ಮನದಿ ಹುದುಗಿರುವ ವಿಚಾರಗಳು ಹಲವು,
ತನ್ನದೇ ಆದ ಆಲೋಚನೆಗಳು ಹಲವು,
ಮನದಿ ಮೂಡಿರುವ ಭಾವನೆಗಳ ಕದನದಿ
ಗೆದ್ದವರು ಯಾರು ಸೋತವರು ಯಾರು...
ಸುಪ್ತ ಮನಸಿನ ವೇಗವನು ಹಿಡಿಯುವರು ಯಾರು,
ಸುಪ್ತ ಮನಸಿನ ಕನಸನು ಕಂಡವರು ಯಾರು..
ಎಲ್ಲ ಪರಿಧಿಗಳನು ಮೀರಿ ಈ ಮನವು ಜಿಗಿದ
ಜಿಗಿತವನು ಅಳತೆಗೋಲಿಟ್ಟು ಅಳೆದವರು ಯಾರು...
ನೆನ್ನೆ ನಾಳೆಗಳ ನಡುವೆ ಬಂದು ಹೋಗುವ ದಿನಗಳನು
ಸಂತಸದಿ ಕಳೆದೆನೆಂದು ಹೇಳುವವರು ಯಾರು..
ಪ್ರಕೃತಿಯ ಮಡಿಲಿನ ಈ ಪುಟ್ಟ ಜೀವದೊಳಗಿನ
ಪುಟ್ಟ ಮನಸಿನ ಮಾತನು ಕೆಳುವವರು ಯಾರು..
ಹೃದಯದ ಮಾತ ಬುದ್ದಿ ಕೇಳುವುದಿಲ್ಲ,
ಬುದ್ದಿಯ ಮಾತ ಹೃದಯ ಕೇಳುವುದಿಲ್ಲ
ಈ ಇಬ್ಬರನಡುವೆ ಪ್ರೀತಿ ಮೂಡಿಸುವವರು ಯಾರು...
ಇಂದಲ್ಲ ನಾಳೆ ಮಣ್ಣಲ್ಲಿ ಮಣ್ಣಾಗುವ ಈ ಶರೀರವನ್ನು
ಬಿಟ್ಟು ಹೊರಡುವ ಮನಸ್ಸಿಗೆ ಬುದ್ದಿ ಹೆಳುವವರು ಯಾರು...
ಪ್ರತಿ ದಿನದ ಬದುಕಿನಿಂದ ದುರಾಸೆಗೊಳಗಾಗಿ
ದಾರಿತಪ್ಪುವ ಮನಕೆ ಸರಿದಾರಿ ತೋರುವವರು ಯಾರು...
3 comments:
it really made me think
thanx for such a wonderful poem
keep writing!!
ಬಹಳ ಚೆನ್ನಾಗಿದೆ ಕವನ... ಸಮಯೋಚಿತವಾಗಿದೆ
Superb!!! :)
Post a Comment