ಒಂದು ಕಾಲದಲ್ಲಿ ಭೋರ್ಗರಿದು ಉಕ್ಕಿ ಹರಿದಿದ್ದ
ಮನಸ್ಸಿನ ಭಾವನೆಗಳ ಕಡಲಲ್ಲಿ
ಇಂದು ಒಂದುರೀತಿಯ ಪ್ರಶಾಂತತೆ ಕಾಣುತ್ತಿದೆ...
ಮನದ ಪುಟದಿಂದ ಉಕ್ಕಿ ಉಕ್ಕಿ
ಬಂದಿದ್ದ ಭಾವನೆಗಳು ಇಂದು
ಮನದೊಳಗಡೆ ಅವಿತು ಬಚ್ಚಿಟ್ಟುಕೋಂಡಿವೆ
ಮನಸ್ಸಿನಿಂದ ಹರಿಬಿಡದೆ
ಅದಕ್ಕೆ ಅಣೇಕಟ್ಟನ್ನು ನಾನೇ ಕಟ್ಟಿದ್ದೇನೆ,
ಆ ಪ್ರವಾಹವನ್ನ ಹಿಡಿದಿಟ್ಟಿದ್ದೇನೆ...
ಪ್ರವಾಹದಲ್ಲಿ ನನ್ನ ಭಾವನೆಗಳು
ಎಲ್ಲಿ ಹರಿದು ಕಣ್ಣೀರ ಕಡಲೊಳು
ಬೆರೆತುಹೋಗುವುದೋ ಎಂಬ ಆತಂಕದಿಂದ
ನನ್ನ ಭಾವನೆಗಳ ಆಕ್ರಂದನವನ್ನ
ಪ್ರವಾಹದಲ್ಲಿ ಕೇಳಲಾರದೇ,
ಮನದಲ್ಲಿ ಬಚ್ಚಿಡಲೂ ಆಗದೇ
ಮುಂದೇನು ಮಾಡುವುದೆಂದು ಆಲೋಚಿಸುತ್ತಾ ದಿಗಂತದಲ್ಲಿ
ನನ್ನ ನೋಟವನ್ನ ನೆಟ್ಟಿದ್ದೇನೆ, ಅಣೇಕಟ್ಟೆಯ
ಬಾಗಿಲನು ತೆರೆಯುವ ದಿನಕ್ಕಾಗಿ ಕಾದು ಕುಳಿತಿದ್ದೇನೆ...
No comments:
Post a Comment