ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Friday, April 25, 2008

ನೊಡಿದ್ಯಾ !!!

ನೊಡಿದ್ಯಾ !!! ನಾನು ಬರ್ದಿರೋ ಕವನ (ಅದು ಕವನ ಅಂತ ಅಂದ್ಕೋಬೇಕು ಅಷ್ಟೇ) ಅದು, ಯಾರೋ ಕಾಪಿಮಾಡಿ ಅವರ ಬ್ಲಾಗಿನಲ್ಲಿ ಹಾಕಿದಾರೆ !!! ನೋಡೋ !!!!

ಈ ಮೇಲಿನ ಸಾಲುಗಳು ಬೇರೆಯಾರೂ ಹೇಳಿದ್ದಲ್ಲ ಸ್ವಾಮೀ, ನಾನೇ ಹೇಳಿದ್ದು. ಹೌದು, ಕೆಲವು ತಿಂಗಳ ಹಿಂದೆ ನನ್ನ ಬ್ಲಾಗಿನಿಂದ ಕೆಲವು ಕವನ?? ಗಳು ಬೇರೆಯವರ ಪಾಲಾಗಿತ್ತು, ಅಷ್ಟಕ್ಕೇ ರಾಧ್ಧಾಂತ ಮಾಡಿ ಗಲಾಟೆ ಮಾಡ್ಕೊಂಡು ನನ್ನ ಬ್ಲಾಗ್ ನನ್ನ ಸರ್ವಸ್ವ ಅಂತ ನನ್ನ ಬ್ಲಾಗನ್ನ ಯಾರೂ ನೋಡದ ಹಾಗೆ ನಾನೇ ಲಾಕ್ ಮಾಡಿದ್ದೆ. ಕೆಲವು ತಿಂಗಳ ಹಿಂದೆ ನನ್ನ ಜೀವನದಲ್ಲಿ ನಾನು ಊಹಿಸಲಾಗದ ಕೆಲವು ಕಹಿ ಘಟನೆಗಳು ಜರುಗಿದವು. ಅದು ನನ್ನ ಪ್ರೀತಿಯ ಅಪ್ಪನ ಅಗಲಿಕೆ. ಆಗ ನನಗನ್ನಿಸಿದ್ದು "ಈ ಪ್ರಪಂಚದಲ್ಲಿ ನಾವು ಹುಟ್ಟಿದಾಗ ಬರಿಗೈಯಲ್ಲಿ ಬಂದು ಬರಿಗೈಯಲ್ಲಿ ಹೋಗ್ತೀವಿ, ಅದರ ನಡುವೆ ನಾನು ನನ್ನದು ಅನ್ನುವ ಅಹಂ ಏತಕ್ಕೆ???" ಜೀವನದಲ್ಲಿ ಒಂದುರೀತಿಯ ನಿರಾಸಕ್ತಿ ಮೂಡಿತ್ತು. ಕಾಲಾಯ ತಸ್ಮೈ ನಮಃ ಅನ್ನೋಹಾಗೆ ಕ್ರಮೇಣವಾಗಿ ನಾನು ನನ್ನ ಇಂದಿನ ಜೀವನಕ್ಕೆ ಹೊಂದಿಕೊಂಡು ಬದುಕುವುದನ್ನ ರೂಢಿಸಿಕೊಂಡಿದ್ದೇನೆ.

ಬೇರೆಯವರಿಗೆ ಏನಾದರೂ ಕೊಟ್ಟರೆ ಅದು ಅವರಿಗೆ ಸಂತಸ ಅಥವ ಸಮಾಧಾನ ತರುವಂತದ್ದಾಗಿರಬೇಕು. ನನ್ನ ಆ ಬರಹ ಕೂಡಾ ಕೆಲವು ಮಂದಿಗೆ ಸಮಾಧಾನ ತಂದಿತ್ತೇನೋ !!! ಆದಕಾರಣದಿಂದಲೇ ಅವರು ಅದನ್ನ ತಮ್ಮ ಬ್ಲಾಗಿಗೆ ಸೇರಿಸಿಕೊಂಡಿದ್ದರು ಅಂತ ನಂತರ ತಿಳಿಯಿತು. ಆಗ ಏನೋ ಒಂದುರೀತಿಯ ಕಸಿವಿಸಿಯಾಗ್ತಾ ಇತ್ತು. ಆದರೆ ಮಾನವ ಸಹಜಗುಣ ಎಲ್ಲಿ ಹೋಗತ್ತೆ !!! "ನಾನು, ನನ್ನದು ಅನ್ನೋ ಅಹಂ" ನಂತರ ನಾನು ಆ ವ್ಯಕ್ತಿಯಿಂದ ಬಂದ ಸ್ನೇಹದ ಕೋರಿಕೆಯನ್ನ ಒಪ್ಪಿಕೊಂಡು ಅವರ ಸ್ನೇಹಿತನಾದೆ.

ಆ ಘಟನೆಯ ನಂತರ ನನ್ನ ಮನದಲ್ಲೇ ನಾನು ನೂರಾರುಬಾರಿ ಯೋಚನೆ ಮಾಡಿದ್ದೇನೆ, ಯಾವುದೇ ವ್ಯಕ್ತಿಯಲ್ಲಿ ಇರುವ ಕಲೆ ಹೊರಬರಬೇಕಾದರೆ ಆ ಕಲೆಗೆ ತಕ್ಕ ಪ್ರೋತ್ಸಾಹ ಸಿಕ್ಕಲೇಬೇಕು. ಯಾವುದೇ ಒಂದು ಗಿಡವು ಬೆಳೆದು ನಿಲ್ಲಬೇಕಾದರೆ ಅದಕ್ಕೆ ತಕ್ಕ ಪೋಷಣೆ ಅತ್ಯಗತ್ಯ. ನನ್ನ ಬ್ಲಾಗನ್ನು ನೋಡಿ ಅದನ್ನು ಮೆಚ್ಚಿದಾಗ ತಾನೆ ನನಗೆ ಮತ್ತೊಮ್ಮೆ ಬರೆಯುವ ಪ್ರಯತ್ನ ಪಡಲಿಕ್ಕೆ ಸಾಧ್ಯ ??? ನಾನು ಬರೆದದ್ದನ್ನ ಯಾರೊಂದಿಗೂ ಹಂಚಿಕೊಳ್ಳದಿದ್ದರೆ ನಾನು ಬರೆದದ್ದಾದರೂ ಯಾವ ಕಾರಣಕ್ಕೆ ??? ಇದೆಲ್ಲಾ ವಿಚಾರಮಂಥನವಾದ ನಂತರ ನನ್ನ ಬ್ಲಾಗನ್ನು ಬಂಧಮುಕ್ತಗೊಳಿಸಿದೆ.

No comments: