ಮೇಘಮಾಲೆಯ ತುಂತುರಿನ ಸಿಂಚನದಿ
ಮಿಂದೆದ್ದ ಕುಸುಮ ಆಗಸವ
ನೋಡುತಾ ಮುಗುಳ್ನಕ್ಕಿತ್ತು
ಅರಳಿನಿಂತ ಕುಸುಮವನ್ನು ಚುಂಬಿಸುತಾ
ಬೀಸಿಬಂದ ಗಾಳಿ ಅದರ
ಪರಿಮಳವ ಘಮ್ಮನೆ ಹರಡಿತ್ತು
ಗಾಳಿಯೊಡನೆ ಬೆರೆತ ಸುಗಂಧ
ದುಂಬಿಯ ಕರೆತಂದಿತ್ತು,
ಅರಳಿನಿಂತ ಕುಸುಮ ನಾಚಿ ರಂಗೇರಿತ್ತು
ರಂಗೇರಿದ ಕುಸುಮ ಕುಸುಮಬಾಲೆಯ
ಮುಡಿಯೇರಿತ್ತು, ಶೃಂಗಾರ ಕಾವ್ಯಕ್ಕೆ
ಮುನ್ನುಡಿ ಬರೆದಿತ್ತು
ಕುಸುಮಬಾಲೆಯ ಶೃಂಗಾರ ಕಾವ್ಯಕ್ಕೆ
ಹೃದಯವೊಂದು ಮಿಡಿದಿತ್ತು,
ಕಣ್ ಕಣ್ಣಲ್ಲೇ ಕವನ ಬರೆದಿತ್ತು
ಕವನದ ಛಾಪು ಹೃದಯದಲಿ
ಮೂಡಿತ್ತು, ಹೃದಯಗಳ ಮಿಲನ
ಮಹೋತ್ಸವ ಅನುದಿನವು ಸಾಗಿತ್ತು.
2 comments:
ಕೆಲವರ ಮನಸ್ಸಿಗೆ ಇರುವೆ ಸರಿದಿರೋ ಹಾದಿ ಕಾಣಿಸುತ್ತಂತೆ,ಮೊಗ್ಗು ಬಿರಿಯೋ ಸಮಯ ತಿಳಿಯುತ್ತಂತೆ, ಮಂಜು ಬೀಳೋ ಸದ್ದು ಕೇಳುತ್ತಂತೆ, ನೀರು ಮುಗಿಲಾಗೋದು ಅರಿವಾಗುತ್ತಂತೆ,ಮುಗಿಲು ಮಳೆಯಾಗೋದು ಸೂಚಿತವಾಗುತ್ತಂತೆ, ಆ ಮಳೆ ಬಿದ್ದು ತೆನೆ ತೂಗುವ ರೀತಿಯಲ್ಲಿ ಅವರು ಮತ್ತವರ ಕವನ ಬೆಳೆಯುತ್ತಂತೆ......... :)
abba!
super!!!
Post a Comment