ನಮಸ್ಕಾರ ಎಲ್ಲಾ ಓದುಗರಿಗೆ :) ನನ್ನ ಬ್ಲಾಗಿಗೆ ಬಂದದ್ದಕ್ಕೆ ನಿಮಗೆ ಧನ್ಯವಾದಗಳು... ನಾನು ಇಲ್ಲಿ ಬರೆದಿರೋದು ಹೇಗಿದೆ ? ನಿಮಗೆ ಇಷ್ಟಾ ಆಯ್ತಾ ? :) ಇಲ್ವಾ ? :( ಏನಾದ್ರೂ ಪರ್ವಾಗಿಲ್ಲ, ಒಂದು ನಿಮಿಷ ನಿಮ್ಮ ಅನಿಸಿಕೆ ಬರೆದುಹೋಗಬೇಕಾಗಿ ವಿನಂತಿ. ನಿಮ್ಮ ಅನಿಸಿಕೆಗಳೇ ಇಲ್ಲಿನ ಬರಹಕ್ಕೆ ಸ್ಪೂರ್ತಿ....

Saturday, November 3, 2007

ಯಾರು ???

ಮನದಿ ಹುದುಗಿರುವ ವಿಚಾರಗಳು ಹಲವು,
ತನ್ನದೇ ಆದ ಆಲೋಚನೆಗಳು ಹಲವು,
ಮನದಿ ಮೂಡಿರುವ ಭಾವನೆಗಳ ಕದನದಿ
ಗೆದ್ದವರು ಯಾರು ಸೋತವರು ಯಾರು...

ಸುಪ್ತ ಮನಸಿನ ವೇಗವನು ಹಿಡಿಯುವರು ಯಾರು,
ಸುಪ್ತ ಮನಸಿನ ಕನಸನು ಕಂಡವರು ಯಾರು..
ಎಲ್ಲ ಪರಿಧಿಗಳನು ಮೀರಿ ಈ ಮನವು ಜಿಗಿದ
ಜಿಗಿತವನು ಅಳತೆಗೋಲಿಟ್ಟು ಅಳೆದವರು ಯಾರು...

ನೆನ್ನೆ ನಾಳೆಗಳ ನಡುವೆ ಬಂದು ಹೋಗುವ ದಿನಗಳನು
ಸಂತಸದಿ ಕಳೆದೆನೆಂದು ಹೇಳುವವರು ಯಾರು..
ಪ್ರಕೃತಿಯ ಮಡಿಲಿನ ಈ ಪುಟ್ಟ ಜೀವದೊಳಗಿನ
ಪುಟ್ಟ ಮನಸಿನ ಮಾತನು ಕೆಳುವವರು ಯಾರು..

ಹೃದಯದ ಮಾತ ಬುದ್ದಿ ಕೇಳುವುದಿಲ್ಲ,
ಬುದ್ದಿಯ ಮಾತ ಹೃದಯ ಕೇಳುವುದಿಲ್ಲ
ಈ ಇಬ್ಬರನಡುವೆ ಪ್ರೀತಿ ಮೂಡಿಸುವವರು ಯಾರು...

ಇಂದಲ್ಲ ನಾಳೆ ಮಣ್ಣಲ್ಲಿ ಮಣ್ಣಾಗುವ ಈ ಶರೀರವನ್ನು
ಬಿಟ್ಟು ಹೊರಡುವ ಮನಸ್ಸಿಗೆ ಬುದ್ದಿ ಹೆಳುವವರು ಯಾರು...
ಪ್ರತಿ ದಿನದ ಬದುಕಿನಿಂದ ದುರಾಸೆಗೊಳಗಾಗಿ
ದಾರಿತಪ್ಪುವ ಮನಕೆ ಸರಿದಾರಿ ತೋರುವವರು ಯಾರು...

3 comments:

Anonymous said...

it really made me think
thanx for such a wonderful poem
keep writing!!

Narayan said...

ಬಹಳ ಚೆನ್ನಾಗಿದೆ ಕವನ... ಸಮಯೋಚಿತವಾಗಿದೆ

sandhya said...

Superb!!! :)