ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Friday, May 23, 2008

Bye bye ಆರ್ಕುಟ್

ಆರ್ಕುಟ್

ನನಗೆ ನನ್ನ lifeನಲ್ಲಿ ಇದ್ದ ಒಂದು ದೊಡ್ಡ ಕೊರತೆಯನ್ನ ನೀಗಿಸಿದ್ದ ನಿನಗೆ ನನ್ನ Thanks. ಇಷ್ಟುದಿನ ನನ್ನ ಜೊತೆಗಿದ್ದು ನನ್ನ ಜೀವನದಲ್ಲಿ ಅನಿರೀಕ್ಷಿತ ತಿರುವುಗಳನ್ನು ನೀಡಿದ್ದ ನಿನಗೆ ನನ್ನ Thanks. ಸ್ನೇಹಕ್ಕಾಗಿ ಹಾತೊರೆಯುತ್ತಿದ್ದ ನನಗೆ ಸ್ನೇಹಿತರ ಅಪಾರ ಸಾಗರವನ್ನ ಪರಿಚಯ ಮಾಡಿಕೊಟ್ಟ ನಿನಗೆ Thanks. ನಾನು ಇವತ್ತು ನಿರ್ಧಾರ ಮಾಡಿದ್ದೇನೆ. ನಿನ್ನಿಂದ ನಾನು ದೂರ ಹೋಗ್ಬೇಕು ಅಂತ. Yes !!! i am going away from you. ಆದರೆ ಹೋಗೋದಕ್ಕೆ ಮುಂಚೆ ನಿನ್ನೊಡನೆ ನಾನು ಕಳೆದ ದಿನಗಳನ್ನ ಇಲ್ಲಿ ಮೆಲುಕುಹಾಕಬೇಕು ಅನ್ನಿಸ್ತಾ ಇದೆ !!!

ನನಗೆ ನಿನ್ನ ಪರಿಚಯ ಮಾಡಿಕೊಟ್ಟಿದ್ದು ನನ್ನ ಹಳೇ Officeನ friend ಕೃಷ್ಣ ಕುಮಾರ್. ಆರಂಭ ಶೂರತ್ವ ಆನೋಹಾಗೆ ಅಲ್ಲಿ ಒಂದು communitieನ ಶುರುಮಾಡಿ ಆಮೇಲೆ ಅದನ್ನ ಕಡೆಗಾಣಿಸಿಬಿಟ್ಟ. ೮/೧೪/೦೬ ಅಂದರೆ ನಮ್ಮ Independence dayಗೆ ಸರಿಯಾಗಿ ಒಂದು ದಿನ ಬಾಕಿ ಇತ್ತು. ಆವತ್ತು ನನಗೆ ಮೊದಲನೇ Scrap ಬಂದದ್ದು. ಅಲ್ಲಿಂದ ಶುರುಆದ ನಿನ್ನ ಪರಿಚಯ ಇಲ್ಲೀವರೆಗೂ ಬಂದಿದೆ. ಇನ್ನು ಮುಂದೆ ನನಗೆ ಗೊತ್ತಿಲ್ಲ. ನಿನ್ನ ಪರಿಚಯ ೧೪ನೇ ತಾರೀಖೇ ಆದರೂ ನಿನ್ನ ಬಗ್ಗೆ ನನಗೆ ಜಾಸ್ತಿ ಗೊತ್ತಿರಲಿಲ್ಲ. ಅದು ಗೊತ್ತಾಗಿದ್ದು ಸುಮಾರು ತಿಂಗಳುಗಳು ಕಳೆದಮೇಲೇ !!! ಒಬ್ಬರಿಂದ ಮತ್ತೊಬ್ಬರ ಪರಿಚಯ ಆಗ್ತಾ ನನ್ನ ಸ್ನೇಹದ ಸಂಕೋಲೆ ಬೆಳಿತಾ ಹೋಗ್ತಾ ಇತ್ತು. ಅಮರ, ಶಿಲ್ಪ, ಪ್ರಿಯ, ನವ್ಯ, ವಿಜಯ್, ವಿನೋದ್, ದೀಪ್ತಿ, ಅಮಿತ್, ಅರ್ಪಿತ, ಪುಷ್ಪ, ಜಯಶಂಕರ್, ಪ್ರಶಾಂತ್, ನಾರಾಯಣ, ತವಿಶ್ರೀ... ಹೀಗೇ ನನ್ನ ಆಪ್ತರ ಪಟ್ಟಿಮಾಡ್ತಾ ಹೋದರೆ ನನಗೆ ಒಂದು ದಿನ ಸಾಲೋದಿಲ್ಲ.

ಸ್ನೇಹ ಬೆಳಿತಾ ಇದ್ದಂತೆಲ್ಲಾ ನನ್ನಮೇಲೆ ಅದನ್ನು ನಿಭಾಯಿಸುವ ಜವಾಬ್ದಾರಿ ಬೆಳೀತಾ ಹೊಯ್ತು. ಪ್ರತೀ ದಿನ ಏನಾದರೊಂದು ಹೊಸತನ್ನು ನನ್ನ ಸ್ನೇಹಿತರಿಗೆ ಕೊಡಬೇಕೆನ್ನುವ ಹಂಬಲ. ಹಾಗಾಗಿ ಕೆಲವು ನುಡಿಮುತ್ತುಗಳನ್ನ, ಮತ್ತೆ ಕೆಲವು Jokes ಗಳನ್ನ ಪ್ರತೀ ದಿನ ನನ್ನ ಬಳಗಕ್ಕೆ Scrap ಮಾಡ್ತಾ ಇದ್ದೆ. ಕೆಲವೊಂದು ದಿನ ಅದು ಸಾಧ್ಯ ಆಗಲಿಲ್ಲ ಅಂದರೆ ಅದಕ್ಕೆ ಉತ್ತರವಾಗಿ ಸ್ನೇಹಿತರಿಂದ ಮತ್ತೋಂದು scrap ಬಂದಿರ್ತಿತ್ತು. ನನ್ನ ಬೆಂಗಳೂರಿನ Officeನಿಂದ ನನ್ನನ್ನು ಹೈದರಾಬಾದಿಗೆ ವರ್ಗಮಾಡಿದಾಗಲಂತೂ ನೀನು ನನ್ನ ಬೆನ್ನೆಲುಬಾಗಿ ನಿಂತಿದ್ದು ಮರೆಯೋಕೆ ಸಾಧ್ಯ ಇಲ್ಲ. ಆ ಗೊತ್ತಿಲ್ಲದ ನಾಡಿನಲ್ಲಿ ಕನ್ನಡಿಗರ ಪರಿಚಯಕ್ಕೆ ಮೂಲ ಕಾರಣ ನೀನೇ. ನಿನ್ನಿಂದಲೇ ನನಗೆ ಅಡುಗೆ ಹೇಳಿಕೊಡುವ ಟೀಚರ್ (ದೀಪ್ತಿ) ಪರಿಚಯ ಆದದ್ದು. ಸಾಹಿತ್ಯಾಭಿಮಾನಿ ಅಮರನ ಪರಿಚಯ ಆದದ್ದು, ಮನಸ್ಸಿನ ಮಾತ ಕೇಳುವ ಗೆಳೆಯರು ಸಿಕ್ಕಿದ್ದು, ನೊಂದ ಮನಸ್ಸಿಗೆ ಪ್ರೀತಿಯ ಮುಲಾಮು ಹಚ್ಚೋ ಕೈಗಳುಸಿಕ್ಕಿದ್ದು, ನನ್ನ ಬ್ಲಾಗ್ ಗುರು ಸೋಮನ ಪರಿಚಯ ಆದದ್ದು. ನನ್ನ ಬ್ಲಾಗ್ ಬರೋದಕ್ಕೆ ಸ್ಪೂರ್ತಿ ಕೊಟ್ಟ ಗೆಳೆಯು ವಿಜಯ್ ಪರಿಚಯವಾದದ್ದೂ ನಿನ್ನಿಂದಲೇ !!! ನಾನು ನಿನ್ನ ಇಷ್ಟಾ ಪಟ್ಟು ದೂರ ಕಳಿಸ್ಥಾ ಇಲ್ಲ, ಕಷ್ಟಾಪಟ್ಟು ನಾನೇ ದೂರ ಹೋಗ್ತಾ ಇದೀನಿ.

ಒಂದು ಕಾಲದಲ್ಲಿ ನೀನು ನನಗೆ ಎಷ್ಟು ಸನಿಹವಾಗಿದ್ದೆ ಅಂದರೆ ನಾನು ನನ್ನ ನಿದ್ದೆಬಿಟ್ಟು ನಿನ್ನ ಮುದ್ದಾಡಿದ್ದಿದೆ, ನಿನಗೆ ಸಿಂಗಾರ ಮಾಡಿದ್ದಿದೆ. ಇನ್ನೂ ಚುಮು ಚುಮು ಬಿಸಿಲು ಮೂಡೋದಕ್ಕೂ ಮುನ್ನ ನಿನ್ನಲ್ಲಿ ಹುದುಗಿರುವ ಅಪಾರ ಮಿತ್ರವೃಂದಕ್ಕೆ ಬೆಳಗ್ಗೆ ಬೆಳಗ್ಗೆ Good morning scrap ಹಾಕ್ತಿದ್ದಿದೆ. ನಿನ್ನ ಬಗ್ಗೇನೇ ಒಂದು ಪದ್ಯ ರಚಿಸಿದ್ದೂ ಇದೆ... ನಮ್ಮ ಅಭಿರುಚಿಯನ್ನ ಬೇರೆಯವರಿಗೆ ತಿಳಿಸುವ ಮಾಧ್ಯಮ ನೀನೆ, ಆದರೆ ಇತ್ತೀಚೆಗೆ ಯಾಕೋ ಗೊತ್ತಿಲ್ಲ, ಆರ್ಕುಟ್ ಅಂದರೆ ನೀನು boring ಅನ್ನಿಸ್ತಾ ಇದಿಯ. ಆರ್ಕುಟ್ ಇದ್ದರೆ ಅದರಲ್ಲಿ ಇರೋ ಅಪಾರ ಮಿತ್ರವೃಂದವನ್ನ ಮಾತಾಡಿಸಬೇಕು ಅನ್ಸತ್ತೆ. ಆದರೆ ಅದಕ್ಕೆ ಸಮಯ ಸಿಕ್ತಾ ಇಲ್ಲ. ಎಷ್ಟೋ ಕಾಣದಿರುವ ಹೃದಯಗಳು, ಎಷ್ಟೋ ಕಾಣದಿರುವ ಮುಖಗಗಳು, ಎಲ್ಲಾ ನನಗೆ ನಿನ್ನಿಂದ ಸಿಕ್ಕಿತ್ತು. ಆದರೆ ನಾನು ಅದನ್ನೆಲ್ಲಾ maintain ಮಾಡಲಾರೆ. ಆರ್ಕುಟ್- ನಿನ್ನ ಬಿಟ್ಟು ದೂರ ಹೋಗ್ತಾ ಇದೀನಿ.

ನಿನ್ನ ಮತ್ತೊಬ್ಬ ಗೆಳೆಯ ಅನ್ನೋ ಈ Blogನಿಂದ ಯಾವಾಗ ದೂರ ಹೋಗ್ತೀನೋ ಗೊತ್ತಿಲ್ಲ. ನಾನು ನಿನ್ನಿಂದ ದೂರ ಹೋಗೊದಕ್ಕೆ ಏನುಕಾರಣ ಅಂತ ಮಾತ್ರ ಕೇಳ್ಬೇಡ Please... ಅದಕ್ಕೆ ಉತ್ತರ ನನ್ನ ಹತ್ತಿರ ಇಲ್ಲ. ಮತ್ತೊಮ್ಮೆ ನಿನ್ನ ಬಳಿ ಹಿಂದಿರುಗಬೇಕು ಅನ್ನಿಸ್ತಾ ಇದೆ, ಆದರೆ ಮನಸ್ಸು "ಬೇಡ ಮತ್ತೆ ಆ ಕಡೆಗೆ ಹೊರಳಬೇಡ" ಅಂತ ಸಾರಿ ಸಾರಿ ಹೇಳ್ತಾ ಇದೆ. ನಿಮ್ಮಿಬ್ಬರಿಗೂ ಬೇಸರ ಮಾಡೋದಕ್ಕೆ ನನಗೆ ಇಷ್ಟ ಇಲ್ಲ, ನಿನ್ನ ವಾರಕ್ಕೊಮ್ಮೆ ಬಂದು ಮಾತನಾಡಿಸಿಕೊಂಡು ಹೋಗ್ತೀನಿ, ಆಯ್ತಾ ???

Bye Bye orkut... ಮತ್ತೋಮ್ಮೆ ನಿನ್ನ ನಾನು ಹುಡುಕಿಕೊಂಡು ಬಂದು ನನ್ನ ಜೀವನದಲ್ಲಿ ಮತ್ತೋಂದು ತಿರುವಿಗೆ ಹೊರಳುವಂತೆ ಮಾಡಬೇಡ.

No comments: