಕೂ ಹೋಗಿ ಮತ್ತೆ ಮನೆಗೆ ಬಂದು ಅಡುಗೆ ಮಾಡ್ಕೊಂಡು ಮಲ್ಗೋವ್ರ ಕಷ್ಟ :P ಅದರ ಮಜವನ್ನ ಅನುಭವಿಸಿದವನೇ ಬಲ್ಲ ;) ಬೆಳಿಗ್ಗೆ ಆದ್ರೆ ತಿಂಡಿ ಮಾಡೋ ಗಡಿಬಿಡಿ, ಸಂಜೆ ಆದ್ರೆ ಅಡುಗೆ ಮಾಡೋ ಗಡಿಬಿಡಿ, ಇದರ ಜೊತೆಯಲ್ಲೇ ನಾಳೆಗೇನು ತಿಂಡಿ ಮಾಡೋದಪ್ಪಾ ಅನ್ನೋ ಯೋಚನೆ.... ಉಸ್ಸ್ಸಪ್ಪಾ... ಒಂದೋ ಎರಡೋ.... ಆದ್ರೂ ಸಧ್ಯಕ್ಕೆ ಈ ಜೀವನ ಮಸ್ತ್ ಆಗೇ ಇದೆ :) ಮುಂದೆ ಮದುವೆಯಾದಮೇಲೆ ಹೇಗಾಗತ್ತೋ ಗೊತ್ತಿಲ್ಲ :)
ಸಧ್ಯಕ್ಕೆ ನನ್ನ ಮದುವೆ ನಿಶ್ಛಿತ್ತಾರ್ಥಮುಗಿದಿದೆ. ಇನ್ನು ಮದುವೆ ಕಾರ್ಯ ಹೇಗೆ ಆಗತ್ತೋ ಅನ್ನೋ ಭಯ ಮನಸ್ಸಲ್ಲಿ ಕಾಡ್ತಾ ಇದೆ. ನಿಶ್ಛಿತ್ತಾರ್ಥ ಏನೋ ಯಾವ ತೊಂದರೆಯೂ ಇಲ್ಲದೇ ನಡೆದುಹೋಯ್ತು. ಮುಂದೆನೂ ಹಾಗೇ ಎಲ್ಲಾ ಸರಾಗವಾಗಿ ಆಗತ್ತೆ ಅಂತ ಅಂದ್ಕೊಂಡಿದೀನಿ. :)
Showing posts with label ಅನುಬವ ಬರಹ. Show all posts
Showing posts with label ಅನುಬವ ಬರಹ. Show all posts
Thursday, September 16, 2010
Tuesday, September 14, 2010
ಬಾಲ್ಯ....
ಬಾಲ್ಯ ಎಷ್ಟು ಸುಂದರ ಅಲ್ವಾ ? ನಾವೆಲ್ಲಾ Miss ಮಾಡ್ಕೊಳೋ ಬಹು ದೊಡ್ಡ ಆಸ್ತಿ. ನಾವು ಕಳ್ಕೊಂಡ ಬಾಲ್ಯವನ್ನ ನಮ್ಮ ಮಕ್ಕಳಲ್ಲಿ ಅಥವಾ ನಮ್ಮ ಸುತ್ತ ಮುತ್ತ ಕಾಣ ಸಿಗುವ ಮಕ್ಕಳಲ್ಲಿ ಕಂಡು ಸಂತಸ ಪಡುತ್ತೇವೆ. ನಾವು ಚಿಕ್ಕವರಾಗಿದ್ದಾಗಿನ ನೆನಪು ನಮ್ಮ ನನಪಿನಂಗಳದಲ್ಲಿ ಬಂದು ಒಮ್ಮೊಮ್ಮೆ ನಲಿದು, ಕುಣಿದು ಹೋಗುವುದು ಸಾಮಾನ್ಯವೇ.
ಮೊನ್ನೆ ನಾನು ನನ್ನ ಅಜ್ಜನ ಮನೆಯಾದ ಬಾರಕೂರಿಗೆ ಹೋಗಿದ್ದೆ. ಅಲ್ಲಿ ಕಂಡಾಪಟ್ಟೆ ಮಳೆ ಬಂದು ಅಲ್ಲಿನ ತೋಡು (ಗದ್ದೆಗಳ ನಡುವೆ ನೀರು ಹರಿಯುವ ಜಾಗ) ತುಂಬಿ ಹರಿಯುತ್ತಿತ್ತು. ಅದರಲ್ಲಿ ನಡೆದಾಡುತ್ತಾ ಇದ್ದೆ. ಅಲ್ಲಿಗೆ ನನ್ನ ಅಣ್ಣ ಮತ್ತು ಅವನ ೩ ವರ್ಷದ ಮಗಳು ವಿಸ್ಮಯ ಬಂದರು. ಅಣ್ಣ ಅವಳಿಗೆ "ಪೇಪರ್ ದೋಣಿ ಮಾಡಿಕೊಡ್ತೀನಿ, ಅದನ್ನ ನೀರಲ್ಲಿ ಬಿಡೋಣ" ಅಂತಾ ಇದ್ದ. ಆಗಲೇ ನನಗೆ ನಮ್ಮ ಬಾಲ್ಯದ ನೆನಪು ಬಹಳ ಕಾಡಿದ್ದು. ಅವುಗಳಲ್ಲಿ ಕೆಲವನ್ನು ಪಟ್ಟಿ ಮಾಡಿದ್ದೇನೆ :) ನೀವೂ ಓದಿ ನಿಮ್ಮ ಬಾಲ್ಯವನ್ನ ನೆನಪುಮಾಡಿಕೊಳ್ಳಿ :)
• ನಾವೆಲ್ಲಾ ಚಿಕ್ಕವರಾಗಿದ್ದಾಗ ಹಳೇ ಪೇಪರಿನಲ್ಲಿ (ಒಮ್ಮೊಮ್ಮೆ ಹೊಸಾ ನೋಟ್ ಬುಕ್ಕಿನಿಂದ ಹರಿದದ್ದೂ ಇದೆ) ದೋಣಿ, ರಾಕೇಟ್, ವಿಮಾನ ಇನ್ನೂ ಮುಂತಾದವನ್ನ ಮಾಡಿ ಶಾಲೆಯ ಬಿಡುವಿನಲ್ಲಿ ತರಗತಿಗಳಲ್ಲೇ ಆಟ ಆಡಿದ್ದುಂಟು.
• ಎರೆಡು ಪುಸ್ತಕಗಳ ಹಾಳೆಗಳನ್ನು ಒಂದರಮೇಲೊಂದರಂತೆ ಜೋಡಿಸಿ ನಂತರ ಅದನ್ನ ಉಲ್ಟಾ ಮಾಡಿ ಸಿನಿಮ ನೋಡುವ ಆಟ ಆಡಿದ್ದುಂಟು.
• ಆಟದ ಸಮಯದಲ್ಲಿ ಲಗೋರಿ, ಜೂಟಾಟ, ಐಸ್ ಪೈಸ್ ಎಲ್ಲಾ ಆಡಿದ್ದನ್ನು ನೆನಸಿಕೊಂಡರೆ ಏನೋ ಒಂದು ರೀತಿ ಖುಷಿಯಾಗತ್ತೆ. :)
• ಆಗೆಲ್ಲಾ ನಮಗೆ ತೆಂಗಿನ ಗರಿಯ ಬುಡವೇ (ಹೆಡೆಮಂಡೆ) ಬ್ಯಾಟು, ಖಾಲಿಯಾದ ಪ್ಲಾಸ್ಟಿಕ್ ಕವರಿನ ಗಂಟೇ ಬಾಲು. ಅದರಲ್ಲೇ ಕ್ರಿಕೇಟನ್ನು ಮ್ಯಾಚ್ ಫಿಕ್ಸಿಂಗ್ ಇಲ್ಲದೇ ಆಡಿ ಖುಷಿಪಟ್ಟಿದ್ವಿ.
• ಪುಸ್ತಕದ ಕೊನೆಯ ಹಾಳೆಯಲ್ಲಿ ಮೂರುಕಲ್ಲಿನ ಆಟದ ಮನೆಗಳು ಇದ್ದೇ ಇರುತ್ತಿದ್ದವು. ಚೌಕಾಬಾರ, ಚನ್ನೇಮಣೆ, ಕಳ್ಳಾ ಪೊಲೀಸ್ ಆಟ, ಪಠ್ಯಪುಸ್ತಕದಿಂದ ಆಡಿದ ಬುಕ್ ಕ್ರಿಕೇಟ್ ಮತ್ತು ಇನ್ನೂ ಹಲವು ಆಟಗಳು ನಮ್ಮ ಮೆಚ್ಚಿನ ಆಟಗಳಾಗಿರುತ್ತಿದ್ದವು.
• ರಜೆ ಬಂತೆಂದರೆ ನಾನು ಕ್ರಿಕೇಟ್ ಆಡಲು ಅಕ್ಕನಹಿಂದೆ ದುಂಬಾಲು ಬೀಳುತ್ತಿದ್ದೆ. ಅದಕ್ಕವಳು ತನ್ನ "ಅಮ್ಮ ಆಟಕ್ಕೆ" ಬಂದರೆ ಮಾತ್ರಾ ಕ್ರಿಕೇಟನ್ನು ಆಡುವುದಾಗಿ ಶರತ್ತು ಇಡುತ್ತಿದ್ದಳು. ವಿಧಿ ಇಲ್ಲದೇ ಒಲ್ಲದ ಮನಸ್ಸಿನಿಂದ ಒಪ್ಪಿ ಕ್ರಿಕೇಟಿನ ಆಟ ಆಡಲು ಕಾಯುತ್ತಿದ್ದೆ.
• ಸ್ವಿಚ್ ಆನ್ ಮಾಡಿರದ ಪ್ಲಗ್ಗಿಗೆ ಪಿನ್ನನ್ನು ಚುಚ್ಚಿ ಕರೆಂಟ್ ಹೊಡೆಸಿಕೊಂಡದ್ದು ನೆನಸಿಕೊಂಡರೆ ಈಗಲೂ ನಗು ಬರುತ್ತದೆ.
• ಪುಟ್ಟ ಪುಟ್ಟ ಮೋರಿಗಳಲ್ಲಿ ಮೀನು ಹಿಡಿದು ಹಾರ್ಲಿಕ್ಸ್ ಬಾಟಲಿಗೆ ಹಾಕಿ ಸಾಕಲು ಮಾಡುತ್ತಿದ್ದ ವಿಫಲಯತ್ನ ಗಳು, ಏರೋಪ್ಲೇನ್ ಚಿಟ್ಟೆಯನ್ನು ಹಿಡಿಯಲು ಹೋಗಿ ಎಡವಿ ಕೆಳಬಿದ್ದದ್ದು.
• ಅಪ್ಪನೊಡನೆ ಪೇಟೆಗೆ ಹೋದಾಗ ಹಠಮಾಡಿ ಕೊಂಡ ಪ್ಲಾಸ್ಟಿಕ್ ಲಾರಿಯ ಗಾಲಿ ಮುರಿದಾಗ ಬೇಸರದಿಂದ ಸಪ್ಪೆಮುಖ ಮಾಡಿಕೊಂಡದ್ದು.
• ಶಾಲೆ ಮುಗಿಸಿ ಮನೆಗೆ ಬಂದು ಅಮ್ಮನಿಗೆ ಏನಾದರೂ ತಿನ್ನಲಿಕ್ಕೆ ಕೊಡು ಅಂತ ತಲೆ ತಿಂದದ್ದು.
• ಸುಳ್ಳು ಸುಳ್ಳಾಗೇ ಹೊಟ್ಟೇ ನೋವು ಬರಿಸಿಕೊಂಡು ಶಾಲೆಗೆ ಹೋಗದೇ ಚಕ್ಕರ್ ಹೊಡೆದು ಮನೆಯಲ್ಲಿ ಮಜವಾಗಿ ಸಮಯ ಕಳೆದದ್ದು.
• ಐಯೋಡೆಕ್ಸ್ ಬಾಟಲಿಯಲ್ಲಿ ನಲ್ಲಿ ಗಿಡ ನೆಟ್ಟು ಪ್ರೀತಿಯಿಂದ ೫ ವರುಷ ಸಾಕಿದ್ದು.
• ಅಪ್ಪ ಪೇಟೆಯಿಂದ ತಂದಿದ್ದ ಕಡಲೇ ಕಾಯಿಯನ್ನ ಎಲ್ಲರೊಂದಿಗೆ ಹಂಚಿ ತಿಂದದ್ದು.
• ಅಪ್ಪನ ಸೈಕಲ್ಲಿನ ಚಕ್ರವನ್ನು ಜೋರಾಗಿ ತಿರುಗಿಸಿ ಅದಕ್ಕೆ ಕಡ್ಡಿ ಇಟ್ಟು ಅಪ್ಪನಿಂದ ಬೈಸಿಕೊಂಡದ್ದು.
• ಊಟ ಮಾಡಲು ಮನಸ್ಸಿಲ್ಲದಾಗ ಅಮ್ಮನ ಕೈ ತುತ್ತಿಗೆ ಕಾಡಿದ್ದು, ಕೈ ತುತ್ತು ತಿಂದು ನಿದ್ರೆಗೆ ಜಾರಿದ್ದು.
ಸಧ್ಯಕ್ಕೆ ಇಷ್ಟು ಸಾಕು, ಮಿಕ್ಕವನ್ನು ಪಟ್ಟಿ ಮಾಡುತ್ತಾ ಹೋದರೆ ಅದು ನಿಲ್ಲುವುದೇ ಇಲ್ಲ... :)
ಮೊನ್ನೆ ನಾನು ನನ್ನ ಅಜ್ಜನ ಮನೆಯಾದ ಬಾರಕೂರಿಗೆ ಹೋಗಿದ್ದೆ. ಅಲ್ಲಿ ಕಂಡಾಪಟ್ಟೆ ಮಳೆ ಬಂದು ಅಲ್ಲಿನ ತೋಡು (ಗದ್ದೆಗಳ ನಡುವೆ ನೀರು ಹರಿಯುವ ಜಾಗ) ತುಂಬಿ ಹರಿಯುತ್ತಿತ್ತು. ಅದರಲ್ಲಿ ನಡೆದಾಡುತ್ತಾ ಇದ್ದೆ. ಅಲ್ಲಿಗೆ ನನ್ನ ಅಣ್ಣ ಮತ್ತು ಅವನ ೩ ವರ್ಷದ ಮಗಳು ವಿಸ್ಮಯ ಬಂದರು. ಅಣ್ಣ ಅವಳಿಗೆ "ಪೇಪರ್ ದೋಣಿ ಮಾಡಿಕೊಡ್ತೀನಿ, ಅದನ್ನ ನೀರಲ್ಲಿ ಬಿಡೋಣ" ಅಂತಾ ಇದ್ದ. ಆಗಲೇ ನನಗೆ ನಮ್ಮ ಬಾಲ್ಯದ ನೆನಪು ಬಹಳ ಕಾಡಿದ್ದು. ಅವುಗಳಲ್ಲಿ ಕೆಲವನ್ನು ಪಟ್ಟಿ ಮಾಡಿದ್ದೇನೆ :) ನೀವೂ ಓದಿ ನಿಮ್ಮ ಬಾಲ್ಯವನ್ನ ನೆನಪುಮಾಡಿಕೊಳ್ಳಿ :)
• ನಾವೆಲ್ಲಾ ಚಿಕ್ಕವರಾಗಿದ್ದಾಗ ಹಳೇ ಪೇಪರಿನಲ್ಲಿ (ಒಮ್ಮೊಮ್ಮೆ ಹೊಸಾ ನೋಟ್ ಬುಕ್ಕಿನಿಂದ ಹರಿದದ್ದೂ ಇದೆ) ದೋಣಿ, ರಾಕೇಟ್, ವಿಮಾನ ಇನ್ನೂ ಮುಂತಾದವನ್ನ ಮಾಡಿ ಶಾಲೆಯ ಬಿಡುವಿನಲ್ಲಿ ತರಗತಿಗಳಲ್ಲೇ ಆಟ ಆಡಿದ್ದುಂಟು.
• ಎರೆಡು ಪುಸ್ತಕಗಳ ಹಾಳೆಗಳನ್ನು ಒಂದರಮೇಲೊಂದರಂತೆ ಜೋಡಿಸಿ ನಂತರ ಅದನ್ನ ಉಲ್ಟಾ ಮಾಡಿ ಸಿನಿಮ ನೋಡುವ ಆಟ ಆಡಿದ್ದುಂಟು.
• ಆಟದ ಸಮಯದಲ್ಲಿ ಲಗೋರಿ, ಜೂಟಾಟ, ಐಸ್ ಪೈಸ್ ಎಲ್ಲಾ ಆಡಿದ್ದನ್ನು ನೆನಸಿಕೊಂಡರೆ ಏನೋ ಒಂದು ರೀತಿ ಖುಷಿಯಾಗತ್ತೆ. :)
• ಆಗೆಲ್ಲಾ ನಮಗೆ ತೆಂಗಿನ ಗರಿಯ ಬುಡವೇ (ಹೆಡೆಮಂಡೆ) ಬ್ಯಾಟು, ಖಾಲಿಯಾದ ಪ್ಲಾಸ್ಟಿಕ್ ಕವರಿನ ಗಂಟೇ ಬಾಲು. ಅದರಲ್ಲೇ ಕ್ರಿಕೇಟನ್ನು ಮ್ಯಾಚ್ ಫಿಕ್ಸಿಂಗ್ ಇಲ್ಲದೇ ಆಡಿ ಖುಷಿಪಟ್ಟಿದ್ವಿ.
• ಪುಸ್ತಕದ ಕೊನೆಯ ಹಾಳೆಯಲ್ಲಿ ಮೂರುಕಲ್ಲಿನ ಆಟದ ಮನೆಗಳು ಇದ್ದೇ ಇರುತ್ತಿದ್ದವು. ಚೌಕಾಬಾರ, ಚನ್ನೇಮಣೆ, ಕಳ್ಳಾ ಪೊಲೀಸ್ ಆಟ, ಪಠ್ಯಪುಸ್ತಕದಿಂದ ಆಡಿದ ಬುಕ್ ಕ್ರಿಕೇಟ್ ಮತ್ತು ಇನ್ನೂ ಹಲವು ಆಟಗಳು ನಮ್ಮ ಮೆಚ್ಚಿನ ಆಟಗಳಾಗಿರುತ್ತಿದ್ದವು.
• ರಜೆ ಬಂತೆಂದರೆ ನಾನು ಕ್ರಿಕೇಟ್ ಆಡಲು ಅಕ್ಕನಹಿಂದೆ ದುಂಬಾಲು ಬೀಳುತ್ತಿದ್ದೆ. ಅದಕ್ಕವಳು ತನ್ನ "ಅಮ್ಮ ಆಟಕ್ಕೆ" ಬಂದರೆ ಮಾತ್ರಾ ಕ್ರಿಕೇಟನ್ನು ಆಡುವುದಾಗಿ ಶರತ್ತು ಇಡುತ್ತಿದ್ದಳು. ವಿಧಿ ಇಲ್ಲದೇ ಒಲ್ಲದ ಮನಸ್ಸಿನಿಂದ ಒಪ್ಪಿ ಕ್ರಿಕೇಟಿನ ಆಟ ಆಡಲು ಕಾಯುತ್ತಿದ್ದೆ.
• ಸ್ವಿಚ್ ಆನ್ ಮಾಡಿರದ ಪ್ಲಗ್ಗಿಗೆ ಪಿನ್ನನ್ನು ಚುಚ್ಚಿ ಕರೆಂಟ್ ಹೊಡೆಸಿಕೊಂಡದ್ದು ನೆನಸಿಕೊಂಡರೆ ಈಗಲೂ ನಗು ಬರುತ್ತದೆ.
• ಪುಟ್ಟ ಪುಟ್ಟ ಮೋರಿಗಳಲ್ಲಿ ಮೀನು ಹಿಡಿದು ಹಾರ್ಲಿಕ್ಸ್ ಬಾಟಲಿಗೆ ಹಾಕಿ ಸಾಕಲು ಮಾಡುತ್ತಿದ್ದ ವಿಫಲಯತ್ನ ಗಳು, ಏರೋಪ್ಲೇನ್ ಚಿಟ್ಟೆಯನ್ನು ಹಿಡಿಯಲು ಹೋಗಿ ಎಡವಿ ಕೆಳಬಿದ್ದದ್ದು.
• ಅಪ್ಪನೊಡನೆ ಪೇಟೆಗೆ ಹೋದಾಗ ಹಠಮಾಡಿ ಕೊಂಡ ಪ್ಲಾಸ್ಟಿಕ್ ಲಾರಿಯ ಗಾಲಿ ಮುರಿದಾಗ ಬೇಸರದಿಂದ ಸಪ್ಪೆಮುಖ ಮಾಡಿಕೊಂಡದ್ದು.
• ಶಾಲೆ ಮುಗಿಸಿ ಮನೆಗೆ ಬಂದು ಅಮ್ಮನಿಗೆ ಏನಾದರೂ ತಿನ್ನಲಿಕ್ಕೆ ಕೊಡು ಅಂತ ತಲೆ ತಿಂದದ್ದು.
• ಸುಳ್ಳು ಸುಳ್ಳಾಗೇ ಹೊಟ್ಟೇ ನೋವು ಬರಿಸಿಕೊಂಡು ಶಾಲೆಗೆ ಹೋಗದೇ ಚಕ್ಕರ್ ಹೊಡೆದು ಮನೆಯಲ್ಲಿ ಮಜವಾಗಿ ಸಮಯ ಕಳೆದದ್ದು.
• ಐಯೋಡೆಕ್ಸ್ ಬಾಟಲಿಯಲ್ಲಿ ನಲ್ಲಿ ಗಿಡ ನೆಟ್ಟು ಪ್ರೀತಿಯಿಂದ ೫ ವರುಷ ಸಾಕಿದ್ದು.
• ಅಪ್ಪ ಪೇಟೆಯಿಂದ ತಂದಿದ್ದ ಕಡಲೇ ಕಾಯಿಯನ್ನ ಎಲ್ಲರೊಂದಿಗೆ ಹಂಚಿ ತಿಂದದ್ದು.
• ಅಪ್ಪನ ಸೈಕಲ್ಲಿನ ಚಕ್ರವನ್ನು ಜೋರಾಗಿ ತಿರುಗಿಸಿ ಅದಕ್ಕೆ ಕಡ್ಡಿ ಇಟ್ಟು ಅಪ್ಪನಿಂದ ಬೈಸಿಕೊಂಡದ್ದು.
• ಊಟ ಮಾಡಲು ಮನಸ್ಸಿಲ್ಲದಾಗ ಅಮ್ಮನ ಕೈ ತುತ್ತಿಗೆ ಕಾಡಿದ್ದು, ಕೈ ತುತ್ತು ತಿಂದು ನಿದ್ರೆಗೆ ಜಾರಿದ್ದು.
ಸಧ್ಯಕ್ಕೆ ಇಷ್ಟು ಸಾಕು, ಮಿಕ್ಕವನ್ನು ಪಟ್ಟಿ ಮಾಡುತ್ತಾ ಹೋದರೆ ಅದು ನಿಲ್ಲುವುದೇ ಇಲ್ಲ... :)
Wednesday, April 21, 2010
ಮೊಟ್ಟ ಮೊದಲ ಕೇಕ್ ಕಟ್ಟಿಂಗ್
ಫೆಬ್ರವರಿ ೧೪ ೨೦೦೯
ಇವತ್ತಿನ ದಿನವನ್ನ ನಾನು ಮರಿಯೋದಕ್ಕೆ ಆಗೊದಿಲ್ಲ. ಇವತ್ತು ಪ್ರೇಮಿಗಳ ದಿನ ಅನ್ನೋ ಕಾರಣದಿಂದ ಅಲ್ಲ, ಇವತ್ತು ನನ್ನ ಜನ್ಮದಿನ... ನಾನು ನನ್ನ ಪ್ರತೀ ಜನ್ಮದಿನದಂದು ಯಾರೊಬ್ಬರೊಂದಿಗಾದರೂ ಇರ್ತಾ ಇದ್ದೆ. ಆದರೆ ಈ ಸಲ ನನ್ನ ಬಾಡಿಗೆ ಮನೆಯಲ್ಲಿ ನಾನು ಮತ್ತೆ ನನ್ನ ಎಫ್ ಎಂ ರೇಡಿಯೋ ಮಾತ್ರ ಇದ್ದದ್ದು. ಯಾಕೋ ಮನಸ್ಸಿಗೆ ಬೇಸರ ಆಗ್ತಾ ಇತ್ತು. ಕಳೆದವರ್ಷವಷ್ಟೇ ನನ್ನ ಅಪ್ಪನ್ನ ಕಳ್ಕೊಂಡಿದ್ದ ನಾನು ಈ ಬಾರೀನೂ ಅವರನ್ನ, ಮತ್ತೆ ಅಮ್ಮ, ಅಕ್ಕ, ಅಣ್ಣನ್ನ ಮಿಸ್ ಮಾಡ್ಕೋತಾ ಇದೀನಿ. ಅಪ್ಪ ಇದ್ದಾಗ ಮೈಸೂರಿನ ನಮ್ಮ ಮನೆಗೆ ಹೋಗಿ ಮನೆಯವರೆಲ್ಲರ ಜೊತೆ ಸ್ವಲ್ಪ ಹರಟೆ ಹೊಡೆದು ಬೇಕರಿ ತಿನಿಸುಗಳನ್ನ ತರಿಸಿಕೊಂಡು ಸಣ್ಣದಾಗಿ ಪಾರ್ಟಿ ಮಾಡೋದು, ಅದರಲ್ಲೇ ಖುಷಿ ಕಾಣೋದು, ಅಣ್ಣನ ತಲೆ ತಿಂದು ಯಾವುದಾದರೂ ಸಿನಿಮಾಕೆ ಹೋಗೋದು, ಸಂಜೆ ಪಾನೀಪೂರಿ ತಿನ್ನೋದು ಮನೆಗೆ ಬಂದು ಊಟ ಮಾಡಲ್ಲ ಅಂತ ಅಮ್ಮನಹತ್ತಿರ ಬೈಸ್ಕೊಳೋದು. :)
ಈ ಸಲ ಯಾರಿದ್ದಾರೆ... ಹಾಗೇ ಬೇಸರದಲ್ಲಿ ರಾತ್ರಿ ಕಳಿತಾ ಇದ್ದಾಗ ಟ್ರಿಣ್ ಟ್ರಿಣ್ ಅಂತ ನನ್ನ ಮೊಬೈಲ್ ಮೆಸ್ಸೇಜ್ ಬಂತು ಅಂತ ಹೇಳ್ತು. ಹುಟ್ಟುಹಬ್ಬನ್ನ ಆಫೀಸಿದ್ದಿದ್ದ್ರೆ ನನ್ನ ಸ್ನೇಹಿತರಿಗೆಲ್ಲ ಸಿಹಿ ಹಂಚಿ ಆಚರಿಸ್ತಾ ಇದ್ದೆ. ಆದ್ರೆ ಇವತ್ತು ರಜಾದಿನ ಬೇರೆ, ಹೇಳೀ ಕೇಳೀ ಎರಡನೇ ಶನಿವಾರ. ಹಾಗಾಗಿ ಮನೆಯಲ್ಲೇ ಇದ್ದ ನಾನು ಬೆಳಗಿನ ಯೋಗಾ ಕ್ಲಾಸಿಗೆ ಹೋಗುವ ಬಗ್ಗೆ ಯೋಚ್ನೆ ಮಾಡ್ತಾ ಮೆಸೇಜ್ ನೋಡಿದೆ. ಘಂಟೆ ಸರಿ ಸುಮಾರು ೪.೧೫ ಅನ್ಸತ್ತೆ, ನನ್ನ ಅಣ್ಣ ಮೆಸ್ಸೇಜ್ ಮಾಡಿದ್ದ. "ಇಷ್ಟು ಹೊತ್ತಿಗೆ ಬಹುಷಃ ಅಮ್ಮನಿಗೆ ಹೊಟ್ಟೇ ನೋವ್ತಾ ಇತ್ತು ಅಂತ ಕಾಣತ್ತೆ" ಅನ್ನೋ ಸಂದೇಶ ಇತ್ತು. ನಾನು ಏನು ಅಂತ ಯೋಚ್ನೆ ಮಾಡಿದ್ಮೇಲೆ ಗೊತ್ತಗಿದ್ದು... ಇದು ನಾನು ಹುಟ್ಟಿದಾಗ ಅಂದರೆ __ ವರ್ಷಗಳ ಹಿಂದಿನ ಮಾತನ್ನ ಅಣ್ಣ ಹೇಳ್ತಾ ಇದಾನೆ ಅಂತ. ಖುಷಿ ಆಯ್ತು :) ಮೆಸ್ಸೇಜ್ ಮುಂದುವರೆದಿತ್ತು: "ಅಪ್ಪ ನನ್ನ ಪಕ್ಕದಿಂದ ಎದ್ದು ಅಮ್ಮನ ಮಾತಾಡಿಸೊಕೆ ಹೋಗಿದ್ರು, ಅಮ್ಮ ಅಪ್ಪನಿಗೆ First shift ಇದ್ದದ್ದರಿಂದ ತಿಂಡಿಮಾಡಲು ಹಿಡಿದಿದ್ದ ಪಾತ್ರೆನ ದಾರಿಯಲ್ಲೇ ಇಟ್ಟು ಏದುಸಿರು ಬಿಡ್ತಾ ಇದ್ರು. ಆಮೇಲೆ ಏನಾಯ್ತೋ ಗೊತ್ತಿಲ್ಲ ನಾನು ಮಲಗಿಬಿಟ್ಟೆ"
ಇಷ್ಟಕ್ಕೆ ನಾನು __ ವರ್ಷ ಹಿಂದಕ್ಕೆ ಹೋಗಿಬಿಟ್ಟಿದ್ದೆ :) ನನ್ನ ಅಣ್ಣನ ಬರಹ ಹಾಗಿತ್ತು. ಎಲ್ಲಾ ನನ್ನ ಕಣ್ಮುಂದೇ ನಡಿತಾಇದ್ಯೇನೋ ಅನ್ನೋ ಹಾಗೆ. ಅಷ್ಟರಲ್ಲಿ ಮತ್ತೊಮ್ಮೆ ಟ್ರಿಣ್ ಟ್ರಿಣ್.... ಯಾರದ್ದೋ ಶುಭಾಷಯ ಅಂತ ತಿಳ್ಕೊಂಡು ಮೆಸ್ಸೇಜ್ ನೋಡಿದೆ, ಮತ್ತೆ ನನ್ನ ಅಣ್ಣನದೇ ಮೆಸ್ಸೇಜ್. ಅಣ್ಣ __ ವರ್ಷಹಿಂದಿನ ಘಟನೆಯನ್ನ ನನ್ನ ಮುಂದೆ ಎಳೆ ಎಳೆಯಾಗಿ ಬಿಡಿಸಿಡ್ತಾ ಇದ್ದ. "ಸುಮಾರು ೭ ಘಂಟೆ ಇರಬಹುದು, ಬೀಗ ತೆಕ್ಕೊಂಡು ಅಪ್ಪ ಒಳಗೆ ಬಂದ್ರು. ಬಂದವರೇ ನನ್ನನ್ನ ಇವತ್ತು ನೀನು ಸ್ಕೂಲಿಗೆ ಹೋಗಬೇಡ ಅಂದ್ರು. ರಾತ್ರಿ ಕೂತ್ಕೊಂಡು ಬರೆದಿದ್ದ ಹೋಂವರ್ಕ್ ಮುದುಕೀ ಜಯ ಮಿಸ್ಸಿಗೆ ತೋರಿಸೋಕೆ ಆಗೊದಿಲ್ವಲ್ಲ ಅಂತ ಬೇಜಾರಾಯ್ತು" (ಅಣ್ಣನ ಸ್ಕೂಲಿನಲ್ಲಿ ೩ ಜನ ಜಯ ಅನ್ನೋ ಟೀಚರ್ ಇದ್ದಿದ್ದರಿಂದ ಒಬ್ಬೊಬ್ಬರಿಗೆ ಒಂದೊಂದು ಅಡ್ಡಹೆಸರು)
ನಾನು ಅಣ್ಣನ ಮೆಸೇಜ್ ಗಳನ್ನ ಮತ್ತೊಮ್ಮೆ ಮಗದೊಮ್ಮೆ ಓದಿ ಸಂತಸಪಡ್ತಾ ಇದ್ದೆ. ಮುಂದೇನಾಯ್ತು... ಹೇಳು... ನನು ಅಣ್ಣನಿಗೆ ಪ್ರತ್ಯುತ್ತರ ಕೊಟ್ಟೆ. ಅಣ್ಣ ಮುಂದುವರಿಸಿದ್ದ: "ನನಗಿನ್ನೂ ನೆನಪಿದೆ ಆವತ್ತು ಗುಲಾಬಿ ಬಣ್ಣದ ಟೀ ಷರ್ಟ್ ಹಾಕ್ಕೊಂಡಿದ್ದೆ, ಆವತ್ತು ಫಸ್ಟ್ ಟೈಮ್ ಅಷ್ಟು ಬೆಳಿಗ್ಗೆ ೫ ನಿಮಿಷ ಬಾಗಿಲ ಹೊರಗೆ ಮೆಟ್ಟಿಲ ಮೇಲೆ ನಿಂತಿದ್ದೆ, ಆವತ್ತು ಸ್ವಾತಂತ್ರ್ಯ ಸಿಕ್ಕ ಸಂಭ್ರಮ. ಮನೆ ಯಜಮಾನನ ಹೆಂಡತಿ 'ನಿನಗೊಬ್ಬ ತಮ್ಮ ಹುಟ್ಟಿದಾನೆ ಕಣೋ' ಅಂದ್ರು. ಆಗ ನನ್ಗೆ ವಿವರಿಸಲಾಗದ ಅವ್ಯಕ್ತ ಭಾವನೆಗಳ ಕ್ಷಣ. ಏನೋ ತರೋದಿಕ್ಕೆ ಅಂತ ಅಪ್ಪ ಹೊರಗಡೆ ಹೋಗಿದ್ರು. ಅವರು ಬರೋ ದಾರೀನೇ ಕಾಯ್ತಾಇದ್ದೆ"
ಅಣ್ಣ ನನಗೆ ಈ ರೀತಿ ಮೆಸ್ಸೇಜಿನಲ್ಲಿ __ ವರ್ಷದ ಹಿಂದಿನ ಘಟನೆಯನ್ನ ಹೇಳ್ತಾಇದ್ರೆ ನಾನೇ ಅಲ್ಲಿದ್ದು ಎಲ್ಲದನ್ನ ನೋಡ್ತಾ ಇದೀನೇನೋ ಅನ್ನೋರೀತಿ ಖುಷಿ ಆಗ್ತಾ ಇತ್ತು. ಮತ್ತೊಮ್ಮೆ ಟ್ರಿನ್ ಟ್ರಿನ್ ಅಂತ ರಿಂಗಣಿಸಿದ ನನ್ನ ಮೊಬೈಲ್ ನನ್ನ ಹುಟ್ಟಿದ ಸಂಭ್ರಮದ ಕಥೆ ಹೇಳಲು ಬೆಳಕ ಚೆಲ್ಲಿ ನಕ್ಕಿತ್ತು. "ಅಪ್ಪ ನನ್ನನ್ನ ಸೈಕಲ್ಲಿನಲ್ಲಿ ಕೂರಿಸ್ಕೊಂಡು ಕಮಲಾರಾಮನ್ ಆಸ್ಪತ್ರೆಗೆ ಕರ್ಕೊಂಡು ಹೋದ್ರು. ಅಲ್ಲಿ ಅಮ್ಮ ಮಲಗಿದ್ರು. ನನ್ನನ ನೋಡಿ ನಕ್ಕರು. ಆಯ ಒಳಗಿನಿಂದ ಬಟ್ಟೆಯಲ್ಲಿ ಸುತ್ತಿದ ನಿನ್ನನ್ನ ಸಂಭ್ರಮದಿಂದ ತಂದು ತೋರಿಸಿ ನಿನ್ನ ತಮ್ಮನ್ನ ನೋಡಪ್ಪಾ ಅಂದ್ರು". ನಿಜ ಅಲ್ವ... ಆ ಪುಟ್ಟ ಮನಸ್ಸಿನ ಕಂದನಿಗೆ ತನ್ನ ತಮ್ಮನನ್ನ ನೋಡಲು ಎಷ್ಟು ಕಾತರ ಇದ್ದಿರಬಹುದು, ಮನಸ್ಸಲ್ಲಿ ಏನೇನು ಭಾವನೆಗಳು ಮೂಡಿರಬಹುದು... ಆ ಭಾವನೆಗಳು ನನ್ನ ಅಣ್ಣನ ಮತ್ತೊಂದು ಮೆಸ್ಸೇಜಿನಲ್ಲಿ ಮುಂದುವರೆದಿತ್ತು. "ನಿನ್ನ ಕಣ್ಣುಮುಚ್ಚಿದ ಮುಖ, ಆ ಪುಟ್ಟ ಕೈ ಬೆರಳುಗಳು, ಮಧ್ಯ ಮಧ್ಯ ಹೊರಡುತ್ತಿದ್ದ ಉವ್ವ್ಯಾ ಉವ್ವ್ಯಾ ರಾಗ... ನನಗೆ ಅರಿವಿಲ್ಲದಂತೆ ನಿನ್ನನ್ನು ಮುಟ್ಟಲು ನಿನ್ನ ಕಡೆ ಹೆಜ್ಜೆ ಹಾಕಿದ್ದೆ. ಮುಟ್ಟಬಾರದು !!! ದೂರ ನಿಂತ್ಕೊ !! ಅಮ್ಮ ಅಲ್ಲಿಂದ್ಲೇ ಗದರಿದ್ರು"
ಇಲ್ಲಿಗೆ ನನ್ನ ಹುಟ್ಟಿದ ಘಳಿಗೆಯ ಸಂಭ್ರಮವನ್ನ ಅಣ್ಣ ನನ್ನ ಮುಂದಿಟ್ಟಿದ್ದ. ಇದಕ್ಕಿಂತಾ ಒಂದು ಒಳ್ಳೇ ಉಡುಗೊರೆ ಬೇರೆ ಏನೂ ಇರಲಿಕ್ಕಿಲ್ಲ. ಆ ಮೆಸ್ಸೇಜನ್ನ ಓದಿ ಸಂಭ್ರಮಿಸೋದ್ರಲ್ಲಿ ಅಣ್ಣ ನಿದ್ದೆ ಬಿಟ್ಟು ನನಗೆ ಮೆಸ್ಸೇಜ್ ಮಾಡ್ತಾಇರೋದು ನನ್ನ ಗಮನಕ್ಕೆ ಬಾರದೇ ಹೋಗಿತ್ತು. ಸಮಯ ಸುಮಾರು ೫.೧೫ ಆಗಿತ್ತು. ಅಣ್ಣ ತನ್ನ ಬಿಡುವಿಲ್ಲದ ಕೆಲಸದಲ್ಲಿ ಮುಳುಗಿದ್ದ, ರಾತ್ರಿಯೆಲ್ಲಾ ಅವನ ವಿಧ್ಯಾರ್ಥಿಗಳ ಉತ್ತರಪತ್ರಿಕೆಯನ್ನ ತಿದ್ದುತ್ತಾ ಅದರಮಧ್ಯೆ ನನಗೆ ಮೆಸ್ಸೇಜ್ ಮಾಡ್ತಾ ಇದ್ದ. ಆ ಮೆಸ್ಸೇಜ್ಗಳನ್ನ ಓದಿ ಒಳಗೊಳಗೇ ಸಂತಸಪಡುತ್ತಾ ನಾನೂ ಸ್ನಾನಮಾಡಿಕೊಂಡು ನನ್ನ ಯೋಗಾ ಕ್ಲಾಸಿಗೆ ಹೊರಟೆ. ದಿನಪೂರ್ತಿ ನನ್ನ ಕಣ್ ಮುಂದೆ ನನ್ನ ಹುಟ್ಟಿದ ದೃಷ್ಯಾವಳಿಗಳು ತೇಲಿ ಬರುತ್ತಿದ್ದವು.
ಯೋಗಾ ಕ್ಲಾಸಿನಿಂದ ಮನೆಗೆ ಬಂದೆ. ಅಣ್ಣನ ಮೆಸ್ಸೇಜ್ ಇತ್ತು. "ಬಿಡುವಿದ್ದಾಗ ಕಾಲ್ ಮಾಡು, ನಿನ್ನ ಬಗ್ಗೆ ಒಂದು ಕವನ ಬರ್ದಿದೀನಿ" ಒಂದು ಕ್ಷಣ ಕೂಡಾ ತಡ ಮಾಡದೇ ಅಣ್ಣನಿಗೆ ಕರೆನೀಡಿದೆ. ಅವನು ಬರೆದ ಕವನ ಓದಿದ. ನಾನು ಹುಟ್ಟಿದಾಗಿನಿಂದಾ ನಾನು ಬೆಳೆದುಬಂದ ದಾರಿಯ ಮೈಲಿಗಲ್ಲುಗಳನ್ನು ಗುರುತಿಸಿ ಒಂದು ಸೊಗಸಾದ ಕವನ ಬರೆದಿದ್ದ. ಆ ಕವನವನ್ನ ಕೇಳಿ ನನಗೆ ವ್ಯಕ್ತಪಡಿಸಲಾಗದ ಸಂತಸವಾಗ್ತಾ ಇತ್ತು. :) ನಿಂತಲ್ಲೇ ಮುಗುಳ್ನಕ್ಕೆ, ಅಣ್ಣನನ್ನನ್ನು ಎಷ್ಟು ಇಷ್ಟಾ ಪಡ್ತಾನೆ ಅನ್ನೋದನ್ನ ಕಂಡುಕೊಂಡೆ. ನನ್ನ ಜನ್ಮದಿನಕ್ಕೆ ಮರೆಯಲಾಗದ ಉಡುಗೊರೆ ಕೊಟ್ಟಿದ್ದ ನನ್ನ ಮುದ್ದಿನ ಅಣ್ಣ. ಕಾಲ ಇವತ್ತಿನ ರೀತಿ ನಾಳೆ ಇರೋದಿಲ್ಲ, ಆದರೆ ನಾನು ಆ ಭಗವಂತನನ್ನ ಇದಕ್ಕಿಂತಾ ಚೆನ್ನಾಗಿ ಇರದಿದ್ದರೂ ಪರವಾಗಿಲ್ಲ, ಹೀಗೇ ಮುಂದುವರೀತಾ ಇರ್ಲಿ ನಮ್ಮ ಪ್ರೀತಿ ವಿಶ್ವಾಸ ಅಂತ ಕೋರಿಕೊಂಡೆ.
ಸಾಯಂಕಾಲ ಯೋಗಾ ಕ್ಲಾಸಿನಲ್ಲಿ ನನ್ನ ಜನ್ಮದಿನದ ಆಚರಣೆ ಭಿನ್ನವಾಗಿತ್ತು. ನನ್ನ ತರಗತಿಯ ಗುರುಗಳು ನನಗೇ ತಿಳಿಯದಂತೆ ಒಂದು ಕೇಕ್ ತರಿಸಿದ್ದರು. ಎಲ್ಲರಮುಂದೆ ನಾನು ಆ ಕೇಕನ್ನ ಕತ್ತರಿಸಿದೆ. ಅದು ನನ್ನ ಜೀವನದ ಮೊಟ್ಟ ಮೊದಲ ಕೇಕ್ ಕಟ್ಟಿಂಗ್ :) ಈಗ ಸಮಯ ಸುಮಾರು ರಾತ್ರಿ ೧೨.೩೦ ನನ್ನ ಇಂದಿನ ಜನ್ಮದಿನದ ಆಚರಣೆಯನ್ನ ಮೆಲುಕುಹಾಕುತ್ತಾ ಮಲಗುತ್ತಿದ್ದೇನೆ...
(ಲೇಖನ ಬರೆದು ಬಹಳ ತಿಂಗಳಾಯ್ತು. ಆದ್ರೆ ನಾ ಬರೆದಿದ್ದ ಪುಸ್ತಕ ನನ್ನ ಕೈಗೆ ಸಿಕ್ಕದೇ ಕಣ್ಣಾಮುಚ್ಚೇ ಕಾಡೇಗೂಡೇ ಆಡ್ತಾ ಇತ್ತು... ಇವತ್ತಿಗೆ ಸಿಕ್ಕೇ ಬಿಡ್ತು :) ಅದಕ್ಕೇ ನಿಮ್ಮೊಂದಿಗೆ ಹಂಚಿಕೊಳ್ತಾ ಇದೀನಿ....)
ಇವತ್ತಿನ ದಿನವನ್ನ ನಾನು ಮರಿಯೋದಕ್ಕೆ ಆಗೊದಿಲ್ಲ. ಇವತ್ತು ಪ್ರೇಮಿಗಳ ದಿನ ಅನ್ನೋ ಕಾರಣದಿಂದ ಅಲ್ಲ, ಇವತ್ತು ನನ್ನ ಜನ್ಮದಿನ... ನಾನು ನನ್ನ ಪ್ರತೀ ಜನ್ಮದಿನದಂದು ಯಾರೊಬ್ಬರೊಂದಿಗಾದರೂ ಇರ್ತಾ ಇದ್ದೆ. ಆದರೆ ಈ ಸಲ ನನ್ನ ಬಾಡಿಗೆ ಮನೆಯಲ್ಲಿ ನಾನು ಮತ್ತೆ ನನ್ನ ಎಫ್ ಎಂ ರೇಡಿಯೋ ಮಾತ್ರ ಇದ್ದದ್ದು. ಯಾಕೋ ಮನಸ್ಸಿಗೆ ಬೇಸರ ಆಗ್ತಾ ಇತ್ತು. ಕಳೆದವರ್ಷವಷ್ಟೇ ನನ್ನ ಅಪ್ಪನ್ನ ಕಳ್ಕೊಂಡಿದ್ದ ನಾನು ಈ ಬಾರೀನೂ ಅವರನ್ನ, ಮತ್ತೆ ಅಮ್ಮ, ಅಕ್ಕ, ಅಣ್ಣನ್ನ ಮಿಸ್ ಮಾಡ್ಕೋತಾ ಇದೀನಿ. ಅಪ್ಪ ಇದ್ದಾಗ ಮೈಸೂರಿನ ನಮ್ಮ ಮನೆಗೆ ಹೋಗಿ ಮನೆಯವರೆಲ್ಲರ ಜೊತೆ ಸ್ವಲ್ಪ ಹರಟೆ ಹೊಡೆದು ಬೇಕರಿ ತಿನಿಸುಗಳನ್ನ ತರಿಸಿಕೊಂಡು ಸಣ್ಣದಾಗಿ ಪಾರ್ಟಿ ಮಾಡೋದು, ಅದರಲ್ಲೇ ಖುಷಿ ಕಾಣೋದು, ಅಣ್ಣನ ತಲೆ ತಿಂದು ಯಾವುದಾದರೂ ಸಿನಿಮಾಕೆ ಹೋಗೋದು, ಸಂಜೆ ಪಾನೀಪೂರಿ ತಿನ್ನೋದು ಮನೆಗೆ ಬಂದು ಊಟ ಮಾಡಲ್ಲ ಅಂತ ಅಮ್ಮನಹತ್ತಿರ ಬೈಸ್ಕೊಳೋದು. :)
ಈ ಸಲ ಯಾರಿದ್ದಾರೆ... ಹಾಗೇ ಬೇಸರದಲ್ಲಿ ರಾತ್ರಿ ಕಳಿತಾ ಇದ್ದಾಗ ಟ್ರಿಣ್ ಟ್ರಿಣ್ ಅಂತ ನನ್ನ ಮೊಬೈಲ್ ಮೆಸ್ಸೇಜ್ ಬಂತು ಅಂತ ಹೇಳ್ತು. ಹುಟ್ಟುಹಬ್ಬನ್ನ ಆಫೀಸಿದ್ದಿದ್ದ್ರೆ ನನ್ನ ಸ್ನೇಹಿತರಿಗೆಲ್ಲ ಸಿಹಿ ಹಂಚಿ ಆಚರಿಸ್ತಾ ಇದ್ದೆ. ಆದ್ರೆ ಇವತ್ತು ರಜಾದಿನ ಬೇರೆ, ಹೇಳೀ ಕೇಳೀ ಎರಡನೇ ಶನಿವಾರ. ಹಾಗಾಗಿ ಮನೆಯಲ್ಲೇ ಇದ್ದ ನಾನು ಬೆಳಗಿನ ಯೋಗಾ ಕ್ಲಾಸಿಗೆ ಹೋಗುವ ಬಗ್ಗೆ ಯೋಚ್ನೆ ಮಾಡ್ತಾ ಮೆಸೇಜ್ ನೋಡಿದೆ. ಘಂಟೆ ಸರಿ ಸುಮಾರು ೪.೧೫ ಅನ್ಸತ್ತೆ, ನನ್ನ ಅಣ್ಣ ಮೆಸ್ಸೇಜ್ ಮಾಡಿದ್ದ. "ಇಷ್ಟು ಹೊತ್ತಿಗೆ ಬಹುಷಃ ಅಮ್ಮನಿಗೆ ಹೊಟ್ಟೇ ನೋವ್ತಾ ಇತ್ತು ಅಂತ ಕಾಣತ್ತೆ" ಅನ್ನೋ ಸಂದೇಶ ಇತ್ತು. ನಾನು ಏನು ಅಂತ ಯೋಚ್ನೆ ಮಾಡಿದ್ಮೇಲೆ ಗೊತ್ತಗಿದ್ದು... ಇದು ನಾನು ಹುಟ್ಟಿದಾಗ ಅಂದರೆ __ ವರ್ಷಗಳ ಹಿಂದಿನ ಮಾತನ್ನ ಅಣ್ಣ ಹೇಳ್ತಾ ಇದಾನೆ ಅಂತ. ಖುಷಿ ಆಯ್ತು :) ಮೆಸ್ಸೇಜ್ ಮುಂದುವರೆದಿತ್ತು: "ಅಪ್ಪ ನನ್ನ ಪಕ್ಕದಿಂದ ಎದ್ದು ಅಮ್ಮನ ಮಾತಾಡಿಸೊಕೆ ಹೋಗಿದ್ರು, ಅಮ್ಮ ಅಪ್ಪನಿಗೆ First shift ಇದ್ದದ್ದರಿಂದ ತಿಂಡಿಮಾಡಲು ಹಿಡಿದಿದ್ದ ಪಾತ್ರೆನ ದಾರಿಯಲ್ಲೇ ಇಟ್ಟು ಏದುಸಿರು ಬಿಡ್ತಾ ಇದ್ರು. ಆಮೇಲೆ ಏನಾಯ್ತೋ ಗೊತ್ತಿಲ್ಲ ನಾನು ಮಲಗಿಬಿಟ್ಟೆ"
ಇಷ್ಟಕ್ಕೆ ನಾನು __ ವರ್ಷ ಹಿಂದಕ್ಕೆ ಹೋಗಿಬಿಟ್ಟಿದ್ದೆ :) ನನ್ನ ಅಣ್ಣನ ಬರಹ ಹಾಗಿತ್ತು. ಎಲ್ಲಾ ನನ್ನ ಕಣ್ಮುಂದೇ ನಡಿತಾಇದ್ಯೇನೋ ಅನ್ನೋ ಹಾಗೆ. ಅಷ್ಟರಲ್ಲಿ ಮತ್ತೊಮ್ಮೆ ಟ್ರಿಣ್ ಟ್ರಿಣ್.... ಯಾರದ್ದೋ ಶುಭಾಷಯ ಅಂತ ತಿಳ್ಕೊಂಡು ಮೆಸ್ಸೇಜ್ ನೋಡಿದೆ, ಮತ್ತೆ ನನ್ನ ಅಣ್ಣನದೇ ಮೆಸ್ಸೇಜ್. ಅಣ್ಣ __ ವರ್ಷಹಿಂದಿನ ಘಟನೆಯನ್ನ ನನ್ನ ಮುಂದೆ ಎಳೆ ಎಳೆಯಾಗಿ ಬಿಡಿಸಿಡ್ತಾ ಇದ್ದ. "ಸುಮಾರು ೭ ಘಂಟೆ ಇರಬಹುದು, ಬೀಗ ತೆಕ್ಕೊಂಡು ಅಪ್ಪ ಒಳಗೆ ಬಂದ್ರು. ಬಂದವರೇ ನನ್ನನ್ನ ಇವತ್ತು ನೀನು ಸ್ಕೂಲಿಗೆ ಹೋಗಬೇಡ ಅಂದ್ರು. ರಾತ್ರಿ ಕೂತ್ಕೊಂಡು ಬರೆದಿದ್ದ ಹೋಂವರ್ಕ್ ಮುದುಕೀ ಜಯ ಮಿಸ್ಸಿಗೆ ತೋರಿಸೋಕೆ ಆಗೊದಿಲ್ವಲ್ಲ ಅಂತ ಬೇಜಾರಾಯ್ತು" (ಅಣ್ಣನ ಸ್ಕೂಲಿನಲ್ಲಿ ೩ ಜನ ಜಯ ಅನ್ನೋ ಟೀಚರ್ ಇದ್ದಿದ್ದರಿಂದ ಒಬ್ಬೊಬ್ಬರಿಗೆ ಒಂದೊಂದು ಅಡ್ಡಹೆಸರು)
ನಾನು ಅಣ್ಣನ ಮೆಸೇಜ್ ಗಳನ್ನ ಮತ್ತೊಮ್ಮೆ ಮಗದೊಮ್ಮೆ ಓದಿ ಸಂತಸಪಡ್ತಾ ಇದ್ದೆ. ಮುಂದೇನಾಯ್ತು... ಹೇಳು... ನನು ಅಣ್ಣನಿಗೆ ಪ್ರತ್ಯುತ್ತರ ಕೊಟ್ಟೆ. ಅಣ್ಣ ಮುಂದುವರಿಸಿದ್ದ: "ನನಗಿನ್ನೂ ನೆನಪಿದೆ ಆವತ್ತು ಗುಲಾಬಿ ಬಣ್ಣದ ಟೀ ಷರ್ಟ್ ಹಾಕ್ಕೊಂಡಿದ್ದೆ, ಆವತ್ತು ಫಸ್ಟ್ ಟೈಮ್ ಅಷ್ಟು ಬೆಳಿಗ್ಗೆ ೫ ನಿಮಿಷ ಬಾಗಿಲ ಹೊರಗೆ ಮೆಟ್ಟಿಲ ಮೇಲೆ ನಿಂತಿದ್ದೆ, ಆವತ್ತು ಸ್ವಾತಂತ್ರ್ಯ ಸಿಕ್ಕ ಸಂಭ್ರಮ. ಮನೆ ಯಜಮಾನನ ಹೆಂಡತಿ 'ನಿನಗೊಬ್ಬ ತಮ್ಮ ಹುಟ್ಟಿದಾನೆ ಕಣೋ' ಅಂದ್ರು. ಆಗ ನನ್ಗೆ ವಿವರಿಸಲಾಗದ ಅವ್ಯಕ್ತ ಭಾವನೆಗಳ ಕ್ಷಣ. ಏನೋ ತರೋದಿಕ್ಕೆ ಅಂತ ಅಪ್ಪ ಹೊರಗಡೆ ಹೋಗಿದ್ರು. ಅವರು ಬರೋ ದಾರೀನೇ ಕಾಯ್ತಾಇದ್ದೆ"
ಅಣ್ಣ ನನಗೆ ಈ ರೀತಿ ಮೆಸ್ಸೇಜಿನಲ್ಲಿ __ ವರ್ಷದ ಹಿಂದಿನ ಘಟನೆಯನ್ನ ಹೇಳ್ತಾಇದ್ರೆ ನಾನೇ ಅಲ್ಲಿದ್ದು ಎಲ್ಲದನ್ನ ನೋಡ್ತಾ ಇದೀನೇನೋ ಅನ್ನೋರೀತಿ ಖುಷಿ ಆಗ್ತಾ ಇತ್ತು. ಮತ್ತೊಮ್ಮೆ ಟ್ರಿನ್ ಟ್ರಿನ್ ಅಂತ ರಿಂಗಣಿಸಿದ ನನ್ನ ಮೊಬೈಲ್ ನನ್ನ ಹುಟ್ಟಿದ ಸಂಭ್ರಮದ ಕಥೆ ಹೇಳಲು ಬೆಳಕ ಚೆಲ್ಲಿ ನಕ್ಕಿತ್ತು. "ಅಪ್ಪ ನನ್ನನ್ನ ಸೈಕಲ್ಲಿನಲ್ಲಿ ಕೂರಿಸ್ಕೊಂಡು ಕಮಲಾರಾಮನ್ ಆಸ್ಪತ್ರೆಗೆ ಕರ್ಕೊಂಡು ಹೋದ್ರು. ಅಲ್ಲಿ ಅಮ್ಮ ಮಲಗಿದ್ರು. ನನ್ನನ ನೋಡಿ ನಕ್ಕರು. ಆಯ ಒಳಗಿನಿಂದ ಬಟ್ಟೆಯಲ್ಲಿ ಸುತ್ತಿದ ನಿನ್ನನ್ನ ಸಂಭ್ರಮದಿಂದ ತಂದು ತೋರಿಸಿ ನಿನ್ನ ತಮ್ಮನ್ನ ನೋಡಪ್ಪಾ ಅಂದ್ರು". ನಿಜ ಅಲ್ವ... ಆ ಪುಟ್ಟ ಮನಸ್ಸಿನ ಕಂದನಿಗೆ ತನ್ನ ತಮ್ಮನನ್ನ ನೋಡಲು ಎಷ್ಟು ಕಾತರ ಇದ್ದಿರಬಹುದು, ಮನಸ್ಸಲ್ಲಿ ಏನೇನು ಭಾವನೆಗಳು ಮೂಡಿರಬಹುದು... ಆ ಭಾವನೆಗಳು ನನ್ನ ಅಣ್ಣನ ಮತ್ತೊಂದು ಮೆಸ್ಸೇಜಿನಲ್ಲಿ ಮುಂದುವರೆದಿತ್ತು. "ನಿನ್ನ ಕಣ್ಣುಮುಚ್ಚಿದ ಮುಖ, ಆ ಪುಟ್ಟ ಕೈ ಬೆರಳುಗಳು, ಮಧ್ಯ ಮಧ್ಯ ಹೊರಡುತ್ತಿದ್ದ ಉವ್ವ್ಯಾ ಉವ್ವ್ಯಾ ರಾಗ... ನನಗೆ ಅರಿವಿಲ್ಲದಂತೆ ನಿನ್ನನ್ನು ಮುಟ್ಟಲು ನಿನ್ನ ಕಡೆ ಹೆಜ್ಜೆ ಹಾಕಿದ್ದೆ. ಮುಟ್ಟಬಾರದು !!! ದೂರ ನಿಂತ್ಕೊ !! ಅಮ್ಮ ಅಲ್ಲಿಂದ್ಲೇ ಗದರಿದ್ರು"
ಇಲ್ಲಿಗೆ ನನ್ನ ಹುಟ್ಟಿದ ಘಳಿಗೆಯ ಸಂಭ್ರಮವನ್ನ ಅಣ್ಣ ನನ್ನ ಮುಂದಿಟ್ಟಿದ್ದ. ಇದಕ್ಕಿಂತಾ ಒಂದು ಒಳ್ಳೇ ಉಡುಗೊರೆ ಬೇರೆ ಏನೂ ಇರಲಿಕ್ಕಿಲ್ಲ. ಆ ಮೆಸ್ಸೇಜನ್ನ ಓದಿ ಸಂಭ್ರಮಿಸೋದ್ರಲ್ಲಿ ಅಣ್ಣ ನಿದ್ದೆ ಬಿಟ್ಟು ನನಗೆ ಮೆಸ್ಸೇಜ್ ಮಾಡ್ತಾಇರೋದು ನನ್ನ ಗಮನಕ್ಕೆ ಬಾರದೇ ಹೋಗಿತ್ತು. ಸಮಯ ಸುಮಾರು ೫.೧೫ ಆಗಿತ್ತು. ಅಣ್ಣ ತನ್ನ ಬಿಡುವಿಲ್ಲದ ಕೆಲಸದಲ್ಲಿ ಮುಳುಗಿದ್ದ, ರಾತ್ರಿಯೆಲ್ಲಾ ಅವನ ವಿಧ್ಯಾರ್ಥಿಗಳ ಉತ್ತರಪತ್ರಿಕೆಯನ್ನ ತಿದ್ದುತ್ತಾ ಅದರಮಧ್ಯೆ ನನಗೆ ಮೆಸ್ಸೇಜ್ ಮಾಡ್ತಾ ಇದ್ದ. ಆ ಮೆಸ್ಸೇಜ್ಗಳನ್ನ ಓದಿ ಒಳಗೊಳಗೇ ಸಂತಸಪಡುತ್ತಾ ನಾನೂ ಸ್ನಾನಮಾಡಿಕೊಂಡು ನನ್ನ ಯೋಗಾ ಕ್ಲಾಸಿಗೆ ಹೊರಟೆ. ದಿನಪೂರ್ತಿ ನನ್ನ ಕಣ್ ಮುಂದೆ ನನ್ನ ಹುಟ್ಟಿದ ದೃಷ್ಯಾವಳಿಗಳು ತೇಲಿ ಬರುತ್ತಿದ್ದವು.
ಯೋಗಾ ಕ್ಲಾಸಿನಿಂದ ಮನೆಗೆ ಬಂದೆ. ಅಣ್ಣನ ಮೆಸ್ಸೇಜ್ ಇತ್ತು. "ಬಿಡುವಿದ್ದಾಗ ಕಾಲ್ ಮಾಡು, ನಿನ್ನ ಬಗ್ಗೆ ಒಂದು ಕವನ ಬರ್ದಿದೀನಿ" ಒಂದು ಕ್ಷಣ ಕೂಡಾ ತಡ ಮಾಡದೇ ಅಣ್ಣನಿಗೆ ಕರೆನೀಡಿದೆ. ಅವನು ಬರೆದ ಕವನ ಓದಿದ. ನಾನು ಹುಟ್ಟಿದಾಗಿನಿಂದಾ ನಾನು ಬೆಳೆದುಬಂದ ದಾರಿಯ ಮೈಲಿಗಲ್ಲುಗಳನ್ನು ಗುರುತಿಸಿ ಒಂದು ಸೊಗಸಾದ ಕವನ ಬರೆದಿದ್ದ. ಆ ಕವನವನ್ನ ಕೇಳಿ ನನಗೆ ವ್ಯಕ್ತಪಡಿಸಲಾಗದ ಸಂತಸವಾಗ್ತಾ ಇತ್ತು. :) ನಿಂತಲ್ಲೇ ಮುಗುಳ್ನಕ್ಕೆ, ಅಣ್ಣನನ್ನನ್ನು ಎಷ್ಟು ಇಷ್ಟಾ ಪಡ್ತಾನೆ ಅನ್ನೋದನ್ನ ಕಂಡುಕೊಂಡೆ. ನನ್ನ ಜನ್ಮದಿನಕ್ಕೆ ಮರೆಯಲಾಗದ ಉಡುಗೊರೆ ಕೊಟ್ಟಿದ್ದ ನನ್ನ ಮುದ್ದಿನ ಅಣ್ಣ. ಕಾಲ ಇವತ್ತಿನ ರೀತಿ ನಾಳೆ ಇರೋದಿಲ್ಲ, ಆದರೆ ನಾನು ಆ ಭಗವಂತನನ್ನ ಇದಕ್ಕಿಂತಾ ಚೆನ್ನಾಗಿ ಇರದಿದ್ದರೂ ಪರವಾಗಿಲ್ಲ, ಹೀಗೇ ಮುಂದುವರೀತಾ ಇರ್ಲಿ ನಮ್ಮ ಪ್ರೀತಿ ವಿಶ್ವಾಸ ಅಂತ ಕೋರಿಕೊಂಡೆ.
ಸಾಯಂಕಾಲ ಯೋಗಾ ಕ್ಲಾಸಿನಲ್ಲಿ ನನ್ನ ಜನ್ಮದಿನದ ಆಚರಣೆ ಭಿನ್ನವಾಗಿತ್ತು. ನನ್ನ ತರಗತಿಯ ಗುರುಗಳು ನನಗೇ ತಿಳಿಯದಂತೆ ಒಂದು ಕೇಕ್ ತರಿಸಿದ್ದರು. ಎಲ್ಲರಮುಂದೆ ನಾನು ಆ ಕೇಕನ್ನ ಕತ್ತರಿಸಿದೆ. ಅದು ನನ್ನ ಜೀವನದ ಮೊಟ್ಟ ಮೊದಲ ಕೇಕ್ ಕಟ್ಟಿಂಗ್ :) ಈಗ ಸಮಯ ಸುಮಾರು ರಾತ್ರಿ ೧೨.೩೦ ನನ್ನ ಇಂದಿನ ಜನ್ಮದಿನದ ಆಚರಣೆಯನ್ನ ಮೆಲುಕುಹಾಕುತ್ತಾ ಮಲಗುತ್ತಿದ್ದೇನೆ...
(ಲೇಖನ ಬರೆದು ಬಹಳ ತಿಂಗಳಾಯ್ತು. ಆದ್ರೆ ನಾ ಬರೆದಿದ್ದ ಪುಸ್ತಕ ನನ್ನ ಕೈಗೆ ಸಿಕ್ಕದೇ ಕಣ್ಣಾಮುಚ್ಚೇ ಕಾಡೇಗೂಡೇ ಆಡ್ತಾ ಇತ್ತು... ಇವತ್ತಿಗೆ ಸಿಕ್ಕೇ ಬಿಡ್ತು :) ಅದಕ್ಕೇ ನಿಮ್ಮೊಂದಿಗೆ ಹಂಚಿಕೊಳ್ತಾ ಇದೀನಿ....)
Monday, March 22, 2010
ಸಂಭ್ರಮದ ಶನಿವಾರ
ವಾರವೆಲ್ಲಾ ಬೆಳ್ಳಂಬೆಳಿಗ್ಗೆ ೪.೩೦ಕ್ಕೆ ಎದ್ದು ಎದ್ದೂ ಸಾಕಾಗಿ ಹೊಗಿತ್ತು. ವಾರಾಂತ್ಯಕ್ಕೆ ಕಾಯ್ತಾ ಇದ್ದೆ. ಅಂತೂ ಇಂತೂ ಶನಿವಾರ ಬಂದೇಬಿಡ್ತು. :) ಶನಿವಾರದ ಮೊದಲ ಕೆಲಸ ಅಂದ್ರೆ 10:00 ಘಂಟೇತನಕ ನಿದ್ದೆ ಮಾಡೋದು ;) ಆಮೇಲೆ ಮಿಕ್ಕಿದ ಕೆಲಸಗಳೆಲ್ಲಾ... ನನ್ನ ಅನಿಸಿಕೆಯಂತೇ ಬೆಳಗ್ಗೆ 9:30ರ ತನಕ ಗಡದ್ದಾಗಿ ನಿದ್ದೆ ಮಾಡ್ದೆ. ಆಮೇಲೆ ಮಾಮೂಲಿ ಯೋಚನೆ... ಇವತ್ತು ತಿಂಡಿ ಏನು ಮಾಡೋದು ಅಂತ. ಆಗ ನೆನ್ಪಾಗಿದ್ದೇ ನನಗೆ ಇಷ್ಟವಾದ ಮಾಡಲು ಸುಲಭವಾದ ತಿಂಡಿ- "ಗಂಜಿ". ಗಂಜಿಯ ಜೊತೆಗೆ ಮಿಡಿ ಉಪ್ಪಿನಕಾಯಿ, ಸ್ವಲ್ಪ ಮೊಸರು, ಸ್ವಲ್ಪ ಕುತ್ತುಂಬರಿ ಚಟ್ನಿ, ಇಷ್ಟಿದ್ಬಿಟ್ರೇ... ಸ್ವರ್ಗಕ್ಕೆ 3ರೇ ಗೇಣು... ಮಾಡುವುದು ಅತಿ ಸುಲಭ, So ಅದನ್ನೆ ಮಾಡಲು ಒಲೇಮೇಲೆ cooker ಇಟ್ಟು ಮನೆಗೆಲಸ ಶುರು ಮಾಡ್ಕೊಂಡೆ. ಮೊದಲನೇದು ಬಟ್ಟೆ ಒಗೆಯೋದು. ವಾರದಲ್ಲಿ ಬೆಂಗಳೂರಿನ ಕೊಳೆ, ಧೂಳು ಹೊತ್ಕೊಂಡು ತಂದಿದ್ದನ್ನ ಬ್ರಷ್ ಉಜ್ಜಿ ಉಜ್ಜಿ ತೆಗೆಯೋದು.
ಅಬ್ಬಬ್ಬಾ!!! ಬೆನ್ನೆಲ್ಲಾ ಲಟ ಲಟಾ ಅಂತು ಅದನ್ನ ಒಗೆಯೋಷ್ಟ್ರಲ್ಲಿ. ಒಲೆಯಮೇಲಿಟ್ಟಿದ್ದ ನನ್ನ ಕುಕ್ಕರ್ ಕೂಗಿ ಕೂಗಿ ಗಂಜಿ ಆಗಿರೋದನ್ನ ಇಡೀ ಬೀದಿಗೇ ಸಾರಿ ಹೆಳ್ತಾ ಇತ್ತು. ಅದನ್ನ ಒಲೆಮೇಲಿಂದ ಕೆಳಗಿಳಿಸಿ, ಒಗೆದ ಬಟ್ಟೆಗಳನ್ನ ಒಣಗಿಸಿ ಮನೆಯನ್ನೆಲ್ಲಾ ಒಮ್ಮೆ ಗುಡಿಸಿ ಬಂದು ಇನ್ನೇನು ಗಂಜಿಯ ಸವಿರುಚಿ ಅನುಭವಿಸಬೇಕು... ನನ್ನ ಮಿತ್ರನ ಕರೆ ನನ್ನ ಮೊಬೈಲಿನಲ್ಲಿ ಮೊಳಗಿತು. ನಮ್ಮ ಸಂಭಾಷಣೆ ಕಡಿಮೆ ಅಂದ್ರೂ 30 ನಿಮಿಷ ನಡೀತು. ಅಷ್ಟರಲ್ಲಿ ನಾನು ಬಿಸಿ ಬಿಸಿಯಾಗಿ ತಿನ್ನಬೇಕೆಂದಿದ್ದ ಗಂಜಿ ತಣ್ಣಗೆ ಕುಳಿತಿತ್ತು. ಹೊಟ್ಟೆ ಚುರುಗುಟ್ಟುತ್ತಿದ್ದರಿಂದ ಅದನ್ನು ಹಾಗೇ ಕೊತ್ತಂಬರಿ ಚಟ್ನಿ, ಉಪ್ಪಿನ ಕಾಯಿಯ ಜೊತೆ ಹೊಟ್ಟೆಗೆ ಇಳಿಸ ತೊಡಗಿದೆ... ಅಹಾ... ತಣ್ಣಗಿದ್ದರೂ ಅದರ ರುಚಿಗೆ ಬೇರಾವ ತಿಂಡಿಯೂ ಸಾಟಿಯಿಲ್ಲ...
ನನ್ನ ಬೆಳಗಿನ ಕಾರ್ಯಕ್ರಮಗಳೆಲ್ಲಾ ಮುಗಿದು ಸುಮಾರು 1:00 ಘಂಟೆಯ ಹೊತ್ತಿಗೆ ಕಣ್ಣು ಜೊಂಪು ಹತ್ತ ತೊಡಗಿತು. ಒಂದು ಅರ್ಧ ಘಂಟೆ ಮಲಗಿ ಏಳೋಣ ಅಂತ ಮಲಗಿದವನಿಗೆ ಎಚ್ಚರವಾದದ್ದು 4 ಘಂಟೆಗೇ... ಸೋಮಾರಿ ತನದಿಂದ ಎದ್ದು ಗಿಡಗಳ ಬಳಿಗೆ ಬಂದೆ... ಪಾಪ, ಅವಕ್ಕೆ re-poting ಮಾಡೋ ಕಾರ್ಯಕ್ರಮ ಕಳೆದ ಒಂದು ತಿಂಗಳಿಂದಾ ಮುಂದೂಡಲ್ಪಡುತಿತ್ತು... ಅದಕ್ಕೆ ಇವತ್ತು ಕಾಲ ಕೂಡಿಬಂದಿತ್ತು. ಎಲ್ಲಾ ಕುಂಡಗಳ ಹಳೆಯ ಮಣ್ಣನ್ನು ತೆಗೆದು ತರಕಾರಿ ಸಿಪ್ಪೆಯ ಗೊಬ್ಬರವನ್ನ ಸೇರಿಸಿ ಮತ್ತೆ ಅದೇ ಕುಂಡಗಳಿಗೆ ತುಂಬುವ ಹೊತ್ತಿಗೆ ಸಂಜೆ 6:15 ನಿಮಿಷ. ಮನೆಯೊಳಗೆ ಬಂದು Freshಆಗಿ IPL match ನೋಡ್ಕೊಂಡು ತರಕಾರಿ ತರಲು ನಡೆದು ಹೊರಟೆ. ದಾರಿಯುದ್ದಕ್ಕೂ ತಂಗಾಳಿ ನನ್ನ ಜೊತೆ ಜೊತೆಯಲ್ಲೇ ಬಂದಿತ್ತು. ಹಿತವಾದ ಆ ಗಾಳಿಯಲ್ಲಿ ಅಪರಿಚಿತ ಮುಖಗಳ ನಡುವೆ ಪರಿಚಿತ ಮುಖವೇನಾದರೂ ಕಂಡೀತೇನೋ ಎಂಬಂತೆ ಹುಡುಕುತ್ತಾ ಹೊರಟೆ. ದಾರಿಯಲ್ಲಿ ಹೋಗುವಾಗ ಅಮ್ಮನಿಗೆ ಫೋನಾಯಿಸಿ ಕ್ಷೇಮ ಸಮಾಚಾರ ವಿಚಾರಿಸಿ ಮಾತನಾಡುತ್ತಿದ್ದಾಗ ಆಕೆ ಪಡವಲಕಾಯಿಯ ತೊವ್ವೆ ಮಾಡ್ಕೊ... ಚೆನ್ನಗಿರತ್ತೆ ಅಂದಿದ್ದು ನೆನಪಾಯಿತು. ಮನೆಯ ಬಳಿಯಿದ್ದ Safal ತರಕಾರಿ ಅಂಗಡಿಗೆ ಹೋಗಿ 2 ಪಡವಲಕಾಯಿಗಳನ್ನು ತಂದೆ.
ಮನೆಗೆ ಮರಳುವ ಮಾರ್ಗದಲ್ಲಿ ಕೆಂಪು ಕೆಂಪು ಕಲ್ಲಂಗಡಿ ನನ್ನನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿತ್ತು. ವ್ಯಾಪಾರಿಯೊಂದಿಗೆ ಮಾತನಾಡಿ ಒಂದು ಹಣ್ಣನ್ನು ಖರೀದಿ ಮಾಡುವಾಗ ಪಕ್ಕದಲ್ಲಿ ಯಾವುದೋ ಚಿರಪರಿಚಿತ ಮುಖ ನನ್ನನ್ನೇ ನೋಡುತ್ತಿರುವಂತೆ ಭಾಸವಾಯಿತು. ಹೌದು... ಅದು ಪರಿಚಿತ ಮುಖವೇ ಹೌದು, ಗೌರವವರ್ಣ ವಲ್ಲದಿದ್ದರೂ ನೋಡಲು ಆಕೆ ಲಕ್ಷಣವಾಗಿದ್ದಳು. ಆಕೆ ನಮ್ಮ ಆಫೀಸಿನಲ್ಲಿಯೇ ಕೆಲಸ ಮಾಡುತ್ತಿದ್ದವಳು ನನ್ನಕಡೆ ನೆಟ್ಟದೃಷ್ಟಿ ಬೀರಿದ್ದಳು. ಹೆಚ್ಚಾಗಿ ಆಕೆಯ ಪರಿಚಯವಿಲ್ಲದ ಕಾರಣದಿಂದ ದಾರಿಯೆಡೆಗೆ ದೃಷ್ಟಿ ನೆಟ್ಟು ಮನೆಯಕಡೆ ಪಯಣ ಬೆಳೆಸಿದೆ. ಮನಸ್ಸಿನಿಂದ ಹಾಡು ಹೊರಹೊಮ್ಮಿತ್ತು... ಚಲುವೆ ಎಲ್ಲಿರುವೇ... ಮನವ ಕಾಡುವ ರೂಪಸಿಯೇ.....
ಮನೆಗೆ ಬಂದು ತಂದಿದ್ದ ಕಲ್ಲಂಗಡಿ ಹಣ್ಣನ್ನು ತಿನ್ನುತ್ತಾ Royal challenger's ನ ಗೆಲುವನ್ನು ನೋಡುತ್ತಾ ನನ್ನ ಕನಸಿನ ಕನ್ಯೆಯನ್ನ ಭೇಟಿಮಾಡಲು ಸ್ವಪ್ನಲೋಕಕ್ಕೆ ಹೊರಡುವ ಹೊತ್ತಿಗೆ ಸಂಭ್ರಮದ ಶನಿವಾರ ಮುಕ್ತಾಯ ವಾಗಿತ್ತು :)
ಅಬ್ಬಬ್ಬಾ!!! ಬೆನ್ನೆಲ್ಲಾ ಲಟ ಲಟಾ ಅಂತು ಅದನ್ನ ಒಗೆಯೋಷ್ಟ್ರಲ್ಲಿ. ಒಲೆಯಮೇಲಿಟ್ಟಿದ್ದ ನನ್ನ ಕುಕ್ಕರ್ ಕೂಗಿ ಕೂಗಿ ಗಂಜಿ ಆಗಿರೋದನ್ನ ಇಡೀ ಬೀದಿಗೇ ಸಾರಿ ಹೆಳ್ತಾ ಇತ್ತು. ಅದನ್ನ ಒಲೆಮೇಲಿಂದ ಕೆಳಗಿಳಿಸಿ, ಒಗೆದ ಬಟ್ಟೆಗಳನ್ನ ಒಣಗಿಸಿ ಮನೆಯನ್ನೆಲ್ಲಾ ಒಮ್ಮೆ ಗುಡಿಸಿ ಬಂದು ಇನ್ನೇನು ಗಂಜಿಯ ಸವಿರುಚಿ ಅನುಭವಿಸಬೇಕು... ನನ್ನ ಮಿತ್ರನ ಕರೆ ನನ್ನ ಮೊಬೈಲಿನಲ್ಲಿ ಮೊಳಗಿತು. ನಮ್ಮ ಸಂಭಾಷಣೆ ಕಡಿಮೆ ಅಂದ್ರೂ 30 ನಿಮಿಷ ನಡೀತು. ಅಷ್ಟರಲ್ಲಿ ನಾನು ಬಿಸಿ ಬಿಸಿಯಾಗಿ ತಿನ್ನಬೇಕೆಂದಿದ್ದ ಗಂಜಿ ತಣ್ಣಗೆ ಕುಳಿತಿತ್ತು. ಹೊಟ್ಟೆ ಚುರುಗುಟ್ಟುತ್ತಿದ್ದರಿಂದ ಅದನ್ನು ಹಾಗೇ ಕೊತ್ತಂಬರಿ ಚಟ್ನಿ, ಉಪ್ಪಿನ ಕಾಯಿಯ ಜೊತೆ ಹೊಟ್ಟೆಗೆ ಇಳಿಸ ತೊಡಗಿದೆ... ಅಹಾ... ತಣ್ಣಗಿದ್ದರೂ ಅದರ ರುಚಿಗೆ ಬೇರಾವ ತಿಂಡಿಯೂ ಸಾಟಿಯಿಲ್ಲ...
ನನ್ನ ಬೆಳಗಿನ ಕಾರ್ಯಕ್ರಮಗಳೆಲ್ಲಾ ಮುಗಿದು ಸುಮಾರು 1:00 ಘಂಟೆಯ ಹೊತ್ತಿಗೆ ಕಣ್ಣು ಜೊಂಪು ಹತ್ತ ತೊಡಗಿತು. ಒಂದು ಅರ್ಧ ಘಂಟೆ ಮಲಗಿ ಏಳೋಣ ಅಂತ ಮಲಗಿದವನಿಗೆ ಎಚ್ಚರವಾದದ್ದು 4 ಘಂಟೆಗೇ... ಸೋಮಾರಿ ತನದಿಂದ ಎದ್ದು ಗಿಡಗಳ ಬಳಿಗೆ ಬಂದೆ... ಪಾಪ, ಅವಕ್ಕೆ re-poting ಮಾಡೋ ಕಾರ್ಯಕ್ರಮ ಕಳೆದ ಒಂದು ತಿಂಗಳಿಂದಾ ಮುಂದೂಡಲ್ಪಡುತಿತ್ತು... ಅದಕ್ಕೆ ಇವತ್ತು ಕಾಲ ಕೂಡಿಬಂದಿತ್ತು. ಎಲ್ಲಾ ಕುಂಡಗಳ ಹಳೆಯ ಮಣ್ಣನ್ನು ತೆಗೆದು ತರಕಾರಿ ಸಿಪ್ಪೆಯ ಗೊಬ್ಬರವನ್ನ ಸೇರಿಸಿ ಮತ್ತೆ ಅದೇ ಕುಂಡಗಳಿಗೆ ತುಂಬುವ ಹೊತ್ತಿಗೆ ಸಂಜೆ 6:15 ನಿಮಿಷ. ಮನೆಯೊಳಗೆ ಬಂದು Freshಆಗಿ IPL match ನೋಡ್ಕೊಂಡು ತರಕಾರಿ ತರಲು ನಡೆದು ಹೊರಟೆ. ದಾರಿಯುದ್ದಕ್ಕೂ ತಂಗಾಳಿ ನನ್ನ ಜೊತೆ ಜೊತೆಯಲ್ಲೇ ಬಂದಿತ್ತು. ಹಿತವಾದ ಆ ಗಾಳಿಯಲ್ಲಿ ಅಪರಿಚಿತ ಮುಖಗಳ ನಡುವೆ ಪರಿಚಿತ ಮುಖವೇನಾದರೂ ಕಂಡೀತೇನೋ ಎಂಬಂತೆ ಹುಡುಕುತ್ತಾ ಹೊರಟೆ. ದಾರಿಯಲ್ಲಿ ಹೋಗುವಾಗ ಅಮ್ಮನಿಗೆ ಫೋನಾಯಿಸಿ ಕ್ಷೇಮ ಸಮಾಚಾರ ವಿಚಾರಿಸಿ ಮಾತನಾಡುತ್ತಿದ್ದಾಗ ಆಕೆ ಪಡವಲಕಾಯಿಯ ತೊವ್ವೆ ಮಾಡ್ಕೊ... ಚೆನ್ನಗಿರತ್ತೆ ಅಂದಿದ್ದು ನೆನಪಾಯಿತು. ಮನೆಯ ಬಳಿಯಿದ್ದ Safal ತರಕಾರಿ ಅಂಗಡಿಗೆ ಹೋಗಿ 2 ಪಡವಲಕಾಯಿಗಳನ್ನು ತಂದೆ.
ಮನೆಗೆ ಮರಳುವ ಮಾರ್ಗದಲ್ಲಿ ಕೆಂಪು ಕೆಂಪು ಕಲ್ಲಂಗಡಿ ನನ್ನನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿತ್ತು. ವ್ಯಾಪಾರಿಯೊಂದಿಗೆ ಮಾತನಾಡಿ ಒಂದು ಹಣ್ಣನ್ನು ಖರೀದಿ ಮಾಡುವಾಗ ಪಕ್ಕದಲ್ಲಿ ಯಾವುದೋ ಚಿರಪರಿಚಿತ ಮುಖ ನನ್ನನ್ನೇ ನೋಡುತ್ತಿರುವಂತೆ ಭಾಸವಾಯಿತು. ಹೌದು... ಅದು ಪರಿಚಿತ ಮುಖವೇ ಹೌದು, ಗೌರವವರ್ಣ ವಲ್ಲದಿದ್ದರೂ ನೋಡಲು ಆಕೆ ಲಕ್ಷಣವಾಗಿದ್ದಳು. ಆಕೆ ನಮ್ಮ ಆಫೀಸಿನಲ್ಲಿಯೇ ಕೆಲಸ ಮಾಡುತ್ತಿದ್ದವಳು ನನ್ನಕಡೆ ನೆಟ್ಟದೃಷ್ಟಿ ಬೀರಿದ್ದಳು. ಹೆಚ್ಚಾಗಿ ಆಕೆಯ ಪರಿಚಯವಿಲ್ಲದ ಕಾರಣದಿಂದ ದಾರಿಯೆಡೆಗೆ ದೃಷ್ಟಿ ನೆಟ್ಟು ಮನೆಯಕಡೆ ಪಯಣ ಬೆಳೆಸಿದೆ. ಮನಸ್ಸಿನಿಂದ ಹಾಡು ಹೊರಹೊಮ್ಮಿತ್ತು... ಚಲುವೆ ಎಲ್ಲಿರುವೇ... ಮನವ ಕಾಡುವ ರೂಪಸಿಯೇ.....
ಮನೆಗೆ ಬಂದು ತಂದಿದ್ದ ಕಲ್ಲಂಗಡಿ ಹಣ್ಣನ್ನು ತಿನ್ನುತ್ತಾ Royal challenger's ನ ಗೆಲುವನ್ನು ನೋಡುತ್ತಾ ನನ್ನ ಕನಸಿನ ಕನ್ಯೆಯನ್ನ ಭೇಟಿಮಾಡಲು ಸ್ವಪ್ನಲೋಕಕ್ಕೆ ಹೊರಡುವ ಹೊತ್ತಿಗೆ ಸಂಭ್ರಮದ ಶನಿವಾರ ಮುಕ್ತಾಯ ವಾಗಿತ್ತು :)
Friday, March 12, 2010
ಇವತ್ತು ಏನ್ ತಿಂಡಿ ಮಾಡ್ಲೀ....
ಇವತ್ತು ಏನ್ ತಿಂಡಿ ಮಾಡ್ಲೀ....
ಹೌದು, ಇದು ಮನೆಯಲ್ಲಿ ಅಡುಗೆ ಮಾಡುವವರ ಸಮಸ್ಯೆ. ಮನೆಯಲ್ಲಿ ಒಬ್ಬರೇ ಇದ್ದರೆ ಒಂದಲ್ಲಾ ಮತ್ತೊಂದು ಮಾಡಿ ಅವತ್ತಿನ ದಿನವನ್ನ ಕಳೆದುಬಿಡಬಹುದು. ಆದರೆ ಮನೆಯಲ್ಲಿ ಜಾಸ್ತಿ ಜನರಿದ್ದರೆ ಬರೋದೇ ಸಮಸ್ಯೆ ನೋಡಿ... ಅವಲಕ್ಕಿ ಮಾಡೋಣ ಅಂದ್ರೆ ಒಬ್ಬರಿಗೆ ಹುಳಿಯವಲಕ್ಕಿಯೇ ಆಗಬೇಕು. ಮತ್ತೊಬ್ಬರಿಗೆ ಅವಲಕ್ಕಿ ಒಗ್ಗರಣೆಯೇ ಆಗಬೇಕು. ಚಪಾತಿ ಮಾಡಿದರೆ ಒಬ್ಬರಿಗೆ ತೆಂಗಿನ ಚಟ್ನಿಯೇ ಬೇಕಾದರೆ ಮತ್ತೊಬ್ಬರಿಗೆ ತರಕಾರಿ ಸಾಗುವೇ ಸೊಗಸು.
ಅಬ್ಬಬ್ಬಾ!!!! ಅದಿರಲಿ ಬಿಡಿ, ಮೊದಲು ಏನು ತಿಂಡಿ ಮಾಡೋದು ಅಂತ ನಿರ್ಧಾರ ತೆಗೆದುಕೊಳ್ಳೋದಿಕ್ಕೇ ಸಮಯ ಬೇಕು. ಪೊಂಗಲ್ ಮಾಡೋಣಾ ಅಂದ್ರೆ ಮನೇಲಿ ಹೆಸರುಬೇಳೆನೇ ಇರೋಲ್ಲ. ಚಟ್ನಿ ಮಾಡೋಣ ಅಂದ್ರೆ ತೆಂಗಿನ ಕಾಯಿ ಖಾಲಿ!!! ಉಪ್ಪಿಟ್ಟು ಮಾಡೋಣ ಅಂದ್ರೆ ಅದು ಕಾಂಕ್ರೀಟ್ ಯಾರು ತಿಂತಾರೆ ಅನ್ನೋ ಧೋರಣೆ. ದೋಸೆ ಮಾಡಿದ್ರೆ ಅಯ್ಯೋ!!! ಇವತ್ತೂ ದೋಸೇನಾ... ಅನ್ನೋ ರಾಗ....
ಇಂತಾ ಸಮಸ್ಯೆ ಬಂದಾಗ ನೀವೇನು ಮಾಡ್ತೀರಾ ????
ನಾನು ಒಂದು ಪರಿಹಾರ ಕಂಡುಕೊಂಡಿದ್ದೇನೆ. ಅದೇ ತಿಂಡಿಯ ವೇಳಾಪಟ್ಟಿ ;)
ಮೊದಲು ನಿಮಗೆ ತಿಳಿದಿರುವ ತಿಂಡಿಗಳ ಪಟ್ಟಿ ಮಾಡಿ, ನಂತರ ಅದಕ್ಕೆ ಬೇಕಾಗುವ ಸಾಮಗ್ರಿಗಳ ಪಟ್ಟಿ ಮಾಡಿ. ಯಾವ ತಿಂಡಿ ಪದೇ ಪದೇ ಮಾಡಿ ನಿಮಗೆ ಬೋರ್ ಆಗಿರತ್ತೋ ಅದನ್ನ ಒಂದು ವಾರಗಳ ಮಟ್ಟಿಗೆ ಮುಂದೂಡಿ. ಒಂದು ವಾರ ಕಳೆದ ನಂತರ ಅದಕ್ಕೆ ಹೊಸತನ ಹೇಗೆ ಕೊಡಬಹುದು ಎಂದು ಆಲೋಚನೆ ಮಾಡಿ ನಂತರ ಮುಂದಿನ ವಾರ ಅದನ್ನೇ ಹೊಸದಾಗಿ ಮಾಡಿದರಾಯ್ತು.
ನನ್ಗೆ ಗೊತ್ತು ಸ್ವಾಮೀ ನಿಮ್ಮ ತಲೇಲಿ ಎನು ಹೊಳಿತಾ ಇದೆ ಅಂತಾ. ಹೊಸಾ ಬಟ್ಟೆ ತೊಡಿಸಿದರೆ ಮನುಷ್ಯ ಬದಲಾಗೋಲ್ಲ ಅಂತ ತಾನೆ ??? ಅದು ನಿಜ, ಆದರೆ ಹಳೇ ಮನುಷ್ಯನ್ನ ನೋಡಲು ಹೊಸತನ ಇರತ್ತೆ, ಅಲ್ವಾ ;).
ಇದು ಸಧ್ಯಕ್ಕೆ ನಾನು ಕಂಡುಕೊಂಡಿರೋ ಪರಿಹಾರ... ನಿಮಗೇನಾದ್ರೂ ಬೇರೆ ಪರಿಹಾರ ಗೊತ್ತಿದ್ರೆ ದಯವಿಟ್ಟೂ ನನ್ಗೂ ಹೇಳ್ರೀ....
ಹೌದು, ಇದು ಮನೆಯಲ್ಲಿ ಅಡುಗೆ ಮಾಡುವವರ ಸಮಸ್ಯೆ. ಮನೆಯಲ್ಲಿ ಒಬ್ಬರೇ ಇದ್ದರೆ ಒಂದಲ್ಲಾ ಮತ್ತೊಂದು ಮಾಡಿ ಅವತ್ತಿನ ದಿನವನ್ನ ಕಳೆದುಬಿಡಬಹುದು. ಆದರೆ ಮನೆಯಲ್ಲಿ ಜಾಸ್ತಿ ಜನರಿದ್ದರೆ ಬರೋದೇ ಸಮಸ್ಯೆ ನೋಡಿ... ಅವಲಕ್ಕಿ ಮಾಡೋಣ ಅಂದ್ರೆ ಒಬ್ಬರಿಗೆ ಹುಳಿಯವಲಕ್ಕಿಯೇ ಆಗಬೇಕು. ಮತ್ತೊಬ್ಬರಿಗೆ ಅವಲಕ್ಕಿ ಒಗ್ಗರಣೆಯೇ ಆಗಬೇಕು. ಚಪಾತಿ ಮಾಡಿದರೆ ಒಬ್ಬರಿಗೆ ತೆಂಗಿನ ಚಟ್ನಿಯೇ ಬೇಕಾದರೆ ಮತ್ತೊಬ್ಬರಿಗೆ ತರಕಾರಿ ಸಾಗುವೇ ಸೊಗಸು.
ಅಬ್ಬಬ್ಬಾ!!!! ಅದಿರಲಿ ಬಿಡಿ, ಮೊದಲು ಏನು ತಿಂಡಿ ಮಾಡೋದು ಅಂತ ನಿರ್ಧಾರ ತೆಗೆದುಕೊಳ್ಳೋದಿಕ್ಕೇ ಸಮಯ ಬೇಕು. ಪೊಂಗಲ್ ಮಾಡೋಣಾ ಅಂದ್ರೆ ಮನೇಲಿ ಹೆಸರುಬೇಳೆನೇ ಇರೋಲ್ಲ. ಚಟ್ನಿ ಮಾಡೋಣ ಅಂದ್ರೆ ತೆಂಗಿನ ಕಾಯಿ ಖಾಲಿ!!! ಉಪ್ಪಿಟ್ಟು ಮಾಡೋಣ ಅಂದ್ರೆ ಅದು ಕಾಂಕ್ರೀಟ್ ಯಾರು ತಿಂತಾರೆ ಅನ್ನೋ ಧೋರಣೆ. ದೋಸೆ ಮಾಡಿದ್ರೆ ಅಯ್ಯೋ!!! ಇವತ್ತೂ ದೋಸೇನಾ... ಅನ್ನೋ ರಾಗ....
ಇಂತಾ ಸಮಸ್ಯೆ ಬಂದಾಗ ನೀವೇನು ಮಾಡ್ತೀರಾ ????
ನಾನು ಒಂದು ಪರಿಹಾರ ಕಂಡುಕೊಂಡಿದ್ದೇನೆ. ಅದೇ ತಿಂಡಿಯ ವೇಳಾಪಟ್ಟಿ ;)
ಮೊದಲು ನಿಮಗೆ ತಿಳಿದಿರುವ ತಿಂಡಿಗಳ ಪಟ್ಟಿ ಮಾಡಿ, ನಂತರ ಅದಕ್ಕೆ ಬೇಕಾಗುವ ಸಾಮಗ್ರಿಗಳ ಪಟ್ಟಿ ಮಾಡಿ. ಯಾವ ತಿಂಡಿ ಪದೇ ಪದೇ ಮಾಡಿ ನಿಮಗೆ ಬೋರ್ ಆಗಿರತ್ತೋ ಅದನ್ನ ಒಂದು ವಾರಗಳ ಮಟ್ಟಿಗೆ ಮುಂದೂಡಿ. ಒಂದು ವಾರ ಕಳೆದ ನಂತರ ಅದಕ್ಕೆ ಹೊಸತನ ಹೇಗೆ ಕೊಡಬಹುದು ಎಂದು ಆಲೋಚನೆ ಮಾಡಿ ನಂತರ ಮುಂದಿನ ವಾರ ಅದನ್ನೇ ಹೊಸದಾಗಿ ಮಾಡಿದರಾಯ್ತು.
ನನ್ಗೆ ಗೊತ್ತು ಸ್ವಾಮೀ ನಿಮ್ಮ ತಲೇಲಿ ಎನು ಹೊಳಿತಾ ಇದೆ ಅಂತಾ. ಹೊಸಾ ಬಟ್ಟೆ ತೊಡಿಸಿದರೆ ಮನುಷ್ಯ ಬದಲಾಗೋಲ್ಲ ಅಂತ ತಾನೆ ??? ಅದು ನಿಜ, ಆದರೆ ಹಳೇ ಮನುಷ್ಯನ್ನ ನೋಡಲು ಹೊಸತನ ಇರತ್ತೆ, ಅಲ್ವಾ ;).
ಇದು ಸಧ್ಯಕ್ಕೆ ನಾನು ಕಂಡುಕೊಂಡಿರೋ ಪರಿಹಾರ... ನಿಮಗೇನಾದ್ರೂ ಬೇರೆ ಪರಿಹಾರ ಗೊತ್ತಿದ್ರೆ ದಯವಿಟ್ಟೂ ನನ್ಗೂ ಹೇಳ್ರೀ....
Wednesday, July 16, 2008
ಅನುಭವ ಕಥನ
ನಮಸ್ಕಾರ,
ಮೊನ್ನೆ ದಿನಪೂರ್ತಿ ಕಂಪ್ಯೂಟರಿನ ಮುಂದೆ ಕಣ್ಣುರಿಸಿಕೊಂಡು ಕೆಲಸ ಮಾಡಿ ಬಹಳ ದಣಿವಾಗಿತ್ತು. ಆಯಾಸ ಪರಿಹರಿಸಿಕೊಳ್ಳಲು ತಂಪಾಗಿ ಏನಾದರೂ ಬೇಕೆನಿಸಿತು. ಆಫೀಸಿನ ಕಿಟಕಿಯಿಂದ ಹೊರಕ್ಕೆ ಇಣುಕಿನೋಡಿದಾಗ ದಟ್ಟವಾದ ಮೋಡಗಳು ಭುವಿಯನ್ನು ತಬ್ಬಿ ಹಿಡಿದಿದ್ದವು... ಇನ್ನೇನು ಅವುಗಳ ಮಿಲನಕಾಲ ಹತ್ತಿರವಾದಂತಿತ್ತು. ಹೇಗಿದ್ದರೂ ದಣಿವಾಗಿದ್ದರಿಂದ ಮಳೆಯಲ್ಲಿ ನೆನೆಯುವ ಆಸೆ, ಉತ್ಸಾಹ ಮನದಲ್ಲಿ ಪುಟಿಯುತ್ತಿತ್ತು. ಮನದ ಆಸೆಯನ್ನು ಮನದಲ್ಲೇ ಅಡಗಿಸಿಡುವುದು ಬೇಡವೆನಿಸಿ ನನ್ನ ಸಂಚಾರಿ ದೂರವಾಣಿಗಳನ್ನ ಮತ್ತೆ ಮುಖ್ಯವಾಗಿ ಬೇಕಾಗುವ Documentsಗಳನ್ನ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಅದಕ್ಕೆ ನೀರು ಬೀಳದಂತೆ ಅದನ್ನು ನನ್ನ ಭದ್ರಪಡಿಸಿಕೊಂಡೆ.
ಅಷ್ಟರಲ್ಲಿ ಊರಿನಿಂದ ಅಮ್ಮ ಕರೆ ಮಾಡತೊಡಗಿದರು. ಅವರೊಡನೆ ಮಾತನಾಡುವಾಗ ಅಲ್ಲಿ ಸ್ವಲ್ಪವೂ ಮಳೆಯೇ ಬಾರದ ಕಾರ್ಅಣ ಅಲ್ಲಿಯ ಬೇಸಾಯಕ್ಕೆ ತೊಂದರೆಯಾಗುತ್ತಿದೆ ಎಂದು ಅಮ್ಮ ಹೇಳಿದರು. ಹಾಗೇ ಕರುಳಬಳ್ಳಿಯ ಕಡೆಗಿನ ಪ್ರೀತಿಯನ್ನು ತೋರುತ್ತಾ, "ನೆನೀಬೇಡಾ ಕಣೋ, ಮಳೆ ಬಂದು ನಿಂತ್ಮೇಲೆ ಹೊರಡು, ಅಕಸ್ಮಾತ್ ನನ್ಕೊಂಡು ಹೋದ್ರೆ ಮನೆಗೆ ಹೋದ ತಕ್ಷಣಾ ತಲೆನ ಟವಲ್ ಇಂದ ಒರಸ್ಕೊಂಡು ಒಣಗಿಸ್ಕೋ" !!! ಅಮ್ಮನ ಪ್ರೀತಿ ತುಂಬಿದ ಮಾತುಗಳು ಮನಸ್ಸಿಗೆ ಏನೋ ಖುಷಿತುಂಬಿದವು. ಆದರೂ "ಅಮ್ಮಾ, ತಲೆಮೇಲೆ ಹೆಲ್ಮೆಟ್ ಇದ್ದೇ ಇರತ್ತೆ, ಮತ್ತೆ ಮೈ ಗೆ ಜರ್ಕಿನ್ ಹಾಕಿದೀನಿ, ಲೇಟಾಗಿ ಮನೆಗೆ ಹೋದ್ರೆ ನನ್ಗೊಸ್ಕರ ಅಡುಗೆ ಮಾಡ್ಕೊಂಡು ಯಾರು ಕಾಯ್ತಾ ಇರ್ತಾರೆ ಹೇಳಿ ??? ನಾನು ಜೋಪಾನವಾಗಿ ಮನೆಗೆ ಹೋಗಿ ನಿಮಗೆ ಫೋನ್ ಮಾಡ್ತೀನಿ, ಆಯ್ತಾ ?? ಅಂತೆ ಸಮಾಧಾನಿಸಿ ಅಲ್ಲಿಂದ ಮನೆಯೆಡೆಗೆ ಪಯಣ ಬೆಳೆಸಲು ಅಣಿಯಾದೆ.
ನಾನು ಮೊದಲೇ ಮಳೆಯಲ್ಲಿ ನೆನೆಯಬೇಕೆಂದು ನಿರ್ಧಾರ ಮಾಡಿದ್ದರಿಂದ ಸರಿಯಾಗಿ ೬.೦೦ಘಂಟೆಗೆ ನನ್ನ ಕಾರ್ಯಾಲಯವನ್ನ ಬಿಟ್ಟು ನನ್ನ ಲೋಹಕುದುರೆ (ಬಜಾಜ್)ಯನ್ನೇರಿ ಮನೆಯತ್ತ ಪಯಣ ಬೆಳೆಸಿದೆ. ಹೊರಟು ೧ ನಿಮಿಷಕೂಡಾ ಆಗಿರಲಿಲ್ಲ, ಧೋ ಎಂದು ಮಳೆ ಸುರಿಯಲಾರಂಭಿಸಿತು. ಆಕಾಶವೇ ಕಳಚಿ ಮೇಲೆ ಬೀಳುತ್ತಿದೆಯೇನೋ ಅನ್ನುವಂತಾ ದಪ್ಪ ದಪ್ಪ ಹನಿಗಳು !!! ನಾನು ಮಳೆಯಲ್ಲಿ ಸಂಪೂರ್ಣವಾಗಿ ತೊಯ್ದುಹೋದೆ. ಮನಸ್ಸಿನಲ್ಲಿ ಏನೋ ಸಂತಸ... ಉಲ್ಲಾಸ... ೩ ದಿನಗಳ ಹಿಂದೆಯಷ್ಟೇ ಹಲ್ಲು ನೋವಿನಿಂದ ಡಾಕ್ಟರ್ ಹತ್ತಿರ ಹೋಗಿ ಬಂದು ಅದರ ನೋವಿನಿಂದ ಬಳಲುತ್ತಿದ್ದೆ, ಒಮ್ಮೆ ಮಳೆ ಬಂದದ್ದೇ ತಡ !!! ಯಾವ ನೋವೂ ನನ್ನ ಪರಿವೆಗೆ ಇರಲಿಲ್ಲ, ನೀರಿನಲ್ಲಿ ಬಿಟ್ಟ ಮೀನಿನಂತೆ ಮಳೆಯಲ್ಲಿ ಸಾಗಿದೆ. ನನ್ನ ಬೈಕನ್ನ ರಸ್ತೆ ಬದಿಯಲ್ಲಿ ನಿಲ್ಲಿಸಿ ಪುಟ್ಟ ಮಗುವಿನಂತೆ ಮಳೆಯಲ್ಲಿ ನನ್ನ ಕೈಗಳನ್ನ ಚಾಚಿ ನಿಂತೆ...
ಆಗಷ್ಟೆ ಸುರಿದ ಮಳೆ ನನ್ನ ಮನದಲ್ಲಿದ್ದ ನೋವುಗಳನ್ನ ಅಲ್ಪಕಾಲವಾದರೂ ಕೊಚ್ಚಿಕೊಂಡು ಹೋಗಿತ್ತು. ನಾನು ಒಂಟಿಯಾಗಿ ಮನೆಗೆ ಹೋಗಲು ಬಿಡದ ಮಳೆ ಮನೆಯ ತನಕ ನನ್ನ ಜೊತೆಗೂಡಿ ಬಂದಿತ್ತು, ಆದರೆ ಮನೆಯ ಬಳಿ ನನ್ನ ಬಿಟ್ಟು ತಾನೆಲ್ಲೋ ಮಾಯವಾಗಿತ್ತು.
ಹೈದರಾಬಾದಿನಲ್ಲಿ ನಾನಿದ್ದ ದಿನಗಳಂದು ಬಂದ ಮಳೆಯ ಬಗ್ಗೆ ಬರೆದ ಕೆಲವೇ ಸಾಲುಗಳನ್ನ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ...
ಭೋರೆಂದು ಸುರಿದಿದೆ ಗಗನದಿಂದ
ಭುವಿಯ ದಾಹವ ತಣಿಸುವ ತವಕದಿಂದ...
ದಟ್ಟ ಮೋಡದಿಂದ ಸುರಿದುಬಂದಿಹೆ ನೀನು
ನಿನ್ನ ರಭಸವ ವರ್ಣಿಸುವುದೇನು...
ಜೊತೆಗೋಡಿ ಬಂದಿದೆ ವೇಗವಾಗಿ ಗಾಳಿ
ತಲೆದೊಗಿ ನಿಂತಿಹವು ಮರಗಿಡಗಳು ಕೇಳಿ...
ನೀಬಂದಿಹೆಯೇನು ಕೆರೆ, ನದಿಯ ಒಡಲು ತುಂಬಲು
ಹೇಳುವುದೇನು ಭುವಿಯು ಸಂತಸದಿ ನಗುತಿರಲು...
ಸುರಿದು ಬಾ ಮಳೆಯೆ ಸುರಿದು ಬಾ
ಬರಡು ನೆಲವನು ಹಸನುಗೊಳಿಸು ಬಾ...
ಕೊಂಚ ಕರುಣೆಯ ತೋರು
ನಿನ ರಭಸದಲೂ ಮಂದಹಾಸವ ಬೀರು...
ನೀ ನಮಗೆ ಜೀವಜಲ
ಕಾಯುನೀ ಸಕಲ ಜೀವಸಂಕುಲ...
ಮಳೆಯೇ ನಿನ್ನ ಮಾಯವಿದೇನೇ...
ಮೊನ್ನೆ ದಿನಪೂರ್ತಿ ಕಂಪ್ಯೂಟರಿನ ಮುಂದೆ ಕಣ್ಣುರಿಸಿಕೊಂಡು ಕೆಲಸ ಮಾಡಿ ಬಹಳ ದಣಿವಾಗಿತ್ತು. ಆಯಾಸ ಪರಿಹರಿಸಿಕೊಳ್ಳಲು ತಂಪಾಗಿ ಏನಾದರೂ ಬೇಕೆನಿಸಿತು. ಆಫೀಸಿನ ಕಿಟಕಿಯಿಂದ ಹೊರಕ್ಕೆ ಇಣುಕಿನೋಡಿದಾಗ ದಟ್ಟವಾದ ಮೋಡಗಳು ಭುವಿಯನ್ನು ತಬ್ಬಿ ಹಿಡಿದಿದ್ದವು... ಇನ್ನೇನು ಅವುಗಳ ಮಿಲನಕಾಲ ಹತ್ತಿರವಾದಂತಿತ್ತು. ಹೇಗಿದ್ದರೂ ದಣಿವಾಗಿದ್ದರಿಂದ ಮಳೆಯಲ್ಲಿ ನೆನೆಯುವ ಆಸೆ, ಉತ್ಸಾಹ ಮನದಲ್ಲಿ ಪುಟಿಯುತ್ತಿತ್ತು. ಮನದ ಆಸೆಯನ್ನು ಮನದಲ್ಲೇ ಅಡಗಿಸಿಡುವುದು ಬೇಡವೆನಿಸಿ ನನ್ನ ಸಂಚಾರಿ ದೂರವಾಣಿಗಳನ್ನ ಮತ್ತೆ ಮುಖ್ಯವಾಗಿ ಬೇಕಾಗುವ Documentsಗಳನ್ನ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಅದಕ್ಕೆ ನೀರು ಬೀಳದಂತೆ ಅದನ್ನು ನನ್ನ ಭದ್ರಪಡಿಸಿಕೊಂಡೆ.
ಅಷ್ಟರಲ್ಲಿ ಊರಿನಿಂದ ಅಮ್ಮ ಕರೆ ಮಾಡತೊಡಗಿದರು. ಅವರೊಡನೆ ಮಾತನಾಡುವಾಗ ಅಲ್ಲಿ ಸ್ವಲ್ಪವೂ ಮಳೆಯೇ ಬಾರದ ಕಾರ್ಅಣ ಅಲ್ಲಿಯ ಬೇಸಾಯಕ್ಕೆ ತೊಂದರೆಯಾಗುತ್ತಿದೆ ಎಂದು ಅಮ್ಮ ಹೇಳಿದರು. ಹಾಗೇ ಕರುಳಬಳ್ಳಿಯ ಕಡೆಗಿನ ಪ್ರೀತಿಯನ್ನು ತೋರುತ್ತಾ, "ನೆನೀಬೇಡಾ ಕಣೋ, ಮಳೆ ಬಂದು ನಿಂತ್ಮೇಲೆ ಹೊರಡು, ಅಕಸ್ಮಾತ್ ನನ್ಕೊಂಡು ಹೋದ್ರೆ ಮನೆಗೆ ಹೋದ ತಕ್ಷಣಾ ತಲೆನ ಟವಲ್ ಇಂದ ಒರಸ್ಕೊಂಡು ಒಣಗಿಸ್ಕೋ" !!! ಅಮ್ಮನ ಪ್ರೀತಿ ತುಂಬಿದ ಮಾತುಗಳು ಮನಸ್ಸಿಗೆ ಏನೋ ಖುಷಿತುಂಬಿದವು. ಆದರೂ "ಅಮ್ಮಾ, ತಲೆಮೇಲೆ ಹೆಲ್ಮೆಟ್ ಇದ್ದೇ ಇರತ್ತೆ, ಮತ್ತೆ ಮೈ ಗೆ ಜರ್ಕಿನ್ ಹಾಕಿದೀನಿ, ಲೇಟಾಗಿ ಮನೆಗೆ ಹೋದ್ರೆ ನನ್ಗೊಸ್ಕರ ಅಡುಗೆ ಮಾಡ್ಕೊಂಡು ಯಾರು ಕಾಯ್ತಾ ಇರ್ತಾರೆ ಹೇಳಿ ??? ನಾನು ಜೋಪಾನವಾಗಿ ಮನೆಗೆ ಹೋಗಿ ನಿಮಗೆ ಫೋನ್ ಮಾಡ್ತೀನಿ, ಆಯ್ತಾ ?? ಅಂತೆ ಸಮಾಧಾನಿಸಿ ಅಲ್ಲಿಂದ ಮನೆಯೆಡೆಗೆ ಪಯಣ ಬೆಳೆಸಲು ಅಣಿಯಾದೆ.
ನಾನು ಮೊದಲೇ ಮಳೆಯಲ್ಲಿ ನೆನೆಯಬೇಕೆಂದು ನಿರ್ಧಾರ ಮಾಡಿದ್ದರಿಂದ ಸರಿಯಾಗಿ ೬.೦೦ಘಂಟೆಗೆ ನನ್ನ ಕಾರ್ಯಾಲಯವನ್ನ ಬಿಟ್ಟು ನನ್ನ ಲೋಹಕುದುರೆ (ಬಜಾಜ್)ಯನ್ನೇರಿ ಮನೆಯತ್ತ ಪಯಣ ಬೆಳೆಸಿದೆ. ಹೊರಟು ೧ ನಿಮಿಷಕೂಡಾ ಆಗಿರಲಿಲ್ಲ, ಧೋ ಎಂದು ಮಳೆ ಸುರಿಯಲಾರಂಭಿಸಿತು. ಆಕಾಶವೇ ಕಳಚಿ ಮೇಲೆ ಬೀಳುತ್ತಿದೆಯೇನೋ ಅನ್ನುವಂತಾ ದಪ್ಪ ದಪ್ಪ ಹನಿಗಳು !!! ನಾನು ಮಳೆಯಲ್ಲಿ ಸಂಪೂರ್ಣವಾಗಿ ತೊಯ್ದುಹೋದೆ. ಮನಸ್ಸಿನಲ್ಲಿ ಏನೋ ಸಂತಸ... ಉಲ್ಲಾಸ... ೩ ದಿನಗಳ ಹಿಂದೆಯಷ್ಟೇ ಹಲ್ಲು ನೋವಿನಿಂದ ಡಾಕ್ಟರ್ ಹತ್ತಿರ ಹೋಗಿ ಬಂದು ಅದರ ನೋವಿನಿಂದ ಬಳಲುತ್ತಿದ್ದೆ, ಒಮ್ಮೆ ಮಳೆ ಬಂದದ್ದೇ ತಡ !!! ಯಾವ ನೋವೂ ನನ್ನ ಪರಿವೆಗೆ ಇರಲಿಲ್ಲ, ನೀರಿನಲ್ಲಿ ಬಿಟ್ಟ ಮೀನಿನಂತೆ ಮಳೆಯಲ್ಲಿ ಸಾಗಿದೆ. ನನ್ನ ಬೈಕನ್ನ ರಸ್ತೆ ಬದಿಯಲ್ಲಿ ನಿಲ್ಲಿಸಿ ಪುಟ್ಟ ಮಗುವಿನಂತೆ ಮಳೆಯಲ್ಲಿ ನನ್ನ ಕೈಗಳನ್ನ ಚಾಚಿ ನಿಂತೆ...
ಆಗಷ್ಟೆ ಸುರಿದ ಮಳೆ ನನ್ನ ಮನದಲ್ಲಿದ್ದ ನೋವುಗಳನ್ನ ಅಲ್ಪಕಾಲವಾದರೂ ಕೊಚ್ಚಿಕೊಂಡು ಹೋಗಿತ್ತು. ನಾನು ಒಂಟಿಯಾಗಿ ಮನೆಗೆ ಹೋಗಲು ಬಿಡದ ಮಳೆ ಮನೆಯ ತನಕ ನನ್ನ ಜೊತೆಗೂಡಿ ಬಂದಿತ್ತು, ಆದರೆ ಮನೆಯ ಬಳಿ ನನ್ನ ಬಿಟ್ಟು ತಾನೆಲ್ಲೋ ಮಾಯವಾಗಿತ್ತು.
ಹೈದರಾಬಾದಿನಲ್ಲಿ ನಾನಿದ್ದ ದಿನಗಳಂದು ಬಂದ ಮಳೆಯ ಬಗ್ಗೆ ಬರೆದ ಕೆಲವೇ ಸಾಲುಗಳನ್ನ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ...
ಭೋರೆಂದು ಸುರಿದಿದೆ ಗಗನದಿಂದ
ಭುವಿಯ ದಾಹವ ತಣಿಸುವ ತವಕದಿಂದ...
ದಟ್ಟ ಮೋಡದಿಂದ ಸುರಿದುಬಂದಿಹೆ ನೀನು
ನಿನ್ನ ರಭಸವ ವರ್ಣಿಸುವುದೇನು...
ಜೊತೆಗೋಡಿ ಬಂದಿದೆ ವೇಗವಾಗಿ ಗಾಳಿ
ತಲೆದೊಗಿ ನಿಂತಿಹವು ಮರಗಿಡಗಳು ಕೇಳಿ...
ನೀಬಂದಿಹೆಯೇನು ಕೆರೆ, ನದಿಯ ಒಡಲು ತುಂಬಲು
ಹೇಳುವುದೇನು ಭುವಿಯು ಸಂತಸದಿ ನಗುತಿರಲು...
ಸುರಿದು ಬಾ ಮಳೆಯೆ ಸುರಿದು ಬಾ
ಬರಡು ನೆಲವನು ಹಸನುಗೊಳಿಸು ಬಾ...
ಕೊಂಚ ಕರುಣೆಯ ತೋರು
ನಿನ ರಭಸದಲೂ ಮಂದಹಾಸವ ಬೀರು...
ನೀ ನಮಗೆ ಜೀವಜಲ
ಕಾಯುನೀ ಸಕಲ ಜೀವಸಂಕುಲ...
ಮಳೆಯೇ ನಿನ್ನ ಮಾಯವಿದೇನೇ...
Friday, July 11, 2008
ಕನ್ನಡದಲ್ಲಿ ಬರೆಯೋದು ಬಹಳ ಸುಲಭ....
ಎಲ್ಲಾ ಸಹೃದಯ ಓದುಗರಿಗೆ ನಮಸ್ಕಾರಗಳು,
ಹೀಗೇ ಅಂತರ್ಜಾಲದಲ್ಲಿ ಸುತ್ತಾಡುತ್ತಿದ್ದಾಗ ನನಗೆ ಕನ್ನಡದಲ್ಲಿ ಬರೆಯುವ ಒಂದು ಒಳ್ಳೇ ಕೊಂಡಿ ಸಿಕ್ಕಿತು. ನಿಮ್ಮಲ್ಲಿ ಬಹುತೇಕರಿಗೆ ಇದರ ಬಗ್ಗೆ ಸುಳಿವಿದ್ದಿರಬಹುದು. ಆದರೂ ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳೋಣಾ ಅಂತ ನಾನು ಇಲ್ಲಿ ಆ ಕೊಂಡಿಯನ್ನ ಹಾಕುತ್ತಿದ್ದೇನೆ. ಇದನ್ನು ಉಪಯೋಗಿಸಲು ನಿಮ್ಮ ಗಣಕಯಂತ್ರದಲ್ಲಿ ಬರಹ ತಂತ್ರಾಂಶ ಇರಲೇಬೇಕೆಂದೇನಿಲ್ಲ.
http://www.yanthram.com/kn/type/
ಸಾಧ್ಯವಾದಷ್ಟೂ ಕನ್ನಡದಲ್ಲಿ ಮಾತನಾಡೋಣ....
ಇಂತಿ ನಿಮ್ಮ ಸ್ನೇಹಿತ,
ಪ್ರಶಾಂತ ಜಿ ಉರಾಳ
ಹೀಗೇ ಅಂತರ್ಜಾಲದಲ್ಲಿ ಸುತ್ತಾಡುತ್ತಿದ್ದಾಗ ನನಗೆ ಕನ್ನಡದಲ್ಲಿ ಬರೆಯುವ ಒಂದು ಒಳ್ಳೇ ಕೊಂಡಿ ಸಿಕ್ಕಿತು. ನಿಮ್ಮಲ್ಲಿ ಬಹುತೇಕರಿಗೆ ಇದರ ಬಗ್ಗೆ ಸುಳಿವಿದ್ದಿರಬಹುದು. ಆದರೂ ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳೋಣಾ ಅಂತ ನಾನು ಇಲ್ಲಿ ಆ ಕೊಂಡಿಯನ್ನ ಹಾಕುತ್ತಿದ್ದೇನೆ. ಇದನ್ನು ಉಪಯೋಗಿಸಲು ನಿಮ್ಮ ಗಣಕಯಂತ್ರದಲ್ಲಿ ಬರಹ ತಂತ್ರಾಂಶ ಇರಲೇಬೇಕೆಂದೇನಿಲ್ಲ.
http://www.yanthram.com/kn/type/
ಸಾಧ್ಯವಾದಷ್ಟೂ ಕನ್ನಡದಲ್ಲಿ ಮಾತನಾಡೋಣ....
ಇಂತಿ ನಿಮ್ಮ ಸ್ನೇಹಿತ,
ಪ್ರಶಾಂತ ಜಿ ಉರಾಳ
Wednesday, July 9, 2008
ಮುಂದೇನಾಗಬಹುದು ???
ಉಸ್ಸಪ್ಪಾಪ್ಪಾಪ್ಪಾ !!!!
ಎಷ್ಟು ಕೆಲಸ ಇತ್ತು ಗೊತ್ತಾ, ಅದರ ಮಧ್ಯ Customer calls ಬೇರೆ !!!
ಯಾಕೋ ಈ ನಡುವೆ ನನ್ಗೆ ಸರಿಯಾಗಿ ಟೈಮ್ ಸಿಕ್ತಾನೇ ಇಲ್ಲ. ಆ ತೊಂದರೆ ಇಂದ ನನ್ನ friends ನ meetಕೂಡಾ ಮಾಡೋಕೆ ಅಗ್ತಾ ಇಲ್ಲ. ಹೀಗೇ ಯೋಚನೆ ಮಾಡ್ತಾ ಇರೋವಾಗ ನನ್ಗನ್ನಿಸ್ತು... ನಾಳೆದಿನ ನಮ್ಗೇನಾದ್ರೂ ಹೆಚ್ಚು ಕಮ್ಮಿ ಆಗಿ ನಾವು ಪರಲೋಕಕ್ಕೆ ಪ್ರಯಾಣ ಬೆಳೆಸಿದ್ರೆ ನಮ್ಮ ಬಗ್ಗೆ ನಮ್ಮ ಗೆಳೆಯರು ಏನಂತ ಮಾತಾಡ್ಕೋಬಹುದು ??? ಕೆಲವರಿಗೆ ಅಯ್ಯೋ ಪಾಪಾ ಅಂತ ಅನ್ನಿಸ್ಬಹುದು, ಮತ್ತೆ ಕೆಲವರ ಓಹೋ ಹೌದಾ ??? ಹೇಗಾಯ್ತಂತೆ ???? ಯಾವಾಗಾ ???? ಅಂತ ರಾಗ ತೆಗೆದು ತಮಗಿಲ್ಲದ ಕಾಳಜಿ ತೋರಿಸಬಹುದು, ಮತ್ತೆ ಕೆಲವರಿಗೆ ನಮ್ಮ ಉಳಿವು, ಅಳಿವಿನ ಸುಳಿವೇ ಇಲ್ಲದೇ ಹೋಗಬಹುದು... ಸುಮಾರು ದಿನಗಳ ನಂತರ ನನ್ನ ಮೊಬೈಲಿನಲ್ಲಿ Store ಆಗಿರುವ ಅವರ ನಂಬರಿನಿಂದ call ಬಂದು ಮೊಬೈಲ್ ರಿಂಗಣಿಸಬಹುದು, ಆನಂತರ ಆ ಕಡೆ ಇರುವ ವ್ಯಕ್ತಿ, ಛೇ !!! ನಂಗೆ ವಿಷ್ಯ ಗೊತ್ತೇ ಇರ್ಲಿಲ್ಲ.... ಅಂತ ಅನ್ನ ಬಹುದು. ಮತ್ತೆ ಕೆಲವರು ನಿಜವಾಗಿಯೂ ದುಃಖ ಪಡಬಹುದು...
ಇನ್ನು ನಮ್ಮ ಕುಟುಂಬದವರಲ್ಲಿ ದುಃಖ ಮಡುಗಟ್ಟಿರಬಹುದು.... ತದ ನಂತರ ನೆಂಟರಿಷ್ಟರಲ್ಲಿ ಕೆಲವರು ಮೊಸಳೇ ಕಣ್ಣೀರು ಇಡುತ್ತಾ Phone ಮಾಡಿ ದುಃಖದಲ್ಲಿರಿವವರನ್ನು ಮತ್ತಷ್ಟು ಅಳುವಂತೆ ಮಾಡಿ ತಾವೂ ದುಃಖಿತರಾಗಿದ್ದೀವಿ ಅಂತ ತೋರ್ಪಡಿಸಬಹುದು... ಕೆಲವರಿಗೆ ನೊಂದವರನ್ನು ಸಮಾಧಾನ ಪಡಿಸಲು ಬಾರದಿದ್ದರೂ, ಮತ್ತಷ್ಟು ಅಳಿಸಿ ಮರೆಯಲೆತ್ನಿಸುತ್ತಿದ್ದ ನೋವನ್ನ ಮತ್ತೆ ಕೆದಕಿ ತಿಳಿಗೊಳ್ಳುತ್ತಿರುವ ಮನವನ್ನ ಕದಡಿ ರಾಡಿ ಎಬ್ಬಿಸಿ ಹೋಗುತ್ತಾರೆ.
ನಮ್ಮ ಬ್ಯಾಂಕಿನ ಅಕೌಂಟುಗಳಲ್ಲಿ ಕೆಲವುದರ ಬಗ್ಗೆ ಮನೆಯವರಿಗೆ ತಿಳಿದಿದ್ದು ಸುಖಾಂತ್ಯ ಪಡೆಯಬಹುದು, ಮತ್ತೆ ಕೆಲವು ಸದ್ದಿಲ್ಲದೇ ಸತ್ತುಹೋಗಬಹುದು... ನಾವು ಉಪಯೋಗಿಸುತ್ತಿದ್ದ ವಸ್ತುಗಳು ಪರರ ಪಾಲಾಗಬಹುದು... ನಮ್ಮ ಬ್ಲಾಗು, ಈ-ಮೈಲ್ ಐಡಿ ಗಳು, ಅದರಲ್ಲಿ ಇರಬಹುದಾದ ವಿಷಯಗಳು ಎಲ್ಲಾ ಯಾರಕೈಗೂ ಸಿಗದೇ ಮುಂದೊಂದುದಿನ ಸರ್ವರ್ ಇಂದ ತೆಗೆಯಲ್ಪಡುತ್ತದೆ. ಇದೆಲ್ಲಾ ಆಗುವುದಂತೂ ಸತ್ಯ. ಏನಾದರೇನು ? ಅದನ್ನೆಲ್ಲಾ ನೋಡುವುದಕ್ಕೆ ನಾವೇ ಅಲ್ಲಿ ಇರುವುದಿಲ್ಲ ಅಲ್ವಾ ??? ಸುಮ್ಮನೇ ಯೋಚನೆ ಏತಕ್ಕೆ ಮಾಡಿ ತಲೆ ಕೆಡಿಸಿ ಇವತ್ತಿನ ದಿನವನ್ನ ಯಾಕೆ ಹಾಳುಮಾಡಿಕೊಳ್ಳುವುದು....
ಅಲ್ವಾ !!!
ಮತ್ತೆ ನೀವು ಈಗ ಕೇಳ್ತೀರಿ, ಯಾಕೆ ಅಷ್ಟೆಲ್ಲಾ ಹೇಳಿದ್ದು, ಬರೆದಿದ್ದು ಅಂತ.... ಸುಮ್ನೆ ಯಾಕೋ ತಲೇಲಿ ಯೋಚ್ನೆ ಬಂತು, ನಿಮ್ಮಲ್ಲಿ ಬೇರೆ ಯಾರಿಗಾದ್ರೂ ಇದೇ ಯೋಚ್ನೆ ಬಂದಿರ್ಬಹುದು, ಆದ್ರೆ ಅದ್ನ ಹೇಳಿರೋದಿಲ್ಲ ಅಷ್ಟೆ.
ಓಟ್ಟಿನಲ್ಲಿ ಎಲ್ಲಾ ಒಳ್ಳೇದಾಗ್ಲಿ ಅಂತ ಮಾತ್ರ ಹಾರೈಸಬಹುದು....
ಓಟ್ಟಿನಲ್ಲಿ ಎಲ್ಲಾ ಒಳ್ಳೇದಾಗ್ಲಿ ಅಂತ ಮಾತ್ರ ಹಾರೈಸಬಹುದು....
Tuesday, July 8, 2008
ದಿನಚರಿಯ ಒಂದು ದಿನ...
ಒಮ್ಮೊಮ್ಮೆ ಹೀಗೂ ಆಗುವುದು, ಎಲ್ಲಿಯೋ ಮನಸು ಜಾರುವುದು... ಹೌದಲ್ವಾ ? ಕೆಲವೊಮ್ಮೆ ನಮಗರಿವಿಲ್ಲದೇ ನಾವು ಎಲ್ಲೋ ಯೋಚನೆಗಳ ಕಡಲಲ್ಲಿ ತೇಲಿ ಹೋಗಿರ್ತೀವಿ, ಯೋಚನೆಗಳಲ್ಲಿ ಮಾಡುವ, ಮಾಡಬೇಕಿರುವ ಕೆಲಸಗಳನ್ನೆಲ್ಲಾ ಮರೆತಿರುತ್ತೀವಿ. ಈ ರೀತಿ ಆಗಲಿಕ್ಕೆ ಕಾರಣ ಏನು ? ನನಗಂತೂ ಗೊತ್ತಿಲ್ಲ... ನಿಮ್ಗೆನಾದ್ರೂ... ????
ಒಮ್ಮೊಮ್ಮೆ ಯಾವುದಾದರೂ ಪುಟ್ಟ ಮಕ್ಕಳನ್ನು ನೋಡಿದರೆ ನಾವೂ ಮಕ್ಕಳಾಗಿಬಿಡಬಾರದಾ !!! ಈ ಜಂಜಾಟಕ್ಕೆ ಸ್ವಲ್ಪನಾದ್ರೂ ಬಿಡುವು ಸಿಕ್ಕಬಾರದಾ ಅಂತ ಅನ್ಸತ್ತೆ. ದಿನಾ ಬೆಳಿಗ್ಗೆ ಎದ್ದು, ಗಡಿಬಿಡಿಯಲ್ಲಿ ಆಫೀಸಿಗೆ ಬಂದು ಬಾಸ್ ಎಂಬ ಭಾವನೆ ಇಲ್ಲದ ಪ್ರಾಣಿಯ ಕಿರಿ ಕಿರಿಯನ್ನ ಸಹಿಸಿಕೊಂಡು ಮನಸ್ಸಿಲ್ಲದ ಮನಸ್ಸಿಂದ ಆತನಿಗೆ ಒಂದು ಸ್ಮೈಲ್ ಕೊಟ್ಟು ಮತ್ತೆ ಕಂಪ್ಯೂಟರಿನ ಮುಂದೆ ಕೀಬೋರ್ಡನ್ನು ಕುಟ್ಟುತ್ತಾ ಕೆಲವೊಮ್ಮೆ ಊಟವನ್ನೂ ಮರೆಯುತ್ತಾ ಕೆಲಸ ಮಾಡಿ ಸಂಜೆಯ ಹೊತ್ತಿಗೆ ಅಲ್ಲಿಂದ ಯಾವಾಗ ಕಾಲು ಕೀಳುತ್ತೇವೋ ಅನ್ನುವ ರೀತಿ ಸುಸ್ತಾಗಿ ಮನೆಗೆ ಹೋಗುವಷ್ಟರಲ್ಲಿ ಸಾಕಪ್ಪಾ !!! ಸಾಕು !!!!
ಅಂದು ನನಗೂ ಇದೇ ರೀತಿ ಆಯಿತು, ಆರೋಗ್ಯ ಹದಗೆಟ್ಟಿದ್ದ ಕಾರಣ ದೇಹಕ್ಕೆ ದಣಿವಾಗಿತ್ತು. ರಾತ್ರಿ ಕೆಮ್ಮು ನಿದ್ದೆ ಮಾಡಲು ಅನುವುಮಾಡಿ ಕೊಟ್ಟಿರಲಿಲ್ಲ. ಬೆಳಿಗ್ಗೆ ೫.೩೦ಕ್ಕೆ ನನ್ನ ಮೊಬೈಲಿನ ಅಲಾರಾಂ ನನ್ನ ಬೈದು ಬೈದು ಎಬ್ಬಿಸೋದಕ್ಕೆ ಪ್ರಯತ್ನಿಸುತ್ತಿತ್ತು. ಅದರ ಮೇಲೊಂದು ಮೊಟಕಿ ಮತ್ತೆ ಐದು ನಿಮಿಷ, ಮತ್ತೆ ಐದು ನಿಮಿಷ ಅಂತಾ ೬.೩೦ ಕ್ಕೆ ಎದ್ದೆ, ಎದ್ದು ನಿದ್ದೆಗಣ್ಣಿಂದ ಗಡಿಯಾರ ನೋಡಿದಾಕ್ಷಣ ಎದೆ ಧಸಕ್ ಅಂತು, ಇನ್ನೂ ಸ್ನಾನ ಮಾಡಿ ತಿಂಡಿ ಮಾಡ್ಕೊಂಡು ಆಫೀಸಿಗೆ ಹೋಗೋದು ಯಾವಾಗ ??? ಮೀಟಿಂಗ್ ಬೇರೆ ಇದೆ, ಇವತ್ತು ನನ್ನ ಕತೆ ಅಷ್ಟೇ !!! ಅಂದುಕೊಂಡು ಈ ದಿನ ಎಲ್ಲಾ ಸಸೂತ್ರವಾಗಿ ಸಾಗಲಿ ದೇವರೇ ಅಂತ ವಿಘ್ನನಿವಾರಕನಲ್ಲಿ ಬೇಡಿಕೊಂಡು ಗಡಿಬಿಡಿಯಲ್ಲಿ ರೆಡಿಯಾಗಿ ಹೊರಟೆ. ಷೂಗಳಿಗೆ ಪಾಲಿಶ್ ಮಾಡಿಲ್ಲ, ಕರ್ಮಕಾಂಡವೇ.... ಸರಿ ಇನ್ನು ಅದಕ್ಕೆ ೫ ನಿಮಿಷ ತಡವಾಯ್ತು, ಅಲ್ಲಿಂದ ಗಾಡಿ ಹತ್ತಿದ ನಂತರವೇ ನೆನಪಿಗೆ ಬಂದದ್ದು, ಗಾಡಿಯಲ್ಲಿ ಪೆಟ್ರೋಲ್ ಕೇವಲ ಮುಂದಿನ ಬಂಕ್ ತನಕವೇ ನನ್ನ ಗಾಡಿಯನ್ನ ಮುನ್ನಡೆಸಬಲ್ಲದು ಅಂತ, ವಿಧಿ ಇಲ್ಲ.... ಪೆಟ್ರೋಲ್ ಬಂಕ್ ಕಡೆಗೆ ಗಾಡಿಯನ್ನ ತಿರುಗಿಸಿ ಅಲ್ಲಿದ್ದ ಸಾಲಿನಲ್ಲಿ ನಾನೂ ನಿಂತು ಮತ್ತೆ ೧೦ ನಿಮಿಷ ತಡ ಮಾಡಿಕೊಂಡು ಅಲ್ಲಿಂದ ಟ್ರ್ಆಫಿಕ್ ನೊಡನೆ ಹೋರಾಡುತ್ತಾ ಅಂತೂ ಇಂತೂ ಆಫೀಸಿಗೆ ಬರುವ ಹೊತ್ತಿಗೆ ನನ್ನ ಮೊಬೈಲಿನಲ್ಲಿ ೩ ಮಿಸ್ಸ್ಡ್ ಕಾಲ್ಗಳು !!!! ಇನ್ಯಾರದ್ದು ??? ನಮ್ಮ ರೇಷ್ಮ (ನಮ್ಮ ಆಫೀಸಿನ efficient worker!!!) ನನಗೆ ಮತ್ತೊಮ್ಮೆ ಕಾಲ್ ಮಾಡಿ "ಪ್ರಶಾಂತ್, ಎಲ್ಲಿದ್ದೀರ ? ಎಲ್ಲಾ ಮೀಟಿಂಗಿಗೆ ಬಂದಿದ್ದಾರೆ.... ನೀವೊಬ್ಬರೇ ತಡ" ಅಂತ ಹೇಳಿದಳು. ಗಡಿಬಿಡಿಯಲ್ಲಿ ತಲೆಯ ಕೂದಲನ್ನ ಸರಿಪಡಿಸಿಕೊಳ್ಳುತ್ತಾ Conference room ಕಡೆಗೆ ಹೆಜ್ಜೆ ಹಾಕಿದೆ, ನನ್ನ ಬಾಸ್ ಒಮ್ಮೆ ನನ್ನಕಡೆ ತನ್ನ ಕೆಂಗಣ್ಣು ಬೀರಿ ನಂತರ ತನ್ನ ಕೆಲಸದಲ್ಲಿ ಮಗ್ನರಾದರು. ಅದರ ಅರ್ಥ ಮೀಟಿಂಗ್ ಮುಗಿದ ಮೇಲೆ ನನಗೆ ಗ್ರಹಚಾರ ಕಾದಿದೆ ಅಂತ.
As usual ಮೀಟಿಂಗಿನಲ್ಲಿ ಅದೇ ಹಳೇ ಭರವಸೆಗಳು... ಅಂತೂ ಇಂತೂ ಮೀಟಿಂಗ್ ಮುಗೀತು, ನಂತರ ನನಗೆ ಒಂದು Customer call ಇದ್ದದ್ದರಿಂದ ನಾನು ಹೊರಡಬೇಕಾಯಿತು. ಪಯಣ ಬಹಳ ದೂರ ಆದ್ದರಿಂದ ಸ್ವಲ್ಪ ಸಮಾಧಾನ ಪಡಿಯೋದಕ್ಕೆ ರೇಡಿಯೋ ಕೇಳುವ ಮನಸ್ಸಾಯಿತು. ರೇಡಿಯೋ ಹಾಕಿದಾಗ ಅದರಲ್ಲಿ ಬರ್ತಾ ಇದ್ದ ಹಾಡು "ಜಾನೆ ತು ಮೆರ ಕ್ಯಾ ಹೈ, ಜಾನೆ ತು ಮೆರ ಕ್ಯ ಥಾ...." ಅನ್ನೋ ಹೊಸಾ ಹಾಡು. ಈ ಹಾಡು ಬರಿಯೋವ್ರಿಗೆ ಅದನ್ನ ಕೇಳೋವ್ರ ಮನಸ್ಸು ಹೇಗೆ ಅರ್ಥ ಆಗತ್ತೋ !!!! ನಿಜ ಅಲ್ವಾ ? ಒಮ್ಮೊಮ್ಮೆ ನಮ್ಗೂ ಹಾಗೇ ಅನ್ಸತ್ತೆ. ಯಾರಾದರೂ ನಮಗೆ ಹತ್ತಿರ ಅನ್ಸಿದ್ರೆ ಅವ್ರಜೊತೆ ಏನೇನೋ ಹೇಳೋಣ ಅಂತ ಅನ್ನಿಸ್ಬಹುದು, ಆದ್ರೆ ಅವ್ರು ಏನಾದ್ರೂ ಅಂದ್ಕೊಂಡ್ಬಿಟ್ರೇ ??? ಅನ್ನೋ ಭಾವನೆ. ಹಾಗಾಗಿ ಬಹಳಷ್ಟು ಮಾತುಗಳು ಮನಸ್ಸಲ್ಲೇ ಮೂಡಿ ಮನಸ್ಸಲ್ಲೇ ಮುದುಡಿ ಹೋಗ್ತಾವೆ.
ನಾನು ಕಾಲ್ ಮುಗಿಸಿ ಸಂಜೆ ಮನೆಗೆ ಬಂದಾಗ ನನ್ನ ಹೂವಿನ ಗಿಡ ಒಂದು ಚೆಲುವಾದ ಹೂವನ್ನ ಅರಳಿಸಿ ನಗು ನಗುತ್ತಾ ತನ್ನ ಕಂಪನ್ನ ಬೀರಿ ನನ್ನ ಸ್ವಾಗತಿಸ್ತಾ ಇತ್ತು. ಅದನ್ನ ನೋಡಿ ನನ್ನಲ್ಲೇ ಏನೋ ಒಂದು ರೀತಿಯ ಸ್ಪೂರ್ತಿ ಮೂಡಿಬಂತು. ಮನೆಯ ಒಳಗೆ ಹೋಗಿ ಮನೆಯನ್ನ ಗುಡಿಸಿ, ಬಟ್ಟೆಗಳನ್ನ ಮಡಿಸಿಟ್ಟು ಗಿಡಗಳಿಗೆ ನೀರು ಹಾಕಿ ಅಮ್ಮನೊಡನೆ ಮಾತನಾಡಲು ಫೋನ್ ಮಾಡಿದೆ...
ಒಮ್ಮೊಮ್ಮೆ ಯಾವುದಾದರೂ ಪುಟ್ಟ ಮಕ್ಕಳನ್ನು ನೋಡಿದರೆ ನಾವೂ ಮಕ್ಕಳಾಗಿಬಿಡಬಾರದಾ !!! ಈ ಜಂಜಾಟಕ್ಕೆ ಸ್ವಲ್ಪನಾದ್ರೂ ಬಿಡುವು ಸಿಕ್ಕಬಾರದಾ ಅಂತ ಅನ್ಸತ್ತೆ. ದಿನಾ ಬೆಳಿಗ್ಗೆ ಎದ್ದು, ಗಡಿಬಿಡಿಯಲ್ಲಿ ಆಫೀಸಿಗೆ ಬಂದು ಬಾಸ್ ಎಂಬ ಭಾವನೆ ಇಲ್ಲದ ಪ್ರಾಣಿಯ ಕಿರಿ ಕಿರಿಯನ್ನ ಸಹಿಸಿಕೊಂಡು ಮನಸ್ಸಿಲ್ಲದ ಮನಸ್ಸಿಂದ ಆತನಿಗೆ ಒಂದು ಸ್ಮೈಲ್ ಕೊಟ್ಟು ಮತ್ತೆ ಕಂಪ್ಯೂಟರಿನ ಮುಂದೆ ಕೀಬೋರ್ಡನ್ನು ಕುಟ್ಟುತ್ತಾ ಕೆಲವೊಮ್ಮೆ ಊಟವನ್ನೂ ಮರೆಯುತ್ತಾ ಕೆಲಸ ಮಾಡಿ ಸಂಜೆಯ ಹೊತ್ತಿಗೆ ಅಲ್ಲಿಂದ ಯಾವಾಗ ಕಾಲು ಕೀಳುತ್ತೇವೋ ಅನ್ನುವ ರೀತಿ ಸುಸ್ತಾಗಿ ಮನೆಗೆ ಹೋಗುವಷ್ಟರಲ್ಲಿ ಸಾಕಪ್ಪಾ !!! ಸಾಕು !!!!
ಅಂದು ನನಗೂ ಇದೇ ರೀತಿ ಆಯಿತು, ಆರೋಗ್ಯ ಹದಗೆಟ್ಟಿದ್ದ ಕಾರಣ ದೇಹಕ್ಕೆ ದಣಿವಾಗಿತ್ತು. ರಾತ್ರಿ ಕೆಮ್ಮು ನಿದ್ದೆ ಮಾಡಲು ಅನುವುಮಾಡಿ ಕೊಟ್ಟಿರಲಿಲ್ಲ. ಬೆಳಿಗ್ಗೆ ೫.೩೦ಕ್ಕೆ ನನ್ನ ಮೊಬೈಲಿನ ಅಲಾರಾಂ ನನ್ನ ಬೈದು ಬೈದು ಎಬ್ಬಿಸೋದಕ್ಕೆ ಪ್ರಯತ್ನಿಸುತ್ತಿತ್ತು. ಅದರ ಮೇಲೊಂದು ಮೊಟಕಿ ಮತ್ತೆ ಐದು ನಿಮಿಷ, ಮತ್ತೆ ಐದು ನಿಮಿಷ ಅಂತಾ ೬.೩೦ ಕ್ಕೆ ಎದ್ದೆ, ಎದ್ದು ನಿದ್ದೆಗಣ್ಣಿಂದ ಗಡಿಯಾರ ನೋಡಿದಾಕ್ಷಣ ಎದೆ ಧಸಕ್ ಅಂತು, ಇನ್ನೂ ಸ್ನಾನ ಮಾಡಿ ತಿಂಡಿ ಮಾಡ್ಕೊಂಡು ಆಫೀಸಿಗೆ ಹೋಗೋದು ಯಾವಾಗ ??? ಮೀಟಿಂಗ್ ಬೇರೆ ಇದೆ, ಇವತ್ತು ನನ್ನ ಕತೆ ಅಷ್ಟೇ !!! ಅಂದುಕೊಂಡು ಈ ದಿನ ಎಲ್ಲಾ ಸಸೂತ್ರವಾಗಿ ಸಾಗಲಿ ದೇವರೇ ಅಂತ ವಿಘ್ನನಿವಾರಕನಲ್ಲಿ ಬೇಡಿಕೊಂಡು ಗಡಿಬಿಡಿಯಲ್ಲಿ ರೆಡಿಯಾಗಿ ಹೊರಟೆ. ಷೂಗಳಿಗೆ ಪಾಲಿಶ್ ಮಾಡಿಲ್ಲ, ಕರ್ಮಕಾಂಡವೇ.... ಸರಿ ಇನ್ನು ಅದಕ್ಕೆ ೫ ನಿಮಿಷ ತಡವಾಯ್ತು, ಅಲ್ಲಿಂದ ಗಾಡಿ ಹತ್ತಿದ ನಂತರವೇ ನೆನಪಿಗೆ ಬಂದದ್ದು, ಗಾಡಿಯಲ್ಲಿ ಪೆಟ್ರೋಲ್ ಕೇವಲ ಮುಂದಿನ ಬಂಕ್ ತನಕವೇ ನನ್ನ ಗಾಡಿಯನ್ನ ಮುನ್ನಡೆಸಬಲ್ಲದು ಅಂತ, ವಿಧಿ ಇಲ್ಲ.... ಪೆಟ್ರೋಲ್ ಬಂಕ್ ಕಡೆಗೆ ಗಾಡಿಯನ್ನ ತಿರುಗಿಸಿ ಅಲ್ಲಿದ್ದ ಸಾಲಿನಲ್ಲಿ ನಾನೂ ನಿಂತು ಮತ್ತೆ ೧೦ ನಿಮಿಷ ತಡ ಮಾಡಿಕೊಂಡು ಅಲ್ಲಿಂದ ಟ್ರ್ಆಫಿಕ್ ನೊಡನೆ ಹೋರಾಡುತ್ತಾ ಅಂತೂ ಇಂತೂ ಆಫೀಸಿಗೆ ಬರುವ ಹೊತ್ತಿಗೆ ನನ್ನ ಮೊಬೈಲಿನಲ್ಲಿ ೩ ಮಿಸ್ಸ್ಡ್ ಕಾಲ್ಗಳು !!!! ಇನ್ಯಾರದ್ದು ??? ನಮ್ಮ ರೇಷ್ಮ (ನಮ್ಮ ಆಫೀಸಿನ efficient worker!!!) ನನಗೆ ಮತ್ತೊಮ್ಮೆ ಕಾಲ್ ಮಾಡಿ "ಪ್ರಶಾಂತ್, ಎಲ್ಲಿದ್ದೀರ ? ಎಲ್ಲಾ ಮೀಟಿಂಗಿಗೆ ಬಂದಿದ್ದಾರೆ.... ನೀವೊಬ್ಬರೇ ತಡ" ಅಂತ ಹೇಳಿದಳು. ಗಡಿಬಿಡಿಯಲ್ಲಿ ತಲೆಯ ಕೂದಲನ್ನ ಸರಿಪಡಿಸಿಕೊಳ್ಳುತ್ತಾ Conference room ಕಡೆಗೆ ಹೆಜ್ಜೆ ಹಾಕಿದೆ, ನನ್ನ ಬಾಸ್ ಒಮ್ಮೆ ನನ್ನಕಡೆ ತನ್ನ ಕೆಂಗಣ್ಣು ಬೀರಿ ನಂತರ ತನ್ನ ಕೆಲಸದಲ್ಲಿ ಮಗ್ನರಾದರು. ಅದರ ಅರ್ಥ ಮೀಟಿಂಗ್ ಮುಗಿದ ಮೇಲೆ ನನಗೆ ಗ್ರಹಚಾರ ಕಾದಿದೆ ಅಂತ.
As usual ಮೀಟಿಂಗಿನಲ್ಲಿ ಅದೇ ಹಳೇ ಭರವಸೆಗಳು... ಅಂತೂ ಇಂತೂ ಮೀಟಿಂಗ್ ಮುಗೀತು, ನಂತರ ನನಗೆ ಒಂದು Customer call ಇದ್ದದ್ದರಿಂದ ನಾನು ಹೊರಡಬೇಕಾಯಿತು. ಪಯಣ ಬಹಳ ದೂರ ಆದ್ದರಿಂದ ಸ್ವಲ್ಪ ಸಮಾಧಾನ ಪಡಿಯೋದಕ್ಕೆ ರೇಡಿಯೋ ಕೇಳುವ ಮನಸ್ಸಾಯಿತು. ರೇಡಿಯೋ ಹಾಕಿದಾಗ ಅದರಲ್ಲಿ ಬರ್ತಾ ಇದ್ದ ಹಾಡು "ಜಾನೆ ತು ಮೆರ ಕ್ಯಾ ಹೈ, ಜಾನೆ ತು ಮೆರ ಕ್ಯ ಥಾ...." ಅನ್ನೋ ಹೊಸಾ ಹಾಡು. ಈ ಹಾಡು ಬರಿಯೋವ್ರಿಗೆ ಅದನ್ನ ಕೇಳೋವ್ರ ಮನಸ್ಸು ಹೇಗೆ ಅರ್ಥ ಆಗತ್ತೋ !!!! ನಿಜ ಅಲ್ವಾ ? ಒಮ್ಮೊಮ್ಮೆ ನಮ್ಗೂ ಹಾಗೇ ಅನ್ಸತ್ತೆ. ಯಾರಾದರೂ ನಮಗೆ ಹತ್ತಿರ ಅನ್ಸಿದ್ರೆ ಅವ್ರಜೊತೆ ಏನೇನೋ ಹೇಳೋಣ ಅಂತ ಅನ್ನಿಸ್ಬಹುದು, ಆದ್ರೆ ಅವ್ರು ಏನಾದ್ರೂ ಅಂದ್ಕೊಂಡ್ಬಿಟ್ರೇ ??? ಅನ್ನೋ ಭಾವನೆ. ಹಾಗಾಗಿ ಬಹಳಷ್ಟು ಮಾತುಗಳು ಮನಸ್ಸಲ್ಲೇ ಮೂಡಿ ಮನಸ್ಸಲ್ಲೇ ಮುದುಡಿ ಹೋಗ್ತಾವೆ.
ನಾನು ಕಾಲ್ ಮುಗಿಸಿ ಸಂಜೆ ಮನೆಗೆ ಬಂದಾಗ ನನ್ನ ಹೂವಿನ ಗಿಡ ಒಂದು ಚೆಲುವಾದ ಹೂವನ್ನ ಅರಳಿಸಿ ನಗು ನಗುತ್ತಾ ತನ್ನ ಕಂಪನ್ನ ಬೀರಿ ನನ್ನ ಸ್ವಾಗತಿಸ್ತಾ ಇತ್ತು. ಅದನ್ನ ನೋಡಿ ನನ್ನಲ್ಲೇ ಏನೋ ಒಂದು ರೀತಿಯ ಸ್ಪೂರ್ತಿ ಮೂಡಿಬಂತು. ಮನೆಯ ಒಳಗೆ ಹೋಗಿ ಮನೆಯನ್ನ ಗುಡಿಸಿ, ಬಟ್ಟೆಗಳನ್ನ ಮಡಿಸಿಟ್ಟು ಗಿಡಗಳಿಗೆ ನೀರು ಹಾಕಿ ಅಮ್ಮನೊಡನೆ ಮಾತನಾಡಲು ಫೋನ್ ಮಾಡಿದೆ...
Wednesday, June 11, 2008
"ನೀನಾರಿಗಾದೆಯೋ ಎಲೆ ಮಾನವ"
ನೆನ್ನೆ ಮನೆ ಕೆಲಸ ಮುಗಿಸಿ ತಡವಾಗಿ ಮಲಗಿದ್ದರಿಂದ ಬೆಳಿಗ್ಗೆ ೫.೦೦ ಘಂಟೆಗೆ ಎಚ್ಚರವಾಗಲಿಲ್ಲ. ನನ್ನ ಮೊಬೈಲಿನಲ್ಲಿ ಮೆಸ್ಸಜ್ ಟೋನ್ ಕೂಗಿ ೫.೨೦ಕ್ಕೆ ನನ್ನ ಎಬ್ಬಿಸಿತ್ತು, ನಾನು ಇದ್ಯಾರು ಇಷ್ಟು ಬೆಳಿಗ್ಗೆ ಬೆಳಿಗ್ಗೆ ನನಗೆ Good morning ವಿಶ್ ಮಾಡ್ತಾಇರೊವ್ರು ಅಂತ ಅರ್ಧಂಭರ್ದ ಕಣ್ಣಿನಲ್ಲೇ ಮೆಸ್ಸೇಜನ್ನ ಓದಿ ಧಡ್ ಅಂತ ಎದ್ದು ಕುಳಿತೆ. ಅದು ನನ್ನ ಸ್ನೇಹಿತನಾದ ಹರೀಶನದು. We might need 4 units of A+ blood for my dad. I might call u if required ಅಂತ ಬಂದಿತ್ತು. ತಕ್ಷಣ ಅವನಿಗೆ ಫೋನ್ ಮಾಡಿ ಏನಯ್ತು ? ಏನು ವಿಚಾರ ಅಂತೆಲ್ಲಾ ಕೇಳಿ ತಿಳ್ಕೊಂಡೆ. ನೆನ್ನೆ ರಾತ್ರಿ ಸುಮಾರು ೧೦.೦೦ ಘಂಟೆಗೆ ಅವರ ತಂದೆಗೆ ಅಪಘಾತವಾಗಿ ಕಾಲಿನ ೨ ಮೂಳೆ ಮುರಿದು, ತಲೆಗೆ ಪೆಟ್ಟುಬಿದ್ದು ಮೆದುಳಿನಲ್ಲಿ ರಕ್ತಸ್ರಾವವಾಗಿದೆ ಅನ್ನೋ ವಿಚಾರ ಕೇಳಿ ನನ್ನ ಎದೆ ಧಸಕ್ ಅಂತು. ಕಳೆದ ೫ ತಿಂಗಳ ಹಿಂದೆಯಷ್ಟೇ ನನ್ನ ತಂದೆಯನ್ನ ಕಳೆದುಕೊಂಡ ನಾನು ನನ್ನ ತಂದೆಯನ್ನ ನೆನಪುಮಾಡಿಕೊಂಡೆ.
ನಾನು ಎಲ್ಲಿಗೆ ಬರಬೇಕು ? ಎಷ್ಟು ಹೊತ್ತಿಗೆ ಬರಬೇಕು ಎಂಬ ವಿವರವನ್ನ ಪಡೆದುಕೊಂಡು ನಿತ್ಯಕರ್ಮಗಳನ್ನ ಮುಗಿಸಿ, ನೆನ್ನೆತಾನೆ ಸೀಮೇ ಬದನೆಯ ಸಿಪ್ಪೆ ತೆಗೆದಿಟ್ಟದ್ದರಲ್ಲಿ ಗಡಿಬಿಡಿಯಲ್ಲಿ ಚಟ್ನಿಮಾಡಿಟ್ಟು ಸ್ವಲ್ಪ ಅವಲಕ್ಕಿಯನ್ನ ತಿಂದು ಮನೆಗೆ ಬೀಗ ಹಾಕಿ ಮಣಿಪಾಲ್ ಆಸ್ಪತ್ರೆಯತ್ತ ಧಾವಿಸಿದೆ. ದಾರಿಯಲ್ಲೋ ನೂರಾರು ವಾಹನಗಳು.... ಅದರ ಸವಾರರು ತಮ್ಮದೇ ಲೋಕದಲ್ಲಿ ವಿಹರಿಸುತ್ತಾ, ಯೋಚನೆಯಲ್ಲಿ ಮುಳುಗಿ, ಕಿವಿಗೆ ಮೊಬೈಲನ್ನು ಸಿಕ್ಕಿಸಿಕೊಂಡು ದಾರಿಬಿಡದೇ ಹೋಗುತ್ತಿದ್ದರು. ಸಾಧ್ಯವಾದಷ್ಟು ಬೇಗ ಆಸ್ಪತ್ರೆಗೆ ತೆರಳಿ ರಕ್ತನೀಡಿ ಒಂದು ಜೀವವನ್ನ ಅಪಾಯದ ಅಂಚಿನಿಂದ ಪಾರುಮಾಡುವುದರಲ್ಲಿ ನೆರವು ನೀಡಬೇಕೆನ್ನುವುದು ನನ್ನ ತವಕ. ಆದರೆ ಆ ಮಹಾಜನಗಳು ನನ್ನ ದುಗುಡವನ್ನ ಎಲ್ಲಿ ತಿಳಿದಾರು. ಹಾಗೂ ಹೀಗೂ ಮಾಡಿ ಏರ್ಪೋರ್ಟ್ ರಸ್ತೆಯನ್ನ ತಲುಪಿದ ನನಗೆ ಸ್ವಾಗತಿಸಿದ್ದು ದೋಡ್ಡ ಟ್ರ್ಆಫಿಕ್ ಜ್ಯಾಮ್... ಚಕ್ರವ್ಯೂಹದೊಳು ನುಗ್ಗಿದಂತೆ ಅದರ ಮಧ್ಯೆ ಸಿಕ್ಕ ಸಿಕ್ಕ ಸಂದಿಗಳಲ್ಲಿ ನುಗ್ಗಿ ಅಂತೂ ಇಂತೂ ಆಸ್ಪತ್ರೆ ಸೇರಿದೆ.
ಹರೀಶನ ಅಣ್ಣ ಹೇಳಿದಂತೆ ನಾನು ರಕ್ತನಿಧಿಯನ್ನ ಹುಡುಕಿಕೊಂಡು ಹೊರಟೆ. ರಕ್ತನಿಧಿಯಲ್ಲಿ ಸ್ವಲ್ಪ ಹೊತ್ತು ಹರೀಶನೊಂದಿಗೆ ಕುಳಿತಿದ್ದು ಮಾತನಾಡಿದ ನಂತರ ನನ್ನ ರಕ್ತದಾನ ಮಾಡಲಿಕ್ಕೆ ಒಳಕ್ಕೆ ಹೋದೆ. ಮೊದಲು ಸ್ವಲ್ಪ ರಕ್ತವನ್ನ ಪರೀಕ್ಷೆಗೆ ತೆಗೆದುಕೊಂಡ ನಂತರ ಅದನ್ನ ಪರೀಕ್ಷೆ ಮಾಡಿ ನಂತರ ನನ್ನ ರಕ್ತವನ್ನ ಪಡೆಯಲಿಕ್ಕೆ ಪ್ರಾರಂಭಿಸಿದ್ರು. ಹಾಗೇ ಹಾಸಿಗೆ ಮೇಲೆ ಮಲಗಿದ್ದಾಗ ಮಾಡೋಕೆ ಬೇರೆ ಏನು ಕೆಲಸ !!! ಸುತ್ತ ಮುತ್ತ ಕಣ್ಣಾಡಿಸಿದೆ, ಒಂದು ಬರಹ ನನ್ನ ಆಕರ್ಷಿಸಿತು... ಅದರಲ್ಲಿದ್ದ ಅರ್ಥ ಈ ರೀತಿ ಇದೆ:
ನೇತ್ರದಾನ ಕೇವಲ ಒಮ್ಮೆ ಮಾತ್ರ,
ಮೂತ್ರಪಿಂಡದಾನ ಕೇವಲ ಒಮ್ಮೆ ಮಾತ್ರ,
ಹೃದಯದಾನ ಕೇವಲ ಒಮ್ಮೆ ಮಾತ್ರ,
ಆದರೆ ರಕ್ತದಾನ ನಿರಂತರ, ಜೀವ ಇರುವ ವರೆಗೆ...
ಎಷ್ಟು ಸತ್ಯದ ಮಾತಲ್ವ ??? ನಮ್ಮಲ್ಲಿ ಅನೇಕರು ರಕ್ತದಾನ ಮಾಡೋದಕ್ಕೆ ಹೆದರ್ತಾರೆ. ಹೋದ ರಕ್ತ ಮತ್ತೆ ಮರಳಿ ಬರುವುದಿಲ್ಲ ಅನ್ನುವ ಅಪನಂಬಿಕೆ ಅವರದ್ದು. ಆದರೆ ಸತ್ಯ ಎಂದರೆ ಕೇವಲ ೪೮ ಘಂಟೆಗಳಲ್ಲಿ ನಿಮ್ಮ ರಕ್ತವನ್ನ ನಿಮ್ಮ ದೇಹವು ಪಡೆದುಕೊಂಡಿರುತ್ತದೆ. ಹಾಗಾದಮೇಲೆ ನಾವು ಯಾಕೆ ರಕ್ತವನ್ನ ಅವಶ್ಯಕತೆ ಇರುವವರಿಗೆ ದಾನ ಮಾಡಿ ಒಂದು ಜೀವವನ್ನು ಉಳಿಸಬಾರದು ??? ನಾನು ನನ್ನ ೧೮ನೇ ವಯಸ್ಸಿನಿಂದ ನಿರಂತರವಾಗಿ ರಕ್ತವನ್ನ ದಾನ ಮಾಡುತ್ತಾ ಬರುತ್ತಿದ್ದೇನೆ. ನನಗೆ ಯಾವ ತೊಂದರೆಯೂ ಆಗಿಲ್ಲ... ಆರೋಗ್ಯದಿಂದ ಆರಾಮವಾಗಿದ್ದೇನೆ. ಇವತ್ತಿನ ದಿನ ನಾವು ಚೆನ್ನಾಗಿ ಆರೋಗ್ಯದಿಂದ ಇರಬಹುದು, ನಾಳೆ ನಮಗೇ ಏನಾದರೂ ಆದರೆ ??? ಈಗ ಅದೆಲ್ಲಾ ಬೇಡ ಅಲ್ವಾ ??? ಒಟ್ಟಿನಲ್ಲಿ ನಾ ಕೊಟ್ಟ ರಕ್ತದಿಂದ ಒಬ್ಬ ವ್ಯಕ್ತಿ ಅಪಾಯದಿಂದ ಪಾರಾಗಿ ಗುಣಮುಖನಾದರೆ ನನಗೆ ಅದೇ ಸಂತೋಷ...
ನಿಮ್ಮೆಲ್ಲರಲ್ಲಿ ನನ್ನದೊಂದು ಸಣ್ಣ ಕೋರಿಕೆ PLEASE DONATE BLOOD TO SAVE LIFE....
ನಾನು ಎಲ್ಲಿಗೆ ಬರಬೇಕು ? ಎಷ್ಟು ಹೊತ್ತಿಗೆ ಬರಬೇಕು ಎಂಬ ವಿವರವನ್ನ ಪಡೆದುಕೊಂಡು ನಿತ್ಯಕರ್ಮಗಳನ್ನ ಮುಗಿಸಿ, ನೆನ್ನೆತಾನೆ ಸೀಮೇ ಬದನೆಯ ಸಿಪ್ಪೆ ತೆಗೆದಿಟ್ಟದ್ದರಲ್ಲಿ ಗಡಿಬಿಡಿಯಲ್ಲಿ ಚಟ್ನಿಮಾಡಿಟ್ಟು ಸ್ವಲ್ಪ ಅವಲಕ್ಕಿಯನ್ನ ತಿಂದು ಮನೆಗೆ ಬೀಗ ಹಾಕಿ ಮಣಿಪಾಲ್ ಆಸ್ಪತ್ರೆಯತ್ತ ಧಾವಿಸಿದೆ. ದಾರಿಯಲ್ಲೋ ನೂರಾರು ವಾಹನಗಳು.... ಅದರ ಸವಾರರು ತಮ್ಮದೇ ಲೋಕದಲ್ಲಿ ವಿಹರಿಸುತ್ತಾ, ಯೋಚನೆಯಲ್ಲಿ ಮುಳುಗಿ, ಕಿವಿಗೆ ಮೊಬೈಲನ್ನು ಸಿಕ್ಕಿಸಿಕೊಂಡು ದಾರಿಬಿಡದೇ ಹೋಗುತ್ತಿದ್ದರು. ಸಾಧ್ಯವಾದಷ್ಟು ಬೇಗ ಆಸ್ಪತ್ರೆಗೆ ತೆರಳಿ ರಕ್ತನೀಡಿ ಒಂದು ಜೀವವನ್ನ ಅಪಾಯದ ಅಂಚಿನಿಂದ ಪಾರುಮಾಡುವುದರಲ್ಲಿ ನೆರವು ನೀಡಬೇಕೆನ್ನುವುದು ನನ್ನ ತವಕ. ಆದರೆ ಆ ಮಹಾಜನಗಳು ನನ್ನ ದುಗುಡವನ್ನ ಎಲ್ಲಿ ತಿಳಿದಾರು. ಹಾಗೂ ಹೀಗೂ ಮಾಡಿ ಏರ್ಪೋರ್ಟ್ ರಸ್ತೆಯನ್ನ ತಲುಪಿದ ನನಗೆ ಸ್ವಾಗತಿಸಿದ್ದು ದೋಡ್ಡ ಟ್ರ್ಆಫಿಕ್ ಜ್ಯಾಮ್... ಚಕ್ರವ್ಯೂಹದೊಳು ನುಗ್ಗಿದಂತೆ ಅದರ ಮಧ್ಯೆ ಸಿಕ್ಕ ಸಿಕ್ಕ ಸಂದಿಗಳಲ್ಲಿ ನುಗ್ಗಿ ಅಂತೂ ಇಂತೂ ಆಸ್ಪತ್ರೆ ಸೇರಿದೆ.
ಹರೀಶನ ಅಣ್ಣ ಹೇಳಿದಂತೆ ನಾನು ರಕ್ತನಿಧಿಯನ್ನ ಹುಡುಕಿಕೊಂಡು ಹೊರಟೆ. ರಕ್ತನಿಧಿಯಲ್ಲಿ ಸ್ವಲ್ಪ ಹೊತ್ತು ಹರೀಶನೊಂದಿಗೆ ಕುಳಿತಿದ್ದು ಮಾತನಾಡಿದ ನಂತರ ನನ್ನ ರಕ್ತದಾನ ಮಾಡಲಿಕ್ಕೆ ಒಳಕ್ಕೆ ಹೋದೆ. ಮೊದಲು ಸ್ವಲ್ಪ ರಕ್ತವನ್ನ ಪರೀಕ್ಷೆಗೆ ತೆಗೆದುಕೊಂಡ ನಂತರ ಅದನ್ನ ಪರೀಕ್ಷೆ ಮಾಡಿ ನಂತರ ನನ್ನ ರಕ್ತವನ್ನ ಪಡೆಯಲಿಕ್ಕೆ ಪ್ರಾರಂಭಿಸಿದ್ರು. ಹಾಗೇ ಹಾಸಿಗೆ ಮೇಲೆ ಮಲಗಿದ್ದಾಗ ಮಾಡೋಕೆ ಬೇರೆ ಏನು ಕೆಲಸ !!! ಸುತ್ತ ಮುತ್ತ ಕಣ್ಣಾಡಿಸಿದೆ, ಒಂದು ಬರಹ ನನ್ನ ಆಕರ್ಷಿಸಿತು... ಅದರಲ್ಲಿದ್ದ ಅರ್ಥ ಈ ರೀತಿ ಇದೆ:
ನೇತ್ರದಾನ ಕೇವಲ ಒಮ್ಮೆ ಮಾತ್ರ,
ಮೂತ್ರಪಿಂಡದಾನ ಕೇವಲ ಒಮ್ಮೆ ಮಾತ್ರ,
ಹೃದಯದಾನ ಕೇವಲ ಒಮ್ಮೆ ಮಾತ್ರ,
ಆದರೆ ರಕ್ತದಾನ ನಿರಂತರ, ಜೀವ ಇರುವ ವರೆಗೆ...
ಎಷ್ಟು ಸತ್ಯದ ಮಾತಲ್ವ ??? ನಮ್ಮಲ್ಲಿ ಅನೇಕರು ರಕ್ತದಾನ ಮಾಡೋದಕ್ಕೆ ಹೆದರ್ತಾರೆ. ಹೋದ ರಕ್ತ ಮತ್ತೆ ಮರಳಿ ಬರುವುದಿಲ್ಲ ಅನ್ನುವ ಅಪನಂಬಿಕೆ ಅವರದ್ದು. ಆದರೆ ಸತ್ಯ ಎಂದರೆ ಕೇವಲ ೪೮ ಘಂಟೆಗಳಲ್ಲಿ ನಿಮ್ಮ ರಕ್ತವನ್ನ ನಿಮ್ಮ ದೇಹವು ಪಡೆದುಕೊಂಡಿರುತ್ತದೆ. ಹಾಗಾದಮೇಲೆ ನಾವು ಯಾಕೆ ರಕ್ತವನ್ನ ಅವಶ್ಯಕತೆ ಇರುವವರಿಗೆ ದಾನ ಮಾಡಿ ಒಂದು ಜೀವವನ್ನು ಉಳಿಸಬಾರದು ??? ನಾನು ನನ್ನ ೧೮ನೇ ವಯಸ್ಸಿನಿಂದ ನಿರಂತರವಾಗಿ ರಕ್ತವನ್ನ ದಾನ ಮಾಡುತ್ತಾ ಬರುತ್ತಿದ್ದೇನೆ. ನನಗೆ ಯಾವ ತೊಂದರೆಯೂ ಆಗಿಲ್ಲ... ಆರೋಗ್ಯದಿಂದ ಆರಾಮವಾಗಿದ್ದೇನೆ. ಇವತ್ತಿನ ದಿನ ನಾವು ಚೆನ್ನಾಗಿ ಆರೋಗ್ಯದಿಂದ ಇರಬಹುದು, ನಾಳೆ ನಮಗೇ ಏನಾದರೂ ಆದರೆ ??? ಈಗ ಅದೆಲ್ಲಾ ಬೇಡ ಅಲ್ವಾ ??? ಒಟ್ಟಿನಲ್ಲಿ ನಾ ಕೊಟ್ಟ ರಕ್ತದಿಂದ ಒಬ್ಬ ವ್ಯಕ್ತಿ ಅಪಾಯದಿಂದ ಪಾರಾಗಿ ಗುಣಮುಖನಾದರೆ ನನಗೆ ಅದೇ ಸಂತೋಷ...
ನಿಮ್ಮೆಲ್ಲರಲ್ಲಿ ನನ್ನದೊಂದು ಸಣ್ಣ ಕೋರಿಕೆ PLEASE DONATE BLOOD TO SAVE LIFE....
Tuesday, June 10, 2008
ನೆನಪು...
ನೆನಪು
ಅಪ್ಪ ಹೋದಾಗಿನಿಂದ ನನ್ನ ಮನಸ್ಸಿಗೆ ಸಮಾಧಾನ ಸಿಕ್ಕುತ್ತಿಲ್ಲ. ನಾನು ಅಪ್ಪನೊಂದಿಗೆ ಕಳೆದ ಪ್ರತೀ ಕ್ಷಣ ನನ್ನ ಕಣ್ಮುಂದೆ ಹಾದು ಬರುತ್ತವೆ, ನನ್ನನ್ನು ಕೂಗಿ ಕರೆಯುತ್ತವೆ. ನಾನು ಇನ್ನೇನು ಆ ಕ್ಷಣವನ್ನ ಹಿಡಿದು ಅದರೊಡನೆ ಬೆರೆಯಬೇಕೆನಿಸುವಷ್ಟರಲ್ಲಿ ವಿಕ್ರಮನ ಕೈಗೆ ಸಿಕ್ಕದ ಬೇತಾಳದಂತೆ ಮತ್ತೆಲ್ಲೋ ಮರೆಯಾಗಿ ಹುದುಗಿಬಿಡುತ್ತದೆ. ಪ್ರತೀದಿನ ಪ್ರತೀಕ್ಷಣ ನಾನು ಜೀವನದಲ್ಲಿ ಒಂಟಿ ಪಯಣಿಗ ಎನ್ನುವ ಸತ್ಯವನ್ನ ಕಣ್ಮುಂದೆ ತೋರುತ್ತದೆ.
ಅಪ್ಪನ ನೆನಪಾದಾಗಲೆಲ್ಲಾ ನಾನು ಅವರೊಡನೆ ಕಳೆದ ಕೆಲವು ಘಟನೆಗಳ ದ್ರುಶ್ಯಾವಳಿಗಳು ಪದೇ ಪದೇ ಕಾಣುತ್ತವೆ. ವಾರಾಂತ್ಯದಲ್ಲಿ ಬಿಡುವಿದ್ದಾಗ ಮನೆಗೆ ಹೋಗಿ ಮನೆಯ ಹೊಸ್ತಿಲು ತುಳಿಯುತ್ತಿದ್ದಂತೆಯೇ ತಮಾಷೆಯಾಗಿ "ಏನ್ ಬುದ್ದೀ ಹೇಗಿದ್ದೀರಾ !!!, ಮನೆ ಕಡೆ ಮಳೆ ಬೆಳೆ ಎಲ್ಲಾ ಚೆನ್ನಾಗಿ ಆಗ್ತಾ ಐತೋ ??? " ಎಂದೆಲ್ಲಾ ಮಾತನಾಡಿದ್ದು ನೆನಪಿಗೆಬರುತ್ತದೆ.
"ಅಪ್ಪಾ, ನಾನು ಬಂದ್ಮೇಲೆ ನಿಮ್ಗೆ ಟಿವಿ ಸಿಕ್ಕೊದಿಲ್ಲ, ಒಂದು ದಿನ ಅಡ್ಜಸ್ಟ್ ಮಾಡ್ಕೊಳಿ ಆಯ್ತಾ ??" ಹೀಗೆ ಹೇಳಿದಾಗ ಅಪ್ಪ, "ಪರ್ವಾಗಿಲ್ಲ ಬಿಡೋ, ನಾನೇನು ನೋಡೋದಿಲ್ಲ, ಎಲ್ಲಾ ನಿಮ್ ಅಮ್ಮನೇ ನೋಡೋದು... ನೀನು ಏನ್ ಬೇಕಾದ್ರೂ ಹಾಕ್ಕೊ. ಹೇಗಿದ್ರೂ ನೀನು ಅಲ್ಲಿ ಅಂತೂ ನೋಡೋದಿಲ್ಲ" ಅಂತ ಹೇಳಿ ಒಂದು ಕಿರುನಗೆ ನಕ್ಕು ತಾವೂ ನನ್ನಜೊತೆಯಲ್ಲಿ ಕುಳಿತು ಹಿಂದಿ ಸಿನಿಮಾದ ಸಿಡಿಯನ್ನ ನೋಡುತ್ತಲಿದ್ದರು. "ಅಪ್ಪಾ !!! ಕನ್ನಡಕ ಹಳೇದಾಗಿದೆ, ಅದೂ ಅಲ್ದೇ ಗಾಜಿನ ಕನ್ನಡಕ ಅಪ್ಪಾ, ಇದು ಬೇಡ, ಪ್ಲಾಸ್ಟಿಕ್ ದು ಮಾಡಿಸ್ಕೊಳಿ, ಅದು ಭಾರ ಕಮ್ಮಿ ಇರತ್ತೆ ಅಂತ ಹೇಳಿದ್ರೆ, ಅಯ್ಯೋ ಬಿಡೋ ಪರ್ವಾಗಿಲ್ಲ, ಇದ್ದರೆ ಇನ್ನೆಷ್ಟುದಿನಾ ಅಂತ ಇರ್ತೀನಿ, ಇವತ್ತು ಇದ್ದು ನಾಳೆ ಹೋಗೋ ಶರೀರ !!! ಅದಕ್ಕೆ ಹೊಸಾ ಕನ್ನಡಕ ಅಂತ ದುಡ್ಡು ಖರ್ಚುಮಾಡಬೇಡ, ಅದನ್ನೇ ಕೂಡಿಡು... ಮುಂದೆ ನಿನ್ನ ಮದುವೇ ಆದಮೇಲೆ ಬೇಕಾಗತ್ತೆ" ಅಂತೆಲ್ಲಾ ಹೇಳ್ತಾ ಇದ್ರು.
"ನಾಳೆ ನಿನಗೆ ಪುರುಸೊತ್ತಾದಾಗ ತೆಂಗಿನ ಕಾಯಿ ಕುಯ್ಯೋಣ, ಟೈಮ್ ಇಲ್ಲಾ ಅಂದ್ರೆ ಬೇಡ". ನೆಕ್ಸ್ಟ್ ಟೈಮ್ ತೆಗೆದ್ರಾಯ್ತು ಅಂತ ಹೇಳಿದಾಗ ನಾನು ಸಾಧ್ಯವಾದಷ್ಟೂ ನನ್ನ ಎಲ್ಲಾಕೆಲಸಗಳನ್ನ ಬಿಟ್ಟು ಹೋಗಿ ತೆಂಗಿನ ಕಾಯಿ ಕುಯ್ದು ಕೊಡುತ್ತಿದ್ದೆ. ಕಾಯಿ ತೆಗೆಯುವಾಗಲೂ ಅಪ್ಪ ಕೆಳಗೆ ನಿಂತು ನನಗೆ ಮಾರ್ಗದರ್ಶನ ನೀಡ್ತಾಇದ್ರು. "ಅದುಬೇಡ, ಅದರ ಪಕ್ಕದ್ದ್ನ ತೆಗಿ, ಸ್ವಲ್ಪ ತಡಿ ಯಾರೂ ಬರ್ತಾ ಇದಾರೆ, ಇಗ ತೆಗೀಬಹುದು, ಆ ಕಾಯಿ ಬೇಡ ಅದು ಇನ್ನೂ ಎಳೆಸು. ಅದರ ಪಕ್ಕದ್ದನ್ನ ತೆಗಿ" ಅಂತೆಲ್ಲಾ ಹೇಳಿದಮೇಲೆ ನಾನು ಕಾಯಿ ಕೆಡವಿದ ನಂತರ ಅದನ್ನೆಲ್ಲಾ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಈ ಸಾರಿ ಏಷ್ಟು ಕಾಯಿ ಕಿತ್ತಿದ್ದು ಅಂತ ಎಣಿಕೆ ಮಾಡ್ತಾ ಇದ್ರು. ಸ್ವಾಭಿಮಾನಿಯಾದ ಅಪ್ಪ ಕಾಯಿ ಕಿತ್ತಾದಮೇಲೆ ತಾವೇ ಆ ಚೀಲವನ್ನ ಮಹಡಿಯ ಮೇಲೆ ಇಡಲು ಅದನ್ನ ಹೊತ್ತುಕೊಂಡು ಹೋಗುತ್ತಿದ್ದರು, ಆದರೆ ನಾನು ಅದಕ್ಕೆ ಅವಕಾಶ ನೀಡುತ್ತಿರಲಿಲ್ಲ. "ಬಿಡೋ ಪರ್ವಾಗಿಲ್ಲ, ನೀನು ಕಾಯಿ ಕಿತ್ತು ಸುಸ್ತಾಗಿರ್ತೀಯ. ಸ್ವಲ್ಪ ಸುಧಾರಿಸ್ಕೋ... ಕಣ್ಣಿಗೆ ಧೂಳು ಬಿತ್ತಾ !!! ಸ್ವಲ್ಪ ನೀರು ಹಾಕಿ ತೊಳ್ಕೊ !!!" ಎಂದೆಲ್ಲಾ ಬರೀ ನನ್ನಬಗ್ಗೆ ಕಾಳಜಿವಹಿಸುತ್ತಿದ್ದರೇ ಹೊರತು ಅವರ ಬಗೆಗೆ ಕಾಳಜಿ ವಹಿಸಿದ್ದು ಕಡಿಮೆಯೇ.
ಕಾಯಿಕಿತ್ತಾದಮೇಲೆ ಒಣಗಿರುವ ತೆಂಗಿನ ಗರಿಗಳೂ ಬೀಳುತ್ತಿದ್ದವು, ಅದನ್ನ ಕತ್ತಿ ಹಿಡಿದು ತುಂಡು ತುಂಡುಮಾಡಿ ಬಿಸಿಲಿಗೆ ಹಾಕದಿದ್ದರೆ ಅಪ್ಪನಿಗೆ ಸಮಾಧಾನ ಸಿಕ್ಕುತ್ತಿರಲಿಲ್ಲ. ಸಾಧ್ಯವಾದಷ್ಟೂ ನಾನು ಅದಕ್ಕೆ ಅವಕಾಶ ನೀಡದ ಕಾರಣ, ನಾನು ಅಲ್ಲಿ ಇರದಿದ್ದಾಗ ಆ ಕೆಲಸಕ್ಕೆ ಕೈ ಹಾಕುತ್ತಿದ್ದರು.
ಮೊನ್ನೆತಾನೆ ನಮ್ಮ ಮನೆಯಲ್ಲಿ ನಾನು ಮತ್ತೆ ನನ್ನ ಅಕ್ಕ ಸೇರಿ ಕಾಯಿಗಳನ್ನ ತೆಗೆಯುತ್ತಿದ್ದಾಗ ನನಗರಿವಿಲ್ಲದೇ ಅಪ್ಪಾ !!! ಅಂತ ಬಾಯಿಯಿಂದ ಸ್ವರ ಹೊರಬಂದು ತಕ್ಷಣ ಅವರಲ್ಲಿ ಇಲ್ಲವೆಂದು ಅರಿವಾಯಿತು. ಕಣ್ಣಿನಿಂದ ಅವರ ನೆನಪಬಿಂದುಗಳು ಹರಿದುಬಂದವು. ಕೆಳಗಿದ್ದ ಅಕ್ಕ "ಏನಾಯ್ತೋ ?" ಅಂತ ಕೇಳಿದ್ದಕ್ಕೆ "ಏನಿಲ್ವೇ, ಧೂಳು ಕಣ್ಣಿಗೆ ಬಿತ್ತು..." ಅಂತ ಸುಳ್ಳು ಹೇಳಿದ್ದು ಅವಳ ಅರಿವಿಗೂ ಬಂದಿತ್ತು. "ಆ ಕಾಯಿ ಬೇಡ ಅದು ಇನ್ನೂ ಎಳೆಸು. ಅದರ ಪಕ್ಕದ್ದನ್ನ ತೆಗಿ" ಅಂತ ಹೇಳಲು ಅಲ್ಲಿ ಅಪ್ಪ ಇರಲಿಲ್ಲ...
ಅಪ್ಪ ನನ್ನೊಡನೆ ಇಲ್ಲದಿದ್ದರೂ ಅವರು ಕಲಿಸಿರುವ ಸ್ವಾಭಿಮಾನ, ಆತ್ಮಾಭಿಮಾನ ಅವರೊಡನೆ ಕಳೆದ ಮಧುರ ವಾತ್ಸಲ್ಯಭರಿತ ಕ್ಷಣಗಳು ನನ್ನೊಂದಿಗಿದ್ದಾವೆ. ಅವರು ಸ್ವರ್ಗಸ್ಥರಾದ ೫ ತಿಂಗಳುಗಳ ನಂತರವೂ ನಾನು ಮನೆಗೆ ಹೋದಾಗ ನನಗರಿವಿಲ್ಲದಂತೆ ಮನಸ್ಸಿನಿಂದ ಮಾತು ಹೊರಡುತ್ತದೆ... "ಏನ್ ಬುದ್ದೀ, ಹೇಗಿದ್ದೀರಾ !!!"
ಅಪ್ಪ ಹೋದಾಗಿನಿಂದ ನನ್ನ ಮನಸ್ಸಿಗೆ ಸಮಾಧಾನ ಸಿಕ್ಕುತ್ತಿಲ್ಲ. ನಾನು ಅಪ್ಪನೊಂದಿಗೆ ಕಳೆದ ಪ್ರತೀ ಕ್ಷಣ ನನ್ನ ಕಣ್ಮುಂದೆ ಹಾದು ಬರುತ್ತವೆ, ನನ್ನನ್ನು ಕೂಗಿ ಕರೆಯುತ್ತವೆ. ನಾನು ಇನ್ನೇನು ಆ ಕ್ಷಣವನ್ನ ಹಿಡಿದು ಅದರೊಡನೆ ಬೆರೆಯಬೇಕೆನಿಸುವಷ್ಟರಲ್ಲಿ ವಿಕ್ರಮನ ಕೈಗೆ ಸಿಕ್ಕದ ಬೇತಾಳದಂತೆ ಮತ್ತೆಲ್ಲೋ ಮರೆಯಾಗಿ ಹುದುಗಿಬಿಡುತ್ತದೆ. ಪ್ರತೀದಿನ ಪ್ರತೀಕ್ಷಣ ನಾನು ಜೀವನದಲ್ಲಿ ಒಂಟಿ ಪಯಣಿಗ ಎನ್ನುವ ಸತ್ಯವನ್ನ ಕಣ್ಮುಂದೆ ತೋರುತ್ತದೆ.
ಅಪ್ಪನ ನೆನಪಾದಾಗಲೆಲ್ಲಾ ನಾನು ಅವರೊಡನೆ ಕಳೆದ ಕೆಲವು ಘಟನೆಗಳ ದ್ರುಶ್ಯಾವಳಿಗಳು ಪದೇ ಪದೇ ಕಾಣುತ್ತವೆ. ವಾರಾಂತ್ಯದಲ್ಲಿ ಬಿಡುವಿದ್ದಾಗ ಮನೆಗೆ ಹೋಗಿ ಮನೆಯ ಹೊಸ್ತಿಲು ತುಳಿಯುತ್ತಿದ್ದಂತೆಯೇ ತಮಾಷೆಯಾಗಿ "ಏನ್ ಬುದ್ದೀ ಹೇಗಿದ್ದೀರಾ !!!, ಮನೆ ಕಡೆ ಮಳೆ ಬೆಳೆ ಎಲ್ಲಾ ಚೆನ್ನಾಗಿ ಆಗ್ತಾ ಐತೋ ??? " ಎಂದೆಲ್ಲಾ ಮಾತನಾಡಿದ್ದು ನೆನಪಿಗೆಬರುತ್ತದೆ.
"ಅಪ್ಪಾ, ನಾನು ಬಂದ್ಮೇಲೆ ನಿಮ್ಗೆ ಟಿವಿ ಸಿಕ್ಕೊದಿಲ್ಲ, ಒಂದು ದಿನ ಅಡ್ಜಸ್ಟ್ ಮಾಡ್ಕೊಳಿ ಆಯ್ತಾ ??" ಹೀಗೆ ಹೇಳಿದಾಗ ಅಪ್ಪ, "ಪರ್ವಾಗಿಲ್ಲ ಬಿಡೋ, ನಾನೇನು ನೋಡೋದಿಲ್ಲ, ಎಲ್ಲಾ ನಿಮ್ ಅಮ್ಮನೇ ನೋಡೋದು... ನೀನು ಏನ್ ಬೇಕಾದ್ರೂ ಹಾಕ್ಕೊ. ಹೇಗಿದ್ರೂ ನೀನು ಅಲ್ಲಿ ಅಂತೂ ನೋಡೋದಿಲ್ಲ" ಅಂತ ಹೇಳಿ ಒಂದು ಕಿರುನಗೆ ನಕ್ಕು ತಾವೂ ನನ್ನಜೊತೆಯಲ್ಲಿ ಕುಳಿತು ಹಿಂದಿ ಸಿನಿಮಾದ ಸಿಡಿಯನ್ನ ನೋಡುತ್ತಲಿದ್ದರು. "ಅಪ್ಪಾ !!! ಕನ್ನಡಕ ಹಳೇದಾಗಿದೆ, ಅದೂ ಅಲ್ದೇ ಗಾಜಿನ ಕನ್ನಡಕ ಅಪ್ಪಾ, ಇದು ಬೇಡ, ಪ್ಲಾಸ್ಟಿಕ್ ದು ಮಾಡಿಸ್ಕೊಳಿ, ಅದು ಭಾರ ಕಮ್ಮಿ ಇರತ್ತೆ ಅಂತ ಹೇಳಿದ್ರೆ, ಅಯ್ಯೋ ಬಿಡೋ ಪರ್ವಾಗಿಲ್ಲ, ಇದ್ದರೆ ಇನ್ನೆಷ್ಟುದಿನಾ ಅಂತ ಇರ್ತೀನಿ, ಇವತ್ತು ಇದ್ದು ನಾಳೆ ಹೋಗೋ ಶರೀರ !!! ಅದಕ್ಕೆ ಹೊಸಾ ಕನ್ನಡಕ ಅಂತ ದುಡ್ಡು ಖರ್ಚುಮಾಡಬೇಡ, ಅದನ್ನೇ ಕೂಡಿಡು... ಮುಂದೆ ನಿನ್ನ ಮದುವೇ ಆದಮೇಲೆ ಬೇಕಾಗತ್ತೆ" ಅಂತೆಲ್ಲಾ ಹೇಳ್ತಾ ಇದ್ರು.
"ನಾಳೆ ನಿನಗೆ ಪುರುಸೊತ್ತಾದಾಗ ತೆಂಗಿನ ಕಾಯಿ ಕುಯ್ಯೋಣ, ಟೈಮ್ ಇಲ್ಲಾ ಅಂದ್ರೆ ಬೇಡ". ನೆಕ್ಸ್ಟ್ ಟೈಮ್ ತೆಗೆದ್ರಾಯ್ತು ಅಂತ ಹೇಳಿದಾಗ ನಾನು ಸಾಧ್ಯವಾದಷ್ಟೂ ನನ್ನ ಎಲ್ಲಾಕೆಲಸಗಳನ್ನ ಬಿಟ್ಟು ಹೋಗಿ ತೆಂಗಿನ ಕಾಯಿ ಕುಯ್ದು ಕೊಡುತ್ತಿದ್ದೆ. ಕಾಯಿ ತೆಗೆಯುವಾಗಲೂ ಅಪ್ಪ ಕೆಳಗೆ ನಿಂತು ನನಗೆ ಮಾರ್ಗದರ್ಶನ ನೀಡ್ತಾಇದ್ರು. "ಅದುಬೇಡ, ಅದರ ಪಕ್ಕದ್ದ್ನ ತೆಗಿ, ಸ್ವಲ್ಪ ತಡಿ ಯಾರೂ ಬರ್ತಾ ಇದಾರೆ, ಇಗ ತೆಗೀಬಹುದು, ಆ ಕಾಯಿ ಬೇಡ ಅದು ಇನ್ನೂ ಎಳೆಸು. ಅದರ ಪಕ್ಕದ್ದನ್ನ ತೆಗಿ" ಅಂತೆಲ್ಲಾ ಹೇಳಿದಮೇಲೆ ನಾನು ಕಾಯಿ ಕೆಡವಿದ ನಂತರ ಅದನ್ನೆಲ್ಲಾ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಈ ಸಾರಿ ಏಷ್ಟು ಕಾಯಿ ಕಿತ್ತಿದ್ದು ಅಂತ ಎಣಿಕೆ ಮಾಡ್ತಾ ಇದ್ರು. ಸ್ವಾಭಿಮಾನಿಯಾದ ಅಪ್ಪ ಕಾಯಿ ಕಿತ್ತಾದಮೇಲೆ ತಾವೇ ಆ ಚೀಲವನ್ನ ಮಹಡಿಯ ಮೇಲೆ ಇಡಲು ಅದನ್ನ ಹೊತ್ತುಕೊಂಡು ಹೋಗುತ್ತಿದ್ದರು, ಆದರೆ ನಾನು ಅದಕ್ಕೆ ಅವಕಾಶ ನೀಡುತ್ತಿರಲಿಲ್ಲ. "ಬಿಡೋ ಪರ್ವಾಗಿಲ್ಲ, ನೀನು ಕಾಯಿ ಕಿತ್ತು ಸುಸ್ತಾಗಿರ್ತೀಯ. ಸ್ವಲ್ಪ ಸುಧಾರಿಸ್ಕೋ... ಕಣ್ಣಿಗೆ ಧೂಳು ಬಿತ್ತಾ !!! ಸ್ವಲ್ಪ ನೀರು ಹಾಕಿ ತೊಳ್ಕೊ !!!" ಎಂದೆಲ್ಲಾ ಬರೀ ನನ್ನಬಗ್ಗೆ ಕಾಳಜಿವಹಿಸುತ್ತಿದ್ದರೇ ಹೊರತು ಅವರ ಬಗೆಗೆ ಕಾಳಜಿ ವಹಿಸಿದ್ದು ಕಡಿಮೆಯೇ.
ಕಾಯಿಕಿತ್ತಾದಮೇಲೆ ಒಣಗಿರುವ ತೆಂಗಿನ ಗರಿಗಳೂ ಬೀಳುತ್ತಿದ್ದವು, ಅದನ್ನ ಕತ್ತಿ ಹಿಡಿದು ತುಂಡು ತುಂಡುಮಾಡಿ ಬಿಸಿಲಿಗೆ ಹಾಕದಿದ್ದರೆ ಅಪ್ಪನಿಗೆ ಸಮಾಧಾನ ಸಿಕ್ಕುತ್ತಿರಲಿಲ್ಲ. ಸಾಧ್ಯವಾದಷ್ಟೂ ನಾನು ಅದಕ್ಕೆ ಅವಕಾಶ ನೀಡದ ಕಾರಣ, ನಾನು ಅಲ್ಲಿ ಇರದಿದ್ದಾಗ ಆ ಕೆಲಸಕ್ಕೆ ಕೈ ಹಾಕುತ್ತಿದ್ದರು.
ಮೊನ್ನೆತಾನೆ ನಮ್ಮ ಮನೆಯಲ್ಲಿ ನಾನು ಮತ್ತೆ ನನ್ನ ಅಕ್ಕ ಸೇರಿ ಕಾಯಿಗಳನ್ನ ತೆಗೆಯುತ್ತಿದ್ದಾಗ ನನಗರಿವಿಲ್ಲದೇ ಅಪ್ಪಾ !!! ಅಂತ ಬಾಯಿಯಿಂದ ಸ್ವರ ಹೊರಬಂದು ತಕ್ಷಣ ಅವರಲ್ಲಿ ಇಲ್ಲವೆಂದು ಅರಿವಾಯಿತು. ಕಣ್ಣಿನಿಂದ ಅವರ ನೆನಪಬಿಂದುಗಳು ಹರಿದುಬಂದವು. ಕೆಳಗಿದ್ದ ಅಕ್ಕ "ಏನಾಯ್ತೋ ?" ಅಂತ ಕೇಳಿದ್ದಕ್ಕೆ "ಏನಿಲ್ವೇ, ಧೂಳು ಕಣ್ಣಿಗೆ ಬಿತ್ತು..." ಅಂತ ಸುಳ್ಳು ಹೇಳಿದ್ದು ಅವಳ ಅರಿವಿಗೂ ಬಂದಿತ್ತು. "ಆ ಕಾಯಿ ಬೇಡ ಅದು ಇನ್ನೂ ಎಳೆಸು. ಅದರ ಪಕ್ಕದ್ದನ್ನ ತೆಗಿ" ಅಂತ ಹೇಳಲು ಅಲ್ಲಿ ಅಪ್ಪ ಇರಲಿಲ್ಲ...
ಅಪ್ಪ ನನ್ನೊಡನೆ ಇಲ್ಲದಿದ್ದರೂ ಅವರು ಕಲಿಸಿರುವ ಸ್ವಾಭಿಮಾನ, ಆತ್ಮಾಭಿಮಾನ ಅವರೊಡನೆ ಕಳೆದ ಮಧುರ ವಾತ್ಸಲ್ಯಭರಿತ ಕ್ಷಣಗಳು ನನ್ನೊಂದಿಗಿದ್ದಾವೆ. ಅವರು ಸ್ವರ್ಗಸ್ಥರಾದ ೫ ತಿಂಗಳುಗಳ ನಂತರವೂ ನಾನು ಮನೆಗೆ ಹೋದಾಗ ನನಗರಿವಿಲ್ಲದಂತೆ ಮನಸ್ಸಿನಿಂದ ಮಾತು ಹೊರಡುತ್ತದೆ... "ಏನ್ ಬುದ್ದೀ, ಹೇಗಿದ್ದೀರಾ !!!"
Thursday, June 5, 2008
ಹೈದರಾಬಾದಿನ ದಿನಗಳು....
ಹೈದರಾಬಾದಿನ ಆಫೀಸಿನಲ್ಲಿ ಜಾಸ್ತಿಏನೂ ಕೆಲಸ ಇಲ್ಲದೇ ಇದ್ದಿದ್ರಿಂದ ನಾನು ಅಂತರ್ಜಾಲದಲ್ಲಿ ನನ್ನ ಗೆಳೆಯರಜೊತೆ ಮಾತಾಡೊ ಅಭ್ಯಾಸ ಇತ್ತು. ಹಾಗೇ ನನಗೆ ತುಂಬಾಜನ ಗೆಳೆಯರಾದ್ರು. ನನ್ನ ನಿಜಜೀವನದಲ್ಲಿ ಪಡಿದೇಇರೋ ತಮ್ಮ, ತಂಗಿಯರ ಪ್ರೀತಿ ಇಲ್ಲಿಂದ ಪಡ್ಕೊಂಡೆ. ಇಷ್ಟರ ಮಧ್ಯದಲ್ಲಿ ವಿಜಯ್ ನನ್ಗೆ ತುಂಬಾ ಆಪ್ತನಾದ. ದಿನಾ ಅಲ್ದಿದ್ದ್ರೂ ವಾರಂತ್ಯದಲ್ಲಿ ಅವನ ಪುಟ್ಟ ಗೂಡಿಗೆ ಹೂಗಿ ಬರ್ತಾ ಇದ್ದೆ. ಹಾಗೆ ನಮ್ಮ ಸ್ನೇಹ ಗಾಡವಾಯ್ತು... ಶಿಲ್ಪಾ ಕೂಡಾ ಕನ್ನಡದವಳು. ಸ್ನೇಹಕ್ಕೆ ಬೆಲೆ ಕೊಡೋ ಹುಡುಗಿ. ನಮ್ಮ ಆಫೀಸ್ ಹತ್ತಿರದಲ್ಲೇ ಇತ್ತು. ಹಾಗಾಗಿ ಒಮೊಮ್ಮೆ ಹರಟೆ ಹೊಡಿಯೊದಿಕ್ಕೆ ಭೇಟಿಯಾಗ್ತಾ ಇರ್ತಿದ್ವಿ. ನಾನು ವಿಜಯ್ ಶಿಲ್ಪ... ಮೂರೂಜನ ತುಂಬಾನೇ ಒಳ್ಳೆ ಗೆಳೆಯರಾದ್ವಿ.
ಗೆಳೆತನ ನನ್ನ ಯಾವ ರೀತಿಯಲ್ಲಿ ಪ್ರೋತ್ಸಾಹಿಸತ್ತೆ ಅನ್ನೊದನ್ನ ನಾನು ತಿಳಿದಿರಲಿಲ್ಲ. ಯಾವ ಕ್ಷಣದಲ್ಲಿ ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ನೋ... ಗೊತ್ತಾಗ್ಲಿಲ್ಲ (ಕವಿ ಅಂತ ನನ್ನ ನಾನೇ ಕರ್ಕೊಬೇಕು ಅಲ್ವ !!!!). ಆವತ್ತಿನ ದಿನ ಹೈದರಾಬಾದಿನ ಮೊದಲ ಮಳೆ ಬೀಳ್ತಾಇತ್ತು. ನಾನು ವಿಜಯ್ ಜೊತೆ ಫೋನಿನಲ್ಲಿ ಮಾತಾಡ್ತಾ ಅವನಿಗೆ ಹಾಗೇ ಒಂದು ಕವನದ ರೂಪದಲ್ಲಿ ಏನೋ ಹೇಳಿದೆ. ತಕ್ಷಣ ಅವನು ನನ್ನ ಪ್ರೋತ್ಸಾಹಿಸಿ ನೀನು ಇದನ್ನ ಬರೀ ಚೆನ್ನಾಗಿದೆ ಅಂತ ಹುರಿದುಂಬಿಸಿದ. ಆವತ್ತು ಹೊರಗೆ ಬಂದದ್ದೇ ನನ್ನ ಮೊದಲ ಕವನ "ಭಾವನೆಗಳ ಸಾಗರದಲ್ಲಿ". ಮೊದಲ ಪ್ರಯತ್ನ ಸಫಲವಾಗದಿದ್ದರೂ ವಿಫಲವಾಗಲಿಲ್ಲ... ನಾನು ಬರೆದ ಸಾಲುಗಳನ್ನ ನನ್ನ ಗೆಳೆಯರೊಡನೆ ಹಂಚಿಕೊಂಡೆ, ಏಲ್ಲ ನನಗೆ ಪ್ರೋತ್ಸಾಹಿಸಿದ್ರು. ಹೀಗೇ ಕೇವಲ ಒಂದು ತಿಂಗಳಿನಲ್ಲಿ ಹೆಚ್ಚೂಕಮ್ಮೀ ೩೦ ಕವನಗಳು ಹೊರಗೆ ಬಂದ್ವು. ಅವು ಕವನಗಳಲ್ಲ, ನನ್ನ ಮನಸ್ಸಿನ ಭಾವನೆಗಳು. ಕೆಲವು ಸಲ ರಾತ್ರಿ ೪ ಘಂಟೆಯಲ್ಲಿ ೪ ಸಾಲು ನೆನಪಾಗಿ ಆ ಅರ್ಧ ರಾತ್ರಿಯಲ್ಲಿ ಎದ್ದು ಬರೆದದ್ದೂ ಇದೆ. ವಿಜಯ್ ನನಗೆ ನಾನು ಬರೆದ ಕವನಗಳನ್ನ ನನ್ನದೇ ಆದ ಬ್ಲಾಗ್ ನಲ್ಲಿ ಹಾಕೋದಕ್ಕೆ ಹೇಳಿ ನಾನು ಅದನ್ನ ಅಂತರ್ಜಾಲದಲ್ಲಿ ಪ್ರಕಟಗೊಳಿಸಿದೆ. ಅದಕ್ಕೆ ಸಿಕ್ಕ ಪ್ರತಿಕ್ರಿಯೆ ಚೆನ್ನಾಗೇ ಇತ್ತು. ನನ್ನ ಕವನವನ್ನ ಓದಿ ನನ್ನಗೆ ಕೆಲವು ಮಿತ್ರರು ಆಪ್ತರಾದರು. ನನ್ನ ಬಾಳಿನಲ್ಲಿ ಅಳಿಸಿಹೋಗದ ಮೈಲಿಗಲ್ಲಾದರು. ಅವರಿಗೆಲ್ಲಾ ಇಲ್ಲಿ ಒಂದು ಅಭಿನಂದನೆ ಸಲ್ಲಿಸ್ತಾಇದ್ದೆನೆ.
ಹೀಗೇ ನಡಿತಾ ಇರೋವಾಗ ನನ್ನ ಹಳೇ ಕಂಪನಿಯ ಸಹೋದ್ಯೋಗಿ, ಮಿತ್ರರೂ ಆದ ಶಂಕರಮೂರ್ತಿ ಹೈದರಾಬಾದಿಗೆ ಬರೋವಿಚಾರ ತಿಳಿಸಿದ್ರು. ನಾನು ಹೇಗಿದ್ರೂ ಒಬ್ಬನೇ ಇದ್ದದ್ದರಿಂದ ನನ್ನ ಜೊತೆ ಬಂದು ಉಳಿದುಕೊಳ್ಳಬಹುದು ಅಂತ ಹೇಳಿ ನನ್ನದೇ ಆದ ಕೆಲವು ಕರಾರುಗಳನ್ನ ಅವರಿಗೆ ಹೇಳಿದೆ :) . ಅದಕ್ಕೆಲ್ಲಾ ಒಪ್ಪಿ ಶಂಕರ್ ನನ್ನ ಮನೆಗೆ ಬಂದರು.
ಅಲ್ಲಿಂದ ನಮ್ಮ ಅಡುಗೆ ಮಾಡೋ ಕಾರ್ಯಕ್ರಮ ಸ್ವಲ್ಪ ಜಾಸ್ತಿ ಆಯ್ತು. ನಾವಿಬ್ಬರೂ ಸೇರಿ ಅಡುಗೆ ಮಾಡ್ಕೋತಿದ್ವಿ. ಜೊತೆ ನಲ್ಲಿ ಊಟಮಾಡಿ ಪಾತ್ರೆ ತೊಳೆದಿಡ್ತಿದ್ವಿ. ಬೇಸರ ಆದ್ರೆ ಅಲ್ಲೇ ಮನೆಸುತ್ತಾಮುತ್ತಾ ಹೊಗಿ ತಿರುಗಾಡ್ಕೊಂಡು ತರಕಾರಿ, ಮೊಸರು ತಂದು ರಾತ್ರಿ ಅದನ್ನ ಮಜ್ಜಿಗೆ ಅಥವಾ ಲಸ್ಸಿ ಮಾಡಿಕೊಂಡು ಕುಡಿದು ಹೊತ್ತು ಕಳೀತಾ ಇದ್ವಿ.
ನನ್ನ ಮಿತ್ರ ಮಂಡಳಿಯಿಂದ ನನಗೆ ಬಹಳಷ್ಟು ಸಹಾಯ ಸಿಕ್ಕಿದೆ. ಹಾಗೆ ನಾನು ಕೂಡಾ ನನ್ನ ಕೈಲಾದ ಸಹಾಯವನ್ನ ಮಾಡಿದ್ದೇನೆ ಎಂದು ನನ್ನ ಅನಿಸಿಕೆ. ಅದೆಷ್ಟು ನಿಜಾನೋ ಎಷ್ಟು ಸುಳ್ಳೋ ನನ್ಗಂತೂ ಗೊತ್ತಿಲ್ಲ. ಈ ವಿಚಾರ ಬರ್ತಾ ಇದ್ದಹಾಗೇ ನನಗೆ ನನ್ನ ಗೆಳೆಯ ಅಮಿತ್ ಮತ್ತೆ ದೀಪ್ತಿ ನೆನಪಾಗ್ತಾ ಇದಾರೆ, ಸ್ವಲ್ಪ ಅವರಬಗ್ಗೆ ನಿಮಗೆ ಹೇಳ್ತೀನಿ.
ಅಮಿತ್ ಬಗ್ಗೆ ಹೇಳ್ಬೇಕು ಅಂದ್ರೆ ಅವನು ನನ್ನ ಆರ್ಕುಟ್ ಗೆಳತಿ ದೀಪ್ತಿ ಯಿಂದ ಪರಿಚಯ ಆದದ್ದು. ಇನ್ನು ದೀಪ್ತಿ ಯಾರು ಅಂತ ಹೇಳ್ಬೆಕು ಅಲ್ವಾ ???? ಆಯ್ತು ಆಯ್ತು... ಅವಳು ನನ್ನಗೆ ಅದೇ ಆರ್ಕುಟ್ಟಿನಮೂಲಕ ಪರಿಚಯವಾದ ಮತ್ತೊಬ್ಬಗೆಳತಿ. ಹೈದರಾಬಾದಿನಲ್ಲಿ ನನಗೆ ಬೇರೆಬೇರೇ ಅಡುಗೆಯ ಪಾಕರುಚಿ ಕಲಿಸೋದಕ್ಕೆ ಅದರ ವಿಧಾನಗಳನ್ನ ಕಳಿಸಿಕೊಟ್ಟವಳು. ಅವಳ ಗೆಳೆಯನೇ ಈ ಅಮಿತ್. ನಾನು ಹೈದರಾಬದಿನಲ್ಲಿ ವಾಸವಾಗಿದ್ದಾಗ ನನ್ನ ಜೊತೆ ಕೆಲವು ತಿಂಗಳು ನನ್ನ ಅತಿಥಿಯಾಗಿದ್ದವನು. ಅವನಿಗೆ ಹೈದರಾಬಾದಿನಲ್ಲಿ ಕೆಲವು ತಿಂಗಳು ಕೆಲಸವಿದ್ದಿದ್ದರಿಂದ ಉಳಿದುಕೊಳ್ಳೋದಿಕ್ಕೆ ನನ್ನ ಜೊತೆ ಇದ್ದ. ಸೀದಾ ಸಾದಾ ಹುಡುಗ, ಆದರೆ ಬತ್ತಿ ಹೊಡಿಯೋದು, ಎಣ್ಣೇ ಹಾಕೊದು ಬಿಟ್ರೆ ಮತ್ತೆಲ್ಲಾ ಒಳ್ಳೇ ಅಭ್ಯಾಸಗಳೆ ಇತ್ತು. ನನ್ನ ಮೊದಲ ಉಪ್ಪಿಟ್ಟಿನ ಪ್ರಯೋಗಕ್ಕೆ ಸಿಕ್ಕಿದ್ದೇ ಅಮಿತ್. ಬೆಳಿಗ್ಗೆ ಕೆಲಸಕ್ಕೆ ಹೋಗಿ ರಾತ್ರಿ ವಾಪಾಸ್ ಬಂದು ನಮ್ಮಜೊತೆ ಹರಟೆ ಹೊಡ್ಕೊಂಡು ಮಲ್ಕೊತಾ ಇದ್ದ. ವಾರಾಂತ್ಯದಲ್ಲಿ ಅಮಿತ್ ಮತ್ತೆ ಶಂಕರ್ ಜೋಡಿ ಮನೆ ಬಿಟ್ಟು ಹೊರಗೆ ತಿರುಗಾಡ್ಕೊಂಡು ಬರ್ತಾಇದ್ರು. ಈಗ ಅಮಿತ್ ಮತ್ತೆ ದೀಪ್ತಿ ಇಬ್ಬರೂ ದಂಪತಿಗಳು. ಅವರನ್ನ ಒಂದುಮಾಡಿದ ಹಿರಿಮೆ ಆರ್ಕುಟ್ ಗೆ ಸೇರಬೇಕು.
ಹೈದರಾಬಾದಿಗೆ ಬಂದಾಗಿನಿಂದಾ ನಾನು ಎಲ್ಲೂ ಹೋಗಿರಲಿಲ್ಲ, ಆದ್ದರಿಂದ ನಾನು, ಶಂಕರ್, ಅಮಿತ್, ವಿಜಯ್ ಮತ್ತೆ ಶಿಲ್ಪಾ ಎಲ್ಲಾ ಸೇರಿ ಒಂದು ಸಿನಿಮಾಕ್ಕೆ ಹೋಗೋದು ಅಂತ ತೀರ್ಮಾನಿಸ್ಕೊಂಡು ಡೈಹಾರ್ಡ್ ಭಾಗ-೪ ಕ್ಕೆ ಮಲ್ಟಿಪ್ಲಕ್ಸ್ ಗೆ ಹೋದ್ವಿ. ಸಿನಿಮಾಏನೋ ಚೆನ್ನಾಗೇ ಇತ್ತು, ಆದರೆ ಇವತ್ತಿಗೂ ನನಗೆ ಸಿನಿಮಾಗಿಂತಾ ನನ್ನ ಗೆಳೆಯರೊಡನೆ ಕಳೆದ ಸಮಯ ನೆನಪಾಗತ್ತೆ. ನಾನು ವಿಜಯ್ ಒಟ್ಟಿಗೇ ವಿರಾಮದಲ್ಲಿ ಹೋಗಿ ಪಾಪ್ ಕರ್ನ್ ತಂದಿದ್ದು, ಕತ್ತಲ ಸಿನಿಮಾ ಹಾಲ್ನಲ್ಲಿ ಎಡವಿ ತಡವರಿಸಿದ್ದು... ಹೀಗೆ... ಸಿನಿಮಾ ಮುಗಿದ ನಂತರ ಇನ್ನೂ ಸಮಯವಿದ್ದದ್ದರಿಂದ ಮತ್ತೆ ನಮ್ಮ ಪ್ರಯಾಣ ಹುಸೇನ್ ಸಾಗರ್ ಕಡೆ ಹೊರಡ್ತು. ಅಲ್ಲಿ ನಾವು ಎಲ್ಲಾ ಸೇರಿ ಜೋಳ, ಐಸ್ಕ್ರೀಮ್ ತಿಂದು ಸಕ್ಕತ್ ಮಜಾ ಮಾಡಿದ್ವಿ. ನಾನು ಇಲ್ಲಿ ನನ್ನ ಎಲ್ಲಾ ದಿನಗಳನ್ನ ನನ್ನ ದಿನಚರಿಯಲ್ಲಿ ಬರೀಬೇಕು ಅಂತ ಅಂದುಕೊಂಡಿದ್ದೆ. ಆದರೆ ಬರೀತಾ ಇಲ್ಲ, ಯಾಕೇ ಅಂದ್ರೆ ಅದನ್ನ ಬರೀತಾ ಹೋದ್ರೇ ನನ್ನದೇ ಒಂದು ಕಾದಂಬರಿ ಬಿಡುಗಡೆ ಮಾಡ್ಬೇಕಾಗತ್ತೇನೋ...
ನಾನು ಅಲ್ಲಿ ಯಾವ ಪ್ರೇಕ್ಷಣೀಯ ಸ್ಥಳಗಳಿಗೂ ಹೋಗಿರಲಿಲ್ಲ. ಹೀಗಿರೋವಾಗ ಇದ್ದಕ್ಕಿದ್ದಂತೇ ನಾನು, ಶಂಕರ್ ಮತ್ತೆ ಅಮಿತ್ ಸೇರಿ ಮತ್ತೊಂದು ವಾರಾಂತ್ಯದಲ್ಲಿ ಮಂತ್ರಾಲಯಕ್ಕೆ ಹೊಗೋ ಕಾರ್ಯಕ್ರಮ ಹಾಕ್ಕೋಂಡ್ವಿ. ಅಮಿತ್ ತನ್ನ ಊರಿಗೆ ಹೋಗಬೇಕಿದ್ದಿದ್ದರಿಂದ ನಮ್ಮಜೊತೆ ಬರಲಿಲ್ಲ. ನಾನು ಮತ್ತೆ ಶಂಕರಮೂರ್ತಿ ಮಂತ್ರಾಲಯಕ್ಕೆ ಹೊರಡುವುದು ನಿಶ್ಚಯವಾಯ್ತು ಮತ್ತೆ ಏ.ಪಿ.ಸ್.ಟಿ.ಡಿ.ಸಿ ಯ ಮೂಲಕ ಮಂತ್ರಾಲಯ ಪ್ರವಾಸದ ಕಾರ್ಯಕ್ರಮ ಶುರುವಾಯ್ತು. ಶನಿವಾರದಂದು ಅವರದೇ ಆದ ಒಂದು ಮಿನಿ ಬಸ್ ನಲ್ಲಿ ನಾನು ಮತ್ತೆ ಶಂಕರ್ ಇಬ್ಬರೂ ಹೊರಟಿದ್ವಿ, ನಮ್ಮ ಜೊತೆ ನಮ್ಮ ಗುಂಪಿನ ಮಿಕ್ಕ ಸದಸ್ಯರಿಲ್ಲದ ಕಾರಣ ಪ್ರಯಾಣ ಬಹಳ ಬೇಸರ ಬರಿಸ್ತಾಇತ್ತು. ಆದ್ದರಿಂದ ನಮ್ಮ ಸಹಪ್ರಯಾಣಿಗರ ಬಗ್ಗೆ ನಾವು ಮಾತಾಡಿಕೊಳ್ತಾ ನಗುನಗುತ್ತಾ ಪ್ರಯಾಣ ಮುಂದುವರಿಸ್ತಾ ಇದ್ವಿ. ಅದೊಂದು ಪ್ಯಾಕೇಜ್ ಟೂರ್ ಆದದ್ದರಿಂದ ಕೇವಲ ಮಂತ್ರಾಲಯವಲ್ಲದೇ ಮತ್ತಿತರ ಸ್ಥಳಗಳನ್ನೂ ನೋಡ್ಕೊಂಡು ವಾಪಾಸ್ ಬಂದ್ವಿ.
ನನಗೆ ಅಲ್ಲಿವಾತಾವರಣ ದಿನ ಕಳೆದಂತೆ ಬೇಸರ ತರಲಾರಂಭಿಸಿತ್ತು. ಕೆಲಸಮಾಡಲು ಅಲ್ಲಿ ಹೆಚ್ಚಿನ ಅವಕಾಶವಿಲ್ಲದ ಕಾರಣ ನಾನು ಅಲ್ಲಿಂದ ಹೊರಟು ಮರಳಿ ಬೆಂಗಳೂರಿಗೆ ಬರುವ ಯೋಜನೆ ಹಾಕತೊಡಗಿದೆ. ನಾನು ಅಲ್ಲಿ ಇನ್ನೂ ಕೆಲವು ದಿನ ಇರಬಹುದು ಅನ್ನೋಒಂದು ಲೆಕ್ಕಾಚಾರದ ಮೇಲೆ ನಾನು ಅಲ್ಲಿಯ ಒಂದು ಕಂಪ್ಯೂಟರ್ ಕ್ಲಾಸಿಗೆ ಶಿಲ್ಪಜೊತೆ ಹೋಗಿ ಸೇರಿದ್ದೆ, ನಿಮಗೆ ಶಿಲ್ಪಾಳ ಪರಿಚಯ ಮಾಡಿಕೊಟ್ಟಿಲ್ಲ ಅಲ್ವಾ !!! ಆಮೇಲೆ ಅವಳನ್ನ ಇಲ್ಲಿ ಪರಿಚಯಿಸ್ತೀನಿ. ಹಾಗಾಗಿ ನಾನು ಬೆಂಗಳೂರಿಗೆ ಮರಳಿಬರೊ ವಿಚಾರನ್ನ ಸ್ವಲ್ಪ ತಿಂಗಳಮಟ್ಟಿಗೆ ಮುಂದೂಡಿದ್ದೇ ಈ ಕ್ಲಾಸಿನ ವಿಚಾರಕ್ಕಾಗಿ. ಇದೆಲ್ಲದರ ನಡುವೆ ನನ್ನ ಸಹೋದ್ಯೋಗಿ ಮತ್ತೆ ಮಿತ್ರರೂ ಆದ ಶಿವರಾಜ್ ಅವರಿಗೆ ಕಂಕಣಭಾಗ್ಯ ಕೂಡಿಬಂದಿತ್ತು. ಹೌದು, ಅವರಿಗೆ ಮದುವೆ... ಆ ಸಂಭ್ರಮದಲ್ಲಿ ನಾನೂ ಭಾಗಿಯಾಗುವ ಉತ್ಸಾಹದಲ್ಲಿ ಅವರಿಗೆ ಮದುವೆಯ ಆಮಂತ್ರಣಪತ್ರವನ್ನ ನಾನೆ ತಯಾರಿಸಿ ಕೊಟ್ಟಿದ್ದೆ, ನನ್ನ ಬಳಿ ಮುದ್ರಣಯಂತ್ರ ಇಲ್ಲ ಸ್ವಾಮೀ, ಅಂತರ್ಜಾಲದಲ್ಲಿ ಹುಡುಕಿ ಯಾವುದೋ ಒಂದು ಒಳ್ಳೆಯ ಚಿತ್ರವನ್ನ ಕದ್ದು ಅದರಮೇಲೆ ಕನ್ನಡದಲ್ಲಿ ಆಮಂತ್ರಣ ಪತ್ರವನ್ನ ಬರೆದುಕೊಟ್ಟಿದ್ದೆ. ೧೩-ಮೆ-೨೦೦೮ ಈ ತಾರೀಖು ಶಿವರಾಜ್ ಮತ್ತು ಶಿವಲೀಲ ಅವರ ಮದುವೆ ಸಮಾರಂಭ ಧಾರವಾಡದಲ್ಲಿ ಎಂದು ನಿಶ್ಚಯವಾಯಿತು. ಅದಕ್ಕೆಂದೇ ನಾನು ಮತ್ತೆ ನಮ್ಮ ಮ್ಯಾನೇಜರ್ ಹೈದರಾಬಾದಿನಿಂದ ಧಾರವಾಡಕ್ಕೆ ಪ್ರಯಾಣ ಬೆಳೆಸಿದ್ವಿ. ದಾರಿಯ ಖರ್ಚಿನಲ್ಲಿ ಅರ್ಧ ನನ್ನ ಮ್ಯಾನೇಜರ್ರೇ ಹಾಕಿಕೊಂಡ್ರು. ಹವಾನಿಯಂತ್ರಿತ ರೈಲ್ವೇಬೋಗಿಯಲ್ಲಿ ಧಾರವಾಡಕ್ಕೆ ಬಂದು ಸೇರಿದ್ವಿ. ಶಿವರಾಜ್ ಅವರ ಮನೆಯವರಿಂದ ಆಥಿತ್ಯ ಪಡೆದುಕೊಂಡು ನನ್ನ ಮ್ಯಾನೇಜರ್ ಕಾದಿರಿಸಿದ್ದ ಹೋಟೇಲ್ ರೂಮಿಗೆ ಬಂದೆ. ಅಲ್ಲಿ ನಾನು ಕರುನಾಡಿಗೆ ಬಂದ ಖುಷಿ ಒಂದುಕಡೆಯಾದರೆ ನನ್ನ ಮನೆಯವರೊಂದಿಗೆ, ಗೆಳೆಯರೊಡನೆ ಹೆಚ್ಚುಹೊತ್ತು ಮಾತನಾಡಬಹುದು ಅನ್ನೋದು ಮತ್ತೊಂದು ಸಂಭ್ರಮ. ಮದುವೆ ಮುಗಿಸಿ ನಂತರ ಮರಳಿ ನನ್ನ ಬೆಂಗಾಡು ಹೈದರಾಬಾದಿಗೆ ಮರಳಿ ಬಂದೆ.
ಈಗ ಸ್ವಲ್ಪ ಶಿಲ್ಪಾಳ ಪರಿಚಯ ಮಾಡಿಕೊಳ್ಳೋಣ, Charming, innocent and decent girl ನನ್ನ ಗೆಳತಿ ಶಿಲ್ಪ. ಒಬ್ಬಳೇ ಕರ್ನಾಟಕದಿಂದ ಇಷ್ಟುದೂರದ ಹೈದರಾಬಾದಿಗೆ ಬಂದಿದ್ದರೂ ಜೀವನದಲ್ಲಿ ಏನಾದರೊಂದು ಸಾಧಿಸಲೇಬೇಕು ಎಂದು ಪಣತೊಟ್ಟಿದ್ದ ಛಲಗಾತಿಆಕೆ. ಸ್ವಲ್ಪ ವಿದೇಷೀತಿಂಡಿಗಳ ವ್ಯಾಮೋಹ ಜಾಸ್ತಿನೇ ಇತ್ತು ಅವಳಿಗೆ, ಆದರೂ ಕೋಮಲ ಮನಸ್ಸು. ಭವಿಷ್ಯದ ಕನಸನ್ನ ಕಟ್ಟಿ ಅದನ್ನು ಸಾಕಾರಗೊಳಿಸುವತ್ತ ದಿಟ್ಟ ಹೆಜ್ಜೆ ಇಟ್ಟವಳು. ಕಂಪ್ಯೂಟರ್ ಕೋರ್ಸಿಗೆ ಅವಳಜೊತೆಯಲ್ಲಿ ಹೋಗಬೇಕಿದ್ದ ನಾನು ಅನಿವಾರ್ಯಕಾರ್ಅಣಗಳಿಂದ ಆ ಅವಕಾಶವನ್ನ ಕಳೆದುಕೊಂಡೆ. ತನ್ನ ಗೆಳತಿಯರೊಡನೆ ಮನೆ ಮಾಡ್ಕೊಂಡು ತಾನೇ ಅಡುಗೆಕೂಡಾ ಮಾಡ್ತಾ, ಕೆಲಸಕ್ಕೂ ಬಂದು, ಕ್ಲಾಸಿಗೂ ಹೋಗ್ತಾ ಇದ್ಳು. ಅವಳ ಗೆಳೆತನದ ಬಗ್ಗೆ ಮತ್ತೊಮ್ಮೆ ಯಾವಾಗಲಾದರೂ ಬರೀತೀನಿ, ಯಾಕಂದ್ರೆ ಇಲ್ಲಿ ಅವಳ ಮತ್ತೆ ವಿಜಯ್ ನ ಪರಿಚಯ ಮಾಡಿಕೊಡ್ತಾಇದ್ರೆ ಪುಟಗಳೇ ಸಾಲೋದಿಲ್ಲ.
ಹೀಗೇ ನಾನು ನನ್ನ ಜೀವನದ ಪಯಣ ಸಾಗುತ್ತಾ ಇರೋವಾಗ ಒಂದುದಿನ ನಮ್ಮ ಮ್ಯಾನೇಜರ್ ಮತ್ತೆ ನಮ್ಮ ಆಫೀಸಿನ ಹೆಚ್ ಆರ್ ಆದ ಕಾರ್ತಿಕ್ಗೂ ಮಾತಿನ ಚಕಮಕಿ ನಡೆದು ನಮ್ಮ ಮ್ಯಾನೇಜರ್ ತಮ್ಮ ಕೆಲಸಕ್ಕೆ ರಾಜಿನಾಮೆ ಸಲ್ಲಿಸಿದ್ರು. ಅಲ್ಲಿಂದ ಮುಂದೆ ನಡೆಯುವ ಬೆಳವಣಿಗೆಯನ್ನ ಊಹಿಸಿಕೊಂಡು ನನಗೆ ಮತ್ತೆ ಶಿವರಾಜಿಗೆ ನಡುಕ ಶುರು ಆಗಿತ್ತು. ಮೊದಲೇ ಹೈದರಾಬಾದಿನಿಂದ ಹೆಚ್ಚಿಗೆ ಏನೂ ವಹಿವಾಟು ಆಗುತ್ತಿರಲಿಲ್ಲ, ಅದರ ಜೊತೆಗೆ ಈ ಘಟನೆ... ನಾವು ಮನಸ್ಸಿನಲ್ಲೇ ಮುಂದಿನ ಬೆಳವಣಿಗೆ ಬಗ್ಗೆ ಊಹಿಸಿಕೊಂಡಿದ್ವಿ.
ಹೈದರಾಬಾದಿನಲ್ಲಿ ಸಂತಸ ತಂದ ಮಳೆ:
ಆವತ್ತೊಂದು ದಿನ ನಾನು ಮತ್ತೆ ಶಿಲ್ಪಾ ನಮ್ಮ ಕಂಪ್ಯೂಟರ್ ಸೆಂಟರ್ನಿಂದ ಮನೆಗೆ ಹೊರಟಿದ್ವಿ, ದಾರಿಮೇಲೆ ದಟ್ಟವಾದ ಮೋಡ ಇದಿದ್ದ್ರಿಂದ ಮಳೆ ಬಂದೇ ಬರತ್ತೆ ಅಂತ ಗೊತ್ತಿತ್ತು. ಆದರೂ ಮಳೆ ಬರೋದಕ್ಕೆ ಮುಂಚೆ ಹೋಗಿ ಮನೆ ಸೇರ್ಕೊಳ್ಳೊಣ ಅಂತ ಭಂಡಧೈರ್ಯ ಮಾಡಿ ಮನೇಕಡೆಗೆ ಹೊರಟಿದ್ವಿ. ನಾವಂದುಕೊಂಡಿದ್ದ ಹಾಗೇ ದಾರಿಯಲ್ಲಿ ಮಳೆ ಬಂದೇ ಬಿಡ್ತು. ಮಳೆಯ ಪ್ರಾರಂಭದಲ್ಲಿ ವಿಧಿಯಿಲ್ಲದೇ ನೆನೆದ್ವಿ, ಆದರೆ ಆಮೇಲೆ ಆ ಮಳೆಹನಿಗಳಲ್ಲೂ ಒಂದು ರೀತಿಯ ಖುಷಿ ಸಿಕ್ತು. ಆ ಕ್ಷಣದಲ್ಲಿ ನಾವಿಬ್ಬರೂ ಚಿಕ್ಕ ಮಕ್ಕಳಾಗ್ಬಿಟ್ಟಿದ್ವಿ... ದಾರಿಯಲ್ಲಿ ಮ್ಯಕ್ಡೋನಾಲ್ಡ್ಸ್ ಗೆ ಹೋಗಿ ವಿದೇಷೀ ತಿಂಡಿ(ಬರ್ಗರ್) ತಿಂದು ಹರಟೆ ಹೊಡಿತಾ ಮತ್ತೆ ನಮ್ಮ ಪ್ರಯಾಣ ಮುಂದುವರಿಸಿದ್ವಿ, ಜೊತೆ ಜೊತೆಯಲ್ಲೇ ಮಳೆಕೂಡಾ ತನ್ನ ರೌದ್ರ ರೂಪವನ್ನ ತೋರಿಸ್ತಾನೇ ಇತ್ತು. ಹಾಗೂ ಹೀಗೂ ಶಿಲ್ಪನ್ನ ಅವಳ ಮನೆಗೆ ಬಿಟ್ಟು ನಾನು ನನ್ನ ಮನೆ ದಾರಿ ಹಿಡಿದು ಹೊರಟೆ. ಮನೆಗೆಬಂದು ಬೆಚ್ಚನೆಯ ನೀರಿನಲ್ಲಿ ಸ್ನಾನಮಾಡಿ ರಾಗಿ ಅಂಬಲಿ ಕುಡಿದು ನನ್ನ ಹೊದಿಕೆ ಹೊದ್ದುಕೊಂಡು ಮಲಗಿದಾಗ ಸಿಕ್ಕ ಸಂತೋಷ... ಅಬ್ಭಾ !!! ಅದನ್ನ ಇಲ್ಲಿ ವಿವರಿಸೊದಕ್ಕೆ ಪದಗಳು ಸಿಕ್ತಾ ಇಲ್ಲ.
ಮನಸ್ಸಿನಲ್ಲಿ ನಾನು ಹೈದರಾಬಾದಿನಲ್ಲಿ ಉಳಿವ/ ಮರಳಿ ಹಿಂದಿರುಗುವ ಪ್ರಶ್ನೆಗಳ ಸರಮಾಲೆ ಸುಳಿತಾಇರೋ ಹಾಗೇ ನನ್ನ ಸಹೋದ್ಯೋಗಿ ಬಂದು ನಮ್ಮ ಮೇಡಂ ಮೀಟಿಂಗೆ ಕರೀತಾ ಇದಾರೆ, ಸೋಮವಾರ ನಾವಿಬ್ಬ್ರೂ ಬೆಂಗಳೂರಿಗೆ ಹೋಗಬೇಕು ಅಂತ ಹೇಳಿದ್ರು. ಆ ವಿಚಾರ ಕೇಳಿ ಮನ್ಸಲ್ಲಿ ಏನೊ ಖುಷಿಆದ್ರೂ ಹಾಗೇ ಒಂದ್ ಸ್ವಲ್ಪ ಭಯ ಆಯ್ತು. ಖುಷಿ ನಾನು ಮರಳಿ ನನ್ನ ನಾಡಿಗೆ ಹೋಗ್ತಾಇದೀನಿ ಅಂತ, ಭಯ ಎಲ್ಲಿ ಏನಾಗತ್ತೋ ಅಂತ. ನನ್ಗೆ ನನ್ನ ಸಹೋದ್ಯೋಗಿ ಸಮಾಧಾನ ಹೇಳಿದ್ರೆ ನಾನು ನನ್ನ ಸಹೋದ್ಯೋಗಿಗೆ ಸಮಾಧಾನ ಹೇಳ್ತಾಇದ್ವಿ. ಆದ್ರೆ ಇಬ್ಬರ ಮನಸ್ಸಲ್ಲೂ ಎಲ್ಲೊ ಒಂದು ರೀತಿ ಆತಂಕ ಇದ್ದೇ ಇತ್ತು.
ನಾನು ಮಿಕ್ಕ ಎರಡುದಿನ ತಡಮಾಡೋದು ಬೇಡ ಅಂತ ಆವತ್ತೇ ರಾತ್ರಿ ಟಿಕೇಟ್ ಬುಕ್ಮಾಡ್ಸಿ ರಾತ್ರಿ ಹೊರಡೋಕ್ಕೆ ಸಿದ್ಧತೆ ಮಾಡ್ಕೊಂಡೆ. ರಾತ್ರಿ ಪ್ರಯಾಸದಾಯಕವಾದ ಪ್ರಯಾಣ ಮಾಡಿ, ಬೆಳಿಗ್ಗೆ ನಮ್ಮ ಕನ್ನಡವನ್ನ ಕರುನಾಡನ್ನ ನೋಡಿದ್ಮೇಲೇ ನನ್ಗೆ ಸ್ವಲ್ಪ ಸಮಾಧಾನ, ಸಂತೋಷ ಆಗಿದ್ದು. ನನ್ನ ಅಪಾರ ಮಿತ್ರಮಂಡಳಿಗೆ ಮೆಸ್ಸೇಜ್ ಮಾಡಿ ನಾನು ಬಂದಿರೋದನ್ನ ಹೇಳಿದೆ. ಎರಡುದಿನ ಅದು ಹ್ಯಾಗೆ ಹೋಯ್ತೂ ಗೊತ್ತೇ ಆಗ್ಲಿಲ್ಲ...
ಇನ್ನು ನಾನು ಕಾಯ್ತಾ ಇದ್ದ ದಿನ ಬಂದೇ ಬಿಡ್ತು, ಸೋಮವಾರ ನಮ್ಮ ಹೊಸಾ ಡೈರೆಕ್ಟರ್ ಮತ್ತೆ ಹೊಸಾ ಹೆಡ್ ಜೊತೆ ಇದ್ದ ಮೀಟಿಂಗೊಸ್ಕರ ನಾನು ನನ್ನ ಸಹೋದ್ಯೋಗಿ ಇಬ್ಬರೂ ನಮ್ಮ ಬೆಂಗಳೂರಿನ ಕಾರ್ಯಾಲಯಕ್ಕೆ ಬಂದ್ವಿ. ಮೊದಲನೇ ಸುತ್ತಿನಲ್ಲಿ ನಮ್ಮ ಹೊಸಾ ಡೈರೆಕ್ಟರ್ (ಖಂಡಿತಾ ಇದು ಸಿನಿಮಾ ಅಲ್ಲ ರೀ...) ಪಾಪ ಶಿವರಾಜ್ ಅವರಿಗೆ ಸಕ್ಕತ್ತಾಗಿ ಕ್ಲಾಸ್ ತೊಗೋಂಡಿದ್ರು. ಶಿವರಾಜಿಗೇ ಹಾಗಾದ್ರೆ ಇನ್ನು ನನ್ನ ಕಥೆಏನಪ್ಪಾ ಅಂತ ಹೆದರಿಕೊಂಡೇ ಮಾತಾಡಿಸೊಕೆ ಹೋದೆ. ಅಲ್ಲಿ ನಾನು ಅಂದುಕೊಂಡಿದ್ದ ಹಾಗೇ ಮೂರುಜನ ದಿಗ್ಗಜರು ಆಸೀನರಾಗಿದ್ರು. ನನಗೆ ಅಲ್ಲಿ ಮತ್ತೊಮ್ಮೆ ಸಂದರ್ಶನ ಮಾಡಿದ್ರು. ಇಲ್ಲಿ ಆ ದಿಗ್ಗಜರು ಯಾರು ಅನ್ನೋದನ್ನ ಹೇಳ್ತಾಇಲ್ಲ. ನನ್ನ ಸಂದರ್ಶನದ ಮುಂದಿನ ಬೆಳವಣಿಗೆ ಬಗ್ಗೆ ನನಗೆ ಸ್ವಲ್ಪ ಅನುಮಾನ ಮೊದಲಿಂದಲೇ ಇತ್ತು. ಅದಕ್ಕೆ ಸರಿಯಾಗಿ ನಾನು ಮರಳಿ ಬೆಂಗಳೂರಿಗೆ ಬರಬೇಕಾಯಿತು. ಅಲ್ಲಿ ನನಗೆ ಹೈದರಾಬಾದಿನ ಬ್ರ್ಯಾಂಚನ್ನ ಮುಚ್ಚಲಿರುವ ನಿರ್ಧಾರದಬಗ್ಗೆ ಸ್ಪಷ್ಟವಿವರ ಸಿಕ್ಕಿತು.
ಮೀಟಿಂಗ್ ಮುಗಿಸಿ ಅಲ್ಲಿ ನಾನು ಮರಳಿ ಬೆಂಗಳೂರಿಗೆ ಬರೋ ವಿಚಾರ ಕೇಳಿ ಒಂದು ರೀತಿ ಖುಷಿ ಆದ್ರೆ ಮತ್ತೋಂದುಕಡೆ ನನ್ಗೇ ತಿಳಿದೇಇರೋಹಾಗೆ ಬೇಜಾರಾಗ್ತಾ ಇತ್ತು. ಮರಳಿ ಬೆಂಗಳೂರಿಗೆ ಬರೋ ವಿಚಾರ ಏನೋ ಖುಷಿನೇ, ಆದ್ರೂ ನಾನು ನನ್ನ ಹೈದರಾಬಾದಿನ ದಿನಗಳನ್ನ, ಜನಗಳನ್ನ, ಆಪ್ತಮಿತ್ರರನ್ನ, ಆ ಕ್ಷಣಗಳನ್ನ, ನಾನೇ ಬಾಡಿಗೆಗೆ ಪಡೆದ ಮನೆಯನ್ನ, ಇದೆಲ್ಲಾ ಬಿಟ್ಟು ಮರಳಿಬರೋ ವಿಚಾರ ಕೇಳಿ ನನ್ಗೆ ಜೀರ್ಣಿಸ್ಕೊಳೊಕ್ಕೆ ಕಷ್ಟ ಆಗ್ತಾ ಇತ್ತು.
ನಾನು ಹುಟ್ಟಿ ಬೆಳೆದ ಊರನ್ನ ಬಿಟ್ಟು ಕೆಲಸಕ್ಕೆ ಅಂತ ಬೆಂಗಳೂರನ್ನ ಸೇರಿ ಮತ್ತೆ ಅಲ್ಲಿಂದ ಕೆಲಸದ್ಮೇಲೇ ಹೈದರಾಬಾದಿಗೆ ಬಂದು ಇಲ್ಲಿ ಕೇವಲ ೫ ತಿಂಗಳೋ ಅಥವ ೬ ತಿಂಗಳೋ ಇದ್ದರೂ... ನಾನು ನನ್ನ ಇಡೀ ಜೀವನ ಮರೀದೇ ಇರೋಹಾಗೆ ನನ್ನ ಹೈದರಾಬಾದಿನ ದಿನಗಳು ನನ್ನನ್ನ ಆವರಿಸಿಬಿಟ್ಟಿದ್ವು.
ಒಂದು ಕ್ಷಣದಲ್ಲಿ ಆ ಸುದ್ದಿ ಕೇಳಿ ಸಂತಸಪಟ್ಟರೂ ಮರುಘಳಿಗೆಯಲ್ಲಿ ಅಷ್ಟೇ ಬೇಸರವಾಯ್ತು. ನನ್ನ ಆ ೫ ತಿಂಗಳ ಒಂಟಿತನವನ್ನ ದೂರ ತಳ್ಳಿದ್ದ ನನ್ನ ಗೆಳೆಯರನ್ನ ಬಿಟ್ಟು ಬರೋಕೆ ತುಂಬಾ ಬೇಸರವಾಗ್ತಾ ಇತ್ತು. ಅಲ್ಲಿ ನಾನೇ ಮಾಡಿದ್ದ ಬಾಡಿಗೆ ಮನೆ, ನನ್ನದೇ ಆದ ಸಾಮ್ರಾಜ್ಯವನ್ನ ಬಿಟ್ಟು ಬರಬೇಕಲ್ಲಾ, ನನಗಿದ್ದ ಸ್ವಾತಂತ್ರ್ಯವನ್ನ ಕಳೆದುಕೊಳ್ಳಬೇಕಲ್ಲಾ, ಎಂದೆಲ್ಲಾ ನನ್ನ ಮನಸ್ಸು ನನಗೆ ಹೇಳುತ್ತಲೇ ಇತ್ತು.
ಆದರೂ ಬೇರೆ ದಾರಿ ಇಲ್ಲದೇ ತುರಾತುರಿಯಲ್ಲಿ ಮನೆ ಖಾಲಿ ಮಾಡೋ ಕಾಯಕಕ್ಕೆ ಕೈ ಹಾಕಿದೆ. ಶಿವರಾಜ್ ಕೂಡಾ ಇದರಲ್ಲಿ ತಮ್ಮ ಸಹಾಯ ಹಸ್ತ ನೀಡಿದ್ರು ಅನ್ನೊದನ್ನ ವಿಷೇಶವಾಗಿ ಹೇಳಬೇಕಿಲ್ಲ.
ಗೆಳೆತನ ನನ್ನ ಯಾವ ರೀತಿಯಲ್ಲಿ ಪ್ರೋತ್ಸಾಹಿಸತ್ತೆ ಅನ್ನೊದನ್ನ ನಾನು ತಿಳಿದಿರಲಿಲ್ಲ. ಯಾವ ಕ್ಷಣದಲ್ಲಿ ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ನೋ... ಗೊತ್ತಾಗ್ಲಿಲ್ಲ (ಕವಿ ಅಂತ ನನ್ನ ನಾನೇ ಕರ್ಕೊಬೇಕು ಅಲ್ವ !!!!). ಆವತ್ತಿನ ದಿನ ಹೈದರಾಬಾದಿನ ಮೊದಲ ಮಳೆ ಬೀಳ್ತಾಇತ್ತು. ನಾನು ವಿಜಯ್ ಜೊತೆ ಫೋನಿನಲ್ಲಿ ಮಾತಾಡ್ತಾ ಅವನಿಗೆ ಹಾಗೇ ಒಂದು ಕವನದ ರೂಪದಲ್ಲಿ ಏನೋ ಹೇಳಿದೆ. ತಕ್ಷಣ ಅವನು ನನ್ನ ಪ್ರೋತ್ಸಾಹಿಸಿ ನೀನು ಇದನ್ನ ಬರೀ ಚೆನ್ನಾಗಿದೆ ಅಂತ ಹುರಿದುಂಬಿಸಿದ. ಆವತ್ತು ಹೊರಗೆ ಬಂದದ್ದೇ ನನ್ನ ಮೊದಲ ಕವನ "ಭಾವನೆಗಳ ಸಾಗರದಲ್ಲಿ". ಮೊದಲ ಪ್ರಯತ್ನ ಸಫಲವಾಗದಿದ್ದರೂ ವಿಫಲವಾಗಲಿಲ್ಲ... ನಾನು ಬರೆದ ಸಾಲುಗಳನ್ನ ನನ್ನ ಗೆಳೆಯರೊಡನೆ ಹಂಚಿಕೊಂಡೆ, ಏಲ್ಲ ನನಗೆ ಪ್ರೋತ್ಸಾಹಿಸಿದ್ರು. ಹೀಗೇ ಕೇವಲ ಒಂದು ತಿಂಗಳಿನಲ್ಲಿ ಹೆಚ್ಚೂಕಮ್ಮೀ ೩೦ ಕವನಗಳು ಹೊರಗೆ ಬಂದ್ವು. ಅವು ಕವನಗಳಲ್ಲ, ನನ್ನ ಮನಸ್ಸಿನ ಭಾವನೆಗಳು. ಕೆಲವು ಸಲ ರಾತ್ರಿ ೪ ಘಂಟೆಯಲ್ಲಿ ೪ ಸಾಲು ನೆನಪಾಗಿ ಆ ಅರ್ಧ ರಾತ್ರಿಯಲ್ಲಿ ಎದ್ದು ಬರೆದದ್ದೂ ಇದೆ. ವಿಜಯ್ ನನಗೆ ನಾನು ಬರೆದ ಕವನಗಳನ್ನ ನನ್ನದೇ ಆದ ಬ್ಲಾಗ್ ನಲ್ಲಿ ಹಾಕೋದಕ್ಕೆ ಹೇಳಿ ನಾನು ಅದನ್ನ ಅಂತರ್ಜಾಲದಲ್ಲಿ ಪ್ರಕಟಗೊಳಿಸಿದೆ. ಅದಕ್ಕೆ ಸಿಕ್ಕ ಪ್ರತಿಕ್ರಿಯೆ ಚೆನ್ನಾಗೇ ಇತ್ತು. ನನ್ನ ಕವನವನ್ನ ಓದಿ ನನ್ನಗೆ ಕೆಲವು ಮಿತ್ರರು ಆಪ್ತರಾದರು. ನನ್ನ ಬಾಳಿನಲ್ಲಿ ಅಳಿಸಿಹೋಗದ ಮೈಲಿಗಲ್ಲಾದರು. ಅವರಿಗೆಲ್ಲಾ ಇಲ್ಲಿ ಒಂದು ಅಭಿನಂದನೆ ಸಲ್ಲಿಸ್ತಾಇದ್ದೆನೆ.
ಹೀಗೇ ನಡಿತಾ ಇರೋವಾಗ ನನ್ನ ಹಳೇ ಕಂಪನಿಯ ಸಹೋದ್ಯೋಗಿ, ಮಿತ್ರರೂ ಆದ ಶಂಕರಮೂರ್ತಿ ಹೈದರಾಬಾದಿಗೆ ಬರೋವಿಚಾರ ತಿಳಿಸಿದ್ರು. ನಾನು ಹೇಗಿದ್ರೂ ಒಬ್ಬನೇ ಇದ್ದದ್ದರಿಂದ ನನ್ನ ಜೊತೆ ಬಂದು ಉಳಿದುಕೊಳ್ಳಬಹುದು ಅಂತ ಹೇಳಿ ನನ್ನದೇ ಆದ ಕೆಲವು ಕರಾರುಗಳನ್ನ ಅವರಿಗೆ ಹೇಳಿದೆ :) . ಅದಕ್ಕೆಲ್ಲಾ ಒಪ್ಪಿ ಶಂಕರ್ ನನ್ನ ಮನೆಗೆ ಬಂದರು.
ಅಲ್ಲಿಂದ ನಮ್ಮ ಅಡುಗೆ ಮಾಡೋ ಕಾರ್ಯಕ್ರಮ ಸ್ವಲ್ಪ ಜಾಸ್ತಿ ಆಯ್ತು. ನಾವಿಬ್ಬರೂ ಸೇರಿ ಅಡುಗೆ ಮಾಡ್ಕೋತಿದ್ವಿ. ಜೊತೆ ನಲ್ಲಿ ಊಟಮಾಡಿ ಪಾತ್ರೆ ತೊಳೆದಿಡ್ತಿದ್ವಿ. ಬೇಸರ ಆದ್ರೆ ಅಲ್ಲೇ ಮನೆಸುತ್ತಾಮುತ್ತಾ ಹೊಗಿ ತಿರುಗಾಡ್ಕೊಂಡು ತರಕಾರಿ, ಮೊಸರು ತಂದು ರಾತ್ರಿ ಅದನ್ನ ಮಜ್ಜಿಗೆ ಅಥವಾ ಲಸ್ಸಿ ಮಾಡಿಕೊಂಡು ಕುಡಿದು ಹೊತ್ತು ಕಳೀತಾ ಇದ್ವಿ.
ನನ್ನ ಮಿತ್ರ ಮಂಡಳಿಯಿಂದ ನನಗೆ ಬಹಳಷ್ಟು ಸಹಾಯ ಸಿಕ್ಕಿದೆ. ಹಾಗೆ ನಾನು ಕೂಡಾ ನನ್ನ ಕೈಲಾದ ಸಹಾಯವನ್ನ ಮಾಡಿದ್ದೇನೆ ಎಂದು ನನ್ನ ಅನಿಸಿಕೆ. ಅದೆಷ್ಟು ನಿಜಾನೋ ಎಷ್ಟು ಸುಳ್ಳೋ ನನ್ಗಂತೂ ಗೊತ್ತಿಲ್ಲ. ಈ ವಿಚಾರ ಬರ್ತಾ ಇದ್ದಹಾಗೇ ನನಗೆ ನನ್ನ ಗೆಳೆಯ ಅಮಿತ್ ಮತ್ತೆ ದೀಪ್ತಿ ನೆನಪಾಗ್ತಾ ಇದಾರೆ, ಸ್ವಲ್ಪ ಅವರಬಗ್ಗೆ ನಿಮಗೆ ಹೇಳ್ತೀನಿ.
ಅಮಿತ್ ಬಗ್ಗೆ ಹೇಳ್ಬೇಕು ಅಂದ್ರೆ ಅವನು ನನ್ನ ಆರ್ಕುಟ್ ಗೆಳತಿ ದೀಪ್ತಿ ಯಿಂದ ಪರಿಚಯ ಆದದ್ದು. ಇನ್ನು ದೀಪ್ತಿ ಯಾರು ಅಂತ ಹೇಳ್ಬೆಕು ಅಲ್ವಾ ???? ಆಯ್ತು ಆಯ್ತು... ಅವಳು ನನ್ನಗೆ ಅದೇ ಆರ್ಕುಟ್ಟಿನಮೂಲಕ ಪರಿಚಯವಾದ ಮತ್ತೊಬ್ಬಗೆಳತಿ. ಹೈದರಾಬಾದಿನಲ್ಲಿ ನನಗೆ ಬೇರೆಬೇರೇ ಅಡುಗೆಯ ಪಾಕರುಚಿ ಕಲಿಸೋದಕ್ಕೆ ಅದರ ವಿಧಾನಗಳನ್ನ ಕಳಿಸಿಕೊಟ್ಟವಳು. ಅವಳ ಗೆಳೆಯನೇ ಈ ಅಮಿತ್. ನಾನು ಹೈದರಾಬದಿನಲ್ಲಿ ವಾಸವಾಗಿದ್ದಾಗ ನನ್ನ ಜೊತೆ ಕೆಲವು ತಿಂಗಳು ನನ್ನ ಅತಿಥಿಯಾಗಿದ್ದವನು. ಅವನಿಗೆ ಹೈದರಾಬಾದಿನಲ್ಲಿ ಕೆಲವು ತಿಂಗಳು ಕೆಲಸವಿದ್ದಿದ್ದರಿಂದ ಉಳಿದುಕೊಳ್ಳೋದಿಕ್ಕೆ ನನ್ನ ಜೊತೆ ಇದ್ದ. ಸೀದಾ ಸಾದಾ ಹುಡುಗ, ಆದರೆ ಬತ್ತಿ ಹೊಡಿಯೋದು, ಎಣ್ಣೇ ಹಾಕೊದು ಬಿಟ್ರೆ ಮತ್ತೆಲ್ಲಾ ಒಳ್ಳೇ ಅಭ್ಯಾಸಗಳೆ ಇತ್ತು. ನನ್ನ ಮೊದಲ ಉಪ್ಪಿಟ್ಟಿನ ಪ್ರಯೋಗಕ್ಕೆ ಸಿಕ್ಕಿದ್ದೇ ಅಮಿತ್. ಬೆಳಿಗ್ಗೆ ಕೆಲಸಕ್ಕೆ ಹೋಗಿ ರಾತ್ರಿ ವಾಪಾಸ್ ಬಂದು ನಮ್ಮಜೊತೆ ಹರಟೆ ಹೊಡ್ಕೊಂಡು ಮಲ್ಕೊತಾ ಇದ್ದ. ವಾರಾಂತ್ಯದಲ್ಲಿ ಅಮಿತ್ ಮತ್ತೆ ಶಂಕರ್ ಜೋಡಿ ಮನೆ ಬಿಟ್ಟು ಹೊರಗೆ ತಿರುಗಾಡ್ಕೊಂಡು ಬರ್ತಾಇದ್ರು. ಈಗ ಅಮಿತ್ ಮತ್ತೆ ದೀಪ್ತಿ ಇಬ್ಬರೂ ದಂಪತಿಗಳು. ಅವರನ್ನ ಒಂದುಮಾಡಿದ ಹಿರಿಮೆ ಆರ್ಕುಟ್ ಗೆ ಸೇರಬೇಕು.
ಹೈದರಾಬಾದಿಗೆ ಬಂದಾಗಿನಿಂದಾ ನಾನು ಎಲ್ಲೂ ಹೋಗಿರಲಿಲ್ಲ, ಆದ್ದರಿಂದ ನಾನು, ಶಂಕರ್, ಅಮಿತ್, ವಿಜಯ್ ಮತ್ತೆ ಶಿಲ್ಪಾ ಎಲ್ಲಾ ಸೇರಿ ಒಂದು ಸಿನಿಮಾಕ್ಕೆ ಹೋಗೋದು ಅಂತ ತೀರ್ಮಾನಿಸ್ಕೊಂಡು ಡೈಹಾರ್ಡ್ ಭಾಗ-೪ ಕ್ಕೆ ಮಲ್ಟಿಪ್ಲಕ್ಸ್ ಗೆ ಹೋದ್ವಿ. ಸಿನಿಮಾಏನೋ ಚೆನ್ನಾಗೇ ಇತ್ತು, ಆದರೆ ಇವತ್ತಿಗೂ ನನಗೆ ಸಿನಿಮಾಗಿಂತಾ ನನ್ನ ಗೆಳೆಯರೊಡನೆ ಕಳೆದ ಸಮಯ ನೆನಪಾಗತ್ತೆ. ನಾನು ವಿಜಯ್ ಒಟ್ಟಿಗೇ ವಿರಾಮದಲ್ಲಿ ಹೋಗಿ ಪಾಪ್ ಕರ್ನ್ ತಂದಿದ್ದು, ಕತ್ತಲ ಸಿನಿಮಾ ಹಾಲ್ನಲ್ಲಿ ಎಡವಿ ತಡವರಿಸಿದ್ದು... ಹೀಗೆ... ಸಿನಿಮಾ ಮುಗಿದ ನಂತರ ಇನ್ನೂ ಸಮಯವಿದ್ದದ್ದರಿಂದ ಮತ್ತೆ ನಮ್ಮ ಪ್ರಯಾಣ ಹುಸೇನ್ ಸಾಗರ್ ಕಡೆ ಹೊರಡ್ತು. ಅಲ್ಲಿ ನಾವು ಎಲ್ಲಾ ಸೇರಿ ಜೋಳ, ಐಸ್ಕ್ರೀಮ್ ತಿಂದು ಸಕ್ಕತ್ ಮಜಾ ಮಾಡಿದ್ವಿ. ನಾನು ಇಲ್ಲಿ ನನ್ನ ಎಲ್ಲಾ ದಿನಗಳನ್ನ ನನ್ನ ದಿನಚರಿಯಲ್ಲಿ ಬರೀಬೇಕು ಅಂತ ಅಂದುಕೊಂಡಿದ್ದೆ. ಆದರೆ ಬರೀತಾ ಇಲ್ಲ, ಯಾಕೇ ಅಂದ್ರೆ ಅದನ್ನ ಬರೀತಾ ಹೋದ್ರೇ ನನ್ನದೇ ಒಂದು ಕಾದಂಬರಿ ಬಿಡುಗಡೆ ಮಾಡ್ಬೇಕಾಗತ್ತೇನೋ...
ನಾನು ಅಲ್ಲಿ ಯಾವ ಪ್ರೇಕ್ಷಣೀಯ ಸ್ಥಳಗಳಿಗೂ ಹೋಗಿರಲಿಲ್ಲ. ಹೀಗಿರೋವಾಗ ಇದ್ದಕ್ಕಿದ್ದಂತೇ ನಾನು, ಶಂಕರ್ ಮತ್ತೆ ಅಮಿತ್ ಸೇರಿ ಮತ್ತೊಂದು ವಾರಾಂತ್ಯದಲ್ಲಿ ಮಂತ್ರಾಲಯಕ್ಕೆ ಹೊಗೋ ಕಾರ್ಯಕ್ರಮ ಹಾಕ್ಕೋಂಡ್ವಿ. ಅಮಿತ್ ತನ್ನ ಊರಿಗೆ ಹೋಗಬೇಕಿದ್ದಿದ್ದರಿಂದ ನಮ್ಮಜೊತೆ ಬರಲಿಲ್ಲ. ನಾನು ಮತ್ತೆ ಶಂಕರಮೂರ್ತಿ ಮಂತ್ರಾಲಯಕ್ಕೆ ಹೊರಡುವುದು ನಿಶ್ಚಯವಾಯ್ತು ಮತ್ತೆ ಏ.ಪಿ.ಸ್.ಟಿ.ಡಿ.ಸಿ ಯ ಮೂಲಕ ಮಂತ್ರಾಲಯ ಪ್ರವಾಸದ ಕಾರ್ಯಕ್ರಮ ಶುರುವಾಯ್ತು. ಶನಿವಾರದಂದು ಅವರದೇ ಆದ ಒಂದು ಮಿನಿ ಬಸ್ ನಲ್ಲಿ ನಾನು ಮತ್ತೆ ಶಂಕರ್ ಇಬ್ಬರೂ ಹೊರಟಿದ್ವಿ, ನಮ್ಮ ಜೊತೆ ನಮ್ಮ ಗುಂಪಿನ ಮಿಕ್ಕ ಸದಸ್ಯರಿಲ್ಲದ ಕಾರಣ ಪ್ರಯಾಣ ಬಹಳ ಬೇಸರ ಬರಿಸ್ತಾಇತ್ತು. ಆದ್ದರಿಂದ ನಮ್ಮ ಸಹಪ್ರಯಾಣಿಗರ ಬಗ್ಗೆ ನಾವು ಮಾತಾಡಿಕೊಳ್ತಾ ನಗುನಗುತ್ತಾ ಪ್ರಯಾಣ ಮುಂದುವರಿಸ್ತಾ ಇದ್ವಿ. ಅದೊಂದು ಪ್ಯಾಕೇಜ್ ಟೂರ್ ಆದದ್ದರಿಂದ ಕೇವಲ ಮಂತ್ರಾಲಯವಲ್ಲದೇ ಮತ್ತಿತರ ಸ್ಥಳಗಳನ್ನೂ ನೋಡ್ಕೊಂಡು ವಾಪಾಸ್ ಬಂದ್ವಿ.
ನನಗೆ ಅಲ್ಲಿವಾತಾವರಣ ದಿನ ಕಳೆದಂತೆ ಬೇಸರ ತರಲಾರಂಭಿಸಿತ್ತು. ಕೆಲಸಮಾಡಲು ಅಲ್ಲಿ ಹೆಚ್ಚಿನ ಅವಕಾಶವಿಲ್ಲದ ಕಾರಣ ನಾನು ಅಲ್ಲಿಂದ ಹೊರಟು ಮರಳಿ ಬೆಂಗಳೂರಿಗೆ ಬರುವ ಯೋಜನೆ ಹಾಕತೊಡಗಿದೆ. ನಾನು ಅಲ್ಲಿ ಇನ್ನೂ ಕೆಲವು ದಿನ ಇರಬಹುದು ಅನ್ನೋಒಂದು ಲೆಕ್ಕಾಚಾರದ ಮೇಲೆ ನಾನು ಅಲ್ಲಿಯ ಒಂದು ಕಂಪ್ಯೂಟರ್ ಕ್ಲಾಸಿಗೆ ಶಿಲ್ಪಜೊತೆ ಹೋಗಿ ಸೇರಿದ್ದೆ, ನಿಮಗೆ ಶಿಲ್ಪಾಳ ಪರಿಚಯ ಮಾಡಿಕೊಟ್ಟಿಲ್ಲ ಅಲ್ವಾ !!! ಆಮೇಲೆ ಅವಳನ್ನ ಇಲ್ಲಿ ಪರಿಚಯಿಸ್ತೀನಿ. ಹಾಗಾಗಿ ನಾನು ಬೆಂಗಳೂರಿಗೆ ಮರಳಿಬರೊ ವಿಚಾರನ್ನ ಸ್ವಲ್ಪ ತಿಂಗಳಮಟ್ಟಿಗೆ ಮುಂದೂಡಿದ್ದೇ ಈ ಕ್ಲಾಸಿನ ವಿಚಾರಕ್ಕಾಗಿ. ಇದೆಲ್ಲದರ ನಡುವೆ ನನ್ನ ಸಹೋದ್ಯೋಗಿ ಮತ್ತೆ ಮಿತ್ರರೂ ಆದ ಶಿವರಾಜ್ ಅವರಿಗೆ ಕಂಕಣಭಾಗ್ಯ ಕೂಡಿಬಂದಿತ್ತು. ಹೌದು, ಅವರಿಗೆ ಮದುವೆ... ಆ ಸಂಭ್ರಮದಲ್ಲಿ ನಾನೂ ಭಾಗಿಯಾಗುವ ಉತ್ಸಾಹದಲ್ಲಿ ಅವರಿಗೆ ಮದುವೆಯ ಆಮಂತ್ರಣಪತ್ರವನ್ನ ನಾನೆ ತಯಾರಿಸಿ ಕೊಟ್ಟಿದ್ದೆ, ನನ್ನ ಬಳಿ ಮುದ್ರಣಯಂತ್ರ ಇಲ್ಲ ಸ್ವಾಮೀ, ಅಂತರ್ಜಾಲದಲ್ಲಿ ಹುಡುಕಿ ಯಾವುದೋ ಒಂದು ಒಳ್ಳೆಯ ಚಿತ್ರವನ್ನ ಕದ್ದು ಅದರಮೇಲೆ ಕನ್ನಡದಲ್ಲಿ ಆಮಂತ್ರಣ ಪತ್ರವನ್ನ ಬರೆದುಕೊಟ್ಟಿದ್ದೆ. ೧೩-ಮೆ-೨೦೦೮ ಈ ತಾರೀಖು ಶಿವರಾಜ್ ಮತ್ತು ಶಿವಲೀಲ ಅವರ ಮದುವೆ ಸಮಾರಂಭ ಧಾರವಾಡದಲ್ಲಿ ಎಂದು ನಿಶ್ಚಯವಾಯಿತು. ಅದಕ್ಕೆಂದೇ ನಾನು ಮತ್ತೆ ನಮ್ಮ ಮ್ಯಾನೇಜರ್ ಹೈದರಾಬಾದಿನಿಂದ ಧಾರವಾಡಕ್ಕೆ ಪ್ರಯಾಣ ಬೆಳೆಸಿದ್ವಿ. ದಾರಿಯ ಖರ್ಚಿನಲ್ಲಿ ಅರ್ಧ ನನ್ನ ಮ್ಯಾನೇಜರ್ರೇ ಹಾಕಿಕೊಂಡ್ರು. ಹವಾನಿಯಂತ್ರಿತ ರೈಲ್ವೇಬೋಗಿಯಲ್ಲಿ ಧಾರವಾಡಕ್ಕೆ ಬಂದು ಸೇರಿದ್ವಿ. ಶಿವರಾಜ್ ಅವರ ಮನೆಯವರಿಂದ ಆಥಿತ್ಯ ಪಡೆದುಕೊಂಡು ನನ್ನ ಮ್ಯಾನೇಜರ್ ಕಾದಿರಿಸಿದ್ದ ಹೋಟೇಲ್ ರೂಮಿಗೆ ಬಂದೆ. ಅಲ್ಲಿ ನಾನು ಕರುನಾಡಿಗೆ ಬಂದ ಖುಷಿ ಒಂದುಕಡೆಯಾದರೆ ನನ್ನ ಮನೆಯವರೊಂದಿಗೆ, ಗೆಳೆಯರೊಡನೆ ಹೆಚ್ಚುಹೊತ್ತು ಮಾತನಾಡಬಹುದು ಅನ್ನೋದು ಮತ್ತೊಂದು ಸಂಭ್ರಮ. ಮದುವೆ ಮುಗಿಸಿ ನಂತರ ಮರಳಿ ನನ್ನ ಬೆಂಗಾಡು ಹೈದರಾಬಾದಿಗೆ ಮರಳಿ ಬಂದೆ.
ಈಗ ಸ್ವಲ್ಪ ಶಿಲ್ಪಾಳ ಪರಿಚಯ ಮಾಡಿಕೊಳ್ಳೋಣ, Charming, innocent and decent girl ನನ್ನ ಗೆಳತಿ ಶಿಲ್ಪ. ಒಬ್ಬಳೇ ಕರ್ನಾಟಕದಿಂದ ಇಷ್ಟುದೂರದ ಹೈದರಾಬಾದಿಗೆ ಬಂದಿದ್ದರೂ ಜೀವನದಲ್ಲಿ ಏನಾದರೊಂದು ಸಾಧಿಸಲೇಬೇಕು ಎಂದು ಪಣತೊಟ್ಟಿದ್ದ ಛಲಗಾತಿಆಕೆ. ಸ್ವಲ್ಪ ವಿದೇಷೀತಿಂಡಿಗಳ ವ್ಯಾಮೋಹ ಜಾಸ್ತಿನೇ ಇತ್ತು ಅವಳಿಗೆ, ಆದರೂ ಕೋಮಲ ಮನಸ್ಸು. ಭವಿಷ್ಯದ ಕನಸನ್ನ ಕಟ್ಟಿ ಅದನ್ನು ಸಾಕಾರಗೊಳಿಸುವತ್ತ ದಿಟ್ಟ ಹೆಜ್ಜೆ ಇಟ್ಟವಳು. ಕಂಪ್ಯೂಟರ್ ಕೋರ್ಸಿಗೆ ಅವಳಜೊತೆಯಲ್ಲಿ ಹೋಗಬೇಕಿದ್ದ ನಾನು ಅನಿವಾರ್ಯಕಾರ್ಅಣಗಳಿಂದ ಆ ಅವಕಾಶವನ್ನ ಕಳೆದುಕೊಂಡೆ. ತನ್ನ ಗೆಳತಿಯರೊಡನೆ ಮನೆ ಮಾಡ್ಕೊಂಡು ತಾನೇ ಅಡುಗೆಕೂಡಾ ಮಾಡ್ತಾ, ಕೆಲಸಕ್ಕೂ ಬಂದು, ಕ್ಲಾಸಿಗೂ ಹೋಗ್ತಾ ಇದ್ಳು. ಅವಳ ಗೆಳೆತನದ ಬಗ್ಗೆ ಮತ್ತೊಮ್ಮೆ ಯಾವಾಗಲಾದರೂ ಬರೀತೀನಿ, ಯಾಕಂದ್ರೆ ಇಲ್ಲಿ ಅವಳ ಮತ್ತೆ ವಿಜಯ್ ನ ಪರಿಚಯ ಮಾಡಿಕೊಡ್ತಾಇದ್ರೆ ಪುಟಗಳೇ ಸಾಲೋದಿಲ್ಲ.
ಹೀಗೇ ನಾನು ನನ್ನ ಜೀವನದ ಪಯಣ ಸಾಗುತ್ತಾ ಇರೋವಾಗ ಒಂದುದಿನ ನಮ್ಮ ಮ್ಯಾನೇಜರ್ ಮತ್ತೆ ನಮ್ಮ ಆಫೀಸಿನ ಹೆಚ್ ಆರ್ ಆದ ಕಾರ್ತಿಕ್ಗೂ ಮಾತಿನ ಚಕಮಕಿ ನಡೆದು ನಮ್ಮ ಮ್ಯಾನೇಜರ್ ತಮ್ಮ ಕೆಲಸಕ್ಕೆ ರಾಜಿನಾಮೆ ಸಲ್ಲಿಸಿದ್ರು. ಅಲ್ಲಿಂದ ಮುಂದೆ ನಡೆಯುವ ಬೆಳವಣಿಗೆಯನ್ನ ಊಹಿಸಿಕೊಂಡು ನನಗೆ ಮತ್ತೆ ಶಿವರಾಜಿಗೆ ನಡುಕ ಶುರು ಆಗಿತ್ತು. ಮೊದಲೇ ಹೈದರಾಬಾದಿನಿಂದ ಹೆಚ್ಚಿಗೆ ಏನೂ ವಹಿವಾಟು ಆಗುತ್ತಿರಲಿಲ್ಲ, ಅದರ ಜೊತೆಗೆ ಈ ಘಟನೆ... ನಾವು ಮನಸ್ಸಿನಲ್ಲೇ ಮುಂದಿನ ಬೆಳವಣಿಗೆ ಬಗ್ಗೆ ಊಹಿಸಿಕೊಂಡಿದ್ವಿ.
ಹೈದರಾಬಾದಿನಲ್ಲಿ ಸಂತಸ ತಂದ ಮಳೆ:
ಆವತ್ತೊಂದು ದಿನ ನಾನು ಮತ್ತೆ ಶಿಲ್ಪಾ ನಮ್ಮ ಕಂಪ್ಯೂಟರ್ ಸೆಂಟರ್ನಿಂದ ಮನೆಗೆ ಹೊರಟಿದ್ವಿ, ದಾರಿಮೇಲೆ ದಟ್ಟವಾದ ಮೋಡ ಇದಿದ್ದ್ರಿಂದ ಮಳೆ ಬಂದೇ ಬರತ್ತೆ ಅಂತ ಗೊತ್ತಿತ್ತು. ಆದರೂ ಮಳೆ ಬರೋದಕ್ಕೆ ಮುಂಚೆ ಹೋಗಿ ಮನೆ ಸೇರ್ಕೊಳ್ಳೊಣ ಅಂತ ಭಂಡಧೈರ್ಯ ಮಾಡಿ ಮನೇಕಡೆಗೆ ಹೊರಟಿದ್ವಿ. ನಾವಂದುಕೊಂಡಿದ್ದ ಹಾಗೇ ದಾರಿಯಲ್ಲಿ ಮಳೆ ಬಂದೇ ಬಿಡ್ತು. ಮಳೆಯ ಪ್ರಾರಂಭದಲ್ಲಿ ವಿಧಿಯಿಲ್ಲದೇ ನೆನೆದ್ವಿ, ಆದರೆ ಆಮೇಲೆ ಆ ಮಳೆಹನಿಗಳಲ್ಲೂ ಒಂದು ರೀತಿಯ ಖುಷಿ ಸಿಕ್ತು. ಆ ಕ್ಷಣದಲ್ಲಿ ನಾವಿಬ್ಬರೂ ಚಿಕ್ಕ ಮಕ್ಕಳಾಗ್ಬಿಟ್ಟಿದ್ವಿ... ದಾರಿಯಲ್ಲಿ ಮ್ಯಕ್ಡೋನಾಲ್ಡ್ಸ್ ಗೆ ಹೋಗಿ ವಿದೇಷೀ ತಿಂಡಿ(ಬರ್ಗರ್) ತಿಂದು ಹರಟೆ ಹೊಡಿತಾ ಮತ್ತೆ ನಮ್ಮ ಪ್ರಯಾಣ ಮುಂದುವರಿಸಿದ್ವಿ, ಜೊತೆ ಜೊತೆಯಲ್ಲೇ ಮಳೆಕೂಡಾ ತನ್ನ ರೌದ್ರ ರೂಪವನ್ನ ತೋರಿಸ್ತಾನೇ ಇತ್ತು. ಹಾಗೂ ಹೀಗೂ ಶಿಲ್ಪನ್ನ ಅವಳ ಮನೆಗೆ ಬಿಟ್ಟು ನಾನು ನನ್ನ ಮನೆ ದಾರಿ ಹಿಡಿದು ಹೊರಟೆ. ಮನೆಗೆಬಂದು ಬೆಚ್ಚನೆಯ ನೀರಿನಲ್ಲಿ ಸ್ನಾನಮಾಡಿ ರಾಗಿ ಅಂಬಲಿ ಕುಡಿದು ನನ್ನ ಹೊದಿಕೆ ಹೊದ್ದುಕೊಂಡು ಮಲಗಿದಾಗ ಸಿಕ್ಕ ಸಂತೋಷ... ಅಬ್ಭಾ !!! ಅದನ್ನ ಇಲ್ಲಿ ವಿವರಿಸೊದಕ್ಕೆ ಪದಗಳು ಸಿಕ್ತಾ ಇಲ್ಲ.
ಮನಸ್ಸಿನಲ್ಲಿ ನಾನು ಹೈದರಾಬಾದಿನಲ್ಲಿ ಉಳಿವ/ ಮರಳಿ ಹಿಂದಿರುಗುವ ಪ್ರಶ್ನೆಗಳ ಸರಮಾಲೆ ಸುಳಿತಾಇರೋ ಹಾಗೇ ನನ್ನ ಸಹೋದ್ಯೋಗಿ ಬಂದು ನಮ್ಮ ಮೇಡಂ ಮೀಟಿಂಗೆ ಕರೀತಾ ಇದಾರೆ, ಸೋಮವಾರ ನಾವಿಬ್ಬ್ರೂ ಬೆಂಗಳೂರಿಗೆ ಹೋಗಬೇಕು ಅಂತ ಹೇಳಿದ್ರು. ಆ ವಿಚಾರ ಕೇಳಿ ಮನ್ಸಲ್ಲಿ ಏನೊ ಖುಷಿಆದ್ರೂ ಹಾಗೇ ಒಂದ್ ಸ್ವಲ್ಪ ಭಯ ಆಯ್ತು. ಖುಷಿ ನಾನು ಮರಳಿ ನನ್ನ ನಾಡಿಗೆ ಹೋಗ್ತಾಇದೀನಿ ಅಂತ, ಭಯ ಎಲ್ಲಿ ಏನಾಗತ್ತೋ ಅಂತ. ನನ್ಗೆ ನನ್ನ ಸಹೋದ್ಯೋಗಿ ಸಮಾಧಾನ ಹೇಳಿದ್ರೆ ನಾನು ನನ್ನ ಸಹೋದ್ಯೋಗಿಗೆ ಸಮಾಧಾನ ಹೇಳ್ತಾಇದ್ವಿ. ಆದ್ರೆ ಇಬ್ಬರ ಮನಸ್ಸಲ್ಲೂ ಎಲ್ಲೊ ಒಂದು ರೀತಿ ಆತಂಕ ಇದ್ದೇ ಇತ್ತು.
ನಾನು ಮಿಕ್ಕ ಎರಡುದಿನ ತಡಮಾಡೋದು ಬೇಡ ಅಂತ ಆವತ್ತೇ ರಾತ್ರಿ ಟಿಕೇಟ್ ಬುಕ್ಮಾಡ್ಸಿ ರಾತ್ರಿ ಹೊರಡೋಕ್ಕೆ ಸಿದ್ಧತೆ ಮಾಡ್ಕೊಂಡೆ. ರಾತ್ರಿ ಪ್ರಯಾಸದಾಯಕವಾದ ಪ್ರಯಾಣ ಮಾಡಿ, ಬೆಳಿಗ್ಗೆ ನಮ್ಮ ಕನ್ನಡವನ್ನ ಕರುನಾಡನ್ನ ನೋಡಿದ್ಮೇಲೇ ನನ್ಗೆ ಸ್ವಲ್ಪ ಸಮಾಧಾನ, ಸಂತೋಷ ಆಗಿದ್ದು. ನನ್ನ ಅಪಾರ ಮಿತ್ರಮಂಡಳಿಗೆ ಮೆಸ್ಸೇಜ್ ಮಾಡಿ ನಾನು ಬಂದಿರೋದನ್ನ ಹೇಳಿದೆ. ಎರಡುದಿನ ಅದು ಹ್ಯಾಗೆ ಹೋಯ್ತೂ ಗೊತ್ತೇ ಆಗ್ಲಿಲ್ಲ...
ಇನ್ನು ನಾನು ಕಾಯ್ತಾ ಇದ್ದ ದಿನ ಬಂದೇ ಬಿಡ್ತು, ಸೋಮವಾರ ನಮ್ಮ ಹೊಸಾ ಡೈರೆಕ್ಟರ್ ಮತ್ತೆ ಹೊಸಾ ಹೆಡ್ ಜೊತೆ ಇದ್ದ ಮೀಟಿಂಗೊಸ್ಕರ ನಾನು ನನ್ನ ಸಹೋದ್ಯೋಗಿ ಇಬ್ಬರೂ ನಮ್ಮ ಬೆಂಗಳೂರಿನ ಕಾರ್ಯಾಲಯಕ್ಕೆ ಬಂದ್ವಿ. ಮೊದಲನೇ ಸುತ್ತಿನಲ್ಲಿ ನಮ್ಮ ಹೊಸಾ ಡೈರೆಕ್ಟರ್ (ಖಂಡಿತಾ ಇದು ಸಿನಿಮಾ ಅಲ್ಲ ರೀ...) ಪಾಪ ಶಿವರಾಜ್ ಅವರಿಗೆ ಸಕ್ಕತ್ತಾಗಿ ಕ್ಲಾಸ್ ತೊಗೋಂಡಿದ್ರು. ಶಿವರಾಜಿಗೇ ಹಾಗಾದ್ರೆ ಇನ್ನು ನನ್ನ ಕಥೆಏನಪ್ಪಾ ಅಂತ ಹೆದರಿಕೊಂಡೇ ಮಾತಾಡಿಸೊಕೆ ಹೋದೆ. ಅಲ್ಲಿ ನಾನು ಅಂದುಕೊಂಡಿದ್ದ ಹಾಗೇ ಮೂರುಜನ ದಿಗ್ಗಜರು ಆಸೀನರಾಗಿದ್ರು. ನನಗೆ ಅಲ್ಲಿ ಮತ್ತೊಮ್ಮೆ ಸಂದರ್ಶನ ಮಾಡಿದ್ರು. ಇಲ್ಲಿ ಆ ದಿಗ್ಗಜರು ಯಾರು ಅನ್ನೋದನ್ನ ಹೇಳ್ತಾಇಲ್ಲ. ನನ್ನ ಸಂದರ್ಶನದ ಮುಂದಿನ ಬೆಳವಣಿಗೆ ಬಗ್ಗೆ ನನಗೆ ಸ್ವಲ್ಪ ಅನುಮಾನ ಮೊದಲಿಂದಲೇ ಇತ್ತು. ಅದಕ್ಕೆ ಸರಿಯಾಗಿ ನಾನು ಮರಳಿ ಬೆಂಗಳೂರಿಗೆ ಬರಬೇಕಾಯಿತು. ಅಲ್ಲಿ ನನಗೆ ಹೈದರಾಬಾದಿನ ಬ್ರ್ಯಾಂಚನ್ನ ಮುಚ್ಚಲಿರುವ ನಿರ್ಧಾರದಬಗ್ಗೆ ಸ್ಪಷ್ಟವಿವರ ಸಿಕ್ಕಿತು.
ಮೀಟಿಂಗ್ ಮುಗಿಸಿ ಅಲ್ಲಿ ನಾನು ಮರಳಿ ಬೆಂಗಳೂರಿಗೆ ಬರೋ ವಿಚಾರ ಕೇಳಿ ಒಂದು ರೀತಿ ಖುಷಿ ಆದ್ರೆ ಮತ್ತೋಂದುಕಡೆ ನನ್ಗೇ ತಿಳಿದೇಇರೋಹಾಗೆ ಬೇಜಾರಾಗ್ತಾ ಇತ್ತು. ಮರಳಿ ಬೆಂಗಳೂರಿಗೆ ಬರೋ ವಿಚಾರ ಏನೋ ಖುಷಿನೇ, ಆದ್ರೂ ನಾನು ನನ್ನ ಹೈದರಾಬಾದಿನ ದಿನಗಳನ್ನ, ಜನಗಳನ್ನ, ಆಪ್ತಮಿತ್ರರನ್ನ, ಆ ಕ್ಷಣಗಳನ್ನ, ನಾನೇ ಬಾಡಿಗೆಗೆ ಪಡೆದ ಮನೆಯನ್ನ, ಇದೆಲ್ಲಾ ಬಿಟ್ಟು ಮರಳಿಬರೋ ವಿಚಾರ ಕೇಳಿ ನನ್ಗೆ ಜೀರ್ಣಿಸ್ಕೊಳೊಕ್ಕೆ ಕಷ್ಟ ಆಗ್ತಾ ಇತ್ತು.
ನಾನು ಹುಟ್ಟಿ ಬೆಳೆದ ಊರನ್ನ ಬಿಟ್ಟು ಕೆಲಸಕ್ಕೆ ಅಂತ ಬೆಂಗಳೂರನ್ನ ಸೇರಿ ಮತ್ತೆ ಅಲ್ಲಿಂದ ಕೆಲಸದ್ಮೇಲೇ ಹೈದರಾಬಾದಿಗೆ ಬಂದು ಇಲ್ಲಿ ಕೇವಲ ೫ ತಿಂಗಳೋ ಅಥವ ೬ ತಿಂಗಳೋ ಇದ್ದರೂ... ನಾನು ನನ್ನ ಇಡೀ ಜೀವನ ಮರೀದೇ ಇರೋಹಾಗೆ ನನ್ನ ಹೈದರಾಬಾದಿನ ದಿನಗಳು ನನ್ನನ್ನ ಆವರಿಸಿಬಿಟ್ಟಿದ್ವು.
ಒಂದು ಕ್ಷಣದಲ್ಲಿ ಆ ಸುದ್ದಿ ಕೇಳಿ ಸಂತಸಪಟ್ಟರೂ ಮರುಘಳಿಗೆಯಲ್ಲಿ ಅಷ್ಟೇ ಬೇಸರವಾಯ್ತು. ನನ್ನ ಆ ೫ ತಿಂಗಳ ಒಂಟಿತನವನ್ನ ದೂರ ತಳ್ಳಿದ್ದ ನನ್ನ ಗೆಳೆಯರನ್ನ ಬಿಟ್ಟು ಬರೋಕೆ ತುಂಬಾ ಬೇಸರವಾಗ್ತಾ ಇತ್ತು. ಅಲ್ಲಿ ನಾನೇ ಮಾಡಿದ್ದ ಬಾಡಿಗೆ ಮನೆ, ನನ್ನದೇ ಆದ ಸಾಮ್ರಾಜ್ಯವನ್ನ ಬಿಟ್ಟು ಬರಬೇಕಲ್ಲಾ, ನನಗಿದ್ದ ಸ್ವಾತಂತ್ರ್ಯವನ್ನ ಕಳೆದುಕೊಳ್ಳಬೇಕಲ್ಲಾ, ಎಂದೆಲ್ಲಾ ನನ್ನ ಮನಸ್ಸು ನನಗೆ ಹೇಳುತ್ತಲೇ ಇತ್ತು.
ಆದರೂ ಬೇರೆ ದಾರಿ ಇಲ್ಲದೇ ತುರಾತುರಿಯಲ್ಲಿ ಮನೆ ಖಾಲಿ ಮಾಡೋ ಕಾಯಕಕ್ಕೆ ಕೈ ಹಾಕಿದೆ. ಶಿವರಾಜ್ ಕೂಡಾ ಇದರಲ್ಲಿ ತಮ್ಮ ಸಹಾಯ ಹಸ್ತ ನೀಡಿದ್ರು ಅನ್ನೊದನ್ನ ವಿಷೇಶವಾಗಿ ಹೇಳಬೇಕಿಲ್ಲ.
Wednesday, June 4, 2008
ನನ್ನ ಅಮ್ಮ
೦೪-ಜೂನ್-೨೦೦೮
ನೆನ್ನೆ ತಾನೆ ಅಪ್ಪನ ಮಾಸಿಕ ಇತ್ತು, ಅದಕ್ಕೆಂದು ಮೊನ್ನೆ ರಾತ್ರಿ ಬೆಂಗಳೂರಿನಿಂದ ಬಸ್ ನಲ್ಲಿ ಹೊರಟಿದ್ದ ನನ್ನ ಪಕ್ಕದಲ್ಲಿ ಸರಿ ಸುಮಾರು ೩೦ರಿಂದ ೪೦ರ ಒಳಗಿನ ಮಹಿಳೆ ಕುಳಿತಿದ್ದರು. ನೋಡಲಿಕ್ಕೆ ಅವಿದ್ಯಾವಂತೆಯಂತೆ ಕಾಣಿತ್ತಿದ್ದ ಆ ಮಹಿಳೆ ಬಸ್ಸನ್ನು ಹತ್ತಿದಾಗಿನಿಂದಾ ಏನಾದರೊಂದು ತಿಂಡಿಯನ್ನ ತಿನ್ನುತ್ತಲೇ ಇದ್ದರು.
ಪ್ರಯಾಣ ಇನ್ನೂ ಬಿಡದಿಯನ್ನೂ ಮುಟ್ಟಿರಲಿಲ್ಲ, ಆಕೆಗೆ ವಾಂತಿ ಶುರುವಾಯಿತು. ಒಬ್ಬೊಂಟಿ ಮಹಿಳೆ, ಅದರಜೊತೆಯಲ್ಲಿ ಆಕೆಗೆ ಕಾಡುತ್ತಿದ್ದ ಅನಾರೋಗ್ಯ. ಸುಸ್ತಾಯ್ತಾ ? ನೀರುಬೇಕಾ ? ಸ್ವಲ್ಪ ಸುಧಾರಿಸ್ಕೊ !!! ನಿದ್ದೆಮಾಡು !!! ಹೀಗೆಲ್ಲಾ ಹೇಳುವುದಕ್ಕೆ ಅಲ್ಲಿ ಆಕೆಯ ಸಂಭಂದಿಗಳು ಯಾರೂ ಇರಲಿಲ್ಲ. ಅದರ ಬದಲಿಗೆ ಏನು ಹೆಂಗಸೋ ಏನೋ, ಮೈ ಗೆಲ್ಲಾ ಹಾರಿಸ್ತಾಳೆ, ಏಯ್, ಹೋಗಿ ಹಿಂದಿನ ಸೀಟಿನಲ್ಲಿ ಕೂತ್ಕೋ, ಅಲ್ಲಿ ಹೋಗಿ ವಾಂತಿ ಮಾಡ್ಕೊ !!! ಹೀಗೆ ಎಲ್ಲಾ ಬೈಗುಳಗಳ ಸುರಿಮಳೆ ಪ್ರಾರಂಭಿಸಿದ್ರು. ನನಗೆ ಆಕೆಯ ಮೇಲೆ ಮರುಕ ಉಂಟಾಗಿ ನನ್ನಬಳಿ ಇದ್ದ ನೀರನ್ನ ಸ್ವಲ್ಪ ಕುಡಿಯಲಿಕ್ಕೆ ಕೊಟ್ಟೆ. ಆಗ ನನ್ನ ಕಣ್ಣಲ್ಲಿ ನನಗರಿವಿಲ್ಲದಂತೆ ನೀರು ತುಂಬಿತ್ತು. ಒಂಟಿತನದಲ್ಲಿ ಇರುವ ನೋವು ಅದನ್ನ ಅನುಭವಿಸಿದವರಿಗೇ ಗೊತ್ತು.
ನೀರು ಕುಡಿದ ಆಕೆ ನನ್ನ ಪಕ್ಕದಲ್ಲೇ ಮುದುಡಿ ಮಲಗಿದಳು. ಆಕೆಗೆ ಏನು ಸಮಸ್ಯೆ ಇತ್ತೋ ಏನೋ, ಯಾವ ಕಾರಣಕ್ಕಾಗಿ ಮೈಸೂರಿನ ಪ್ರಯಾಣ ಬೆಳಸಿದ್ದಳೋ ಏನೋ, ಒಂದಲ್ಲಾ ಒಂದು ದಿನ ನಾವೂ ಹೀಗೇ ಇದೇ ಪಾಡು ಅನುಭವಿಸಿರಬಹುದು. ಆಗಲೇ ನಮಗೆ ನಮ್ಮ ಆಪ್ತರು ನೆನಪಾಗುವುದು. ಇಂದಿನ ಪೀಳಿಗೆಗೆ ಇದರ ಆತಂಕವಿಲ್ಲ, ಏಕೆಂದರೆ ತಕ್ಷಣದ ನೆರವಿಗೆ ಒಂದು ಫೋನಾದರೂ ಮಾಡಬಹುದು ಕಾರಣ ಅವರ ಕೈನಲ್ಲಿ ಇರುವ ಮೊಬೈಲು. ಆದರೆ ಆಕೆಗೆ ಫೋನು ಕೊಟ್ಟರೂ ಆಕೆ ಸಂಪರ್ಕಿಸಬೇಕಾದವರ ದೂರವಾಣಿ ಸಂಖ್ಯೆ ತಿಳಿಯದು.
ಆ ಸಂಧರ್ಭದಲ್ಲಿ ನನಗೆ ನನ್ನ ಅಮ್ಮ ನೆನಪಾದಳು. ಮಗುವಿನ ಮನಸ್ಸಿನ ನನ್ನ ಅಮ್ಮನಿಗೆ ಹೊರಗಿನ ಪ್ರಪಂಚದ ಒಂದೇ ಒಂದು ಕಿಂಡಿಯೆಂದರೆ ದೂರದರ್ಶನ (ಕೇಬಲ್ ಕೂಡಾ ಇಲ್ಲ), ಅದರಲ್ಲಿ ಬರುವ ಧಾರಾವಹಿಗಳ ಪಾತ್ರಗಳನ್ನು ಕಂಡು ತನ್ನ ತಾನೇ ಮರೆಯುವಷ್ಟು ಮುಗ್ದೆ. ಅಯ್ಯೋ !!! ನೋಡು ನೋಡು ಅವ್ಳಿಗೆ ಎಲ್ಲಾ ಬೈತಾ ಇದಾರೆ, ಪಾಪ, ಅವ್ಳು ಯಾಕೆ ಅವ್ನ ಮನೆಗೆ ಹೋಗ್ಬೇಕಿತ್ತು ? ಸುಮ್ನೆ ಇರ್ಬಾರ್ದಿತ್ತಾ ??? ಎಂದೆಲ್ಲಾ ತಾನೇ ಆ ಧಾರಾವಾಹಿಯೊಳಗೆ ಇರುವ ಒಂದು ಪಾತ್ರವೆಂಬಂತೆ ಅದರಲ್ಲಿ ತಲ್ಲೀನಳಾಗಿಬಿಡುತ್ತಾರೆ. ಹೌದು, ಈಗ ಆಕೆಯ ದಿನದ ಹೆಚ್ಚಿನಪಾಲು ಸಮಯ ಕಳೆಯುವುದು ಆ ಮಾಂತ್ರಿಕ ಪೆಟ್ಟಿಗೆಯೊಡನೆಯೇ.
ವಾರಾಂತ್ಯದಲ್ಲಿ ಸಮಯ ಮಾಡಿಕೊಂಡು ನಾನು ಹೋಗಿ ನೋಡಿಕೊಂಡು ಮಾತನಾಡಿಸಿಕೊಂಡು ಬರುತ್ತೇನೆ. ನನ್ನ ಸಹೋದರ/ಸಹೋದರಿಯರ ಪ್ರೀತಿ ಆಕೆಗೆ ಸಿಕ್ಕರೂ ನಾನು ನನ್ನ ಪಾಲಿನ ಪ್ರೀತಿಯನ್ನ ಆಕೆಗೆ ಕೊಡುವುದರಲ್ಲಿ ಮೋಸ ಮಾಡುತ್ತಿದ್ದೇನೆಬ ಅಳುಕು ನನ್ನಲ್ಲಿ. ಸಾಧ್ಯವಾದಷ್ಟು ಆಕೆಯೊಡನೆ ಮಾತನಾಡಿ ಆಕೆಯ ಒಂಟಿತನವನ್ನ ದೂರಮಾಡಲು ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ.
ಮುಲತಃ ಸ್ವಲ್ಪ ಹಠವಾದಿಯಾದ ನನ್ನ ಅಮ್ಮ ಸುಲಭವಾಗಿ ಯಾರ ಮಾತನ್ನೂ ಒಪ್ಪಿಕೊಳ್ಳುವುದಿಲ್ಲ. ಒಂದು ತಿಂಗಳಿನ ಹಿಂದೆ ಆಕೆಯನ್ನ ಬೊಂಬಾಯಿಗೆ ನನ್ನ ಅಕ್ಕ ಕರ್ಕೊಂಡು ಹೋಗಿದ್ರು, ಸ್ವಲ್ಪ ಮನಸ್ಸು ಹಗುರವಾಗ್ಲಿ ಅಂತ. ಆಕೆಯನ್ನ ನಾನೇ ಉಡುಪಿಗೆ ಬಿಟ್ಟು ಬಂದಿದ್ದೆ. ಉಡುಪಿಗೆ ಹೋಗೋವಾಗ ಸ್ವಲ್ಪ ನೆಮ್ಮದಿಯಾಗಿ ಪ್ರಯಾಣ ಮಾಡ್ಲಿ ಅಂತ ನನ್ನ ಹತ್ತಿರ ಇದ್ದ ಒಂದು ಐಪಾಡ್ ನಲ್ಲಿ ಹಾಡುಗಳನ್ನ ಆಕೆಗೆ ಕೇಳೋಕ್ಕೆ ಕೊಟ್ಟೆ. ಅಯ್ಯೋ !!!! ಇದು ನನ್ಗೆ ಆಗೋದಿಲ್ಲ ಮಾರಾಯಾ !!! ಕಿವಿಯಿಂದ ಬಿದ್ದು ಬಿದ್ದು ಹೋಗತ್ತೆ ಅಂತ ಆಕೆಯ ಕಂಪ್ಲೈಂಟು !!! ಕೊನೆಗೆ ನನ್ನ ಮೊಬೈಲಿನ ಇಯರ್ ಫೋನನ್ನ ಕೊಟ್ಟು ಆಕೆ ಹಾಡುಕೇಳೋಹಾಗೆ ಮಾಡಿದೆ. ಹಾಡು ಕೇಳ್ತಾ ನನ್ನ ಮುದ್ದು ಅಮ್ಮ ನಿದ್ದೆ ಮಾಡಿದ್ಳು. ನಿದ್ದೆಯಲ್ಲಿ ಒಂದು ಪುಟ್ಟ ಪಾಪು ನನ್ನ ಹತ್ತಿರ ಮಲಗಿರೋತರ ಕಾಣ್ತಾ ಇತ್ತು.
ಅಮ್ಮ, ನಿನ್ನ ಋಣ ನಾ ಹೇಗೆ ತೀರಿಸಲಿ !!!
ನೆನ್ನೆ ತಾನೆ ಅಪ್ಪನ ಮಾಸಿಕ ಇತ್ತು, ಅದಕ್ಕೆಂದು ಮೊನ್ನೆ ರಾತ್ರಿ ಬೆಂಗಳೂರಿನಿಂದ ಬಸ್ ನಲ್ಲಿ ಹೊರಟಿದ್ದ ನನ್ನ ಪಕ್ಕದಲ್ಲಿ ಸರಿ ಸುಮಾರು ೩೦ರಿಂದ ೪೦ರ ಒಳಗಿನ ಮಹಿಳೆ ಕುಳಿತಿದ್ದರು. ನೋಡಲಿಕ್ಕೆ ಅವಿದ್ಯಾವಂತೆಯಂತೆ ಕಾಣಿತ್ತಿದ್ದ ಆ ಮಹಿಳೆ ಬಸ್ಸನ್ನು ಹತ್ತಿದಾಗಿನಿಂದಾ ಏನಾದರೊಂದು ತಿಂಡಿಯನ್ನ ತಿನ್ನುತ್ತಲೇ ಇದ್ದರು.
ಪ್ರಯಾಣ ಇನ್ನೂ ಬಿಡದಿಯನ್ನೂ ಮುಟ್ಟಿರಲಿಲ್ಲ, ಆಕೆಗೆ ವಾಂತಿ ಶುರುವಾಯಿತು. ಒಬ್ಬೊಂಟಿ ಮಹಿಳೆ, ಅದರಜೊತೆಯಲ್ಲಿ ಆಕೆಗೆ ಕಾಡುತ್ತಿದ್ದ ಅನಾರೋಗ್ಯ. ಸುಸ್ತಾಯ್ತಾ ? ನೀರುಬೇಕಾ ? ಸ್ವಲ್ಪ ಸುಧಾರಿಸ್ಕೊ !!! ನಿದ್ದೆಮಾಡು !!! ಹೀಗೆಲ್ಲಾ ಹೇಳುವುದಕ್ಕೆ ಅಲ್ಲಿ ಆಕೆಯ ಸಂಭಂದಿಗಳು ಯಾರೂ ಇರಲಿಲ್ಲ. ಅದರ ಬದಲಿಗೆ ಏನು ಹೆಂಗಸೋ ಏನೋ, ಮೈ ಗೆಲ್ಲಾ ಹಾರಿಸ್ತಾಳೆ, ಏಯ್, ಹೋಗಿ ಹಿಂದಿನ ಸೀಟಿನಲ್ಲಿ ಕೂತ್ಕೋ, ಅಲ್ಲಿ ಹೋಗಿ ವಾಂತಿ ಮಾಡ್ಕೊ !!! ಹೀಗೆ ಎಲ್ಲಾ ಬೈಗುಳಗಳ ಸುರಿಮಳೆ ಪ್ರಾರಂಭಿಸಿದ್ರು. ನನಗೆ ಆಕೆಯ ಮೇಲೆ ಮರುಕ ಉಂಟಾಗಿ ನನ್ನಬಳಿ ಇದ್ದ ನೀರನ್ನ ಸ್ವಲ್ಪ ಕುಡಿಯಲಿಕ್ಕೆ ಕೊಟ್ಟೆ. ಆಗ ನನ್ನ ಕಣ್ಣಲ್ಲಿ ನನಗರಿವಿಲ್ಲದಂತೆ ನೀರು ತುಂಬಿತ್ತು. ಒಂಟಿತನದಲ್ಲಿ ಇರುವ ನೋವು ಅದನ್ನ ಅನುಭವಿಸಿದವರಿಗೇ ಗೊತ್ತು.
ನೀರು ಕುಡಿದ ಆಕೆ ನನ್ನ ಪಕ್ಕದಲ್ಲೇ ಮುದುಡಿ ಮಲಗಿದಳು. ಆಕೆಗೆ ಏನು ಸಮಸ್ಯೆ ಇತ್ತೋ ಏನೋ, ಯಾವ ಕಾರಣಕ್ಕಾಗಿ ಮೈಸೂರಿನ ಪ್ರಯಾಣ ಬೆಳಸಿದ್ದಳೋ ಏನೋ, ಒಂದಲ್ಲಾ ಒಂದು ದಿನ ನಾವೂ ಹೀಗೇ ಇದೇ ಪಾಡು ಅನುಭವಿಸಿರಬಹುದು. ಆಗಲೇ ನಮಗೆ ನಮ್ಮ ಆಪ್ತರು ನೆನಪಾಗುವುದು. ಇಂದಿನ ಪೀಳಿಗೆಗೆ ಇದರ ಆತಂಕವಿಲ್ಲ, ಏಕೆಂದರೆ ತಕ್ಷಣದ ನೆರವಿಗೆ ಒಂದು ಫೋನಾದರೂ ಮಾಡಬಹುದು ಕಾರಣ ಅವರ ಕೈನಲ್ಲಿ ಇರುವ ಮೊಬೈಲು. ಆದರೆ ಆಕೆಗೆ ಫೋನು ಕೊಟ್ಟರೂ ಆಕೆ ಸಂಪರ್ಕಿಸಬೇಕಾದವರ ದೂರವಾಣಿ ಸಂಖ್ಯೆ ತಿಳಿಯದು.
ಆ ಸಂಧರ್ಭದಲ್ಲಿ ನನಗೆ ನನ್ನ ಅಮ್ಮ ನೆನಪಾದಳು. ಮಗುವಿನ ಮನಸ್ಸಿನ ನನ್ನ ಅಮ್ಮನಿಗೆ ಹೊರಗಿನ ಪ್ರಪಂಚದ ಒಂದೇ ಒಂದು ಕಿಂಡಿಯೆಂದರೆ ದೂರದರ್ಶನ (ಕೇಬಲ್ ಕೂಡಾ ಇಲ್ಲ), ಅದರಲ್ಲಿ ಬರುವ ಧಾರಾವಹಿಗಳ ಪಾತ್ರಗಳನ್ನು ಕಂಡು ತನ್ನ ತಾನೇ ಮರೆಯುವಷ್ಟು ಮುಗ್ದೆ. ಅಯ್ಯೋ !!! ನೋಡು ನೋಡು ಅವ್ಳಿಗೆ ಎಲ್ಲಾ ಬೈತಾ ಇದಾರೆ, ಪಾಪ, ಅವ್ಳು ಯಾಕೆ ಅವ್ನ ಮನೆಗೆ ಹೋಗ್ಬೇಕಿತ್ತು ? ಸುಮ್ನೆ ಇರ್ಬಾರ್ದಿತ್ತಾ ??? ಎಂದೆಲ್ಲಾ ತಾನೇ ಆ ಧಾರಾವಾಹಿಯೊಳಗೆ ಇರುವ ಒಂದು ಪಾತ್ರವೆಂಬಂತೆ ಅದರಲ್ಲಿ ತಲ್ಲೀನಳಾಗಿಬಿಡುತ್ತಾರೆ. ಹೌದು, ಈಗ ಆಕೆಯ ದಿನದ ಹೆಚ್ಚಿನಪಾಲು ಸಮಯ ಕಳೆಯುವುದು ಆ ಮಾಂತ್ರಿಕ ಪೆಟ್ಟಿಗೆಯೊಡನೆಯೇ.
ವಾರಾಂತ್ಯದಲ್ಲಿ ಸಮಯ ಮಾಡಿಕೊಂಡು ನಾನು ಹೋಗಿ ನೋಡಿಕೊಂಡು ಮಾತನಾಡಿಸಿಕೊಂಡು ಬರುತ್ತೇನೆ. ನನ್ನ ಸಹೋದರ/ಸಹೋದರಿಯರ ಪ್ರೀತಿ ಆಕೆಗೆ ಸಿಕ್ಕರೂ ನಾನು ನನ್ನ ಪಾಲಿನ ಪ್ರೀತಿಯನ್ನ ಆಕೆಗೆ ಕೊಡುವುದರಲ್ಲಿ ಮೋಸ ಮಾಡುತ್ತಿದ್ದೇನೆಬ ಅಳುಕು ನನ್ನಲ್ಲಿ. ಸಾಧ್ಯವಾದಷ್ಟು ಆಕೆಯೊಡನೆ ಮಾತನಾಡಿ ಆಕೆಯ ಒಂಟಿತನವನ್ನ ದೂರಮಾಡಲು ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ.
ಮುಲತಃ ಸ್ವಲ್ಪ ಹಠವಾದಿಯಾದ ನನ್ನ ಅಮ್ಮ ಸುಲಭವಾಗಿ ಯಾರ ಮಾತನ್ನೂ ಒಪ್ಪಿಕೊಳ್ಳುವುದಿಲ್ಲ. ಒಂದು ತಿಂಗಳಿನ ಹಿಂದೆ ಆಕೆಯನ್ನ ಬೊಂಬಾಯಿಗೆ ನನ್ನ ಅಕ್ಕ ಕರ್ಕೊಂಡು ಹೋಗಿದ್ರು, ಸ್ವಲ್ಪ ಮನಸ್ಸು ಹಗುರವಾಗ್ಲಿ ಅಂತ. ಆಕೆಯನ್ನ ನಾನೇ ಉಡುಪಿಗೆ ಬಿಟ್ಟು ಬಂದಿದ್ದೆ. ಉಡುಪಿಗೆ ಹೋಗೋವಾಗ ಸ್ವಲ್ಪ ನೆಮ್ಮದಿಯಾಗಿ ಪ್ರಯಾಣ ಮಾಡ್ಲಿ ಅಂತ ನನ್ನ ಹತ್ತಿರ ಇದ್ದ ಒಂದು ಐಪಾಡ್ ನಲ್ಲಿ ಹಾಡುಗಳನ್ನ ಆಕೆಗೆ ಕೇಳೋಕ್ಕೆ ಕೊಟ್ಟೆ. ಅಯ್ಯೋ !!!! ಇದು ನನ್ಗೆ ಆಗೋದಿಲ್ಲ ಮಾರಾಯಾ !!! ಕಿವಿಯಿಂದ ಬಿದ್ದು ಬಿದ್ದು ಹೋಗತ್ತೆ ಅಂತ ಆಕೆಯ ಕಂಪ್ಲೈಂಟು !!! ಕೊನೆಗೆ ನನ್ನ ಮೊಬೈಲಿನ ಇಯರ್ ಫೋನನ್ನ ಕೊಟ್ಟು ಆಕೆ ಹಾಡುಕೇಳೋಹಾಗೆ ಮಾಡಿದೆ. ಹಾಡು ಕೇಳ್ತಾ ನನ್ನ ಮುದ್ದು ಅಮ್ಮ ನಿದ್ದೆ ಮಾಡಿದ್ಳು. ನಿದ್ದೆಯಲ್ಲಿ ಒಂದು ಪುಟ್ಟ ಪಾಪು ನನ್ನ ಹತ್ತಿರ ಮಲಗಿರೋತರ ಕಾಣ್ತಾ ಇತ್ತು.
ಅಮ್ಮ, ನಿನ್ನ ಋಣ ನಾ ಹೇಗೆ ತೀರಿಸಲಿ !!!
Friday, May 23, 2008
Bye bye ಆರ್ಕುಟ್
ಆರ್ಕುಟ್
ನನಗೆ ನನ್ನ lifeನಲ್ಲಿ ಇದ್ದ ಒಂದು ದೊಡ್ಡ ಕೊರತೆಯನ್ನ ನೀಗಿಸಿದ್ದ ನಿನಗೆ ನನ್ನ Thanks. ಇಷ್ಟುದಿನ ನನ್ನ ಜೊತೆಗಿದ್ದು ನನ್ನ ಜೀವನದಲ್ಲಿ ಅನಿರೀಕ್ಷಿತ ತಿರುವುಗಳನ್ನು ನೀಡಿದ್ದ ನಿನಗೆ ನನ್ನ Thanks. ಸ್ನೇಹಕ್ಕಾಗಿ ಹಾತೊರೆಯುತ್ತಿದ್ದ ನನಗೆ ಸ್ನೇಹಿತರ ಅಪಾರ ಸಾಗರವನ್ನ ಪರಿಚಯ ಮಾಡಿಕೊಟ್ಟ ನಿನಗೆ Thanks. ನಾನು ಇವತ್ತು ನಿರ್ಧಾರ ಮಾಡಿದ್ದೇನೆ. ನಿನ್ನಿಂದ ನಾನು ದೂರ ಹೋಗ್ಬೇಕು ಅಂತ. Yes !!! i am going away from you. ಆದರೆ ಹೋಗೋದಕ್ಕೆ ಮುಂಚೆ ನಿನ್ನೊಡನೆ ನಾನು ಕಳೆದ ದಿನಗಳನ್ನ ಇಲ್ಲಿ ಮೆಲುಕುಹಾಕಬೇಕು ಅನ್ನಿಸ್ತಾ ಇದೆ !!!
ನನಗೆ ನಿನ್ನ ಪರಿಚಯ ಮಾಡಿಕೊಟ್ಟಿದ್ದು ನನ್ನ ಹಳೇ Officeನ friend ಕೃಷ್ಣ ಕುಮಾರ್. ಆರಂಭ ಶೂರತ್ವ ಆನೋಹಾಗೆ ಅಲ್ಲಿ ಒಂದು communitieನ ಶುರುಮಾಡಿ ಆಮೇಲೆ ಅದನ್ನ ಕಡೆಗಾಣಿಸಿಬಿಟ್ಟ. ೮/೧೪/೦೬ ಅಂದರೆ ನಮ್ಮ Independence dayಗೆ ಸರಿಯಾಗಿ ಒಂದು ದಿನ ಬಾಕಿ ಇತ್ತು. ಆವತ್ತು ನನಗೆ ಮೊದಲನೇ Scrap ಬಂದದ್ದು. ಅಲ್ಲಿಂದ ಶುರುಆದ ನಿನ್ನ ಪರಿಚಯ ಇಲ್ಲೀವರೆಗೂ ಬಂದಿದೆ. ಇನ್ನು ಮುಂದೆ ನನಗೆ ಗೊತ್ತಿಲ್ಲ. ನಿನ್ನ ಪರಿಚಯ ೧೪ನೇ ತಾರೀಖೇ ಆದರೂ ನಿನ್ನ ಬಗ್ಗೆ ನನಗೆ ಜಾಸ್ತಿ ಗೊತ್ತಿರಲಿಲ್ಲ. ಅದು ಗೊತ್ತಾಗಿದ್ದು ಸುಮಾರು ತಿಂಗಳುಗಳು ಕಳೆದಮೇಲೇ !!! ಒಬ್ಬರಿಂದ ಮತ್ತೊಬ್ಬರ ಪರಿಚಯ ಆಗ್ತಾ ನನ್ನ ಸ್ನೇಹದ ಸಂಕೋಲೆ ಬೆಳಿತಾ ಹೋಗ್ತಾ ಇತ್ತು. ಅಮರ, ಶಿಲ್ಪ, ಪ್ರಿಯ, ನವ್ಯ, ವಿಜಯ್, ವಿನೋದ್, ದೀಪ್ತಿ, ಅಮಿತ್, ಅರ್ಪಿತ, ಪುಷ್ಪ, ಜಯಶಂಕರ್, ಪ್ರಶಾಂತ್, ನಾರಾಯಣ, ತವಿಶ್ರೀ... ಹೀಗೇ ನನ್ನ ಆಪ್ತರ ಪಟ್ಟಿಮಾಡ್ತಾ ಹೋದರೆ ನನಗೆ ಒಂದು ದಿನ ಸಾಲೋದಿಲ್ಲ.
ಸ್ನೇಹ ಬೆಳಿತಾ ಇದ್ದಂತೆಲ್ಲಾ ನನ್ನಮೇಲೆ ಅದನ್ನು ನಿಭಾಯಿಸುವ ಜವಾಬ್ದಾರಿ ಬೆಳೀತಾ ಹೊಯ್ತು. ಪ್ರತೀ ದಿನ ಏನಾದರೊಂದು ಹೊಸತನ್ನು ನನ್ನ ಸ್ನೇಹಿತರಿಗೆ ಕೊಡಬೇಕೆನ್ನುವ ಹಂಬಲ. ಹಾಗಾಗಿ ಕೆಲವು ನುಡಿಮುತ್ತುಗಳನ್ನ, ಮತ್ತೆ ಕೆಲವು Jokes ಗಳನ್ನ ಪ್ರತೀ ದಿನ ನನ್ನ ಬಳಗಕ್ಕೆ Scrap ಮಾಡ್ತಾ ಇದ್ದೆ. ಕೆಲವೊಂದು ದಿನ ಅದು ಸಾಧ್ಯ ಆಗಲಿಲ್ಲ ಅಂದರೆ ಅದಕ್ಕೆ ಉತ್ತರವಾಗಿ ಸ್ನೇಹಿತರಿಂದ ಮತ್ತೋಂದು scrap ಬಂದಿರ್ತಿತ್ತು. ನನ್ನ ಬೆಂಗಳೂರಿನ Officeನಿಂದ ನನ್ನನ್ನು ಹೈದರಾಬಾದಿಗೆ ವರ್ಗಮಾಡಿದಾಗಲಂತೂ ನೀನು ನನ್ನ ಬೆನ್ನೆಲುಬಾಗಿ ನಿಂತಿದ್ದು ಮರೆಯೋಕೆ ಸಾಧ್ಯ ಇಲ್ಲ. ಆ ಗೊತ್ತಿಲ್ಲದ ನಾಡಿನಲ್ಲಿ ಕನ್ನಡಿಗರ ಪರಿಚಯಕ್ಕೆ ಮೂಲ ಕಾರಣ ನೀನೇ. ನಿನ್ನಿಂದಲೇ ನನಗೆ ಅಡುಗೆ ಹೇಳಿಕೊಡುವ ಟೀಚರ್ (ದೀಪ್ತಿ) ಪರಿಚಯ ಆದದ್ದು. ಸಾಹಿತ್ಯಾಭಿಮಾನಿ ಅಮರನ ಪರಿಚಯ ಆದದ್ದು, ಮನಸ್ಸಿನ ಮಾತ ಕೇಳುವ ಗೆಳೆಯರು ಸಿಕ್ಕಿದ್ದು, ನೊಂದ ಮನಸ್ಸಿಗೆ ಪ್ರೀತಿಯ ಮುಲಾಮು ಹಚ್ಚೋ ಕೈಗಳುಸಿಕ್ಕಿದ್ದು, ನನ್ನ ಬ್ಲಾಗ್ ಗುರು ಸೋಮನ ಪರಿಚಯ ಆದದ್ದು. ನನ್ನ ಬ್ಲಾಗ್ ಬರೋದಕ್ಕೆ ಸ್ಪೂರ್ತಿ ಕೊಟ್ಟ ಗೆಳೆಯು ವಿಜಯ್ ಪರಿಚಯವಾದದ್ದೂ ನಿನ್ನಿಂದಲೇ !!! ನಾನು ನಿನ್ನ ಇಷ್ಟಾ ಪಟ್ಟು ದೂರ ಕಳಿಸ್ಥಾ ಇಲ್ಲ, ಕಷ್ಟಾಪಟ್ಟು ನಾನೇ ದೂರ ಹೋಗ್ತಾ ಇದೀನಿ.
ಒಂದು ಕಾಲದಲ್ಲಿ ನೀನು ನನಗೆ ಎಷ್ಟು ಸನಿಹವಾಗಿದ್ದೆ ಅಂದರೆ ನಾನು ನನ್ನ ನಿದ್ದೆಬಿಟ್ಟು ನಿನ್ನ ಮುದ್ದಾಡಿದ್ದಿದೆ, ನಿನಗೆ ಸಿಂಗಾರ ಮಾಡಿದ್ದಿದೆ. ಇನ್ನೂ ಚುಮು ಚುಮು ಬಿಸಿಲು ಮೂಡೋದಕ್ಕೂ ಮುನ್ನ ನಿನ್ನಲ್ಲಿ ಹುದುಗಿರುವ ಅಪಾರ ಮಿತ್ರವೃಂದಕ್ಕೆ ಬೆಳಗ್ಗೆ ಬೆಳಗ್ಗೆ Good morning scrap ಹಾಕ್ತಿದ್ದಿದೆ. ನಿನ್ನ ಬಗ್ಗೇನೇ ಒಂದು ಪದ್ಯ ರಚಿಸಿದ್ದೂ ಇದೆ... ನಮ್ಮ ಅಭಿರುಚಿಯನ್ನ ಬೇರೆಯವರಿಗೆ ತಿಳಿಸುವ ಮಾಧ್ಯಮ ನೀನೆ, ಆದರೆ ಇತ್ತೀಚೆಗೆ ಯಾಕೋ ಗೊತ್ತಿಲ್ಲ, ಆರ್ಕುಟ್ ಅಂದರೆ ನೀನು boring ಅನ್ನಿಸ್ತಾ ಇದಿಯ. ಆರ್ಕುಟ್ ಇದ್ದರೆ ಅದರಲ್ಲಿ ಇರೋ ಅಪಾರ ಮಿತ್ರವೃಂದವನ್ನ ಮಾತಾಡಿಸಬೇಕು ಅನ್ಸತ್ತೆ. ಆದರೆ ಅದಕ್ಕೆ ಸಮಯ ಸಿಕ್ತಾ ಇಲ್ಲ. ಎಷ್ಟೋ ಕಾಣದಿರುವ ಹೃದಯಗಳು, ಎಷ್ಟೋ ಕಾಣದಿರುವ ಮುಖಗಗಳು, ಎಲ್ಲಾ ನನಗೆ ನಿನ್ನಿಂದ ಸಿಕ್ಕಿತ್ತು. ಆದರೆ ನಾನು ಅದನ್ನೆಲ್ಲಾ maintain ಮಾಡಲಾರೆ. ಆರ್ಕುಟ್- ನಿನ್ನ ಬಿಟ್ಟು ದೂರ ಹೋಗ್ತಾ ಇದೀನಿ.
ನಿನ್ನ ಮತ್ತೊಬ್ಬ ಗೆಳೆಯ ಅನ್ನೋ ಈ Blogನಿಂದ ಯಾವಾಗ ದೂರ ಹೋಗ್ತೀನೋ ಗೊತ್ತಿಲ್ಲ. ನಾನು ನಿನ್ನಿಂದ ದೂರ ಹೋಗೊದಕ್ಕೆ ಏನುಕಾರಣ ಅಂತ ಮಾತ್ರ ಕೇಳ್ಬೇಡ Please... ಅದಕ್ಕೆ ಉತ್ತರ ನನ್ನ ಹತ್ತಿರ ಇಲ್ಲ. ಮತ್ತೊಮ್ಮೆ ನಿನ್ನ ಬಳಿ ಹಿಂದಿರುಗಬೇಕು ಅನ್ನಿಸ್ತಾ ಇದೆ, ಆದರೆ ಮನಸ್ಸು "ಬೇಡ ಮತ್ತೆ ಆ ಕಡೆಗೆ ಹೊರಳಬೇಡ" ಅಂತ ಸಾರಿ ಸಾರಿ ಹೇಳ್ತಾ ಇದೆ. ನಿಮ್ಮಿಬ್ಬರಿಗೂ ಬೇಸರ ಮಾಡೋದಕ್ಕೆ ನನಗೆ ಇಷ್ಟ ಇಲ್ಲ, ನಿನ್ನ ವಾರಕ್ಕೊಮ್ಮೆ ಬಂದು ಮಾತನಾಡಿಸಿಕೊಂಡು ಹೋಗ್ತೀನಿ, ಆಯ್ತಾ ???
Bye Bye orkut... ಮತ್ತೋಮ್ಮೆ ನಿನ್ನ ನಾನು ಹುಡುಕಿಕೊಂಡು ಬಂದು ನನ್ನ ಜೀವನದಲ್ಲಿ ಮತ್ತೋಂದು ತಿರುವಿಗೆ ಹೊರಳುವಂತೆ ಮಾಡಬೇಡ.
ನನಗೆ ನನ್ನ lifeನಲ್ಲಿ ಇದ್ದ ಒಂದು ದೊಡ್ಡ ಕೊರತೆಯನ್ನ ನೀಗಿಸಿದ್ದ ನಿನಗೆ ನನ್ನ Thanks. ಇಷ್ಟುದಿನ ನನ್ನ ಜೊತೆಗಿದ್ದು ನನ್ನ ಜೀವನದಲ್ಲಿ ಅನಿರೀಕ್ಷಿತ ತಿರುವುಗಳನ್ನು ನೀಡಿದ್ದ ನಿನಗೆ ನನ್ನ Thanks. ಸ್ನೇಹಕ್ಕಾಗಿ ಹಾತೊರೆಯುತ್ತಿದ್ದ ನನಗೆ ಸ್ನೇಹಿತರ ಅಪಾರ ಸಾಗರವನ್ನ ಪರಿಚಯ ಮಾಡಿಕೊಟ್ಟ ನಿನಗೆ Thanks. ನಾನು ಇವತ್ತು ನಿರ್ಧಾರ ಮಾಡಿದ್ದೇನೆ. ನಿನ್ನಿಂದ ನಾನು ದೂರ ಹೋಗ್ಬೇಕು ಅಂತ. Yes !!! i am going away from you. ಆದರೆ ಹೋಗೋದಕ್ಕೆ ಮುಂಚೆ ನಿನ್ನೊಡನೆ ನಾನು ಕಳೆದ ದಿನಗಳನ್ನ ಇಲ್ಲಿ ಮೆಲುಕುಹಾಕಬೇಕು ಅನ್ನಿಸ್ತಾ ಇದೆ !!!
ನನಗೆ ನಿನ್ನ ಪರಿಚಯ ಮಾಡಿಕೊಟ್ಟಿದ್ದು ನನ್ನ ಹಳೇ Officeನ friend ಕೃಷ್ಣ ಕುಮಾರ್. ಆರಂಭ ಶೂರತ್ವ ಆನೋಹಾಗೆ ಅಲ್ಲಿ ಒಂದು communitieನ ಶುರುಮಾಡಿ ಆಮೇಲೆ ಅದನ್ನ ಕಡೆಗಾಣಿಸಿಬಿಟ್ಟ. ೮/೧೪/೦೬ ಅಂದರೆ ನಮ್ಮ Independence dayಗೆ ಸರಿಯಾಗಿ ಒಂದು ದಿನ ಬಾಕಿ ಇತ್ತು. ಆವತ್ತು ನನಗೆ ಮೊದಲನೇ Scrap ಬಂದದ್ದು. ಅಲ್ಲಿಂದ ಶುರುಆದ ನಿನ್ನ ಪರಿಚಯ ಇಲ್ಲೀವರೆಗೂ ಬಂದಿದೆ. ಇನ್ನು ಮುಂದೆ ನನಗೆ ಗೊತ್ತಿಲ್ಲ. ನಿನ್ನ ಪರಿಚಯ ೧೪ನೇ ತಾರೀಖೇ ಆದರೂ ನಿನ್ನ ಬಗ್ಗೆ ನನಗೆ ಜಾಸ್ತಿ ಗೊತ್ತಿರಲಿಲ್ಲ. ಅದು ಗೊತ್ತಾಗಿದ್ದು ಸುಮಾರು ತಿಂಗಳುಗಳು ಕಳೆದಮೇಲೇ !!! ಒಬ್ಬರಿಂದ ಮತ್ತೊಬ್ಬರ ಪರಿಚಯ ಆಗ್ತಾ ನನ್ನ ಸ್ನೇಹದ ಸಂಕೋಲೆ ಬೆಳಿತಾ ಹೋಗ್ತಾ ಇತ್ತು. ಅಮರ, ಶಿಲ್ಪ, ಪ್ರಿಯ, ನವ್ಯ, ವಿಜಯ್, ವಿನೋದ್, ದೀಪ್ತಿ, ಅಮಿತ್, ಅರ್ಪಿತ, ಪುಷ್ಪ, ಜಯಶಂಕರ್, ಪ್ರಶಾಂತ್, ನಾರಾಯಣ, ತವಿಶ್ರೀ... ಹೀಗೇ ನನ್ನ ಆಪ್ತರ ಪಟ್ಟಿಮಾಡ್ತಾ ಹೋದರೆ ನನಗೆ ಒಂದು ದಿನ ಸಾಲೋದಿಲ್ಲ.
ಸ್ನೇಹ ಬೆಳಿತಾ ಇದ್ದಂತೆಲ್ಲಾ ನನ್ನಮೇಲೆ ಅದನ್ನು ನಿಭಾಯಿಸುವ ಜವಾಬ್ದಾರಿ ಬೆಳೀತಾ ಹೊಯ್ತು. ಪ್ರತೀ ದಿನ ಏನಾದರೊಂದು ಹೊಸತನ್ನು ನನ್ನ ಸ್ನೇಹಿತರಿಗೆ ಕೊಡಬೇಕೆನ್ನುವ ಹಂಬಲ. ಹಾಗಾಗಿ ಕೆಲವು ನುಡಿಮುತ್ತುಗಳನ್ನ, ಮತ್ತೆ ಕೆಲವು Jokes ಗಳನ್ನ ಪ್ರತೀ ದಿನ ನನ್ನ ಬಳಗಕ್ಕೆ Scrap ಮಾಡ್ತಾ ಇದ್ದೆ. ಕೆಲವೊಂದು ದಿನ ಅದು ಸಾಧ್ಯ ಆಗಲಿಲ್ಲ ಅಂದರೆ ಅದಕ್ಕೆ ಉತ್ತರವಾಗಿ ಸ್ನೇಹಿತರಿಂದ ಮತ್ತೋಂದು scrap ಬಂದಿರ್ತಿತ್ತು. ನನ್ನ ಬೆಂಗಳೂರಿನ Officeನಿಂದ ನನ್ನನ್ನು ಹೈದರಾಬಾದಿಗೆ ವರ್ಗಮಾಡಿದಾಗಲಂತೂ ನೀನು ನನ್ನ ಬೆನ್ನೆಲುಬಾಗಿ ನಿಂತಿದ್ದು ಮರೆಯೋಕೆ ಸಾಧ್ಯ ಇಲ್ಲ. ಆ ಗೊತ್ತಿಲ್ಲದ ನಾಡಿನಲ್ಲಿ ಕನ್ನಡಿಗರ ಪರಿಚಯಕ್ಕೆ ಮೂಲ ಕಾರಣ ನೀನೇ. ನಿನ್ನಿಂದಲೇ ನನಗೆ ಅಡುಗೆ ಹೇಳಿಕೊಡುವ ಟೀಚರ್ (ದೀಪ್ತಿ) ಪರಿಚಯ ಆದದ್ದು. ಸಾಹಿತ್ಯಾಭಿಮಾನಿ ಅಮರನ ಪರಿಚಯ ಆದದ್ದು, ಮನಸ್ಸಿನ ಮಾತ ಕೇಳುವ ಗೆಳೆಯರು ಸಿಕ್ಕಿದ್ದು, ನೊಂದ ಮನಸ್ಸಿಗೆ ಪ್ರೀತಿಯ ಮುಲಾಮು ಹಚ್ಚೋ ಕೈಗಳುಸಿಕ್ಕಿದ್ದು, ನನ್ನ ಬ್ಲಾಗ್ ಗುರು ಸೋಮನ ಪರಿಚಯ ಆದದ್ದು. ನನ್ನ ಬ್ಲಾಗ್ ಬರೋದಕ್ಕೆ ಸ್ಪೂರ್ತಿ ಕೊಟ್ಟ ಗೆಳೆಯು ವಿಜಯ್ ಪರಿಚಯವಾದದ್ದೂ ನಿನ್ನಿಂದಲೇ !!! ನಾನು ನಿನ್ನ ಇಷ್ಟಾ ಪಟ್ಟು ದೂರ ಕಳಿಸ್ಥಾ ಇಲ್ಲ, ಕಷ್ಟಾಪಟ್ಟು ನಾನೇ ದೂರ ಹೋಗ್ತಾ ಇದೀನಿ.
ಒಂದು ಕಾಲದಲ್ಲಿ ನೀನು ನನಗೆ ಎಷ್ಟು ಸನಿಹವಾಗಿದ್ದೆ ಅಂದರೆ ನಾನು ನನ್ನ ನಿದ್ದೆಬಿಟ್ಟು ನಿನ್ನ ಮುದ್ದಾಡಿದ್ದಿದೆ, ನಿನಗೆ ಸಿಂಗಾರ ಮಾಡಿದ್ದಿದೆ. ಇನ್ನೂ ಚುಮು ಚುಮು ಬಿಸಿಲು ಮೂಡೋದಕ್ಕೂ ಮುನ್ನ ನಿನ್ನಲ್ಲಿ ಹುದುಗಿರುವ ಅಪಾರ ಮಿತ್ರವೃಂದಕ್ಕೆ ಬೆಳಗ್ಗೆ ಬೆಳಗ್ಗೆ Good morning scrap ಹಾಕ್ತಿದ್ದಿದೆ. ನಿನ್ನ ಬಗ್ಗೇನೇ ಒಂದು ಪದ್ಯ ರಚಿಸಿದ್ದೂ ಇದೆ... ನಮ್ಮ ಅಭಿರುಚಿಯನ್ನ ಬೇರೆಯವರಿಗೆ ತಿಳಿಸುವ ಮಾಧ್ಯಮ ನೀನೆ, ಆದರೆ ಇತ್ತೀಚೆಗೆ ಯಾಕೋ ಗೊತ್ತಿಲ್ಲ, ಆರ್ಕುಟ್ ಅಂದರೆ ನೀನು boring ಅನ್ನಿಸ್ತಾ ಇದಿಯ. ಆರ್ಕುಟ್ ಇದ್ದರೆ ಅದರಲ್ಲಿ ಇರೋ ಅಪಾರ ಮಿತ್ರವೃಂದವನ್ನ ಮಾತಾಡಿಸಬೇಕು ಅನ್ಸತ್ತೆ. ಆದರೆ ಅದಕ್ಕೆ ಸಮಯ ಸಿಕ್ತಾ ಇಲ್ಲ. ಎಷ್ಟೋ ಕಾಣದಿರುವ ಹೃದಯಗಳು, ಎಷ್ಟೋ ಕಾಣದಿರುವ ಮುಖಗಗಳು, ಎಲ್ಲಾ ನನಗೆ ನಿನ್ನಿಂದ ಸಿಕ್ಕಿತ್ತು. ಆದರೆ ನಾನು ಅದನ್ನೆಲ್ಲಾ maintain ಮಾಡಲಾರೆ. ಆರ್ಕುಟ್- ನಿನ್ನ ಬಿಟ್ಟು ದೂರ ಹೋಗ್ತಾ ಇದೀನಿ.
ನಿನ್ನ ಮತ್ತೊಬ್ಬ ಗೆಳೆಯ ಅನ್ನೋ ಈ Blogನಿಂದ ಯಾವಾಗ ದೂರ ಹೋಗ್ತೀನೋ ಗೊತ್ತಿಲ್ಲ. ನಾನು ನಿನ್ನಿಂದ ದೂರ ಹೋಗೊದಕ್ಕೆ ಏನುಕಾರಣ ಅಂತ ಮಾತ್ರ ಕೇಳ್ಬೇಡ Please... ಅದಕ್ಕೆ ಉತ್ತರ ನನ್ನ ಹತ್ತಿರ ಇಲ್ಲ. ಮತ್ತೊಮ್ಮೆ ನಿನ್ನ ಬಳಿ ಹಿಂದಿರುಗಬೇಕು ಅನ್ನಿಸ್ತಾ ಇದೆ, ಆದರೆ ಮನಸ್ಸು "ಬೇಡ ಮತ್ತೆ ಆ ಕಡೆಗೆ ಹೊರಳಬೇಡ" ಅಂತ ಸಾರಿ ಸಾರಿ ಹೇಳ್ತಾ ಇದೆ. ನಿಮ್ಮಿಬ್ಬರಿಗೂ ಬೇಸರ ಮಾಡೋದಕ್ಕೆ ನನಗೆ ಇಷ್ಟ ಇಲ್ಲ, ನಿನ್ನ ವಾರಕ್ಕೊಮ್ಮೆ ಬಂದು ಮಾತನಾಡಿಸಿಕೊಂಡು ಹೋಗ್ತೀನಿ, ಆಯ್ತಾ ???
Bye Bye orkut... ಮತ್ತೋಮ್ಮೆ ನಿನ್ನ ನಾನು ಹುಡುಕಿಕೊಂಡು ಬಂದು ನನ್ನ ಜೀವನದಲ್ಲಿ ಮತ್ತೋಂದು ತಿರುವಿಗೆ ಹೊರಳುವಂತೆ ಮಾಡಬೇಡ.
Tuesday, May 20, 2008
ಎಚ್ಚರಿಕೆ !!!
೨೦-ಮೇ-೨೦೦೮
ಇವತ್ತಿಗೆ ನಮ್ಮ ಕಂಪನಿಯ ಮತ್ತೊಂದು Wicket ಬಿತ್ತು. ನಾನು ಕಳೆದ ಒಂದು ವರುಷ ಏಳು ತಿಂಗಳಿಂದಾ ಕೆಲಸಮಾಡುತ್ತಿರುವ ಕಂಪನಿಯ ಆಗು ಹೋಗುಗಳನ್ನ ಗಮನಿಸುತ್ತಾ ಬಂದಿದ್ದೇನೆ. ಒಂದು ಕಂಪನಿಯಲ್ಲಿ ಯಾವ ಯಾವ ರೀತಿಯ ವಾತಾವರಣ ಏನೆಲ್ಲಾ ಮಾಡಬಲ್ಲದು ಅನ್ನೋದಕ್ಕೆ ನಿದರ್ಶನ ಈ ಕಂಪನಿ. ರಾಜಕೀಯ ಅನ್ನೋದು ಕೇವಲ ರಾಜಕಾರಣಿಗಳಿಗಷ್ಟೇ ಸೀಮಿತವಲ್ಲ. ರಾಜಕಾರಣ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹೇರಳವಾಗಿ ಹಬ್ಬಿದೆ. ಒಂದೇ ಸ್ಥಳದಲ್ಲಿದ್ದುಕೊಂಡು ಒಬ್ಬರಮೇಲೆ ಮತ್ತೋಬ್ಬರು ಕತ್ತಿಮಸೆಯುವುದು, ದ್ವೇಷಿಸುವುದು, ಹೊಟ್ಟೇಕಿಚ್ಚು ಪಡುವುದು ಏನೆಲ್ಲಾ ನಮ್ಮ ನಡೆಯುತ್ತಿರುತ್ತದೆ, ನಾವು ಅದನ್ನು ಗಮನಿಸಿ ನೋಡಬೇಕಷ್ಟೆ !!!!
ಯಾರದ್ದೋ ಕಿವಿಮಾತನ್ನು ಕೇಳಿಕೊಂಡು ತಮ್ಮ ಸ್ವಂತಿಕೆಯನ್ನೇ ಕಳೆದುಕೊಂಡು ಸೂತ್ರದ ಗೊಂಬೆಗಳಂತಿರುವ ಜನರು ಹಲವಾರು. ತಮ್ಮ ವೈಯುಕ್ತಿಕ ದ್ವೇಷದಿಂದ ಮತ್ತೊಬ್ಬರ ಜೀವನವನ್ನು ಕಷ್ಟಕ್ಕೀಡುಮಾಡುವವರು ಬಹಳಮಂದಿ. ನಮ್ಮ Office ನಲ್ಲೂ ಕೂಡಾ ಅಂತಹಾ ಒಬ್ಬ ವ್ಯಕ್ತಿ ನನ್ನ ಸಹೋದ್ಯೋಗಿಯು ಕೆಲಸ ಕಳೆದುಕೊಳ್ಳಲು ಮುಖ್ಯ ಕಾರಣ. ರೇಷ್ಮಾ ಕೆಲಸಕ್ಕೆ ಸೇರಿ ಇನ್ನು ಒಂದು ವರುಷವೂ ಆಗಿಲ್ಲ, ಆಗಲೇ ನಮ್ಮ Boss ಅನ್ನು ತನ್ನ ಮೋಡಿಯಲ್ಲಿ ಮರಳುಮಾಡಿ ಒಂದುರೀತಿಯಲ್ಲಿ ಪೂರ್ಣವಾಗಿ ತನ್ನ ಅಧಿಕಾರ ಸ್ಥಾಪನೆ ಮಾಡಲು ಹೊರಟಿರುವ ಧೀರ ಮಹಿಳಾಮಣಿ. ತನಗಾಗದವರನ್ನು ಒಂದಲ್ಲಾ ಒಂದು ಸಬೂಬು ಹೇಳಿಕೊಂಡು ಕೆಲಸದಿಂದ ತೆಗೆಯುತ್ತಾ ಬಂದಿರುವ ಈಕೆಯ ಪಾಪದ ಕೊಡ ಎಂದಿಗೆ ತುಂಬುತ್ತದೋ ಎಂದು ಮಿಕ್ಕ ಎಲ್ಲಾಮಂದಿ ಕಾಯ್ತಾ ಕುಳಿತಿದ್ದಾರೆ. ನಮ್ಮ ಈ ಅಳಲನ್ನು ನಮ್ಮ Boss ತನಕ ನಾವು ತಲುಪಿಸಲು ಆಗುತ್ತಿರಲಿಲ್ಲ. ಅಷ್ಟರಮಟ್ಟಿಗೆ ಅವಳಮೋಡಿ ನನ್ನ ಬಾಸ್ ಮೇಲೆ ಪರಿಣಾಮ ಬೀರಿದೆ. ತನಗಾಗದವರನ್ನ ಏನಾದರೂ ಮಾಡಿ ಕೆಲಸದಿಂದ ತೆಗೆಸಿ ತನ್ನ ಬಳಗವನ್ನ ಸೇರಿಸಿಕೊಳ್ಳುವುದು ಆಕೆಯ ದುರುದ್ದೇಶ. ಏಲ್ಲರನ್ನೂ ತನ್ನ ಅಧೀನದಲ್ಲಿ ಇಟ್ಟುಕೊಳ್ಳಬೇಕೆಂಬ ದುರಾಸೆ. ಕನ್ನಡಿಗರನ್ನು ಕಂಡರೆ ತಾತ್ಸಾರ, ತಮಿಳಿಗರಲ್ಲಿ ಅಪಾರ ಮಮಕಾರ. ನಾನು ಇಲ್ಲಿಗೆ ಸೇರಿದಮೇಲೆ ಸರಿ ಸುಮಾರು ೫ ಜನರನ್ನ ಕೆಲಸಬಿಡುವಂತೆ ಒತ್ತಡ ತಂದವಳು ಈಕೆ. ಏನೇ ಆದರೂ ಪ್ರತಿಯೊಬ್ಬರೂ ತನ್ನ ಮಾತನ್ನೇ ಕೇಳಬೇಕು, ತನಗಿಲ್ಲದ ಹಕ್ಕನ್ನು ಸಾಧಿಸಬೇಕೆಂಬ ಹಟ. ಆಕೆಯ ವಿರುದ್ದವಾಗಿರುವವರ ಮೇಲೆ ತನ್ನ ಕೆಂಗಣ್ಣು ಬಿಟ್ಟು ಅವರನ್ನು ಕೆಲಸದಿಂದ ತೆಗೆಸುವುದರಲ್ಲೇ ಒಂದು ರೀತಿಯ ಸಂತೃಪ್ತಿ ಅವಳಿಗೆ.
ನನ್ನ ಸಹೊದ್ಯೋಗಿಗಳಲ್ಲಿ ಕೆಲವರಿಗೆ ಅವರು ಮಾಡಿದ ಕೆಲಸಕ್ಕೆ Experience certificate ಕೂಡಾ ಸಿಗದಂತೆ ಮಾಡಿದ್ದವಳು ಈಕೆ. ಇಂದಿನ ಸರದಿ ನನ್ನ ಗೆಳೆಯ, ಸಹೋದ್ಯೋಗಿ ಹರೀಶನದು. ತನ್ನ ಹಿಂದಿನ ಕಂಪನಿಯಲ್ಲಿ ರಾತ್ರಿಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಅವನಿಗೆ ರಾತ್ರಿ ನಿದ್ರೆ ತಡವಾಗಿ ಬರುತ್ತಿದ್ದರಿಂದ ಬೆಳಗಿನ ಸಮಯದಲ್ಲಿ ಕೆಲಸಕ್ಕೆ ಬರುವುದು ತಡವಾಗುತ್ತಿತ್ತು. ಅದಕ್ಕೆ ತಕ್ಕಂತೆ ಅವನು ರಾತ್ರಿ ತಡವಾಗಿ ಹೋಗುತ್ತಿದ್ದ. ಪ್ರತಿಯೊಂದು Customer call ಅನ್ನೂ attend ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ. ಹೆಚ್ಚು ಕಡಿಮೆ ಒಂದು ವರುಷದಿಂದ ಕೆಲಸ ಮಾಡುತ್ತಿದ್ದ ಅವನಿಗೆ ನಮ್ಮ ರೇಷ್ಮಳನ್ನು ಕಂಡರೆ ಅಷ್ಟಕ್ಕಷ್ಟೇ... ಹಾಗಾಗಿ ಅವಳ ಕೆಂಗಣ್ಣಿಗೆ ಗುರಿಯಾಗಿದ್ದ. ನಾನು ಸೇರಿದ ಹೊಸದರಲ್ಲಿ ಇಲ್ಲಿನ ಉದ್ಯೋಗಿಗಳ ಸಂಖ್ಯೆ ೨೦ ಇದ್ದದ್ದು ಇಂದು ೯ಕ್ಕೆ ಬಂದಿಳಿದಿದೆ. ಪ್ರತೀ meeting ನಲ್ಲೂ ನಾವು ಅಷ್ಟುಜನರನ್ನ Interview ಮಾಡಿದ್ದೇವೆ, ಇಷ್ಟು ಜನ ಕೆಲಸಕ್ಕೆ ಸೇರಬೇಕಿದೆ ಎಂದೆಲ್ಲಾ ಭರವಸೆಯನ್ನ ಕೊಡುತ್ತಾ ಬಂದರೂ ಇಲ್ಲಿಯತನಕ ನಾನು ಯಾವುದೂ ಕಾರ್ಯರೂಪಕ್ಕೆ ಬಂದಿರುವುದನ್ನು ಕಂಡಿಲ್ಲ. ಇನ್ನೂ ಇಲ್ಲಿ ಇರುವ ಉದ್ಯೋಗಿಗಳೇ ಇಲ್ಲಿನ ವಾತಾವರಣ ಸರಿಯಿಲ್ಲ ಎಂದು ಕೆಲಸ ತೊರೆದಿರುವುದನ್ನ ಕಂಡಿದ್ದೇನೆ. ನಿಮಿಷಕ್ಕೊಂದು ನಿರ್ಧಾರವನ್ನ ತೆಗೆದುಕೊಳ್ಳುವ ನನ್ನ reporting officer, so called sales head ಗೆ ಕೆಲಸ ಮಾಡಿದರೂ ತಪ್ಪು ಕೆಲಸ ಮಾಡದಿದ್ದರೂ ತಪ್ಪು. ದೃಢ ನಿರ್ಧಾರವನ್ನ ತೆಗೆದುಕೊಳ್ಳದವರನ್ನು ನೇಮಕಾತಿ ಮಾಡಿಕೊಂಡಿರುವ ನಮ್ಮ Boss, ಅವಳ ಮಾತನ್ನು ಕೇಳಿಕೊಂಡು ನಮ್ಮ ಕಾರ್ಯಾಲಯದ ವಾಸ್ತುವನ್ನ ಬದಲಿಸ ಹೊರಟಿದ್ದಾರೆ !!!! ಮುಗ್ದ ಮನಸಿನ ನನ್ನ Boss ಅನ್ನು ಯಾವ ಯಾವ ರೀತಿಯಲ್ಲಿ ವಶಪಡಿಸಿಕೊಳ್ಳಬಹುದು ಏಂಬುದನ್ನ ಚೆನ್ನಾಗಿ ಅರಿತಿರುವ ಈಕೆ ಎಲ್ಲರೆದುರು ತಾನೊಬ್ಬಳೇ ಕೆಲಸಮಾಡುತ್ತಿರುವುದಾಗಿ ತೋರ್ಪಡಿಸುತ್ತಾಳೆ. ನಾನಿಲ್ಲಿ ಬರೆದಿರುವುದು ಅವಳ ಗುಣವನ್ನ ಎಲ್ಲರಿಗೂ ಪ್ರಚಾರ ಪಡಿಸುವ ಉದ್ದೇಶದಿಂದಲ್ಲ, ನನ್ನ ಕಾರ್ಯಾಲಯದಂತೆಯೇ ಬೇರೆ ಕಾರ್ಯಾಲಯದಲ್ಲೂ ಕೂಡಾ ರೇಷ್ಮಾಳಂತ ವ್ಯಕ್ತಿಗಳು ಹೇರಳವಾಗಿ ಇದ್ದೇ ಇರುತ್ತಾರೆ. ನಾವು ನಮ್ಮ ಎಚ್ಚರಿಕೆಯಲ್ಲಿ ಇರಬೇಕಷ್ಟೇ !!!
ಇವತ್ತಿಗೆ ನಮ್ಮ ಕಂಪನಿಯ ಮತ್ತೊಂದು Wicket ಬಿತ್ತು. ನಾನು ಕಳೆದ ಒಂದು ವರುಷ ಏಳು ತಿಂಗಳಿಂದಾ ಕೆಲಸಮಾಡುತ್ತಿರುವ ಕಂಪನಿಯ ಆಗು ಹೋಗುಗಳನ್ನ ಗಮನಿಸುತ್ತಾ ಬಂದಿದ್ದೇನೆ. ಒಂದು ಕಂಪನಿಯಲ್ಲಿ ಯಾವ ಯಾವ ರೀತಿಯ ವಾತಾವರಣ ಏನೆಲ್ಲಾ ಮಾಡಬಲ್ಲದು ಅನ್ನೋದಕ್ಕೆ ನಿದರ್ಶನ ಈ ಕಂಪನಿ. ರಾಜಕೀಯ ಅನ್ನೋದು ಕೇವಲ ರಾಜಕಾರಣಿಗಳಿಗಷ್ಟೇ ಸೀಮಿತವಲ್ಲ. ರಾಜಕಾರಣ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹೇರಳವಾಗಿ ಹಬ್ಬಿದೆ. ಒಂದೇ ಸ್ಥಳದಲ್ಲಿದ್ದುಕೊಂಡು ಒಬ್ಬರಮೇಲೆ ಮತ್ತೋಬ್ಬರು ಕತ್ತಿಮಸೆಯುವುದು, ದ್ವೇಷಿಸುವುದು, ಹೊಟ್ಟೇಕಿಚ್ಚು ಪಡುವುದು ಏನೆಲ್ಲಾ ನಮ್ಮ ನಡೆಯುತ್ತಿರುತ್ತದೆ, ನಾವು ಅದನ್ನು ಗಮನಿಸಿ ನೋಡಬೇಕಷ್ಟೆ !!!!
ಯಾರದ್ದೋ ಕಿವಿಮಾತನ್ನು ಕೇಳಿಕೊಂಡು ತಮ್ಮ ಸ್ವಂತಿಕೆಯನ್ನೇ ಕಳೆದುಕೊಂಡು ಸೂತ್ರದ ಗೊಂಬೆಗಳಂತಿರುವ ಜನರು ಹಲವಾರು. ತಮ್ಮ ವೈಯುಕ್ತಿಕ ದ್ವೇಷದಿಂದ ಮತ್ತೊಬ್ಬರ ಜೀವನವನ್ನು ಕಷ್ಟಕ್ಕೀಡುಮಾಡುವವರು ಬಹಳಮಂದಿ. ನಮ್ಮ Office ನಲ್ಲೂ ಕೂಡಾ ಅಂತಹಾ ಒಬ್ಬ ವ್ಯಕ್ತಿ ನನ್ನ ಸಹೋದ್ಯೋಗಿಯು ಕೆಲಸ ಕಳೆದುಕೊಳ್ಳಲು ಮುಖ್ಯ ಕಾರಣ. ರೇಷ್ಮಾ ಕೆಲಸಕ್ಕೆ ಸೇರಿ ಇನ್ನು ಒಂದು ವರುಷವೂ ಆಗಿಲ್ಲ, ಆಗಲೇ ನಮ್ಮ Boss ಅನ್ನು ತನ್ನ ಮೋಡಿಯಲ್ಲಿ ಮರಳುಮಾಡಿ ಒಂದುರೀತಿಯಲ್ಲಿ ಪೂರ್ಣವಾಗಿ ತನ್ನ ಅಧಿಕಾರ ಸ್ಥಾಪನೆ ಮಾಡಲು ಹೊರಟಿರುವ ಧೀರ ಮಹಿಳಾಮಣಿ. ತನಗಾಗದವರನ್ನು ಒಂದಲ್ಲಾ ಒಂದು ಸಬೂಬು ಹೇಳಿಕೊಂಡು ಕೆಲಸದಿಂದ ತೆಗೆಯುತ್ತಾ ಬಂದಿರುವ ಈಕೆಯ ಪಾಪದ ಕೊಡ ಎಂದಿಗೆ ತುಂಬುತ್ತದೋ ಎಂದು ಮಿಕ್ಕ ಎಲ್ಲಾಮಂದಿ ಕಾಯ್ತಾ ಕುಳಿತಿದ್ದಾರೆ. ನಮ್ಮ ಈ ಅಳಲನ್ನು ನಮ್ಮ Boss ತನಕ ನಾವು ತಲುಪಿಸಲು ಆಗುತ್ತಿರಲಿಲ್ಲ. ಅಷ್ಟರಮಟ್ಟಿಗೆ ಅವಳಮೋಡಿ ನನ್ನ ಬಾಸ್ ಮೇಲೆ ಪರಿಣಾಮ ಬೀರಿದೆ. ತನಗಾಗದವರನ್ನ ಏನಾದರೂ ಮಾಡಿ ಕೆಲಸದಿಂದ ತೆಗೆಸಿ ತನ್ನ ಬಳಗವನ್ನ ಸೇರಿಸಿಕೊಳ್ಳುವುದು ಆಕೆಯ ದುರುದ್ದೇಶ. ಏಲ್ಲರನ್ನೂ ತನ್ನ ಅಧೀನದಲ್ಲಿ ಇಟ್ಟುಕೊಳ್ಳಬೇಕೆಂಬ ದುರಾಸೆ. ಕನ್ನಡಿಗರನ್ನು ಕಂಡರೆ ತಾತ್ಸಾರ, ತಮಿಳಿಗರಲ್ಲಿ ಅಪಾರ ಮಮಕಾರ. ನಾನು ಇಲ್ಲಿಗೆ ಸೇರಿದಮೇಲೆ ಸರಿ ಸುಮಾರು ೫ ಜನರನ್ನ ಕೆಲಸಬಿಡುವಂತೆ ಒತ್ತಡ ತಂದವಳು ಈಕೆ. ಏನೇ ಆದರೂ ಪ್ರತಿಯೊಬ್ಬರೂ ತನ್ನ ಮಾತನ್ನೇ ಕೇಳಬೇಕು, ತನಗಿಲ್ಲದ ಹಕ್ಕನ್ನು ಸಾಧಿಸಬೇಕೆಂಬ ಹಟ. ಆಕೆಯ ವಿರುದ್ದವಾಗಿರುವವರ ಮೇಲೆ ತನ್ನ ಕೆಂಗಣ್ಣು ಬಿಟ್ಟು ಅವರನ್ನು ಕೆಲಸದಿಂದ ತೆಗೆಸುವುದರಲ್ಲೇ ಒಂದು ರೀತಿಯ ಸಂತೃಪ್ತಿ ಅವಳಿಗೆ.
ನನ್ನ ಸಹೊದ್ಯೋಗಿಗಳಲ್ಲಿ ಕೆಲವರಿಗೆ ಅವರು ಮಾಡಿದ ಕೆಲಸಕ್ಕೆ Experience certificate ಕೂಡಾ ಸಿಗದಂತೆ ಮಾಡಿದ್ದವಳು ಈಕೆ. ಇಂದಿನ ಸರದಿ ನನ್ನ ಗೆಳೆಯ, ಸಹೋದ್ಯೋಗಿ ಹರೀಶನದು. ತನ್ನ ಹಿಂದಿನ ಕಂಪನಿಯಲ್ಲಿ ರಾತ್ರಿಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಅವನಿಗೆ ರಾತ್ರಿ ನಿದ್ರೆ ತಡವಾಗಿ ಬರುತ್ತಿದ್ದರಿಂದ ಬೆಳಗಿನ ಸಮಯದಲ್ಲಿ ಕೆಲಸಕ್ಕೆ ಬರುವುದು ತಡವಾಗುತ್ತಿತ್ತು. ಅದಕ್ಕೆ ತಕ್ಕಂತೆ ಅವನು ರಾತ್ರಿ ತಡವಾಗಿ ಹೋಗುತ್ತಿದ್ದ. ಪ್ರತಿಯೊಂದು Customer call ಅನ್ನೂ attend ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ. ಹೆಚ್ಚು ಕಡಿಮೆ ಒಂದು ವರುಷದಿಂದ ಕೆಲಸ ಮಾಡುತ್ತಿದ್ದ ಅವನಿಗೆ ನಮ್ಮ ರೇಷ್ಮಳನ್ನು ಕಂಡರೆ ಅಷ್ಟಕ್ಕಷ್ಟೇ... ಹಾಗಾಗಿ ಅವಳ ಕೆಂಗಣ್ಣಿಗೆ ಗುರಿಯಾಗಿದ್ದ. ನಾನು ಸೇರಿದ ಹೊಸದರಲ್ಲಿ ಇಲ್ಲಿನ ಉದ್ಯೋಗಿಗಳ ಸಂಖ್ಯೆ ೨೦ ಇದ್ದದ್ದು ಇಂದು ೯ಕ್ಕೆ ಬಂದಿಳಿದಿದೆ. ಪ್ರತೀ meeting ನಲ್ಲೂ ನಾವು ಅಷ್ಟುಜನರನ್ನ Interview ಮಾಡಿದ್ದೇವೆ, ಇಷ್ಟು ಜನ ಕೆಲಸಕ್ಕೆ ಸೇರಬೇಕಿದೆ ಎಂದೆಲ್ಲಾ ಭರವಸೆಯನ್ನ ಕೊಡುತ್ತಾ ಬಂದರೂ ಇಲ್ಲಿಯತನಕ ನಾನು ಯಾವುದೂ ಕಾರ್ಯರೂಪಕ್ಕೆ ಬಂದಿರುವುದನ್ನು ಕಂಡಿಲ್ಲ. ಇನ್ನೂ ಇಲ್ಲಿ ಇರುವ ಉದ್ಯೋಗಿಗಳೇ ಇಲ್ಲಿನ ವಾತಾವರಣ ಸರಿಯಿಲ್ಲ ಎಂದು ಕೆಲಸ ತೊರೆದಿರುವುದನ್ನ ಕಂಡಿದ್ದೇನೆ. ನಿಮಿಷಕ್ಕೊಂದು ನಿರ್ಧಾರವನ್ನ ತೆಗೆದುಕೊಳ್ಳುವ ನನ್ನ reporting officer, so called sales head ಗೆ ಕೆಲಸ ಮಾಡಿದರೂ ತಪ್ಪು ಕೆಲಸ ಮಾಡದಿದ್ದರೂ ತಪ್ಪು. ದೃಢ ನಿರ್ಧಾರವನ್ನ ತೆಗೆದುಕೊಳ್ಳದವರನ್ನು ನೇಮಕಾತಿ ಮಾಡಿಕೊಂಡಿರುವ ನಮ್ಮ Boss, ಅವಳ ಮಾತನ್ನು ಕೇಳಿಕೊಂಡು ನಮ್ಮ ಕಾರ್ಯಾಲಯದ ವಾಸ್ತುವನ್ನ ಬದಲಿಸ ಹೊರಟಿದ್ದಾರೆ !!!! ಮುಗ್ದ ಮನಸಿನ ನನ್ನ Boss ಅನ್ನು ಯಾವ ಯಾವ ರೀತಿಯಲ್ಲಿ ವಶಪಡಿಸಿಕೊಳ್ಳಬಹುದು ಏಂಬುದನ್ನ ಚೆನ್ನಾಗಿ ಅರಿತಿರುವ ಈಕೆ ಎಲ್ಲರೆದುರು ತಾನೊಬ್ಬಳೇ ಕೆಲಸಮಾಡುತ್ತಿರುವುದಾಗಿ ತೋರ್ಪಡಿಸುತ್ತಾಳೆ. ನಾನಿಲ್ಲಿ ಬರೆದಿರುವುದು ಅವಳ ಗುಣವನ್ನ ಎಲ್ಲರಿಗೂ ಪ್ರಚಾರ ಪಡಿಸುವ ಉದ್ದೇಶದಿಂದಲ್ಲ, ನನ್ನ ಕಾರ್ಯಾಲಯದಂತೆಯೇ ಬೇರೆ ಕಾರ್ಯಾಲಯದಲ್ಲೂ ಕೂಡಾ ರೇಷ್ಮಾಳಂತ ವ್ಯಕ್ತಿಗಳು ಹೇರಳವಾಗಿ ಇದ್ದೇ ಇರುತ್ತಾರೆ. ನಾವು ನಮ್ಮ ಎಚ್ಚರಿಕೆಯಲ್ಲಿ ಇರಬೇಕಷ್ಟೇ !!!
Wednesday, April 30, 2008
ಹೀಗೊಂದು ಪತ್ರ...
ಹೀಗೊಂದು ಪತ್ರ...
ಜೀವನದಲ್ಲಿ ನಾವು ಕಂಡಿದ್ದೆಲ್ಲಾ ಆಗೋದಿಲ್ಲ ಅಲ್ವ ??? ಹೀಗೆ ನನ್ನ ಮಿತ್ರರೊಬ್ಬರು ಹೇಳೊವಾಗ ನನ್ಗೂ ಅದು ಸತ್ಯ ಅಂತ ಅನ್ನಿಸ್ತು, ನಾ ಕಂಡಿದ್ದ ಕನಸು, ಪಟ್ಟ ಆ ಪುಟ್ಟ ಪುಟ್ಟ ಆಸೆಗಳು ಎಲ್ಲಿಗೆ ಹೊರ್ಟ್ ಹೊಯ್ತು ???
ನಾನು ಹುಟ್ಟಿ ಬೆಳೆದ ಊರನ್ನ ಬಿಟ್ಟು ಕೆಲ್ಸಮಾಡೊದಿಕ್ಕೆ ಅಂತ ಸದಾ ಟ್ರಾಫಿಕ್ ಜ್ಯಾಮ್ಗಳೇ ತುಂಬಿರೋ ಬೆಂಗಳೂರಿಗೆ ಬಂದಿದ್ದೆ. ಅಲ್ಲಿ ೨ ಕಂಪನಿಯಲ್ಲಿನ ಅನುಭವದಿಂದ ಒಂದು ಕಂಪನಿ ಸೇರಿದ್ದೆ. ಅಲ್ಲಿ ಕೆಲವು ತಿಂಗಳು ಕೆಲಸ ಮಾಡಿ ನಂತರ ಕಂಪನಿಯವರು ಹೈದರಾಬಾದಿನಲ್ಲಿ ಮತ್ತೊಂದು ಶಾಖೆ ತೆರೆದಿದ್ದರಿಂದ ಅಲ್ಲಿಗೆ ನನ್ನ ವರ್ಗಾಯಿಸಿದ್ದ್ರು.
ನನಗೂ ಹೊಸಾಜಾಗಕ್ಕೆ ಹೋಗಿ ಏನಾದರೂ ಕಲಿಯುವ, ಏನಾದರೂ ಸಾಧಿಸುವ ಉತ್ಸಾಹ, ಅದಕ್ಕೆ ನಾನೂ ಒಪ್ಪಿಕೊಂಡು ಮನೆಯಲ್ಲಿ ವಿಷಯ ತಿಳಿಸಿ ನನ್ನ ಪ್ರಯಾಣ ಬೆಳೆಸಿದ್ದೆ. ಹೈದರಾಬಾದಿನ ನನ್ನ ಮ್ಯಾನೇಜರ್ ಆದ ವ್ಯಕ್ತಿ ಮೊದಲೇ ಅಲ್ಲಿನ ಜನರಬಗ್ಗೆ ಎಚ್ಚರಿಕೆ ಕೊಟ್ಟಿದ್ದರೂ ಅಲ್ಲಿ ಕಾಲಿಡುತ್ತಿದ್ದಂತೇ ಒಬ್ಬ ಆಟೋ ಚಾಲಕನಿಂದ ಮೋಸಹೋಗಿ ನಾನು ತಲುಪಬೇಕಾದ ಹೋಟೆಲ್ ತಲುಪಿದೆ. ಅಲ್ಲಿಂದ ನನ್ನ ಮ್ಯಾನೇಜರ್ ಗೆ ವಿಷಯ ತಿಳಿಸಿದಾಗ ಅವರೇ ಬಂದು ನನ್ನ ಹೋಟೇಲಿಂದ ನನ್ನ ಹೊಸಾ ಆಫೀಸಿಗೆ ಕರೆತಂದಿದ್ದರು. ಹೊಸಾ ಜಾಗ, ಹೊಸಾ ಜನ... ನಾನು ಅಲ್ಲಿಗೆ ಹೇಗೆ ಹೊಂದಿಕೊಳ್ಳೋದು ಅಂತ ವಿಚಾರ ಮಾಡ್ತಾಇದ್ದಾಗ ಶಿವರಾಜ್ ಪರಿಚಯ ಆಯ್ತು. ಅಲ್ಲಿ ಬಂದು ಒಂದು ಸಮಾಧಾನ ಏನಂದ್ರೆ ನನ್ನ ಮ್ಯಾನೇಜರ್ ಮತ್ತೆ ಶಿವರಾಜ್ ಇಬ್ಬರೂ ಕನ್ನಡಿಗರು... ಆದರೆ ಧಾರವಾಡದವರು. ನಾನು ಮೊದಲ ಒಂದುವಾರ ಅಲ್ಲಿಯ ಹೋಟೇಲ್ ಒಂದರಲ್ಲಿ ತಂಗಿದ್ದು ನಂತರ ಶಿವರಾಜ್ ನೆರವಿನಿಂದ ಒಂದು ಮನೆ ಬಾಡಿಗೆ ಪಡೆದೆ.
ನಾನು ಬಂದ ಮೊದಲ ದಿನಗಳಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಶಿವರಾಜ್ ನಂತರದ ದಿನಗಳಲ್ಲಿ ಅದಕ್ಕಿಂತ ಹೆಚ್ಚಿಗೆ ಮಿತ್ರರಾಗಿ ನನ್ನ ಸಹಾಯಕ್ಕೆ ಬಂದ್ರು. ನಾನು ಅಲ್ಲಿ ಕೆಲವು ತಿಂಗಳು ಇರ್ಬೆಕು ಅಂತ ನನ್ಗೆ ತಿಳಿದಿತ್ತು, ಹಾಗಾಗಿ ಅಲ್ಲೇ ಒಂದು ಮನೆ ಬಾಡಿಗೆಗೆ ಹುಡುಕ್ತಾ ಇದ್ವಿ ನಾನು ಮತ್ತೆ ಶಿವರಾಜ್. ತಿರುಮಲಗಿರಿಯಲ್ಲಿ ಒಂದು ಮನೆ ಇರೊ ವಿಚಾರ ನಮ್ಗೆ ಗೊತ್ತಾಯ್ತು. ಆಗ ಅಲ್ಲಿಗೆ ಹೋಗಿ ಮನೆ ಯಜಮಾನಿಜೊತೆ ಮಾತಾಡಿ ಮನೆ ಬಾಡಿಗೆಗೆ ಪಡ್ಕೊಂಡು ನಾನು ಇದ್ದ ಹೋಟೇಲನ್ನ ಖಾಲಿಮಾಡಿ ನನ್ನ ಹೊಸಾ ಮನೆಕಡೆಗೆ ಶಿವರಾಜ್ ಸಹಾಯದಿಂದ ಹೋದೆ.
ಇನ್ನು ನಾನು ನನ್ನ ಬಾಡಿಗೆ ಪಡೆದ ಮನೆ ಬಗ್ಗೆ ಹೇಳಬೇಕು ಅಂದ್ರೆ ಅದೇನು ದೊಡ್ಡ ಅರಮನೆಯಲ್ಲ, ಒಂದು ಪುಟ್ಟ ಸೂರು. ವಿಶಾಲವಾದ ಕಾಂಪೌನ್ಡ್ ಹೊಂದಿದ್ದ ಆ ಸೂರಿನಲ್ಲಿ ಒಟ್ಟು ೫ ಮನೆಗಳಿದ್ದವು. ನನ್ನಮನೆ ಮತ್ತೆ ಮಿಕ್ಕ ೩ ಮನೆಗಳನ್ನ ಬಿಟ್ಟು ನಮ್ಮ ಮನೆ ಯಜಮಾನಿ ಸಾಕಿದ ನಾಯಿಯನ್ನ ನೋಡಿಕೊಳ್ಳಲೆಂದೇ ಒಬ್ಬ ವಾಚ್ಮೆನ್ ಮನೆ ನನ್ನ ಮನೆ ಹಿಂದೆ ಇತ್ತು. ಆ ಪುಟ್ಟ ಮನೆಯಲ್ಲಿ ೫ ಜನರ ಸಂಸಾರ !!! ಅಂದರೆ ಆ ಕಾಂಪೌನ್ಡ್ ನ ಒಳಗೆ ಒಟ್ಟು ೫ ಮನೆಗಳು... ಅವುಗಳಲ್ಲಿ ಒಂದು ಮನೆ ಸದಾ ಬಾಗಿಲಿಗೆ ಬೀಗಾಹಾಕಿಕೊಂಡು ನಿದ್ದೆ ಮಾಡುತ್ತಿತ್ತು. ಮತ್ತೊಂದರಲ್ಲಿ ಒಂದು ಪುಟ್ಟ ಕುಟುಂಬ- ಅಪ್ಪ ಅಮ್ಮ ಮತ್ತೆ ಅವರಿಗಿದ್ದ ಎರೆಡು ಮಕ್ಕಳು. ಒಂದು ಗಂಡು ಮತ್ತೊಂದು ಹೆಣ್ಣು. ಆ ಪುಟ್ಟ ಹುಡುಗಿ ಹೆಸರು ಸಿಂಧು. ನನ್ನ ಮನೆಮೇಲೆ ಮತ್ತೊಬ್ಬ ಮಹಾರಾಷ್ಟ್ರದ ಹುಡುಗ ವಾಸಕ್ಕಿದ್ದ. ಅವನ ಹವ್ಯಾಸಗಳಬಗ್ಗೆ ಇಲ್ಲಿ ಹೇಳೋದು ಬೇಡ, ಒಟ್ಟಿನಲ್ಲಿ ಜಗತ್ತಿನ ಎಲ್ಲಾ ಕೆಟ್ಟ ಹವ್ಯಾಸಗಳೂ ಅವನಲ್ಲಿ ಮನೆ ಮಾಡಿತ್ತು.
ನಾನು ಮನೆ ಬಾಡಿಗೆ ಪಡೆದಾಗ ಮನೆ ನೋಡೊಕ್ಕೂ ಸಾಧ್ಯ ಆಗದೇ ಇರೋ ಸ್ಥಿತಿಯಲ್ಲಿತ್ತು. ಮನೆ ಯಜಮಾನಿಗೆ ೩.೦೦೦ ಹಣವನ್ನ ಮುಂಗಡವಾಗಿ ಕೊಟ್ಟು ಮನೆಗೆ ಬಣ್ಣ ಹೊಡಿಸಿ ತಯಾರು ಮಾಡಿಸಿದೆ. ಹಾಗೆ ನೋಡಿದ್ರೆ ನನಗೆ ಒಂದು ರೀತಿಯಲ್ಲಿ ಹವಾನಿಯಂತ್ರಿತ ಮನೆ ಸಿಕ್ಕುತ್ತು ಅನ್ನಿ. ಮನೆಯಲ್ಲಿದ್ದ ಕಿಟಕಿಗಳ ಗಾಜುಗಳು ಒಡೆದು ಅಲ್ಲಿಂದ ಹೇರಳವಾಗಿ ಗಾಳಿ ಬೀಸುತಿತ್ತು. ಇದರಿಂದ ಹಲವು ರೀತಿಯ ಅನುಕೂಲ ಇದೆ ನೋಡಿ- ಹೈದರಾಬಾದಿನ ಆ ಬೇಸಿಗೆಯಲ್ಲೂ ನನ್ನ ಮನೆ ತಂಪಗಿರುತಿತ್ತು.... ಇದರಿಂದ ಆಗೋ ವಿದ್ಯುತ್ ಉಳಿತಾಯದ ಲಾಭ ನನಗೇ ಅಲ್ವಾ ??? ಗಾಳಿ ಮನೆ ತುಂಬಿರ್ತಾ ಇದ್ದಿದ್ರಿಂದ ಒದ್ದೇ ಬಟ್ಟೆಗಳು ಬಹಳ ಬೇಗ ಒಣಗಿಬಿಡುತ್ತಿದ್ದವು. ರಾತ್ರಿ ನನ್ನ ಕಿವಿಗಳಿಗೆ ಇಂಪಾದ ಸಂಗೀತ ಕೇಳಿ ಬರುತ್ತಿತ್ತು... (ಅದು ಮೋಹಿನಿ ಕಾಟ ಅಲ್ಲ ಸ್ವಾಮೀ... ಸೊಳ್ಳೆಗಳ ಸಂಗೀತ).
ನಾನು ಇದ್ದ ನನ್ನ ಬಾಡಿಗೆ ಮನೇನಲ್ಲಿ ನನ್ನ ವಾಸ್ತವ್ಯದ ಮೊದಲು ಎರಡುತಿಂಗಳು ನನ್ನ ಮಿತ್ರರು ಅಂದ್ರೆ ನನ್ನಜೊತೆಗೆ ನಾನು ತಂದಿದ್ದ ನನ್ನ ಬೋನ್ಸಾಯ್, ಕಂಪ್ಯೂಟರ್ ಮತ್ತೆ ಅದರಲ್ಲಿ ಕೇಳಿ ಬರುತ್ತಿದ್ದ ಕನ್ನಡಮಾತು ಮತ್ತೆ ಹಾಡು. ಮನೆಯಿಂದ ಹೊರಗೆ ಬಂದರೆ ಬರೀ ತೆಲುಗು ಮತ್ತೆ ಹಿಂದಿ. ನನಗೆ ಹಿಂದಿ ಭಾಷೆತಿಳಿದಿದ್ದರಿಂದ ಹ್ಯಾಗೂ ನಿಭಾಯಿಸಿಕೊಂಡು ಹೊಗ್ತಾ ಇದ್ದೆ. ಇಲ್ಲಿಗೆ ಬಂದಮೇಲೆ ನಾನು ಅಪಾರ ಸ್ನೇಹಪಡೆದೆ, ಮಿತ್ರರನ್ನ ಪಡೆದೆ, ಒಂಟಿತನ ಏನೂ ಅನ್ನೊದನ್ನ ತಿಳ್ಕೊಂಡೆ, ನಮ್ಮ ಭಾಷೆ, ನಮ್ಮ ನಾಡಿನ ಮಹತ್ವನ್ನ ಇನ್ನೂ ಚೆನ್ನಾಗಿ ಅರಿತೆ. ಇನ್ನೂ ಹೇಳ್ಬೇಕು ಅಂದ್ರೆ ಉಪ್ಪಿಟ್ಟು ಮಾಡೊದು, ಅಡುಗೆ ಮಾಡೊದು, ಇದ್ದ ಒಂದೇ ಒಂದು ಕರೆಂಟ್ ಸ್ಟೊವ್ ಮತ್ತೆ ೪ ಪಾತ್ರೆಗಳಲ್ಲಿ ದಿನಾ ಅಡುಗೆ ಮಾಡ್ಕೊಂಡು, ಅದನ್ನೇ ತಿಂದ್ಕೊಂಡೂ, ಮನೆನ ಚೊಕ್ಕವಾಗಿ ಇಟ್ಕೊಳ್ಳೊಕೆ ಕಲ್ತೆ. ಹಾಗೇಂತ ನನ್ಗೆ ಇದೆಲ್ಲಾ ಮೊದ್ಲು ಬರ್ತಾಇರ್ಲಿಲ್ಲ ಅಂತ ಅಲ್ಲ, ಆದ್ರೂ ಅಡುಗೆ ಮಾಡೊದು ಕಮ್ಮಿನೇ ಇತ್ತು.
ಗೆಳೆಯರಿಲ್ಲ್ದೇ ನಾನು ಆ ಅಪರಿಚಿತ ಪ್ರದೇಶದಲ್ಲಿ ಇರೋದಿಕ್ಕೆ ಸಾಧ್ಯಾನೇ ಇರ್ಲಿಲ್ಲ. ಈ ಗೆಳೆತನ ಅನ್ನೋದು ತುಂಬಾ ವಿಚಿತ್ರವಾದದ್ದು. ನಾವೆಲ್ಲೋ ಇರ್ತೀವಿ, ಅವ್ರೆಲ್ಲೋ ಇರ್ತಾರೆ ಆದ್ರೂ ಅದು ಹೇಗೋ ಗೆಳೆತನ ಬೆಳೆದುಬಿಡತ್ತೆ. ಒಂದು ರೀತಿಯ ಬಾಂಧವ್ಯ ಬೆಳೆದುಬಿಡತ್ತೆ. ನಾನು ಅಲ್ಲಿ ಇದ್ದ ಆ ಕೆಲವು ದಿನಗಳಲ್ಲಿ ಪಡೆದ ಮಿತ್ರರ ಗಣನೆ ಅಪರಿಮಿತವಾದದ್ದು... ಆದರೂ ಶಿವರಾಜ್ ಬಿಟ್ಟು ಮರಿಯೋದಕ್ಕೇ ಆಗದೇ ಇರೋ ಗೆಳೆಯರು ಅಂದ್ರೆ ನನ್ನ ಮತ್ತಿಬ್ಬ ಸ್ನೇಹಿತರು- ವಿಜಯ್ ಮತ್ತೆ ಶಿಲ್ಪ. ವಿಜಯ್ ನನ್ನ್ಗೆ ಮತ್ತೊಬ್ಬ ಆರ್ಕುಟ್ ಮಿತ್ರ ಅಮರನಿಂದ ಪರಿಚಯವಾದ್ರೆ, ಶಿಲ್ಪ ವಿಜಯ್ ಮೂಲಕ ಪರಿಚಯವಾದ್ಳು. ನನ್ನ ಮುಂದಿನ ಭವಿಷ್ಯವನ್ನ ಅಲ್ಲಿ ರೂಪಿಸಿಕೊಳ್ಳೋಣ ಎಂದು ಲೆಕ್ಕಾಚಾರ ಹಾಕಿ ಅಲ್ಲಿಗೆ ಪ್ರಯಾಣ ಬೆಳೆಸಿದ್ದ ನನಗೆ ಅಲ್ಲಿನ ಜೀವನ ಬೇಸರ ತರಿಸುತ್ತಿತ್ತು.
ಅದನ್ನ ಹೋಗಲಾಡಿಸಿಕೊಳ್ಳಲು ಮತ್ತೆ ನನ್ನ ವೃತ್ತಿಜೀವನದಲ್ಲಿ ನನ್ನ ಕನಸನ್ನ ನನಸು ಮಾಡಿಕೊಳ್ಳಲು ಶಿಲ್ಪಜೊತೆ ಒಂದು ಕಂಪ್ಯೂಟರ್ ಕ್ಲಾಸಿಗೆ ಸೇರಿಕೊಂಡೆ. ನನ್ನ ಕಂಪ್ಯೂಟರ್ ಕ್ಲಾಸ್ ಇನ್ನೂ ಪ್ರಾರಂಭವಾಗಿರಲಿಲ್ಲ ನನಗೆ ನನ್ನ ಕಾರ್ಯಾಲಯದಿಂದ ಒಂದು ಮೈಲ್ ಬಂದಿತ್ತು. You are requested to visit bangalore office in 2 days ಮೊದಲೇ ಮನಸ್ಸಿಗೆ ಸಮಾಧಾನ ಸಿಕ್ಕಿರಲಿಲ್ಲ ಅದರ ನಡುವೆ ನನಗೆ ಬಂದ ಆ ಮೈಲ್ ಮನಸ್ಸಿನಲ್ಲಿ ಒಂದುರೀತಿಯ ಗೊಂದಲ ಉಂಟುಮಾಡಿತ್ತು. ನಮ್ಮ ಆಫೀಸಿನಲ್ಲಿ Boss ನ ಅನಿಸಿಕೆಯಂತೆ ಸೇಲ್ಸ್ ಆಗಿರಲಿಲ್ಲದ ಕಾರಣದಿಂದ ಈ ಮೀಟಿಂಗ್ ಅನ್ನೋದು ನನಗೆ ಮತ್ತೆ ಶಿವರಾಜ್ ಅವರಿಗೆ ಖಚಿತವಾಗಿ ಗೊತ್ತಿತ್ತು. ನಾವು ಬೆಂಗಳೂರಿಗೆ ಬಂದು, ನಮ್ಮ Boss ನ ಜೊತೆ ಮೀಟಿಂಗ್ ಮುಗಿಸಿದ ಮೇಲೆ ನಮ್ಮ ಅನುಮಾನಕ್ಕೆ ಪರಿಹಾರ ಸಿಕ್ಕಿತು. "ಹೈದರಾಬಾದಿನ ಬ್ರಾಂಚನ್ನು ಮುಚ್ಚಲಿದ್ದೇವೆ, ನೀವು ಮರಳಿ ಬೆಂಗಳೂರಿಗೆ ಇನ್ನುಳಿದ ೫ ದಿನದಲ್ಲಿ ಬರಬೇಕು" ಇದು ನನಗೆ ನನ್ನ ಮೇಲಿನವರಿಂದ ಬಂದ ಸೂಚನೆ. ಕೇವಲ ೫ ದಿನಗಳ ಸಮಯದಲ್ಲಿ ನನ್ನ ಆ ಮನೆಯನ್ನ ಖಾಲಿಮಾಡಿ ಬರುವುದು ಹುಡುಗಾಟವಲ್ಲ, ಆದರೂ ಬರಲೇ ಬೇಕಾಯಿತು. ನನ್ನ ಮನೆಯ ಯಜಮಾನಿ ತಕರಾರು ತೆಗೆದು ನನ್ನ ಮನೆಯ Advance ಅನ್ನು ಮರಳಿ ಹಿಂದಿರುಗಿಸಲಿಲ್ಲ.
ಕೊನೆಯದಾಗಿ ಹೈದರಾಬಾದಿನಲ್ಲಿ ಏನನ್ನೋ ಸಾದಿಸ ಹೊರಟಿದ್ದ ನಾನು ಮರಳಿ ನನ್ನ ಕರುನಾಡಿಗೆ ಪ್ರಯಾಣ ಬೆಳೆಸಿದ್ದೆ, ಹೈದರಾಬಾದಿನಲ್ಲಿ ನನಗೆ ಸಿಕ್ಕ ಅಪಾರ ಮಿತ್ರವೃಂದವನ್ನ ಜೊತೆಯಲ್ಲಿ ಕರುನಾಡಿಗೆ ತಂದಿದ್ದೆ.
ಜೀವನದಲ್ಲಿ ನಾವು ಕಂಡಿದ್ದೆಲ್ಲಾ ಆಗೋದಿಲ್ಲ ಅಲ್ವ ??? ಹೀಗೆ ನನ್ನ ಮಿತ್ರರೊಬ್ಬರು ಹೇಳೊವಾಗ ನನ್ಗೂ ಅದು ಸತ್ಯ ಅಂತ ಅನ್ನಿಸ್ತು, ನಾ ಕಂಡಿದ್ದ ಕನಸು, ಪಟ್ಟ ಆ ಪುಟ್ಟ ಪುಟ್ಟ ಆಸೆಗಳು ಎಲ್ಲಿಗೆ ಹೊರ್ಟ್ ಹೊಯ್ತು ???
ನಾನು ಹುಟ್ಟಿ ಬೆಳೆದ ಊರನ್ನ ಬಿಟ್ಟು ಕೆಲ್ಸಮಾಡೊದಿಕ್ಕೆ ಅಂತ ಸದಾ ಟ್ರಾಫಿಕ್ ಜ್ಯಾಮ್ಗಳೇ ತುಂಬಿರೋ ಬೆಂಗಳೂರಿಗೆ ಬಂದಿದ್ದೆ. ಅಲ್ಲಿ ೨ ಕಂಪನಿಯಲ್ಲಿನ ಅನುಭವದಿಂದ ಒಂದು ಕಂಪನಿ ಸೇರಿದ್ದೆ. ಅಲ್ಲಿ ಕೆಲವು ತಿಂಗಳು ಕೆಲಸ ಮಾಡಿ ನಂತರ ಕಂಪನಿಯವರು ಹೈದರಾಬಾದಿನಲ್ಲಿ ಮತ್ತೊಂದು ಶಾಖೆ ತೆರೆದಿದ್ದರಿಂದ ಅಲ್ಲಿಗೆ ನನ್ನ ವರ್ಗಾಯಿಸಿದ್ದ್ರು.
ನನಗೂ ಹೊಸಾಜಾಗಕ್ಕೆ ಹೋಗಿ ಏನಾದರೂ ಕಲಿಯುವ, ಏನಾದರೂ ಸಾಧಿಸುವ ಉತ್ಸಾಹ, ಅದಕ್ಕೆ ನಾನೂ ಒಪ್ಪಿಕೊಂಡು ಮನೆಯಲ್ಲಿ ವಿಷಯ ತಿಳಿಸಿ ನನ್ನ ಪ್ರಯಾಣ ಬೆಳೆಸಿದ್ದೆ. ಹೈದರಾಬಾದಿನ ನನ್ನ ಮ್ಯಾನೇಜರ್ ಆದ ವ್ಯಕ್ತಿ ಮೊದಲೇ ಅಲ್ಲಿನ ಜನರಬಗ್ಗೆ ಎಚ್ಚರಿಕೆ ಕೊಟ್ಟಿದ್ದರೂ ಅಲ್ಲಿ ಕಾಲಿಡುತ್ತಿದ್ದಂತೇ ಒಬ್ಬ ಆಟೋ ಚಾಲಕನಿಂದ ಮೋಸಹೋಗಿ ನಾನು ತಲುಪಬೇಕಾದ ಹೋಟೆಲ್ ತಲುಪಿದೆ. ಅಲ್ಲಿಂದ ನನ್ನ ಮ್ಯಾನೇಜರ್ ಗೆ ವಿಷಯ ತಿಳಿಸಿದಾಗ ಅವರೇ ಬಂದು ನನ್ನ ಹೋಟೇಲಿಂದ ನನ್ನ ಹೊಸಾ ಆಫೀಸಿಗೆ ಕರೆತಂದಿದ್ದರು. ಹೊಸಾ ಜಾಗ, ಹೊಸಾ ಜನ... ನಾನು ಅಲ್ಲಿಗೆ ಹೇಗೆ ಹೊಂದಿಕೊಳ್ಳೋದು ಅಂತ ವಿಚಾರ ಮಾಡ್ತಾಇದ್ದಾಗ ಶಿವರಾಜ್ ಪರಿಚಯ ಆಯ್ತು. ಅಲ್ಲಿ ಬಂದು ಒಂದು ಸಮಾಧಾನ ಏನಂದ್ರೆ ನನ್ನ ಮ್ಯಾನೇಜರ್ ಮತ್ತೆ ಶಿವರಾಜ್ ಇಬ್ಬರೂ ಕನ್ನಡಿಗರು... ಆದರೆ ಧಾರವಾಡದವರು. ನಾನು ಮೊದಲ ಒಂದುವಾರ ಅಲ್ಲಿಯ ಹೋಟೇಲ್ ಒಂದರಲ್ಲಿ ತಂಗಿದ್ದು ನಂತರ ಶಿವರಾಜ್ ನೆರವಿನಿಂದ ಒಂದು ಮನೆ ಬಾಡಿಗೆ ಪಡೆದೆ.
ನಾನು ಬಂದ ಮೊದಲ ದಿನಗಳಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಶಿವರಾಜ್ ನಂತರದ ದಿನಗಳಲ್ಲಿ ಅದಕ್ಕಿಂತ ಹೆಚ್ಚಿಗೆ ಮಿತ್ರರಾಗಿ ನನ್ನ ಸಹಾಯಕ್ಕೆ ಬಂದ್ರು. ನಾನು ಅಲ್ಲಿ ಕೆಲವು ತಿಂಗಳು ಇರ್ಬೆಕು ಅಂತ ನನ್ಗೆ ತಿಳಿದಿತ್ತು, ಹಾಗಾಗಿ ಅಲ್ಲೇ ಒಂದು ಮನೆ ಬಾಡಿಗೆಗೆ ಹುಡುಕ್ತಾ ಇದ್ವಿ ನಾನು ಮತ್ತೆ ಶಿವರಾಜ್. ತಿರುಮಲಗಿರಿಯಲ್ಲಿ ಒಂದು ಮನೆ ಇರೊ ವಿಚಾರ ನಮ್ಗೆ ಗೊತ್ತಾಯ್ತು. ಆಗ ಅಲ್ಲಿಗೆ ಹೋಗಿ ಮನೆ ಯಜಮಾನಿಜೊತೆ ಮಾತಾಡಿ ಮನೆ ಬಾಡಿಗೆಗೆ ಪಡ್ಕೊಂಡು ನಾನು ಇದ್ದ ಹೋಟೇಲನ್ನ ಖಾಲಿಮಾಡಿ ನನ್ನ ಹೊಸಾ ಮನೆಕಡೆಗೆ ಶಿವರಾಜ್ ಸಹಾಯದಿಂದ ಹೋದೆ.
ಇನ್ನು ನಾನು ನನ್ನ ಬಾಡಿಗೆ ಪಡೆದ ಮನೆ ಬಗ್ಗೆ ಹೇಳಬೇಕು ಅಂದ್ರೆ ಅದೇನು ದೊಡ್ಡ ಅರಮನೆಯಲ್ಲ, ಒಂದು ಪುಟ್ಟ ಸೂರು. ವಿಶಾಲವಾದ ಕಾಂಪೌನ್ಡ್ ಹೊಂದಿದ್ದ ಆ ಸೂರಿನಲ್ಲಿ ಒಟ್ಟು ೫ ಮನೆಗಳಿದ್ದವು. ನನ್ನಮನೆ ಮತ್ತೆ ಮಿಕ್ಕ ೩ ಮನೆಗಳನ್ನ ಬಿಟ್ಟು ನಮ್ಮ ಮನೆ ಯಜಮಾನಿ ಸಾಕಿದ ನಾಯಿಯನ್ನ ನೋಡಿಕೊಳ್ಳಲೆಂದೇ ಒಬ್ಬ ವಾಚ್ಮೆನ್ ಮನೆ ನನ್ನ ಮನೆ ಹಿಂದೆ ಇತ್ತು. ಆ ಪುಟ್ಟ ಮನೆಯಲ್ಲಿ ೫ ಜನರ ಸಂಸಾರ !!! ಅಂದರೆ ಆ ಕಾಂಪೌನ್ಡ್ ನ ಒಳಗೆ ಒಟ್ಟು ೫ ಮನೆಗಳು... ಅವುಗಳಲ್ಲಿ ಒಂದು ಮನೆ ಸದಾ ಬಾಗಿಲಿಗೆ ಬೀಗಾಹಾಕಿಕೊಂಡು ನಿದ್ದೆ ಮಾಡುತ್ತಿತ್ತು. ಮತ್ತೊಂದರಲ್ಲಿ ಒಂದು ಪುಟ್ಟ ಕುಟುಂಬ- ಅಪ್ಪ ಅಮ್ಮ ಮತ್ತೆ ಅವರಿಗಿದ್ದ ಎರೆಡು ಮಕ್ಕಳು. ಒಂದು ಗಂಡು ಮತ್ತೊಂದು ಹೆಣ್ಣು. ಆ ಪುಟ್ಟ ಹುಡುಗಿ ಹೆಸರು ಸಿಂಧು. ನನ್ನ ಮನೆಮೇಲೆ ಮತ್ತೊಬ್ಬ ಮಹಾರಾಷ್ಟ್ರದ ಹುಡುಗ ವಾಸಕ್ಕಿದ್ದ. ಅವನ ಹವ್ಯಾಸಗಳಬಗ್ಗೆ ಇಲ್ಲಿ ಹೇಳೋದು ಬೇಡ, ಒಟ್ಟಿನಲ್ಲಿ ಜಗತ್ತಿನ ಎಲ್ಲಾ ಕೆಟ್ಟ ಹವ್ಯಾಸಗಳೂ ಅವನಲ್ಲಿ ಮನೆ ಮಾಡಿತ್ತು.
ನಾನು ಮನೆ ಬಾಡಿಗೆ ಪಡೆದಾಗ ಮನೆ ನೋಡೊಕ್ಕೂ ಸಾಧ್ಯ ಆಗದೇ ಇರೋ ಸ್ಥಿತಿಯಲ್ಲಿತ್ತು. ಮನೆ ಯಜಮಾನಿಗೆ ೩.೦೦೦ ಹಣವನ್ನ ಮುಂಗಡವಾಗಿ ಕೊಟ್ಟು ಮನೆಗೆ ಬಣ್ಣ ಹೊಡಿಸಿ ತಯಾರು ಮಾಡಿಸಿದೆ. ಹಾಗೆ ನೋಡಿದ್ರೆ ನನಗೆ ಒಂದು ರೀತಿಯಲ್ಲಿ ಹವಾನಿಯಂತ್ರಿತ ಮನೆ ಸಿಕ್ಕುತ್ತು ಅನ್ನಿ. ಮನೆಯಲ್ಲಿದ್ದ ಕಿಟಕಿಗಳ ಗಾಜುಗಳು ಒಡೆದು ಅಲ್ಲಿಂದ ಹೇರಳವಾಗಿ ಗಾಳಿ ಬೀಸುತಿತ್ತು. ಇದರಿಂದ ಹಲವು ರೀತಿಯ ಅನುಕೂಲ ಇದೆ ನೋಡಿ- ಹೈದರಾಬಾದಿನ ಆ ಬೇಸಿಗೆಯಲ್ಲೂ ನನ್ನ ಮನೆ ತಂಪಗಿರುತಿತ್ತು.... ಇದರಿಂದ ಆಗೋ ವಿದ್ಯುತ್ ಉಳಿತಾಯದ ಲಾಭ ನನಗೇ ಅಲ್ವಾ ??? ಗಾಳಿ ಮನೆ ತುಂಬಿರ್ತಾ ಇದ್ದಿದ್ರಿಂದ ಒದ್ದೇ ಬಟ್ಟೆಗಳು ಬಹಳ ಬೇಗ ಒಣಗಿಬಿಡುತ್ತಿದ್ದವು. ರಾತ್ರಿ ನನ್ನ ಕಿವಿಗಳಿಗೆ ಇಂಪಾದ ಸಂಗೀತ ಕೇಳಿ ಬರುತ್ತಿತ್ತು... (ಅದು ಮೋಹಿನಿ ಕಾಟ ಅಲ್ಲ ಸ್ವಾಮೀ... ಸೊಳ್ಳೆಗಳ ಸಂಗೀತ).
ನಾನು ಇದ್ದ ನನ್ನ ಬಾಡಿಗೆ ಮನೇನಲ್ಲಿ ನನ್ನ ವಾಸ್ತವ್ಯದ ಮೊದಲು ಎರಡುತಿಂಗಳು ನನ್ನ ಮಿತ್ರರು ಅಂದ್ರೆ ನನ್ನಜೊತೆಗೆ ನಾನು ತಂದಿದ್ದ ನನ್ನ ಬೋನ್ಸಾಯ್, ಕಂಪ್ಯೂಟರ್ ಮತ್ತೆ ಅದರಲ್ಲಿ ಕೇಳಿ ಬರುತ್ತಿದ್ದ ಕನ್ನಡಮಾತು ಮತ್ತೆ ಹಾಡು. ಮನೆಯಿಂದ ಹೊರಗೆ ಬಂದರೆ ಬರೀ ತೆಲುಗು ಮತ್ತೆ ಹಿಂದಿ. ನನಗೆ ಹಿಂದಿ ಭಾಷೆತಿಳಿದಿದ್ದರಿಂದ ಹ್ಯಾಗೂ ನಿಭಾಯಿಸಿಕೊಂಡು ಹೊಗ್ತಾ ಇದ್ದೆ. ಇಲ್ಲಿಗೆ ಬಂದಮೇಲೆ ನಾನು ಅಪಾರ ಸ್ನೇಹಪಡೆದೆ, ಮಿತ್ರರನ್ನ ಪಡೆದೆ, ಒಂಟಿತನ ಏನೂ ಅನ್ನೊದನ್ನ ತಿಳ್ಕೊಂಡೆ, ನಮ್ಮ ಭಾಷೆ, ನಮ್ಮ ನಾಡಿನ ಮಹತ್ವನ್ನ ಇನ್ನೂ ಚೆನ್ನಾಗಿ ಅರಿತೆ. ಇನ್ನೂ ಹೇಳ್ಬೇಕು ಅಂದ್ರೆ ಉಪ್ಪಿಟ್ಟು ಮಾಡೊದು, ಅಡುಗೆ ಮಾಡೊದು, ಇದ್ದ ಒಂದೇ ಒಂದು ಕರೆಂಟ್ ಸ್ಟೊವ್ ಮತ್ತೆ ೪ ಪಾತ್ರೆಗಳಲ್ಲಿ ದಿನಾ ಅಡುಗೆ ಮಾಡ್ಕೊಂಡು, ಅದನ್ನೇ ತಿಂದ್ಕೊಂಡೂ, ಮನೆನ ಚೊಕ್ಕವಾಗಿ ಇಟ್ಕೊಳ್ಳೊಕೆ ಕಲ್ತೆ. ಹಾಗೇಂತ ನನ್ಗೆ ಇದೆಲ್ಲಾ ಮೊದ್ಲು ಬರ್ತಾಇರ್ಲಿಲ್ಲ ಅಂತ ಅಲ್ಲ, ಆದ್ರೂ ಅಡುಗೆ ಮಾಡೊದು ಕಮ್ಮಿನೇ ಇತ್ತು.
ಗೆಳೆಯರಿಲ್ಲ್ದೇ ನಾನು ಆ ಅಪರಿಚಿತ ಪ್ರದೇಶದಲ್ಲಿ ಇರೋದಿಕ್ಕೆ ಸಾಧ್ಯಾನೇ ಇರ್ಲಿಲ್ಲ. ಈ ಗೆಳೆತನ ಅನ್ನೋದು ತುಂಬಾ ವಿಚಿತ್ರವಾದದ್ದು. ನಾವೆಲ್ಲೋ ಇರ್ತೀವಿ, ಅವ್ರೆಲ್ಲೋ ಇರ್ತಾರೆ ಆದ್ರೂ ಅದು ಹೇಗೋ ಗೆಳೆತನ ಬೆಳೆದುಬಿಡತ್ತೆ. ಒಂದು ರೀತಿಯ ಬಾಂಧವ್ಯ ಬೆಳೆದುಬಿಡತ್ತೆ. ನಾನು ಅಲ್ಲಿ ಇದ್ದ ಆ ಕೆಲವು ದಿನಗಳಲ್ಲಿ ಪಡೆದ ಮಿತ್ರರ ಗಣನೆ ಅಪರಿಮಿತವಾದದ್ದು... ಆದರೂ ಶಿವರಾಜ್ ಬಿಟ್ಟು ಮರಿಯೋದಕ್ಕೇ ಆಗದೇ ಇರೋ ಗೆಳೆಯರು ಅಂದ್ರೆ ನನ್ನ ಮತ್ತಿಬ್ಬ ಸ್ನೇಹಿತರು- ವಿಜಯ್ ಮತ್ತೆ ಶಿಲ್ಪ. ವಿಜಯ್ ನನ್ನ್ಗೆ ಮತ್ತೊಬ್ಬ ಆರ್ಕುಟ್ ಮಿತ್ರ ಅಮರನಿಂದ ಪರಿಚಯವಾದ್ರೆ, ಶಿಲ್ಪ ವಿಜಯ್ ಮೂಲಕ ಪರಿಚಯವಾದ್ಳು. ನನ್ನ ಮುಂದಿನ ಭವಿಷ್ಯವನ್ನ ಅಲ್ಲಿ ರೂಪಿಸಿಕೊಳ್ಳೋಣ ಎಂದು ಲೆಕ್ಕಾಚಾರ ಹಾಕಿ ಅಲ್ಲಿಗೆ ಪ್ರಯಾಣ ಬೆಳೆಸಿದ್ದ ನನಗೆ ಅಲ್ಲಿನ ಜೀವನ ಬೇಸರ ತರಿಸುತ್ತಿತ್ತು.
ಅದನ್ನ ಹೋಗಲಾಡಿಸಿಕೊಳ್ಳಲು ಮತ್ತೆ ನನ್ನ ವೃತ್ತಿಜೀವನದಲ್ಲಿ ನನ್ನ ಕನಸನ್ನ ನನಸು ಮಾಡಿಕೊಳ್ಳಲು ಶಿಲ್ಪಜೊತೆ ಒಂದು ಕಂಪ್ಯೂಟರ್ ಕ್ಲಾಸಿಗೆ ಸೇರಿಕೊಂಡೆ. ನನ್ನ ಕಂಪ್ಯೂಟರ್ ಕ್ಲಾಸ್ ಇನ್ನೂ ಪ್ರಾರಂಭವಾಗಿರಲಿಲ್ಲ ನನಗೆ ನನ್ನ ಕಾರ್ಯಾಲಯದಿಂದ ಒಂದು ಮೈಲ್ ಬಂದಿತ್ತು. You are requested to visit bangalore office in 2 days ಮೊದಲೇ ಮನಸ್ಸಿಗೆ ಸಮಾಧಾನ ಸಿಕ್ಕಿರಲಿಲ್ಲ ಅದರ ನಡುವೆ ನನಗೆ ಬಂದ ಆ ಮೈಲ್ ಮನಸ್ಸಿನಲ್ಲಿ ಒಂದುರೀತಿಯ ಗೊಂದಲ ಉಂಟುಮಾಡಿತ್ತು. ನಮ್ಮ ಆಫೀಸಿನಲ್ಲಿ Boss ನ ಅನಿಸಿಕೆಯಂತೆ ಸೇಲ್ಸ್ ಆಗಿರಲಿಲ್ಲದ ಕಾರಣದಿಂದ ಈ ಮೀಟಿಂಗ್ ಅನ್ನೋದು ನನಗೆ ಮತ್ತೆ ಶಿವರಾಜ್ ಅವರಿಗೆ ಖಚಿತವಾಗಿ ಗೊತ್ತಿತ್ತು. ನಾವು ಬೆಂಗಳೂರಿಗೆ ಬಂದು, ನಮ್ಮ Boss ನ ಜೊತೆ ಮೀಟಿಂಗ್ ಮುಗಿಸಿದ ಮೇಲೆ ನಮ್ಮ ಅನುಮಾನಕ್ಕೆ ಪರಿಹಾರ ಸಿಕ್ಕಿತು. "ಹೈದರಾಬಾದಿನ ಬ್ರಾಂಚನ್ನು ಮುಚ್ಚಲಿದ್ದೇವೆ, ನೀವು ಮರಳಿ ಬೆಂಗಳೂರಿಗೆ ಇನ್ನುಳಿದ ೫ ದಿನದಲ್ಲಿ ಬರಬೇಕು" ಇದು ನನಗೆ ನನ್ನ ಮೇಲಿನವರಿಂದ ಬಂದ ಸೂಚನೆ. ಕೇವಲ ೫ ದಿನಗಳ ಸಮಯದಲ್ಲಿ ನನ್ನ ಆ ಮನೆಯನ್ನ ಖಾಲಿಮಾಡಿ ಬರುವುದು ಹುಡುಗಾಟವಲ್ಲ, ಆದರೂ ಬರಲೇ ಬೇಕಾಯಿತು. ನನ್ನ ಮನೆಯ ಯಜಮಾನಿ ತಕರಾರು ತೆಗೆದು ನನ್ನ ಮನೆಯ Advance ಅನ್ನು ಮರಳಿ ಹಿಂದಿರುಗಿಸಲಿಲ್ಲ.
ಕೊನೆಯದಾಗಿ ಹೈದರಾಬಾದಿನಲ್ಲಿ ಏನನ್ನೋ ಸಾದಿಸ ಹೊರಟಿದ್ದ ನಾನು ಮರಳಿ ನನ್ನ ಕರುನಾಡಿಗೆ ಪ್ರಯಾಣ ಬೆಳೆಸಿದ್ದೆ, ಹೈದರಾಬಾದಿನಲ್ಲಿ ನನಗೆ ಸಿಕ್ಕ ಅಪಾರ ಮಿತ್ರವೃಂದವನ್ನ ಜೊತೆಯಲ್ಲಿ ಕರುನಾಡಿಗೆ ತಂದಿದ್ದೆ.
Monday, April 28, 2008
ಹಕ್ಕಿಯೊಂದು ಗೂಡು ಕಟ್ಟಿತ್ತು...
ನಾನು ಹೈದರಾಬಾದಿನಲ್ಲಿ ವಾಸವಿದ್ದ ಕೆಲವೇ ತಿಂಗಳುಗಳಲ್ಲಿ ನಾನು ನನ್ನ ಜೀವನದ ಪುಟಗಳಲ್ಲಿ ಮರೆಯೋದಕ್ಕೇ ಸಾಧ್ಯವಾಗದೇ ಇರೋ ಅಂಥಾ ಕೆಲವು ಸುಂದರ ನೆನಪುಗಳು ನನ್ನಲ್ಲಿ ಮನೆಮಾಡಿವೆ. ನಾನು ಪ್ರತೀದಿನ ನನ್ನ ಕೆಲಸವನ್ನ ಮುಗಿಸಿಕೊಂಡು ಮಧ್ಯಾನ್ನ ಅಲ್ಲೇ ಇದ್ದ ಒಂದು ಉಡುಪಿ ಹೋಟೇಲಿನಲ್ಲಿ ಊಟ ಮುಗಿಸಿ ಸಂಜೆ ಎಲ್ಲಿ ಟ್ರಾಫಿಕ್ ಪೋಲೀಸು ನನ್ನ ನೋಡಿ ನನ್ನ ಬೈಕನ್ನ ಹಿಡಿದುಬಿಡುತ್ತಾನೋ ಅನ್ನೋ ಭಯದಿಂದ ಮನೆಕಡೆ ಹೋಗುತ್ತಿದ್ದೆ.
ಆ ಟ್ರಾಫಿಕ್ಕೋ, ಅಲ್ಲಿಯ ಜನರೋ !!! ಅಭ್ಭಾ !!! ಬಲಗಡೆಯ ಇಂಡಿಕೇಟರ್ ಹಾಕಿ ಎಡಕ್ಕೆ ತಿರುಗುವ ಮಹಾನುಭಾವರು. ಪುರುಷ, ಮಹಿಳೆಯ ತಾರತಮ್ಯ ಅಲ್ಲಿ ಕಾಣೋದಿಲ್ಲ. ಜೀವ ಕೈನಲ್ಲಿ ಹಿಡಿದುಕೊಂಡು ಗಾಡಿ ಓಡಿಸಿಕೊಂಡು ಮನೆ ತಲುಪಿದರೆ ನನ್ನಲ್ಲೇ ಏನೋ ಒಂದು ಯುದ್ದದಲ್ಲಿ ಗೆಲುವು ಸಾಧಿಸಿದ ಹಾಗೆ ಸಂತಸ. ದಾರಿಮಧ್ಯೆ ಏನಾದರೂ ಕರ್ನಾಟಕದ ನೊಂದಣಿಯ ಯಾರಾದರೂ ಸಿಕ್ಕಿಬಿಟ್ಟರೆ ಅದಕ್ಕಿಂತಾ ಸಂತಸ ಮತ್ತೊಂದಿಲ್ಲ. ಹೇಗಾದರೂ ನಾನು ಅವರ ಮುಂದೆ ಹೋಗಿ ನಾನೂ ಕರುನಾಡಿನವನೇ ಎಂದು ಅವರಿಗೆ ಕಾಣಿಸುವಹಾಗೆ ನನ್ನ ಗಾಡಿಯನ್ನ ಅವರ ಮುಂದೆ ಕೊಂಡೊಯ್ದು ಅದರ ಕನ್ನಡಿಯಲ್ಲಿ ತಿರುಗಿನೋಡ್ತಾ ಇದ್ದೆ. ನನ್ನ ಹಾಗೇ ಅವರೂ ಕರ್ನಾಟಕದ ನೊಂದಣಿಯ ವಾಹನದ ನಿರೀಕ್ಷೆಮಾಡ್ತಾ ಇದ್ರೆ !!! ಅವರಿಗೂ ಸಮಾಧಾನ ಸಿಕ್ಕಲಿ ಅನ್ನೋ ಭಾವನೆ.
ನಾನಿದ್ದ ಮನೆಯಲ್ಲಿ ನನ್ನ ಮನೆಯ ಮುಂದೆ ಕೆಲವು ಗಿಡಗಳಿದ್ದರೆ ಮನೆಯ ಕಾಂಪೌಂಡಿನ ಮೂಲೆಯಲ್ಲಿ ಒಂದು ಸೀತಾಫಲದ ಮರ ಇತ್ತು. ಯಾವುದೋ ಕಾರಣಕ್ಕಾಗಿ ಅದನ್ನ ಕತ್ತರಿಸಿಹಾಕಿದ್ದರೂ ಅದು ಮತ್ತೆ ಚಿಗುರಿ ನಾನು ಸೋಲುವುದಿಲ್ಲವೆಂಬಂತೆ ಬೆಳೆಯುತ್ತಿತ್ತು. ಪ್ರತಿಸಂಜೆ, ಬೆಳಗಿನ ಹೊತ್ತಿನಲ್ಲಿ ಮತ್ತೆ ರಜೆಯದಿವಸ ನಾನು ಆ ಮರವನ್ನ ನೋಡ್ತಾ ಇರ್ತಿದ್ದೆ. ನನ್ನ ಮನೆಇದ್ದ ಜಾಗದಲ್ಲಿ ಸ್ವಲ್ಪ ಪ್ರಶಾಂತತೆ ನೆಲಸಿತ್ತು. ಅದು ಮುಖ್ಯರಸ್ತೆಗಿಂತಲೂ ಸ್ವಲ್ಪ ದೂರದಲ್ಲಿ ಇದ್ದದ್ದರಿಂದ ಅಲ್ಲಿ ಪಕ್ಷಿಗಳ ಕಲರವ ಆಗಾಗ ಕೇಳಿಬರುತ್ತಲಿತ್ತು. ಅಂದೊಂದು ದಿನ ನಾನು ನಮ್ಮ ಸೀತಾಫಲದಮರದಲ್ಲಿ ಕೆಲವು ಪುಟ್ಟ ಪುಟ್ಟ ಪಕ್ಷಿಗಳು ಹಾರಿ ಬಂದು ಕುಳಿತು ತಮ್ಮಲ್ಲೇ ಏನೋ ಮಾತನಾಡಿಕೊಳ್ಳುತ್ತಿರುವುದನ್ನ ಕಂಡೆ. ಅದಾದ ಕೆಲವು ದಿನಗಳ ನಂತರ ಅದೇ ಮರದಲ್ಲಿ ಆ ಎರಡೂ ಪಕ್ಷಿಗಳು ತಮ್ಮ ಪುಟ್ಟ ಗೂಡೊಂದನ್ನ ಕಟ್ಟಲು ಪ್ರಾರಂಭಿಸಿದವು. ದೂರದಿಂದ ಹೆಕ್ಕಿತರುತ್ತಲಿದ್ದ ಆ ಕಸ ಕಡ್ಡಿಗಳನ್ನ ನಾಜೂಕಾಗಿ ಜೋಡಿಸಿ ತಮ್ಮ ಗೂಡನ್ನ ಸಿಂಗರಿಸತೊಡಗಿದವು. ಅದನ್ನು ನೋಡುವುದೇ ಒಂದು ಖುಷಿ.
ದಿನದಿಂದ ದಿನಕ್ಕೆ ಆ ಜೋಡಿಗಳು ಕಟ್ಟುತ್ತಿದ್ದ ಪುಟ್ಟ ಗೂಡು ಪೂರ್ಣವಾಗ್ತಾ ಬಂದಿತ್ತು. ನಾನು ಆ ಪುಟ್ಟ ಗೂಡಿನಲ್ಲಿ ಪುಟಾಣಿ ಮರಿಗಳ ಕಲರವ ಕೇಳಿಬರಬಹುದು ಅದರ ಫೋಟೋ ತೆಗಿಯಬಹುದು ಅಂತೆಲ್ಲಾ ಲೆಕ್ಕಾಚಾರ ಹಾಕ್ತಾಇದ್ದೆ. ಅಪರೂಪಕ್ಕೆಂದು ಆಗಸದಿಂದ ಸುರಿದ ಮಳೆ ಎಲ್ಲಿ ಆ ಪುಟ್ಟ ಗೂಡನ್ನ ನುಚ್ಚು ನೂರುಮಾಡಿರತ್ತೋ ಅಂತ ಆತಂಕದಿಂದ ಅಂದು ಸಂಜೆ ನನ್ನ ಆಫೀಸಿನಿಂದ ಮನೆಗೆ ಬಂದೆ. ಬಂದವನೇ ಆ ಸೀತಾಫಲದ ಮರದಬಳಿ ಹೋಗಿ ನೋಡಿದಾಗ ಅಲ್ಲಿ ಮುದ್ದಾದ ಕೆಮ್ಮಣ್ಣಿನಬಣ್ಣದ ೪ ಮೊಟ್ಟೆಗಳನ್ನ ಚೆಂದವಾಗಿ ಜೋಡಿಸಿಟ್ಟ ಹಕ್ಕಿ ಮೇಲಿನ ಕೇಬಲ್ಲಿನಲ್ಲಿ ಕುಳಿತು ಜೋರಾಗಿ ಕೂಗಲಾರಂಭಿಸಿತು. ಅದಕ್ಕೆ ತೊಂದರೆ ಮಾಡಬಾರದೆಂಬ ಕಾರಣದಿಂದ ನಾನು ಒಂದು ಛಾಯ ಚಿತ್ರವನ್ನ ಸೆರೆ ಹಿಡಿದು ಮರಳಿ ನನ್ನ ಗೂಡಿಗೆ ಸೇರ್ಕೊಂಡೆ.
ಈ ಘಟನೆಯಾದ ೨ದಿನದ ನಂತರ ನನಗೆ ಆ ಹಕ್ಕಿಗಳ ಕಲರವವಾಗಲೀ, ಅವುಗಳ ಹಾರಾಟವಾಗಲೀ ಆ ಮರದ ಹತ್ತಿರ ಕಾಣಲಿಲ್ಲ. ಏನಾಗಿರಬಹುದೆಂಬ ಗೊಂದಲದೊಂದಿಗೇ ನಾನು ಗೂಡಿನತ್ತ ಹೊರಟೆ. ಅಲ್ಲಿದ್ದ ಆ ಮೊಟ್ಟೆಗಳು ಬರಿದಾಗಿತ್ತು. ಖಾಲಿಯಾಗಿದ್ದ ಆ ಗೂಡಿನಲ್ಲಿ ಹಕ್ಕಿಗಳು ಹೇಗೆತಾನೆ ಇದ್ದಾವು ??? ಆ ಗೂಡಿನಿಂದ ಕೊಂಚ ದೂರದಲ್ಲಿ ಅದರ ಒಡೆದ ಒಂದು ಮೊಟ್ಟೆ ಕಾಣಿಸಿತು.
ಮನೆಯ ಮುಂದಿನ ಪುಂಡ ಹುಡುಗರು ಆ ಗೂಡಿನೊಳಗಿನಿಂದ ಆ ಮೊಟ್ಟೆಗಳನ್ನು ಹೊರತೆಗೆದು ಅದನ್ನು ಒಡೆದು ಹಾಕಿದ್ದರು. ಪುಟ್ಟ ಪುಟ್ಟ ಮರಿಗಳೊಂದಿಗೆ ಹಾರಬೇಕಿದ್ದ ಆ ಪಕ್ಷಿಯ ಸಂಸಾರ ಅಂದು ಬರಿದಾಗಿತ್ತು, ಮನುಷ್ಯನ ಕ್ರೂರತನಕ್ಕೆ ಮೂಕ ಸಾಕ್ಷಿಯಾಗಿತ್ತು.
Friday, April 25, 2008
ನೊಡಿದ್ಯಾ !!!
ನೊಡಿದ್ಯಾ !!! ನಾನು ಬರ್ದಿರೋ ಕವನ (ಅದು ಕವನ ಅಂತ ಅಂದ್ಕೋಬೇಕು ಅಷ್ಟೇ) ಅದು, ಯಾರೋ ಕಾಪಿಮಾಡಿ ಅವರ ಬ್ಲಾಗಿನಲ್ಲಿ ಹಾಕಿದಾರೆ !!! ನೋಡೋ !!!!
ಈ ಮೇಲಿನ ಸಾಲುಗಳು ಬೇರೆಯಾರೂ ಹೇಳಿದ್ದಲ್ಲ ಸ್ವಾಮೀ, ನಾನೇ ಹೇಳಿದ್ದು. ಹೌದು, ಕೆಲವು ತಿಂಗಳ ಹಿಂದೆ ನನ್ನ ಬ್ಲಾಗಿನಿಂದ ಕೆಲವು ಕವನ?? ಗಳು ಬೇರೆಯವರ ಪಾಲಾಗಿತ್ತು, ಅಷ್ಟಕ್ಕೇ ರಾಧ್ಧಾಂತ ಮಾಡಿ ಗಲಾಟೆ ಮಾಡ್ಕೊಂಡು ನನ್ನ ಬ್ಲಾಗ್ ನನ್ನ ಸರ್ವಸ್ವ ಅಂತ ನನ್ನ ಬ್ಲಾಗನ್ನ ಯಾರೂ ನೋಡದ ಹಾಗೆ ನಾನೇ ಲಾಕ್ ಮಾಡಿದ್ದೆ. ಕೆಲವು ತಿಂಗಳ ಹಿಂದೆ ನನ್ನ ಜೀವನದಲ್ಲಿ ನಾನು ಊಹಿಸಲಾಗದ ಕೆಲವು ಕಹಿ ಘಟನೆಗಳು ಜರುಗಿದವು. ಅದು ನನ್ನ ಪ್ರೀತಿಯ ಅಪ್ಪನ ಅಗಲಿಕೆ. ಆಗ ನನಗನ್ನಿಸಿದ್ದು "ಈ ಪ್ರಪಂಚದಲ್ಲಿ ನಾವು ಹುಟ್ಟಿದಾಗ ಬರಿಗೈಯಲ್ಲಿ ಬಂದು ಬರಿಗೈಯಲ್ಲಿ ಹೋಗ್ತೀವಿ, ಅದರ ನಡುವೆ ನಾನು ನನ್ನದು ಅನ್ನುವ ಅಹಂ ಏತಕ್ಕೆ???" ಜೀವನದಲ್ಲಿ ಒಂದುರೀತಿಯ ನಿರಾಸಕ್ತಿ ಮೂಡಿತ್ತು. ಕಾಲಾಯ ತಸ್ಮೈ ನಮಃ ಅನ್ನೋಹಾಗೆ ಕ್ರಮೇಣವಾಗಿ ನಾನು ನನ್ನ ಇಂದಿನ ಜೀವನಕ್ಕೆ ಹೊಂದಿಕೊಂಡು ಬದುಕುವುದನ್ನ ರೂಢಿಸಿಕೊಂಡಿದ್ದೇನೆ.
ಬೇರೆಯವರಿಗೆ ಏನಾದರೂ ಕೊಟ್ಟರೆ ಅದು ಅವರಿಗೆ ಸಂತಸ ಅಥವ ಸಮಾಧಾನ ತರುವಂತದ್ದಾಗಿರಬೇಕು. ನನ್ನ ಆ ಬರಹ ಕೂಡಾ ಕೆಲವು ಮಂದಿಗೆ ಸಮಾಧಾನ ತಂದಿತ್ತೇನೋ !!! ಆದಕಾರಣದಿಂದಲೇ ಅವರು ಅದನ್ನ ತಮ್ಮ ಬ್ಲಾಗಿಗೆ ಸೇರಿಸಿಕೊಂಡಿದ್ದರು ಅಂತ ನಂತರ ತಿಳಿಯಿತು. ಆಗ ಏನೋ ಒಂದುರೀತಿಯ ಕಸಿವಿಸಿಯಾಗ್ತಾ ಇತ್ತು. ಆದರೆ ಮಾನವ ಸಹಜಗುಣ ಎಲ್ಲಿ ಹೋಗತ್ತೆ !!! "ನಾನು, ನನ್ನದು ಅನ್ನೋ ಅಹಂ" ನಂತರ ನಾನು ಆ ವ್ಯಕ್ತಿಯಿಂದ ಬಂದ ಸ್ನೇಹದ ಕೋರಿಕೆಯನ್ನ ಒಪ್ಪಿಕೊಂಡು ಅವರ ಸ್ನೇಹಿತನಾದೆ.
ಆ ಘಟನೆಯ ನಂತರ ನನ್ನ ಮನದಲ್ಲೇ ನಾನು ನೂರಾರುಬಾರಿ ಯೋಚನೆ ಮಾಡಿದ್ದೇನೆ, ಯಾವುದೇ ವ್ಯಕ್ತಿಯಲ್ಲಿ ಇರುವ ಕಲೆ ಹೊರಬರಬೇಕಾದರೆ ಆ ಕಲೆಗೆ ತಕ್ಕ ಪ್ರೋತ್ಸಾಹ ಸಿಕ್ಕಲೇಬೇಕು. ಯಾವುದೇ ಒಂದು ಗಿಡವು ಬೆಳೆದು ನಿಲ್ಲಬೇಕಾದರೆ ಅದಕ್ಕೆ ತಕ್ಕ ಪೋಷಣೆ ಅತ್ಯಗತ್ಯ. ನನ್ನ ಬ್ಲಾಗನ್ನು ನೋಡಿ ಅದನ್ನು ಮೆಚ್ಚಿದಾಗ ತಾನೆ ನನಗೆ ಮತ್ತೊಮ್ಮೆ ಬರೆಯುವ ಪ್ರಯತ್ನ ಪಡಲಿಕ್ಕೆ ಸಾಧ್ಯ ??? ನಾನು ಬರೆದದ್ದನ್ನ ಯಾರೊಂದಿಗೂ ಹಂಚಿಕೊಳ್ಳದಿದ್ದರೆ ನಾನು ಬರೆದದ್ದಾದರೂ ಯಾವ ಕಾರಣಕ್ಕೆ ??? ಇದೆಲ್ಲಾ ವಿಚಾರಮಂಥನವಾದ ನಂತರ ನನ್ನ ಬ್ಲಾಗನ್ನು ಬಂಧಮುಕ್ತಗೊಳಿಸಿದೆ.
ಈ ಮೇಲಿನ ಸಾಲುಗಳು ಬೇರೆಯಾರೂ ಹೇಳಿದ್ದಲ್ಲ ಸ್ವಾಮೀ, ನಾನೇ ಹೇಳಿದ್ದು. ಹೌದು, ಕೆಲವು ತಿಂಗಳ ಹಿಂದೆ ನನ್ನ ಬ್ಲಾಗಿನಿಂದ ಕೆಲವು ಕವನ?? ಗಳು ಬೇರೆಯವರ ಪಾಲಾಗಿತ್ತು, ಅಷ್ಟಕ್ಕೇ ರಾಧ್ಧಾಂತ ಮಾಡಿ ಗಲಾಟೆ ಮಾಡ್ಕೊಂಡು ನನ್ನ ಬ್ಲಾಗ್ ನನ್ನ ಸರ್ವಸ್ವ ಅಂತ ನನ್ನ ಬ್ಲಾಗನ್ನ ಯಾರೂ ನೋಡದ ಹಾಗೆ ನಾನೇ ಲಾಕ್ ಮಾಡಿದ್ದೆ. ಕೆಲವು ತಿಂಗಳ ಹಿಂದೆ ನನ್ನ ಜೀವನದಲ್ಲಿ ನಾನು ಊಹಿಸಲಾಗದ ಕೆಲವು ಕಹಿ ಘಟನೆಗಳು ಜರುಗಿದವು. ಅದು ನನ್ನ ಪ್ರೀತಿಯ ಅಪ್ಪನ ಅಗಲಿಕೆ. ಆಗ ನನಗನ್ನಿಸಿದ್ದು "ಈ ಪ್ರಪಂಚದಲ್ಲಿ ನಾವು ಹುಟ್ಟಿದಾಗ ಬರಿಗೈಯಲ್ಲಿ ಬಂದು ಬರಿಗೈಯಲ್ಲಿ ಹೋಗ್ತೀವಿ, ಅದರ ನಡುವೆ ನಾನು ನನ್ನದು ಅನ್ನುವ ಅಹಂ ಏತಕ್ಕೆ???" ಜೀವನದಲ್ಲಿ ಒಂದುರೀತಿಯ ನಿರಾಸಕ್ತಿ ಮೂಡಿತ್ತು. ಕಾಲಾಯ ತಸ್ಮೈ ನಮಃ ಅನ್ನೋಹಾಗೆ ಕ್ರಮೇಣವಾಗಿ ನಾನು ನನ್ನ ಇಂದಿನ ಜೀವನಕ್ಕೆ ಹೊಂದಿಕೊಂಡು ಬದುಕುವುದನ್ನ ರೂಢಿಸಿಕೊಂಡಿದ್ದೇನೆ.
ಬೇರೆಯವರಿಗೆ ಏನಾದರೂ ಕೊಟ್ಟರೆ ಅದು ಅವರಿಗೆ ಸಂತಸ ಅಥವ ಸಮಾಧಾನ ತರುವಂತದ್ದಾಗಿರಬೇಕು. ನನ್ನ ಆ ಬರಹ ಕೂಡಾ ಕೆಲವು ಮಂದಿಗೆ ಸಮಾಧಾನ ತಂದಿತ್ತೇನೋ !!! ಆದಕಾರಣದಿಂದಲೇ ಅವರು ಅದನ್ನ ತಮ್ಮ ಬ್ಲಾಗಿಗೆ ಸೇರಿಸಿಕೊಂಡಿದ್ದರು ಅಂತ ನಂತರ ತಿಳಿಯಿತು. ಆಗ ಏನೋ ಒಂದುರೀತಿಯ ಕಸಿವಿಸಿಯಾಗ್ತಾ ಇತ್ತು. ಆದರೆ ಮಾನವ ಸಹಜಗುಣ ಎಲ್ಲಿ ಹೋಗತ್ತೆ !!! "ನಾನು, ನನ್ನದು ಅನ್ನೋ ಅಹಂ" ನಂತರ ನಾನು ಆ ವ್ಯಕ್ತಿಯಿಂದ ಬಂದ ಸ್ನೇಹದ ಕೋರಿಕೆಯನ್ನ ಒಪ್ಪಿಕೊಂಡು ಅವರ ಸ್ನೇಹಿತನಾದೆ.
ಆ ಘಟನೆಯ ನಂತರ ನನ್ನ ಮನದಲ್ಲೇ ನಾನು ನೂರಾರುಬಾರಿ ಯೋಚನೆ ಮಾಡಿದ್ದೇನೆ, ಯಾವುದೇ ವ್ಯಕ್ತಿಯಲ್ಲಿ ಇರುವ ಕಲೆ ಹೊರಬರಬೇಕಾದರೆ ಆ ಕಲೆಗೆ ತಕ್ಕ ಪ್ರೋತ್ಸಾಹ ಸಿಕ್ಕಲೇಬೇಕು. ಯಾವುದೇ ಒಂದು ಗಿಡವು ಬೆಳೆದು ನಿಲ್ಲಬೇಕಾದರೆ ಅದಕ್ಕೆ ತಕ್ಕ ಪೋಷಣೆ ಅತ್ಯಗತ್ಯ. ನನ್ನ ಬ್ಲಾಗನ್ನು ನೋಡಿ ಅದನ್ನು ಮೆಚ್ಚಿದಾಗ ತಾನೆ ನನಗೆ ಮತ್ತೊಮ್ಮೆ ಬರೆಯುವ ಪ್ರಯತ್ನ ಪಡಲಿಕ್ಕೆ ಸಾಧ್ಯ ??? ನಾನು ಬರೆದದ್ದನ್ನ ಯಾರೊಂದಿಗೂ ಹಂಚಿಕೊಳ್ಳದಿದ್ದರೆ ನಾನು ಬರೆದದ್ದಾದರೂ ಯಾವ ಕಾರಣಕ್ಕೆ ??? ಇದೆಲ್ಲಾ ವಿಚಾರಮಂಥನವಾದ ನಂತರ ನನ್ನ ಬ್ಲಾಗನ್ನು ಬಂಧಮುಕ್ತಗೊಳಿಸಿದೆ.
Subscribe to:
Posts (Atom)