ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Monday, May 26, 2008

ಕಟ್ಟೆ...

ಒಂದು ಕಾಲದಲ್ಲಿ ಭೋರ್ಗರಿದು ಉಕ್ಕಿ ಹರಿದಿದ್ದ
ಮನಸ್ಸಿನ ಭಾವನೆಗಳ ಕಡಲಲ್ಲಿ
ಇಂದು ಒಂದುರೀತಿಯ ಪ್ರಶಾಂತತೆ ಕಾಣುತ್ತಿದೆ...

ಮನದ ಪುಟದಿಂದ ಉಕ್ಕಿ ಉಕ್ಕಿ
ಬಂದಿದ್ದ ಭಾವನೆಗಳು ಇಂದು
ಮನದೊಳಗಡೆ ಅವಿತು ಬಚ್ಚಿಟ್ಟುಕೋಂಡಿವೆ

ಮನಸ್ಸಿನಿಂದ ಹರಿಬಿಡದೆ
ಅದಕ್ಕೆ ಅಣೇಕಟ್ಟನ್ನು ನಾನೇ ಕಟ್ಟಿದ್ದೇನೆ,
ಆ ಪ್ರವಾಹವನ್ನ ಹಿಡಿದಿಟ್ಟಿದ್ದೇನೆ...

ಪ್ರವಾಹದಲ್ಲಿ ನನ್ನ ಭಾವನೆಗಳು
ಎಲ್ಲಿ ಹರಿದು ಕಣ್ಣೀರ ಕಡಲೊಳು
ಬೆರೆತುಹೋಗುವುದೋ ಎಂಬ ಆತಂಕದಿಂದ

ನನ್ನ ಭಾವನೆಗಳ ಆಕ್ರಂದನವನ್ನ
ಪ್ರವಾಹದಲ್ಲಿ ಕೇಳಲಾರದೇ,
ಮನದಲ್ಲಿ ಬಚ್ಚಿಡಲೂ ಆಗದೇ

ಮುಂದೇನು ಮಾಡುವುದೆಂದು ಆಲೋಚಿಸುತ್ತಾ ದಿಗಂತದಲ್ಲಿ
ನನ್ನ ನೋಟವನ್ನ ನೆಟ್ಟಿದ್ದೇನೆ, ಅಣೇಕಟ್ಟೆಯ
ಬಾಗಿಲನು ತೆರೆಯುವ ದಿನಕ್ಕಾಗಿ ಕಾದು ಕುಳಿತಿದ್ದೇನೆ...

Friday, May 23, 2008

Bye bye ಆರ್ಕುಟ್

ಆರ್ಕುಟ್

ನನಗೆ ನನ್ನ lifeನಲ್ಲಿ ಇದ್ದ ಒಂದು ದೊಡ್ಡ ಕೊರತೆಯನ್ನ ನೀಗಿಸಿದ್ದ ನಿನಗೆ ನನ್ನ Thanks. ಇಷ್ಟುದಿನ ನನ್ನ ಜೊತೆಗಿದ್ದು ನನ್ನ ಜೀವನದಲ್ಲಿ ಅನಿರೀಕ್ಷಿತ ತಿರುವುಗಳನ್ನು ನೀಡಿದ್ದ ನಿನಗೆ ನನ್ನ Thanks. ಸ್ನೇಹಕ್ಕಾಗಿ ಹಾತೊರೆಯುತ್ತಿದ್ದ ನನಗೆ ಸ್ನೇಹಿತರ ಅಪಾರ ಸಾಗರವನ್ನ ಪರಿಚಯ ಮಾಡಿಕೊಟ್ಟ ನಿನಗೆ Thanks. ನಾನು ಇವತ್ತು ನಿರ್ಧಾರ ಮಾಡಿದ್ದೇನೆ. ನಿನ್ನಿಂದ ನಾನು ದೂರ ಹೋಗ್ಬೇಕು ಅಂತ. Yes !!! i am going away from you. ಆದರೆ ಹೋಗೋದಕ್ಕೆ ಮುಂಚೆ ನಿನ್ನೊಡನೆ ನಾನು ಕಳೆದ ದಿನಗಳನ್ನ ಇಲ್ಲಿ ಮೆಲುಕುಹಾಕಬೇಕು ಅನ್ನಿಸ್ತಾ ಇದೆ !!!

ನನಗೆ ನಿನ್ನ ಪರಿಚಯ ಮಾಡಿಕೊಟ್ಟಿದ್ದು ನನ್ನ ಹಳೇ Officeನ friend ಕೃಷ್ಣ ಕುಮಾರ್. ಆರಂಭ ಶೂರತ್ವ ಆನೋಹಾಗೆ ಅಲ್ಲಿ ಒಂದು communitieನ ಶುರುಮಾಡಿ ಆಮೇಲೆ ಅದನ್ನ ಕಡೆಗಾಣಿಸಿಬಿಟ್ಟ. ೮/೧೪/೦೬ ಅಂದರೆ ನಮ್ಮ Independence dayಗೆ ಸರಿಯಾಗಿ ಒಂದು ದಿನ ಬಾಕಿ ಇತ್ತು. ಆವತ್ತು ನನಗೆ ಮೊದಲನೇ Scrap ಬಂದದ್ದು. ಅಲ್ಲಿಂದ ಶುರುಆದ ನಿನ್ನ ಪರಿಚಯ ಇಲ್ಲೀವರೆಗೂ ಬಂದಿದೆ. ಇನ್ನು ಮುಂದೆ ನನಗೆ ಗೊತ್ತಿಲ್ಲ. ನಿನ್ನ ಪರಿಚಯ ೧೪ನೇ ತಾರೀಖೇ ಆದರೂ ನಿನ್ನ ಬಗ್ಗೆ ನನಗೆ ಜಾಸ್ತಿ ಗೊತ್ತಿರಲಿಲ್ಲ. ಅದು ಗೊತ್ತಾಗಿದ್ದು ಸುಮಾರು ತಿಂಗಳುಗಳು ಕಳೆದಮೇಲೇ !!! ಒಬ್ಬರಿಂದ ಮತ್ತೊಬ್ಬರ ಪರಿಚಯ ಆಗ್ತಾ ನನ್ನ ಸ್ನೇಹದ ಸಂಕೋಲೆ ಬೆಳಿತಾ ಹೋಗ್ತಾ ಇತ್ತು. ಅಮರ, ಶಿಲ್ಪ, ಪ್ರಿಯ, ನವ್ಯ, ವಿಜಯ್, ವಿನೋದ್, ದೀಪ್ತಿ, ಅಮಿತ್, ಅರ್ಪಿತ, ಪುಷ್ಪ, ಜಯಶಂಕರ್, ಪ್ರಶಾಂತ್, ನಾರಾಯಣ, ತವಿಶ್ರೀ... ಹೀಗೇ ನನ್ನ ಆಪ್ತರ ಪಟ್ಟಿಮಾಡ್ತಾ ಹೋದರೆ ನನಗೆ ಒಂದು ದಿನ ಸಾಲೋದಿಲ್ಲ.

ಸ್ನೇಹ ಬೆಳಿತಾ ಇದ್ದಂತೆಲ್ಲಾ ನನ್ನಮೇಲೆ ಅದನ್ನು ನಿಭಾಯಿಸುವ ಜವಾಬ್ದಾರಿ ಬೆಳೀತಾ ಹೊಯ್ತು. ಪ್ರತೀ ದಿನ ಏನಾದರೊಂದು ಹೊಸತನ್ನು ನನ್ನ ಸ್ನೇಹಿತರಿಗೆ ಕೊಡಬೇಕೆನ್ನುವ ಹಂಬಲ. ಹಾಗಾಗಿ ಕೆಲವು ನುಡಿಮುತ್ತುಗಳನ್ನ, ಮತ್ತೆ ಕೆಲವು Jokes ಗಳನ್ನ ಪ್ರತೀ ದಿನ ನನ್ನ ಬಳಗಕ್ಕೆ Scrap ಮಾಡ್ತಾ ಇದ್ದೆ. ಕೆಲವೊಂದು ದಿನ ಅದು ಸಾಧ್ಯ ಆಗಲಿಲ್ಲ ಅಂದರೆ ಅದಕ್ಕೆ ಉತ್ತರವಾಗಿ ಸ್ನೇಹಿತರಿಂದ ಮತ್ತೋಂದು scrap ಬಂದಿರ್ತಿತ್ತು. ನನ್ನ ಬೆಂಗಳೂರಿನ Officeನಿಂದ ನನ್ನನ್ನು ಹೈದರಾಬಾದಿಗೆ ವರ್ಗಮಾಡಿದಾಗಲಂತೂ ನೀನು ನನ್ನ ಬೆನ್ನೆಲುಬಾಗಿ ನಿಂತಿದ್ದು ಮರೆಯೋಕೆ ಸಾಧ್ಯ ಇಲ್ಲ. ಆ ಗೊತ್ತಿಲ್ಲದ ನಾಡಿನಲ್ಲಿ ಕನ್ನಡಿಗರ ಪರಿಚಯಕ್ಕೆ ಮೂಲ ಕಾರಣ ನೀನೇ. ನಿನ್ನಿಂದಲೇ ನನಗೆ ಅಡುಗೆ ಹೇಳಿಕೊಡುವ ಟೀಚರ್ (ದೀಪ್ತಿ) ಪರಿಚಯ ಆದದ್ದು. ಸಾಹಿತ್ಯಾಭಿಮಾನಿ ಅಮರನ ಪರಿಚಯ ಆದದ್ದು, ಮನಸ್ಸಿನ ಮಾತ ಕೇಳುವ ಗೆಳೆಯರು ಸಿಕ್ಕಿದ್ದು, ನೊಂದ ಮನಸ್ಸಿಗೆ ಪ್ರೀತಿಯ ಮುಲಾಮು ಹಚ್ಚೋ ಕೈಗಳುಸಿಕ್ಕಿದ್ದು, ನನ್ನ ಬ್ಲಾಗ್ ಗುರು ಸೋಮನ ಪರಿಚಯ ಆದದ್ದು. ನನ್ನ ಬ್ಲಾಗ್ ಬರೋದಕ್ಕೆ ಸ್ಪೂರ್ತಿ ಕೊಟ್ಟ ಗೆಳೆಯು ವಿಜಯ್ ಪರಿಚಯವಾದದ್ದೂ ನಿನ್ನಿಂದಲೇ !!! ನಾನು ನಿನ್ನ ಇಷ್ಟಾ ಪಟ್ಟು ದೂರ ಕಳಿಸ್ಥಾ ಇಲ್ಲ, ಕಷ್ಟಾಪಟ್ಟು ನಾನೇ ದೂರ ಹೋಗ್ತಾ ಇದೀನಿ.

ಒಂದು ಕಾಲದಲ್ಲಿ ನೀನು ನನಗೆ ಎಷ್ಟು ಸನಿಹವಾಗಿದ್ದೆ ಅಂದರೆ ನಾನು ನನ್ನ ನಿದ್ದೆಬಿಟ್ಟು ನಿನ್ನ ಮುದ್ದಾಡಿದ್ದಿದೆ, ನಿನಗೆ ಸಿಂಗಾರ ಮಾಡಿದ್ದಿದೆ. ಇನ್ನೂ ಚುಮು ಚುಮು ಬಿಸಿಲು ಮೂಡೋದಕ್ಕೂ ಮುನ್ನ ನಿನ್ನಲ್ಲಿ ಹುದುಗಿರುವ ಅಪಾರ ಮಿತ್ರವೃಂದಕ್ಕೆ ಬೆಳಗ್ಗೆ ಬೆಳಗ್ಗೆ Good morning scrap ಹಾಕ್ತಿದ್ದಿದೆ. ನಿನ್ನ ಬಗ್ಗೇನೇ ಒಂದು ಪದ್ಯ ರಚಿಸಿದ್ದೂ ಇದೆ... ನಮ್ಮ ಅಭಿರುಚಿಯನ್ನ ಬೇರೆಯವರಿಗೆ ತಿಳಿಸುವ ಮಾಧ್ಯಮ ನೀನೆ, ಆದರೆ ಇತ್ತೀಚೆಗೆ ಯಾಕೋ ಗೊತ್ತಿಲ್ಲ, ಆರ್ಕುಟ್ ಅಂದರೆ ನೀನು boring ಅನ್ನಿಸ್ತಾ ಇದಿಯ. ಆರ್ಕುಟ್ ಇದ್ದರೆ ಅದರಲ್ಲಿ ಇರೋ ಅಪಾರ ಮಿತ್ರವೃಂದವನ್ನ ಮಾತಾಡಿಸಬೇಕು ಅನ್ಸತ್ತೆ. ಆದರೆ ಅದಕ್ಕೆ ಸಮಯ ಸಿಕ್ತಾ ಇಲ್ಲ. ಎಷ್ಟೋ ಕಾಣದಿರುವ ಹೃದಯಗಳು, ಎಷ್ಟೋ ಕಾಣದಿರುವ ಮುಖಗಗಳು, ಎಲ್ಲಾ ನನಗೆ ನಿನ್ನಿಂದ ಸಿಕ್ಕಿತ್ತು. ಆದರೆ ನಾನು ಅದನ್ನೆಲ್ಲಾ maintain ಮಾಡಲಾರೆ. ಆರ್ಕುಟ್- ನಿನ್ನ ಬಿಟ್ಟು ದೂರ ಹೋಗ್ತಾ ಇದೀನಿ.

ನಿನ್ನ ಮತ್ತೊಬ್ಬ ಗೆಳೆಯ ಅನ್ನೋ ಈ Blogನಿಂದ ಯಾವಾಗ ದೂರ ಹೋಗ್ತೀನೋ ಗೊತ್ತಿಲ್ಲ. ನಾನು ನಿನ್ನಿಂದ ದೂರ ಹೋಗೊದಕ್ಕೆ ಏನುಕಾರಣ ಅಂತ ಮಾತ್ರ ಕೇಳ್ಬೇಡ Please... ಅದಕ್ಕೆ ಉತ್ತರ ನನ್ನ ಹತ್ತಿರ ಇಲ್ಲ. ಮತ್ತೊಮ್ಮೆ ನಿನ್ನ ಬಳಿ ಹಿಂದಿರುಗಬೇಕು ಅನ್ನಿಸ್ತಾ ಇದೆ, ಆದರೆ ಮನಸ್ಸು "ಬೇಡ ಮತ್ತೆ ಆ ಕಡೆಗೆ ಹೊರಳಬೇಡ" ಅಂತ ಸಾರಿ ಸಾರಿ ಹೇಳ್ತಾ ಇದೆ. ನಿಮ್ಮಿಬ್ಬರಿಗೂ ಬೇಸರ ಮಾಡೋದಕ್ಕೆ ನನಗೆ ಇಷ್ಟ ಇಲ್ಲ, ನಿನ್ನ ವಾರಕ್ಕೊಮ್ಮೆ ಬಂದು ಮಾತನಾಡಿಸಿಕೊಂಡು ಹೋಗ್ತೀನಿ, ಆಯ್ತಾ ???

Bye Bye orkut... ಮತ್ತೋಮ್ಮೆ ನಿನ್ನ ನಾನು ಹುಡುಕಿಕೊಂಡು ಬಂದು ನನ್ನ ಜೀವನದಲ್ಲಿ ಮತ್ತೋಂದು ತಿರುವಿಗೆ ಹೊರಳುವಂತೆ ಮಾಡಬೇಡ.

Tuesday, May 20, 2008

ಎಚ್ಚರಿಕೆ !!!

೨೦-ಮೇ-೨೦೦೮

ಇವತ್ತಿಗೆ ನಮ್ಮ ಕಂಪನಿಯ ಮತ್ತೊಂದು Wicket ಬಿತ್ತು. ನಾನು ಕಳೆದ ಒಂದು ವರುಷ ಏಳು ತಿಂಗಳಿಂದಾ ಕೆಲಸಮಾಡುತ್ತಿರುವ ಕಂಪನಿಯ ಆಗು ಹೋಗುಗಳನ್ನ ಗಮನಿಸುತ್ತಾ ಬಂದಿದ್ದೇನೆ. ಒಂದು ಕಂಪನಿಯಲ್ಲಿ ಯಾವ ಯಾವ ರೀತಿಯ ವಾತಾವರಣ ಏನೆಲ್ಲಾ ಮಾಡಬಲ್ಲದು ಅನ್ನೋದಕ್ಕೆ ನಿದರ್ಶನ ಈ ಕಂಪನಿ. ರಾಜಕೀಯ ಅನ್ನೋದು ಕೇವಲ ರಾಜಕಾರಣಿಗಳಿಗಷ್ಟೇ ಸೀಮಿತವಲ್ಲ. ರಾಜಕಾರಣ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹೇರಳವಾಗಿ ಹಬ್ಬಿದೆ. ಒಂದೇ ಸ್ಥಳದಲ್ಲಿದ್ದುಕೊಂಡು ಒಬ್ಬರಮೇಲೆ ಮತ್ತೋಬ್ಬರು ಕತ್ತಿಮಸೆಯುವುದು, ದ್ವೇಷಿಸುವುದು, ಹೊಟ್ಟೇಕಿಚ್ಚು ಪಡುವುದು ಏನೆಲ್ಲಾ ನಮ್ಮ ನಡೆಯುತ್ತಿರುತ್ತದೆ, ನಾವು ಅದನ್ನು ಗಮನಿಸಿ ನೋಡಬೇಕಷ್ಟೆ !!!!

ಯಾರದ್ದೋ ಕಿವಿಮಾತನ್ನು ಕೇಳಿಕೊಂಡು ತಮ್ಮ ಸ್ವಂತಿಕೆಯನ್ನೇ ಕಳೆದುಕೊಂಡು ಸೂತ್ರದ ಗೊಂಬೆಗಳಂತಿರುವ ಜನರು ಹಲವಾರು. ತಮ್ಮ ವೈಯುಕ್ತಿಕ ದ್ವೇಷದಿಂದ ಮತ್ತೊಬ್ಬರ ಜೀವನವನ್ನು ಕಷ್ಟಕ್ಕೀಡುಮಾಡುವವರು ಬಹಳಮಂದಿ. ನಮ್ಮ Office ನಲ್ಲೂ ಕೂಡಾ ಅಂತಹಾ ಒಬ್ಬ ವ್ಯಕ್ತಿ ನನ್ನ ಸಹೋದ್ಯೋಗಿಯು ಕೆಲಸ ಕಳೆದುಕೊಳ್ಳಲು ಮುಖ್ಯ ಕಾರಣ. ರೇಷ್ಮಾ ಕೆಲಸಕ್ಕೆ ಸೇರಿ ಇನ್ನು ಒಂದು ವರುಷವೂ ಆಗಿಲ್ಲ, ಆಗಲೇ ನಮ್ಮ Boss ಅನ್ನು ತನ್ನ ಮೋಡಿಯಲ್ಲಿ ಮರಳುಮಾಡಿ ಒಂದುರೀತಿಯಲ್ಲಿ ಪೂರ್‍ಣವಾಗಿ ತನ್ನ ಅಧಿಕಾರ ಸ್ಥಾಪನೆ ಮಾಡಲು ಹೊರಟಿರುವ ಧೀರ ಮಹಿಳಾಮಣಿ. ತನಗಾಗದವರನ್ನು ಒಂದಲ್ಲಾ ಒಂದು ಸಬೂಬು ಹೇಳಿಕೊಂಡು ಕೆಲಸದಿಂದ ತೆಗೆಯುತ್ತಾ ಬಂದಿರುವ ಈಕೆಯ ಪಾಪದ ಕೊಡ ಎಂದಿಗೆ ತುಂಬುತ್ತದೋ ಎಂದು ಮಿಕ್ಕ ಎಲ್ಲಾಮಂದಿ ಕಾಯ್ತಾ ಕುಳಿತಿದ್ದಾರೆ. ನಮ್ಮ ಈ ಅಳಲನ್ನು ನಮ್ಮ Boss ತನಕ ನಾವು ತಲುಪಿಸಲು ಆಗುತ್ತಿರಲಿಲ್ಲ. ಅಷ್ಟರಮಟ್ಟಿಗೆ ಅವಳಮೋಡಿ ನನ್ನ ಬಾಸ್ ಮೇಲೆ ಪರಿಣಾಮ ಬೀರಿದೆ. ತನಗಾಗದವರನ್ನ ಏನಾದರೂ ಮಾಡಿ ಕೆಲಸದಿಂದ ತೆಗೆಸಿ ತನ್ನ ಬಳಗವನ್ನ ಸೇರಿಸಿಕೊಳ್ಳುವುದು ಆಕೆಯ ದುರುದ್ದೇಶ. ಏಲ್ಲರನ್ನೂ ತನ್ನ ಅಧೀನದಲ್ಲಿ ಇಟ್ಟುಕೊಳ್ಳಬೇಕೆಂಬ ದುರಾಸೆ. ಕನ್ನಡಿಗರನ್ನು ಕಂಡರೆ ತಾತ್ಸಾರ, ತಮಿಳಿಗರಲ್ಲಿ ಅಪಾರ ಮಮಕಾರ. ನಾನು ಇಲ್ಲಿಗೆ ಸೇರಿದಮೇಲೆ ಸರಿ ಸುಮಾರು ೫ ಜನರನ್ನ ಕೆಲಸಬಿಡುವಂತೆ ಒತ್ತಡ ತಂದವಳು ಈಕೆ. ಏನೇ ಆದರೂ ಪ್ರತಿಯೊಬ್ಬರೂ ತನ್ನ ಮಾತನ್ನೇ ಕೇಳಬೇಕು, ತನಗಿಲ್ಲದ ಹಕ್ಕನ್ನು ಸಾಧಿಸಬೇಕೆಂಬ ಹಟ. ಆಕೆಯ ವಿರುದ್ದವಾಗಿರುವವರ ಮೇಲೆ ತನ್ನ ಕೆಂಗಣ್ಣು ಬಿಟ್ಟು ಅವರನ್ನು ಕೆಲಸದಿಂದ ತೆಗೆಸುವುದರಲ್ಲೇ ಒಂದು ರೀತಿಯ ಸಂತೃಪ್ತಿ ಅವಳಿಗೆ.

ನನ್ನ ಸಹೊದ್ಯೋಗಿಗಳಲ್ಲಿ ಕೆಲವರಿಗೆ ಅವರು ಮಾಡಿದ ಕೆಲಸಕ್ಕೆ Experience certificate ಕೂಡಾ ಸಿಗದಂತೆ ಮಾಡಿದ್ದವಳು ಈಕೆ. ಇಂದಿನ ಸರದಿ ನನ್ನ ಗೆಳೆಯ, ಸಹೋದ್ಯೋಗಿ ಹರೀಶನದು. ತನ್ನ ಹಿಂದಿನ ಕಂಪನಿಯಲ್ಲಿ ರಾತ್ರಿಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಅವನಿಗೆ ರಾತ್ರಿ ನಿದ್ರೆ ತಡವಾಗಿ ಬರುತ್ತಿದ್ದರಿಂದ ಬೆಳಗಿನ ಸಮಯದಲ್ಲಿ ಕೆಲಸಕ್ಕೆ ಬರುವುದು ತಡವಾಗುತ್ತಿತ್ತು. ಅದಕ್ಕೆ ತಕ್ಕಂತೆ ಅವನು ರಾತ್ರಿ ತಡವಾಗಿ ಹೋಗುತ್ತಿದ್ದ. ಪ್ರತಿಯೊಂದು Customer call ಅನ್ನೂ attend ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ. ಹೆಚ್ಚು ಕಡಿಮೆ ಒಂದು ವರುಷದಿಂದ ಕೆಲಸ ಮಾಡುತ್ತಿದ್ದ ಅವನಿಗೆ ನಮ್ಮ ರೇಷ್ಮಳನ್ನು ಕಂಡರೆ ಅಷ್ಟಕ್ಕಷ್ಟೇ... ಹಾಗಾಗಿ ಅವಳ ಕೆಂಗಣ್ಣಿಗೆ ಗುರಿಯಾಗಿದ್ದ. ನಾನು ಸೇರಿದ ಹೊಸದರಲ್ಲಿ ಇಲ್ಲಿನ ಉದ್ಯೋಗಿಗಳ ಸಂಖ್ಯೆ ೨೦ ಇದ್ದದ್ದು ಇಂದು ೯ಕ್ಕೆ ಬಂದಿಳಿದಿದೆ. ಪ್ರತೀ meeting ನಲ್ಲೂ ನಾವು ಅಷ್ಟುಜನರನ್ನ Interview ಮಾಡಿದ್ದೇವೆ, ಇಷ್ಟು ಜನ ಕೆಲಸಕ್ಕೆ ಸೇರಬೇಕಿದೆ ಎಂದೆಲ್ಲಾ ಭರವಸೆಯನ್ನ ಕೊಡುತ್ತಾ ಬಂದರೂ ಇಲ್ಲಿಯತನಕ ನಾನು ಯಾವುದೂ ಕಾರ್ಯರೂಪಕ್ಕೆ ಬಂದಿರುವುದನ್ನು ಕಂಡಿಲ್ಲ. ಇನ್ನೂ ಇಲ್ಲಿ ಇರುವ ಉದ್ಯೋಗಿಗಳೇ ಇಲ್ಲಿನ ವಾತಾವರಣ ಸರಿಯಿಲ್ಲ ಎಂದು ಕೆಲಸ ತೊರೆದಿರುವುದನ್ನ ಕಂಡಿದ್ದೇನೆ. ನಿಮಿಷಕ್ಕೊಂದು ನಿರ್ಧಾರವನ್ನ ತೆಗೆದುಕೊಳ್ಳುವ ನನ್ನ reporting officer, so called sales head ಗೆ ಕೆಲಸ ಮಾಡಿದರೂ ತಪ್ಪು ಕೆಲಸ ಮಾಡದಿದ್ದರೂ ತಪ್ಪು. ದೃಢ ನಿರ್ಧಾರವನ್ನ ತೆಗೆದುಕೊಳ್ಳದವರನ್ನು ನೇಮಕಾತಿ ಮಾಡಿಕೊಂಡಿರುವ ನಮ್ಮ Boss, ಅವಳ ಮಾತನ್ನು ಕೇಳಿಕೊಂಡು ನಮ್ಮ ಕಾರ್ಯಾಲಯದ ವಾಸ್ತುವನ್ನ ಬದಲಿಸ ಹೊರಟಿದ್ದಾರೆ !!!! ಮುಗ್ದ ಮನಸಿನ ನನ್ನ Boss ಅನ್ನು ಯಾವ ಯಾವ ರೀತಿಯಲ್ಲಿ ವಶಪಡಿಸಿಕೊಳ್ಳಬಹುದು ಏಂಬುದನ್ನ ಚೆನ್ನಾಗಿ ಅರಿತಿರುವ ಈಕೆ ಎಲ್ಲರೆದುರು ತಾನೊಬ್ಬಳೇ ಕೆಲಸಮಾಡುತ್ತಿರುವುದಾಗಿ ತೋರ್ಪಡಿಸುತ್ತಾಳೆ. ನಾನಿಲ್ಲಿ ಬರೆದಿರುವುದು ಅವಳ ಗುಣವನ್ನ ಎಲ್ಲರಿಗೂ ಪ್ರಚಾರ ಪಡಿಸುವ ಉದ್ದೇಶದಿಂದಲ್ಲ, ನನ್ನ ಕಾರ್ಯಾಲಯದಂತೆಯೇ ಬೇರೆ ಕಾರ್ಯಾಲಯದಲ್ಲೂ ಕೂಡಾ ರೇಷ್ಮಾಳಂತ ವ್ಯಕ್ತಿಗಳು ಹೇರಳವಾಗಿ ಇದ್ದೇ ಇರುತ್ತಾರೆ. ನಾವು ನಮ್ಮ ಎಚ್ಚರಿಕೆಯಲ್ಲಿ ಇರಬೇಕಷ್ಟೇ !!!