ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Friday, November 7, 2008

ನಿಮ್ಮಲ್ಲಿ ನಲ್ಮೆಯ ವಿನಂತಿ...

ನಾವು ನಮ್ಮ ಕಳೆದುಹೋದ ದಿನಗಳತ್ತ ತಿರುಗಿ ನೋಡಿದರೆ ಎಂದಾದರೂ ಒಮ್ಮೆ ನಿಮಗೆ ನಿಮ್ಮ ಮನೆಯ ವಿಳಾಸಕ್ಕೆ ಒಂದು ಪತ್ರ ಅಥವಾ ಕರಪತ್ರ ಬಂದಿರಬಹುದು... "ಜೈ ಸಂತೋಷೀ ಮಾ" ...... ಹೀಗೆ ಆರಂಭವಾಗುವ ಪತ್ರ "ಇದನ್ನು ____ ಜನರಿಗೆ ಕಳುಹಿಸಿದರೆ ಒಳ್ಳೆಯದಾಗುತ್ತದೆ, ಇಲ್ಲವಾದಲ್ಲಿ ಕೆಡುಕಾಗುತ್ತದೆ" ಇಲ್ಲಿಯವರೆಗೆ ಇರುತ್ತಿತ್ತು. ಆದರೆ ಕಾಲ ಬದಲಾದಂತೆ ಇದು ಮರೆಯಾಯಿತೆಂದೇನಲ್ಲ, ಇದನ್ನು ಕಳುಹಿಸುವ ಜನರು ಹೊಸಾ ತಂತ್ರಜ್ಞಾನಕ್ಕೆ ಅನುಗುಣವಾಗಿ ತಮ್ಮ ಈ ರೀತಿಯ ಸಂದೇಶಗಳನ್ನ ಬದಲಾಯಿಸಿಕೊಂಡಿದ್ದಾರೆ... ಅಂಚೆಯನ್ನು ಮರೆತು ಮೊಬೈಲಿಗೆ, ಈ-ಮೈಲಿಗೆ ದಾಸರಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಹಳಷ್ಟು e-mailಗಳು, SMSಗಳು, Orkut scrapಗಳು ನಿಮಗೆ ಅಷ್ಟಾಗಿ ಪರಿಚಯವಿಲ್ಲದವರಿಂದ ಬಂದಿರುತ್ತದೆ, ಅದರ ಅಡಕ ಈ ಮೇಲೆ ಹೇಳಿದ್ದಕ್ಕಿಂತಾ ಭಿನ್ನವೇನಲ್ಲ... "ಇದು _____ ದೇವಿಯ/ದೇವರ ಪವಾಡ... ಇದನ್ನು ೨೦ ಜನಗಳಿಗೆ ಕಳುಹಿಸಿದರೆ ನಿಮ್ಮ ಭವಿಷ್ಯ ಉತ್ತಮವಾಗುವುದು, ಕಡೆಗಾಣಿಸಿದರೆ ಕೆಡುಕಾಗುವುದು. ನಾನು ಇದನ್ನು ನಿಮಗೆ ಕಳುಹಿಸಲೇ ಬೇಕಾಗಿದೆ, ಕ್ಷಮೆ ಇರಲಿ" ಇತ್ಯಾದಿ ಇತ್ಯಾದಿ...

ದೇವರು ಅಥವಾ ದೇವತೆಯ ಹೆಸರು ಜೈ ಸಾಯಿನಾಥ್, ಜೈ ಅಂಬಾ..... ಏನಾದರೂ ಆಗಿರಬಹುದು ಹೀಗೇ ಪಟ್ಟಿ ಮಾಡುತ್ತಲಿದ್ದರೆ ಅದು ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಗುತ್ತದೆ. ಈ ಪಟ್ಟಿಯಲ್ಲಿ ಅಲ್ಲ, ಜೀಸಸ್ ದೇವರುಗಳೂ ಸೇರಿದ್ದಾರೆ. ಮೇಲಿನ ಹೆಸರನ್ನು ನೋಡಿಯೇ ಆಸ್ತಿಕರು ದೇವರಮೇಲಿನ ಭಕ್ತಿಯಿಂದಲೋ, ಭಯದಿಂದಲೋ, ತಮ್ಮ ಭವಿಷ್ಯದ ಚಿಂತೆಯಿಂದಲೋ ತಮ್ಮ ಪರಿಚಯದವರಿಗೆ ಅದನ್ನು ಕಳುಹಿಸುತ್ತಾರೆ. ಅವರ ಮಟ್ಟಿಗೆ ಅದು ಕೇವಲ ಒಂದು ಸಂದೇಶ ಮಾತ್ರ, ಆದರೆ ಅದರ ಹಿಂದೆ ತಂತ್ರಜ್ಞಾನ ತಿಳಿಯುವ ಆಸಕ್ತಿ ಅವರಲ್ಲಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಕಂಪನಿಗಳು ನೀಡಿರುವ ಉಚಿತ SMS package ನಿಂದ ಆ ಸಂದೇಶ ಕಳುಹಿಸುವ ವ್ಯಕ್ತಿಗೆ ಯಾವುದೇ ಖರ್ಚಿಲ್ಲದೇ ತನ್ನ ಕೆಲಸ ಆಗಿಹೋಗುತ್ತದೆ. ಆದರೆ ಅದೇ ಒಂದು e-mail ಆದರಂತೂ ಒಂದು ನಯಾಪೈಸೆ ಕೂಡಾ ಖರ್ಚಿಲ್ಲ... ಉಚಿತವಾಗಿ ತಮ್ಮ ಪರಿಚಯಸ್ಥರ e-mailಐಡಿ ಗಳನ್ನ ಹಾಕಿ ಕಳುಹಿಸಿದರಾಯಿತು. e-mailವಿಚಾರದಲ್ಲಿ ದೊಡ್ಡ ದೊಡ್ಡ ಕಂಪನಿಗಳು ಬಹಳ ದೊಡ್ಡಮೊತ್ತವನ್ನು ವ್ಯಯಿಸುತ್ತಿರುವುದು ಕಳುಹಿಸಿವವನ ಗಮನಕ್ಕೆ ಬರುವುದಿಲ್ಲ. ಅವನ ಮಟ್ಟಿಗೆ ಅದು ಕೇವಲ ಒಂದು ಸಂದೇಶವಷ್ಟೇ... ಆದರೆ ಆ ಸಂದೇಶವನ್ನ ಸ್ವೀಕರಿಸುವ ವ್ಯಕ್ತಿಗೆ ಮೇಲೆ ಹೇಳಿದಂತೆ ಅಪಾರ ನಂಬಿಕೆ ಇದ್ದಲ್ಲಿ ಆತ ಇಕ್ಕಟ್ಟಿಗೆ ಸಿಲುಕಿಕೊಳ್ಳುತ್ತಾನೆ, ಕಳುಹಿಸದೇ ಬೇರೆ ದಾರಿ ಇಲ್ಲ... ಹಾಗಾಗಿ ಅವನಿಂದ ಆ e-mail ಮತ್ತಷ್ಟು e-mailಐಡಿ ಗಳಿಗೆ ತಳ್ಳಲ್ಪಡುತ್ತದೆ. ಅದರಿಂದ ಆಗುವ ಲಾಭ ???

ಸುಮ್ಮನೆ ಸಮಯದ ನಷ್ಟ ಮಾನಸಿಕ ಕಿರಿಕಿರಿ ಇತ್ಯಾದಿ.... ಈ ಮೇಲಿನ ಸಂದೇಶಗಳು ಕೇವಲ ದೇವರಿಗೆ ಸೀಮಿತವಾಗಿಲ್ಲ, ಅದು ನಿಮ್ಮ ಗೆಳೆತನಕ್ಕೂ ಸವಾಲೊಡ್ಡಬಹುದು.... "ನಿನಗೆ ನಿಜವಾಗಿಯೂ ನನ್ನ ಬಗ್ಗೆ ಕಾಳಜಿ ಇದ್ದರೆ ನನಗೂ ಸೇರಿದಂತೆ ಇದನ್ನು ೨೦ ಜನರಿಗೆ ಕಳುಹಿಸು, ಎಷ್ಟು ಜನ ನಿನ್ನ ಬಗ್ಗೆ ಕಾಳಜಿ ಹೊಂದಿದ್ದರೆಂದು ನಿನಗೆ ಅರಿವಾಗುತ್ತದೆ". ಕೇವಲ ಸಂದೇಶ ಕಳುಹಿಸಿದರೆ ಮಾತ್ರಕ್ಕೆ ಕಾಳಜಿಯೆ ??? ಒಂದು ರೀತಿಯಲ್ಲಿ ಇಂತಹಾ ಸಂದೇಶಗಳು ಮೊಬೈಲ್ ಕಂಪನಿಯನ್ನು ಉದ್ದಾರ ಮಾಡುತ್ತವೆ !!! ನಾನು ಸಾಧ್ಯವಾದಷ್ತೂ ಇಂತಹಾ ಸಂದೇಶ ಕಳುಹಿಸುವ ಸ್ನೇಹಿತರಿಗೆ ಆದಷ್ಟೂ ತಿಳಿಹೇಳುತ್ತೇನೆ. ಸಾಧ್ಯವಾದಲ್ಲಿ ನೀವೂ ತಿಳಿಹೇಳಿ :)

ಕೊನೆಯದಾಗಿ ನಾನು ಹೇಳುವುದಿಷ್ಟೆ : ಇದನ್ನು ೨೦ ಜನಕ್ಕಲ್ಲ ಸಾಧ್ಯವಾದಷ್ಟು ಜನರಿಗೆ ತಿಳಿಹೇಳಿ ಅವರಲ್ಲಿ ಅರಿವು ಮೂಡಿಸಿರಿ :) ದೇವರು ನಮ್ಮ SMS ನಿಂದ ಸಂತಸ ಗೊಳ್ಳುವುದಿಲ್ಲ.... ಬದಲಾಗಿ ಕಷ್ಟಪಟ್ಟು ದುಡಿದರೆ ಸಂತಸ ಪಡಬಹುದೇನೊ....

No comments: